AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಪೂರ್​ ಬುಕ್ ಆಫ್​ ರೆಕಾರ್ಡ್ಸ್​ ಸೇರಿದ ತಾಯಿ ಮಗಳ ರಂಗೋಲಿ ಕಲೆ

Rangoli : ಕಲಾವಿದೆ ಸುಧಾ ರವಿ, ಮಗಳು ರಕ್ಷಿತಾ ಅವರೊಂದಿಗೆ ಸಿಂಗಪೂರ್​ನಲ್ಲಿ ಆಯೋಜಿಸಲಾಗಿದ್ದ ಪೊಂಗಲ್​ ಫೆಸ್ಟಿವಲ್​ನಲ್ಲಿ 26,000 ಐಸ್ಕ್ರೀಮ್ ಕಡ್ಡಿಗಳನ್ನು ಉಪಯೋಗಿಸಿ 6/6 ಮೀಟರ್ ರಂಗೋಲಿ ಕಲಾಕೃತಿಗಳನ್ನು ರಚಿಸಿದ್ದರು.

ಸಿಂಗಪೂರ್​ ಬುಕ್ ಆಫ್​ ರೆಕಾರ್ಡ್ಸ್​ ಸೇರಿದ ತಾಯಿ ಮಗಳ ರಂಗೋಲಿ ಕಲೆ
ರಂಗೋಲಿ ಕಲಾವಿದೆ ಸುಧಾ ರವಿ ಅವರು ರಚಿಸಿದ ರಂಗೋಲಿ ಕಲಾಕೃತಿಗಳು
TV9 Web
| Edited By: ಶ್ರೀದೇವಿ ಕಳಸದ|

Updated on:Jan 27, 2023 | 3:44 PM

Share

Viral Video : ರಂಗೋಲಿ ಎನ್ನುವುದು ಮನೆಯಂಗಳಕ್ಕಷ್ಟೇ ಸೀಮಿತವಾದ ಕಲೆ ಅಲ್ಲ. ಅದು ಕಲಾವಿದರ ಕಲ್ಪನೆಯಲ್ಲಿ ಹೊಸಿಲು ದಾಟಿ ಆಗಾಗ ಜಗತ್ತಿನ ಗಮನ ಸೆಳೆಯುತ್ತಿರುತ್ತದೆ. ಇದೀಗ ಸಿಂಗಪೂರ್​ನಲ್ಲಿರುವ  ಭಾರತೀಯ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ತಮಿಳಿನ ಕವಿಗಳಾದ ತಿರುವಳ್ಳವರ್, ಅವ್ವೈಯ್ಯಾರ್​, ಭಾರತೀಯಾರ್, ಭಾರತೀದಾಸನ್​ ಅವರನ್ನು ರಂಗೋಲಿಯಲ್ಲಿ ಚಿತ್ರಿಸಿದ್ದಾರೆ. ಈ ಕಲಾಕೃತಿಗಳು ಸಿಂಗಪೂರ್​ ಬುಕ್​ ಆಫ್​ ರೆಕಾರ್ಡ್ಸ್​ ಸೇರಿವೆ.

ಸುಧಾ ರವಿ ತಮ್ಮ ಪುತ್ರಿ ರಕ್ಷಿತಾ ಅವರೊಂದಿಗೆ ಕಳೆದ ವಾರ ಲಿಟಲ್​ ಇಂಡಿಯಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೊಂಗಲ್​ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗೋಲಿ ಕಲೆಯನ್ನು ಪ್ರಸ್ತುತಪಡಿಸಿದ್ದರು. 26,000 ಐಸ್ಕ್ರೀಮ್ ಕಡ್ಡಿಗಳನ್ನು ಉಪಯೋಗಿಸಿ 6/6 ಮೀಟರ್ ರಂಗೋಲಿ ಕಲಾಕೃತಿಯನ್ನು ಇವರು ರಚಿಸಿದ್ದರು.

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಗಾಗಲೇ ಸುಧಾ ರವಿ 2016ರಲ್ಲಿ ಸಿಂಗಪೂರನಲ್ಲಿ 3,200 ಚದರ ಅಡಿ ಅಳತೆಯ ರಂಗೋಲಿ ರಚಿಸಿ ದಾಖಲೆ ಮಾಡಿದ್ದಾರೆ. ಇದೀಗ ಮತ್ತೆ ಮಗಳೊಂದಿಗೆ ತಮಿಳಿನ ವಿದ್ವಾಂಸರು, ಕಲಾವಿದರನ್ನು ರಂಗೋಲಿ ಕಲಾಕೃತಿಯಲ್ಲಿ ರಚಿಸುವುದರ ಮೂಲಕ ಮತ್ತೊಮ್ಮೆ ದಾಖಲೆ ಮಾಡಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಇವರು ಈ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದರು.

ಇದನ್ನೂ ಓದಿ : ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

ರಂಗೋಲಿ ಕಲೆಯ ಮೂಲಕ ತಮಿಳು ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ತೊಡಗಿಕೊಂಡಿರುವ ಸುಧಾ ಅವರು, ಅಕ್ಕಿ ಹಿಟ್ಟು, ಸೀಮೆಸುಣ್ಣ, ಐಸ್​ಕ್ರೀಮ್​ ಕಡ್ಡಿ, ಬಣ್ಣಗಳನ್ನು ಮಾಧ್ಯಮವನ್ನಾಗಿಸಿಕೊಳ್ಳುತ್ತ ಬಂದಿದ್ದಾರೆ. ‘ಸುಧಾ ಅವರು ರಂಗೋಲಿ ಕಲೆಯ ಮೂಲಕ ತಮಿಳು ಸಂಸ್ಕೃತಿ, ಭಾಷೆಯನ್ನು ಯುವಪೀಳಿಗೆಗೆ ತಲುಪಿಸುವಲ್ಲಿ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ.’ ಎಂದು ಕಲಾಮಂಜರಿಯ ಆಯೋಜಕರಾದ ಸೌಂದರಾ ನಾಯಕಿ ವೈರವನ್​ ಹೇಳಿದ್ದಾರೆ. ಈ ಕಲಾಮಂಜರಿ ಕಾರ್ಯಕ್ರಮವು ಲಿಶಾ ಪೊಂಗಲ್​ ಫೆಸ್ಟಿವಲ್ 2023 ಪ್ರೋತ್ಸಾಹದೊಂದಿಗೆ ಆಯೋಜನೆಗೊಂಡಿತ್ತು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:39 pm, Fri, 27 January 23

Follow Us
Web contact
Web contact

TV9 Kannada

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ