AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಂತಾಕ್ಲಾಸ್​ ಇದ್ದಾನೆಯೇ? ಕುಕೀಸ್ ಕ್ಯಾರೆಟ್ ಸಾಕ್ಷ್ಯ ಕೊಟ್ಟು​ ಡಿಎನ್​ಎ ಪರೀಕ್ಷಿಸಲು ಪೊಲೀಸರಿಗೆ ಬಾಲಕಿಯ ಮನವಿ

DNA : ನೀವು ಕೊಟ್ಟ ಸಾಕ್ಷ್ಯಗಳ ಮೇಲೆ ಸಾಂತಾನ ಹಿಮಸಾರಂಗವು ಕಚ್ಚಿತಿಂದ ಗುರುತುಗಳು ಕಂಡು ಬಂದಿಲ್ಲ. ಡಿಎನ್​ಎ ಪರೀಕ್ಷೆಗಾಗಿ ರೋಡ್​ ಐಲ್ಯಾಂಡ್​ನ ಆರೋಗ್ಯ ಇಲಾಖೆಗೆ ರವಾನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಸಾಂತಾಕ್ಲಾಸ್​ ಇದ್ದಾನೆಯೇ? ಕುಕೀಸ್ ಕ್ಯಾರೆಟ್ ಸಾಕ್ಷ್ಯ ಕೊಟ್ಟು​ ಡಿಎನ್​ಎ ಪರೀಕ್ಷಿಸಲು ಪೊಲೀಸರಿಗೆ ಬಾಲಕಿಯ ಮನವಿ
ಬಾಲಕಿಯ ಪತ್ರ ಮತ್ತು ಒದಗಿಸಿದ ಸಾಕ್ಷ್ಯಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 23, 2023 | 4:26 PM

Viral News : ಸಾಂತಾಕ್ಲಾಸ್​ ಎನ್ನುವ ಮಾಂತ್ರಿಕಮನುಷ್ಯನಿಗಾಗಿ ಬಾಲಪ್ರಪಂಚ ಇಡೀ ವರ್ಷ ಕುತೂಹಲಕ್ಕೆ ಕಣ್ಣಂಟಿಸಿಕೊಂಡು ಕಾಯುತ್ತದೆ. ಆ ಪುಟ್ಟ ಕಣ್ಣುಗಳಲ್ಲಿ ಅದೆಷ್ಟು ಬೆರಗು, ಖುಷಿ, ಪ್ರಶ್ನೆಗಳು. ಸೀಕ್ರೇಟ್ ಸಾಂತಾ ಗೇಮ್ ಆಡುತ್ತ ಉಡುಗೊರೆಗಳನ್ನು ಪಡೆಯುತ್ತ ಕನಸಿನ ಲೋಕದಲ್ಲಿ ಕಳೆದು ಹೋಗುವ ಪರಿ ಎಂಥ ಸುಂದರ. ಹೀಗೆ ಕನಸು ಕಾಣುತ್ತಿರುವಾಗಲೇ ಇಲ್ಲೊಬ್ಬ ಬಾಲಕಿಗೆ ದೊಡ್ಡ ಪ್ರಶ್ನೆಯೊಂದು ಕಾಡಿದೆ. ಅದಕ್ಕವಳು ಉತ್ತರ ಕಂಡುಕೊಳ್ಳಲು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

ಮಕ್ಕಳಲ್ಲಿ ಹುಟ್ಟುವ ಕುತೂಹಲಗಳಿಗೆ ಎಣೆಯುಂಟೆ? ಈಗಂತೂ ಮಾಹಿತಿ ತಂತ್ರಜ್ಞಾನದ ಯುಗ. ಎಲ್ಲವೂ ತುದಿಬೆರಳಲ್ಲಿಯೇ ಉತ್ತರ ಕಂಡುಕೊಳ್ಳಬಹುದು ನಿಜ. ಆದರೆ ಅಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಲ್ಲಿ ಮುಂದಿನ ದಾರಿಯಂತೂ ಸಿಗುತ್ತದೆ ಎಂಬುದು ಈಗಿನ ಮಕ್ಕಳಿಗೆ ಬಹಳ ಚೆನ್ನಾಗಿದೆ ತಿಳಿದಿದೆ. ಹಾಗಾಗಿ ಯಾವುದನ್ನು ತಿಳಿದುಕೊಳ್ಳಲೂ ಅವರು ಹಿಂದೆಮುಂದೆ ನೋಡಲಾರರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಸಾಂತಾಕ್ಲಾಸ್​ ಇದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಜಗತ್ತಿನ ಮಿಲಿಯನ್​ಗಟ್ಟಲೆ ಮಕ್ಕಳನ್ನು ಕಾಡುವ ಹಾಗೆ ಈ ಬಾಲಕಿಗೂ ಕಾಡಿದೆ. ಕಂಬರ್​ಲ್ಯಾಂಡ್​ನ ರೋಡ್​ ಐಲ್ಯಾಂಡ್​ನಲ್ಲಿ ವಾಸವಾಗಿರುವ ಹತ್ತು ವರ್ಷದ ಸ್ಕಾರ್ಲೆಟ್​ ಡೌಮಾಟೋ, ಸಾಂತಾ ಇದ್ದಾನೆಯೇ? ನನಗಿದು ಗೊತ್ತಾಗಬೇಕು. ಹಾಗಾಗಿ ಉಳಿದಿರುವ ಈ ಕ್ಯಾರೆಟ್​, ಕುಕೀಸ್​ಗಳನ್ನು ಪರೀಕ್ಷಿಸಬೇಕು. ಇವೇ ಸಾಕ್ಷಿ. ಇವುಗಳ ಡಿಎನ್​ಎ ಪರೀಕ್ಷೆ ಮಾಡಿ ಸಾಂತಾನ ಅಸ್ತಿತ್ವ ಇದೆಯೇ ಎಂಬುದನ್ನು ತಿಳಿಸಬೇಕು ಎಂದು ಸ್ಥಳೀಯ ಪೊಲೀಸ್​ ಇಲಾಖೆಗೆ ಆಕೆ ಪತ್ರ ಬರೆದಿದ್ದಾಳೆ. ನಂತರ ಸಾಕ್ಷ್ಯಗಳನ್ನು ರಾಜ್ಯ ಆರೋಗ್ಯ ಇಲಾಖೆಯ ಫೊರೆನ್ಸಿಕ್​ ಸೈನ್ಸಸ್ ವಿಭಾಗಕ್ಕೆ ರವಾನಿಸಲು ಕೋರಿದ್ದಾಳೆ.

ಇದನ್ನೂ ಓದಿ : ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು

ಸ್ಕಾರ್ಲೆಟ್​ಳ ಈ ಮನವಿ ಪತ್ರ ಮತ್ತು ಸಂಬಂಧಿಸಿದ ಸಾಕ್ಷ್ಯಗಳನ್ನು ಪೊಲೀಸ್ ಇಲಾಖೆಯು ಫೇಸ್​ಬುಕ್​ ಮೂಲಕ ಮುದ್ದಿನಿಂದ ಪ್ರತಿಕ್ರಿಯಿಸಿದೆ. ನೀವು ಕೊಟ್ಟ ಸಾಕ್ಷ್ಯಗಳ ಮೇಲೆ ಸಾಂತಾನ ಹಿಮಸಾರಂಗವು ಕಚ್ಚಿತಿಂದ ಯಾವುದೇ ಗುರುತುಗಳು ಕಂಡು ಬಂದಿಲ್ಲ. ಡಿಎನ್​ಎ ಪರೀಕ್ಷೆಗಾಗಿ ರೋಡ್​ ಐಲ್ಯಾಂಡ್​ನ ಆರೋಗ್ಯ ಇಲಾಖೆಗೆ ರವಾನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮ್ಯಾಥೂ ಬೆನ್ಸನ್​ ಹೇಳಿದ್ದಾರೆ.

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಈ ದೂರನ್ನು 2022ರ ಡಿಸೆಂಬರ್ 25ರಂದು ಸ್ಕಾರ್ಲೆಟ್​ ಪೊಲೀಸರಿಗೆ ಸಲ್ಲಿಸಿದ್ದಳು. ತನಿಖಾ ಪ್ರಕ್ರಿಯೆಯ ಎಲ್ಲಾ ಹಂತಗಳಬಗ್ಗೆಯೂ ಈಕೆಗೆ ನಿಖರವಾದ ಮಾಹಿತಿ ಇದೆ. ಸಾಕ್ಷಿಗಳನ್ನು ಪ್ಯಾಕ್​ ಮಾಡಿ ಸಲ್ಲಿಸುವುದು, ಪತ್ರ ಬರೆಯುವುದು ಇತ್ಯಾದಿಯನ್ನು ಬಹಳ ಅಚ್ಚುಕಟ್ಟಾಗ ನಿರ್ವಹಿಸಿದ್ದಾಳೆ. ಸಾಧ್ಯವಾದ ಮಟ್ಟಿಗೆ ಅವಳ ಪ್ರಶ್ನೆಗಳಿಗೆ ನಾವು ಉತ್ತರಿಸಲು ಪ್ರಯತ್ನಿಸುತ್ತೇವೆ ಎಂದು ಫೇಸ್​ಬುಕ್​ ಪೋಸ್ಟ್​ನಲ್ಲಿ ಪೊಲೀಸರು ತಿಳಿಸಿದ್ದಾಳೆ.

ಸಾಂತಾ ಇದ್ದಾನೆಯೆ? ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:26 pm, Mon, 23 January 23

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್