AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರೆಯುಟ್ಟ ಅಜ್ಜಿ ನದಿಗೆ ಧುಮುಕಿದ್ದಕ್ಕೆ ಭಲೇ ಭಲೇ ಎನ್ನುತ್ತಿರುವ ನೆಟ್ಟಿಗರು

TamilNadu : ಈ ವಯಸ್ಸಿನಲ್ಲಿ ಈ ಹಿರಿಯ ಮಹಿಳೆ ಹೀಗೆ ಸೀರೆಯುಟ್ಟು ನದಿಗೆ ಹಾರುವುದೆಂದರೆ? ಎಂದು ಕೆಲವರು. ಇದೆಲ್ಲವೂ ತೀರಾ ಸಾಮಾನ್ಯ ಹಳ್ಳಿಗಳಲ್ಲಿ ಎಂದು ಇನ್ನೂ ಕೆಲವರು. ನೋಡಿ ವಿಡಿಯೋ.

ಸೀರೆಯುಟ್ಟ ಅಜ್ಜಿ ನದಿಗೆ ಧುಮುಕಿದ್ದಕ್ಕೆ ಭಲೇ ಭಲೇ ಎನ್ನುತ್ತಿರುವ ನೆಟ್ಟಿಗರು
ಸೀರೆಯುಟ್ಟ ಹಿರಿಯ ಮಹಿಳೆ ತಮಿಳುನಾಡಿನ ತಾಮರಿಬರಣಿ ನದಿಗೆ ಹಾರುತ್ತಿರುವುದು
ಶ್ರೀದೇವಿ ಕಳಸದ
|

Updated on:Feb 07, 2023 | 11:26 AM

Share

Viral Video : ತಮಿಳುನಾಡಿನ ತಾಮಿರಬರಣಿ ನದಿ ಇದು. ಈ ನದಿಯೊಳಗೆ ಕೆಲವರು ಮುಳುಗು ಹಾಕುತ್ತ ಸ್ನಾನ ಮಾಡುತ್ತಿದ್ದಾರೆ. ಆದರೆ ನೋಡನೋಡುತ್ತಿದ್ದಂತೆ ಸೀರೆಯುಟ್ಟ ಹಿರಿಯ ಮಹಿಳೆಯೊಬ್ಬರು ಮೇಲಿನಿಂದ ಈ ನದಿಗೆ ಧುಮುಕುತ್ತಾರೆ. 20 ಸೆಕೆಂಡುಗಳ ಈ ವಿಡಿಯೋ ಇದೀಗ ನೆಟ್ಟಿಗರಲ್ಲಿ ಅಚ್ಚರಿ ಉತ್ಸಾಹ ಮೂಡಿಸುತ್ತಿದೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಕಲ್ಲಿಡೈಕುರಿಚಿಯ ತಾಮಿರಬರಣಿ ನದಿಯಲ್ಲಿ ಹೀಗೆ ಈ ಹಿರಿಯ ಮಹಿಳೆ ಧುಮುಕಿದ್ದು ಯಾರಿಗೂ ಅಚ್ಚರಿ ಹುಟ್ಟಿಸುವಂಥದ್ದೇ. ಆದರೆ ಇದು ಇವರ ನಿತ್ಯ ಅಭ್ಯಾಸ. ಕೆಳಗಿರುವ ನೀರಿನಲ್ಲಿ ಮೀಯುತ್ತಿರುವ ಮಹಿಳೆಯರ ಗುಂಪನ್ನು ಗಮನಿಸಿ. ಈಗಾಗಲೇ ಈ ವಿಡಿಯೋ ಅನ್ನು 1.8 ಲಕ್ಷ ಜನರು ನೋಡಿದ್ದಾರೆ. 1,500 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ತಾಮಿರಬರಣಿ ನದಿಗೆ ಅನೇಕ ರೋಗರುಜಿನುಗಳನ್ನು ಗುಣಪಡಿಸುವ ಶಕ್ತಿ ಇದೆ. ಈ ಶುದ್ಧವಾದ ನೀರು ಹೀಗೇ ಹರಿಯುತ್ತಿರಬೇಕು. ನಮ್ಮ ದೇಶದ ಇತರೇ ದೊಡ್ಡ ನದಿಗಳಂತೆ ಈ ನದಿಯೂ ಕಲುಷಿತಗೊಳ್ಳಬಾರದು ಎಂದು ಕೆಲವರು ಆಶಿಸಿದ್ದಾರೆ.

ಇದನ್ನೂ ಓದಿ : ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ತಮಿಳುನಾಡು, ಭಾರತೀಯ ಮಹಿಳೆಯರಿಗೆ ಸುರಕ್ಷಿತ ಭಾವವನ್ನು ಕೊಡುವ ರಾಜ್ಯವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹಳ್ಳಿಗಳಲ್ಲೆಲ್ಲ ಇದು ತೀರಾ ಸಾಮಾನ್ಯ. ಗಂಡಸು, ಹೆಣ್ಣುಮಕ್ಕಳು, ಮಕ್ಕಳು ಹೀಗೆ ನದಿಗಳಿಗೆ ಎತ್ತರದಿಂದ ಧುಮುಕುವುದು ತೀರಾ ಸಾಮಾನ್ಯ. ಹೀಗೆ ಧುಮುಕುವುದರಲ್ಲಿ ಅವರ ಪ್ರವೀಣರು ಎಂದು ಮತ್ತೊಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:20 am, Tue, 7 February 23

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್