AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಹೂವು ರಂಗೋಲಿಯಾಗಿ, ರಂಗೋಲಿ ಅದಿನ್ನೇನೋ ಬದಲಾಗಿ ತಲೆಕೆಡಿಸಿಕೊಳ್ಳುವಂತೆ ಮಾಡುವ ವಿಡಿಯೋ ವೈರಲ್

ಕಣ್ಣಿನಲ್ಲಿ ನಂಬಲು ಸಾಧ್ಯವಾಗದ, ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೂವಿನಿಂದ ರಂಗೋಲಿ, ರಂಗೋಲಿಯಿಂದ ಅದಿನ್ನೇನೋ ಆಗಿ ಬದಲಾಗುವ ವಿಡಿಯೋ ಇಲ್ಲಿದೆ ನೋಡಿ.

Optical Illusion: ಹೂವು ರಂಗೋಲಿಯಾಗಿ, ರಂಗೋಲಿ ಅದಿನ್ನೇನೋ ಬದಲಾಗಿ ತಲೆಕೆಡಿಸಿಕೊಳ್ಳುವಂತೆ ಮಾಡುವ ವಿಡಿಯೋ ವೈರಲ್
ಆಪ್ಟಿಕಲ್ ಭ್ರಮೆ ವಿಡಿಯೋ
TV9 Web
| Updated By: Rakesh Nayak Manchi|

Updated on: Jul 17, 2022 | 4:00 PM

Share

ವೈರಲ್ ವೀಡಿಯೋ: ಇಂಟರ್ ನೆಟ್ ಲೋಕದಲ್ಲಿ ಹಂಚಿಕೊಳ್ಳುವ ವೀಡಿಯೊಗಳು ಬೆಚ್ಚಿ ಬೀಳಿಸುವಂತಿದ್ದರೆ ಇನ್ನು ಕೆಲವು ವಿಡಿಯೋಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಇನ್ನೂ ಕೆಲವು ವಿಡಿಯೋಗಳು ನಂಬಲು ಸಾಧ್ಯವಾಗದೇ ಇರುವಂತಹದ್ದಕ್ಕೆ. ಇದೀಗ ಇಂತಹ ಒಂದು ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ, ಈ ವಿಡಿಯೋ ನೋಡಿದ ನಂತರ ನಿಮ್ಮ ಮನಸ್ಸು ಒಂದು ನಿಮಿಷ ಕಂಗೆಡುವುದು ಖಚಿತ.

ವೈರಲ್ ಆಗುತ್ತಿರುವ ಈ ವಿಡಿಯೋದ ಆರಂಭದಲ್ಲಿ ವ್ಯಕ್ತಿಯೊಬ್ಬರ ಕೈಯಲ್ಲಿ ನೇರಳೆ ಬಣ್ಣದ ಹೂವು ಕಾಣಿಸುತ್ತಿದೆ. ನಂತರ ಆ ವ್ಯಕ್ತಿ ತನ್ನ ಕೈಯಿಂದ ಹೂವನ್ನು ಕೆಳಗೆ ಬಿಡುತ್ತಾನೆ ಮತ್ತು ತಕ್ಷಣ ಹೂವು ಅಲ್ಲೇ ಸ್ಟಕ್ ಆದ ಹಾಗೆ ಕಾಣುತ್ತದೆ. ನಂತರ ಜೂಮ್ ಆದಾಗ ಆ ವ್ಯಕ್ತಿ ಹೂವನ್ನು ಒರೆಸುತ್ತಾನೆ, ಆಗ ಅದು ರಂಗೋಲಿಯಾಗಿ ಬದಲಾಗಿರುವುದು ಗೊತ್ತಾಗುತ್ತದೆ. ಹೂವಿನ ರಂಗೋಲಿ ಒರಸಿದ ನಂತರ ಕೈಯನ್ನು ಮುಷ್ಠಿ ಮಾಡುತ್ತಾನೆ. ಈ ಮುಷ್ಟಿಯ ಮಧ್ಯದ ಬೆರಳು ಮರದ ಕಾಂಡವಾಗಿ ಬದಲಾಗುತ್ತದೆ.

ಇದರ ಮುಂದುವರಿದ ಭಾಗವಾಗಿ ಆ ಮರದ ಕಾಂಡ ಮಧ್ಯೆ ಸಣ್ಣ ರಂದ್ರ ಇದ್ದಂತೆ ಕಾಣುತ್ತದೆ. ನಂತರ ವಿಡಿಯೋ ಜೂಮ್ ಆದಾಗ ಅದು ಸಣ್ಣ ಚೆಂಡು ಆಗಿರುತ್ತದೆ. ಆ ಚೆಂಡನ್ನು ವ್ಯಕ್ತಿ ಮೇಲಕ್ಕೆ ಎಸೆಯುತ್ತಾನೆ ಮತ್ತು ಅದು ಇನ್ನೇನೋ ಆಗಿ ಹಲಗೆಯೊಂದು ಕಾಣಿಸುತ್ತದೆ. ಈ ಹಲಗೆಯಂತಿರುವ ವಸ್ತುವನ್ನು ಎಸೆದಾಗ ಅದು ಇಟ್ಟಿಗೆಯಾಗಿ ಮಾರ್ಪಾಡು ಆಗುತ್ತದೆ. ಜಾದು ರೀತಿಯಲ್ಲಿರುವ ಈ ವಿಡಿಯೋ ನೋಡಿದ ನಂತರ ಗೊಂದಲಗಳು ಏರ್ಪಟ್ಟು ನಿಮ್ಮ ತಲೆಯಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿರುವುದು ಖಂಡಿತ.

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ‘ನನ್ನ ಮೆದುಳು ಬುದ್ದಿಮತ್ತೆಯನ್ನು ನಿಲ್ಲಿಸಿದೆ’ ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿದ್ದು, ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!