AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ

Pushups : ‘ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ ನನಗೆ ಇದೇ ಗುರಿ!

ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ
ಮೊಮ್ಮಗಳೊಂದಿಗೆ ಪುಷಪ್ಸ್
TV9 Web
| Edited By: |

Updated on: Jan 25, 2023 | 11:51 AM

Share

Viral Video : ಏನು ಮಾಡಲೂ ಒಂದು ಸ್ಫೂರ್ತಿ ಬೇಕಲ್ಲವೆ? ಬರೀ ಗುರಿ ಸಾಕಾಗುವುದಿಲ್ಲ. ಅದರಲ್ಲೂ ವರ್ಕೌಟ್​ ಮಾಡುವುದಕ್ಕೆ ತುಸು ಜಾಸ್ತಿಯೇ ಸ್ಫೂರ್ತಿ ಬೇಕು. ಆಗ ಗುರಿಯೂ ಗರಿಗೆದರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಗುವನ್ನು ಬೆನ್ನ ಮೇಲೆ ಮಲಗಿಸಿಕೊಂಡು ಪುಷಪ್ಸ್ ತೆಗೆಯುತ್ತಿದ್ದಾನೆ ಈ ಅಜ್ಜ. ನೆಟ್ಟಿಗರು ಈ ಮುದ್ದಾದ ವಿಡಿಯೋ ನೋಡುತ್ತ, ನಾವೂ ಇನ್ನು ಮುಂದೆ ಹೀಗೆಲ್ಲ ಮಾಡುವುದೇ ಎಂದು ಸಂಕಲ್ಪ ತೊಡುತ್ತಿದ್ದಾರೆ.

ಸಂದೀಪ್​ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ 15 ಪುಷಪ್ಸ್​ ತೆಗೆಯುವ ಗುರಿ ಹೊಂದಿದ್ದೇನೆ ಎಂದಿದ್ದಾರೆ ಈ ವ್ಯಕ್ತಿ.

ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಈಗಾಗಲೇ ಈ ವಿಡಿಯೋ ಅನ್ನು 33,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಮತ್ತೆ ಮತ್ತೆ ನೋಡುತ್ತ ಕಳೆದುಹೋಗುತ್ತಿದ್ದಾರೆ. ಈ ದಿನ ನೋಡಿದ ಸಾಕಷ್ಟು ವಿಡಿಯೋಗಳಲ್ಲಿ ಇದು ತುಂಬಾ ಇಷ್ಟವಾಯಿತು ಎಂದಿದ್ದಾರೆ ಕೆಲವರು. ನಾನೀಗ ನನ್ನ ಮೊಮ್ಮಕ್ಕಳೊಂದಿಗೆ ಹೀಗೆ ಪುಷಪ್ಸ್​ ತೆಗೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ

ಆಹಾ ಮುದ್ದು ಸುರಿಯುತ್ತಿದೆ ಇಲ್ಲಿ ಎಂದು ಅನೇಕರು ಹೇಳಿದ್ದಾರೆ. ಅವಳು ನಿಮ್ಮನ್ನು ಹಿಡಿದುಕೊಂಡ ರೀತಿಯೇ ಬಹಳ ಆಪ್ತವಾಗಿದೆ ಎಂದಿದ್ಧಾರೆ ಹಲವರು. ಆಹಾ ಎಂಥ ಯಂಗ್​ ಅಜ್ಜ ಇವರು ಎಂದಿದ್ದಾರೆ ಮತ್ತೊಬ್ಬರು. ಸಂದೀಪ ಎನ್ನುವ ಇನ್ನೊಬ್ಬರು ಪಾರಿವಾಳದ ಮರಿಗಳನ್ನು ಬೆನ್ನ ಮೇಲೆ ಇಟ್ಟುಕೊಂಡು ಪುಷಪ್ಸ್ ತೆಗೆದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ