AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ

Pushups : ‘ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ ನನಗೆ ಇದೇ ಗುರಿ!

ಪುಷಪ್ಸ್​ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ
ಮೊಮ್ಮಗಳೊಂದಿಗೆ ಪುಷಪ್ಸ್
TV9 Web
| Edited By: ಶ್ರೀದೇವಿ ಕಳಸದ|

Updated on: Jan 25, 2023 | 11:51 AM

Share

Viral Video : ಏನು ಮಾಡಲೂ ಒಂದು ಸ್ಫೂರ್ತಿ ಬೇಕಲ್ಲವೆ? ಬರೀ ಗುರಿ ಸಾಕಾಗುವುದಿಲ್ಲ. ಅದರಲ್ಲೂ ವರ್ಕೌಟ್​ ಮಾಡುವುದಕ್ಕೆ ತುಸು ಜಾಸ್ತಿಯೇ ಸ್ಫೂರ್ತಿ ಬೇಕು. ಆಗ ಗುರಿಯೂ ಗರಿಗೆದರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಗುವನ್ನು ಬೆನ್ನ ಮೇಲೆ ಮಲಗಿಸಿಕೊಂಡು ಪುಷಪ್ಸ್ ತೆಗೆಯುತ್ತಿದ್ದಾನೆ ಈ ಅಜ್ಜ. ನೆಟ್ಟಿಗರು ಈ ಮುದ್ದಾದ ವಿಡಿಯೋ ನೋಡುತ್ತ, ನಾವೂ ಇನ್ನು ಮುಂದೆ ಹೀಗೆಲ್ಲ ಮಾಡುವುದೇ ಎಂದು ಸಂಕಲ್ಪ ತೊಡುತ್ತಿದ್ದಾರೆ.

ಸಂದೀಪ್​ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಒಂದೇ ಸಲಕ್ಕೆ 15 ಪುಷಪ್ಸ್​ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ 15 ಪುಷಪ್ಸ್​ ತೆಗೆಯುವ ಗುರಿ ಹೊಂದಿದ್ದೇನೆ ಎಂದಿದ್ದಾರೆ ಈ ವ್ಯಕ್ತಿ.

ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಈಗಾಗಲೇ ಈ ವಿಡಿಯೋ ಅನ್ನು 33,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಮತ್ತೆ ಮತ್ತೆ ನೋಡುತ್ತ ಕಳೆದುಹೋಗುತ್ತಿದ್ದಾರೆ. ಈ ದಿನ ನೋಡಿದ ಸಾಕಷ್ಟು ವಿಡಿಯೋಗಳಲ್ಲಿ ಇದು ತುಂಬಾ ಇಷ್ಟವಾಯಿತು ಎಂದಿದ್ದಾರೆ ಕೆಲವರು. ನಾನೀಗ ನನ್ನ ಮೊಮ್ಮಕ್ಕಳೊಂದಿಗೆ ಹೀಗೆ ಪುಷಪ್ಸ್​ ತೆಗೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ

ಆಹಾ ಮುದ್ದು ಸುರಿಯುತ್ತಿದೆ ಇಲ್ಲಿ ಎಂದು ಅನೇಕರು ಹೇಳಿದ್ದಾರೆ. ಅವಳು ನಿಮ್ಮನ್ನು ಹಿಡಿದುಕೊಂಡ ರೀತಿಯೇ ಬಹಳ ಆಪ್ತವಾಗಿದೆ ಎಂದಿದ್ಧಾರೆ ಹಲವರು. ಆಹಾ ಎಂಥ ಯಂಗ್​ ಅಜ್ಜ ಇವರು ಎಂದಿದ್ದಾರೆ ಮತ್ತೊಬ್ಬರು. ಸಂದೀಪ ಎನ್ನುವ ಇನ್ನೊಬ್ಬರು ಪಾರಿವಾಳದ ಮರಿಗಳನ್ನು ಬೆನ್ನ ಮೇಲೆ ಇಟ್ಟುಕೊಂಡು ಪುಷಪ್ಸ್ ತೆಗೆದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು