AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು

Unhygienic : ಕಾಡಿಬೇಡಿ ಇಸಿದುಕೊಂಡು ಕಿಸೆಯಲ್ಲಿ ತುಂಬಿಕೊಂಡು ಕದ್ದುಮುಚ್ಚಿ ತಿನ್ನುತ್ತಿದ್ದ ಬಾಲ್ಯದ ಹುರಿದ ಕಡಲೆಕಾಳಿನ ನೆನಪು ಯಾರಿಂದಲಾದರೂ ಮರೆಯಾಗಲು ಸಾಧ್ಯವೆ? ಮತ್ತೀಗ ಪ್ರೊಟೀನ್​, ಫೈಬರ್ ಎಂದು ಮೂರು ಹೊತ್ತೂ ಕುಟುಮಿಸುತ್ತ ಬಾಲ್ಯದ ರುಚಿಯನ್ನು ಸವಿಯುತ್ತಿರುವವರು ಕಡಿಮೆಯೆ? ಹಾಗಿದ್ದರೆ ಸುರತ್​ನ ಫ್ಯಾಕ್ಟರಿಯೊಂದರಲ್ಲಿ ಈ ಹುರಿದ ಕಡಲೆಕಾಳನ್ನು ತಯಾರಿಸುವ ಬಗೆ ನೋಡಿ.

Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು
ಹುರಿದ ಕಡಲೆಯನ್ನು ತಯಾರಿಸುತ್ತಿರುವ ಸುರತ್​ನ ಕಾರ್ಖಾನೆಯ ದೃಶ್ಯ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Aug 18, 2023 | 1:29 PM

Share

Surat : ಇಂಥದ್ದೆಲ್ಲ ನನಗೆ ಬೇಕೇಬೇಕು ಎಂದು ಬಾಲ್ಯದಲ್ಲಿ ಹಠ ಮಾಡಿ ಕೊಡಿಸಿಕೊಂಡ ಪಟ್ಟಿಯಲ್ಲಿ ಈ ಹುರಿದ ಕಡಲೆಕಾಳೂ (Roasted Chana) ಸೇರಿದೆ. ತಕ್ಕಮಟ್ಟಿಗೆ ಹಸಿವನ್ನು ರುಚಿಯನ್ನೂ ತಣಿಸುತ್ತಿದ್ದ ಈ ಹುರಿದ ಕಡಲೆಕಾಳನ್ನು ನಿಮ್ಮಲ್ಲಿ ಅನೇಕರು ಈಗಲೂ ತಿನ್ನುತ್ತೀರಿ. ಉಪ್ಪುಪ್ಪಾದ ಕಟಮ್ ಕುಟುಮ್​ ಕಡಲೆಕಾಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದು ತಿಳಿದಿದೆಯೇ? ಈ ಹಿಂದೆ ಹಸಿರು ಬಟಾಣಿಯನ್ನು ತಯಾರಿಸುತ್ತಿದ್ದ ವಿಡಿಯೋ ನೋಡಿದ ನೆನಪು ಇನ್ನೂ ಹಸಿಯಾಗಿಯೇ ಇರಬೇಕಲ್ಲ/ ಹಾಗಿದ್ದರೆ ಇದೀಗ ಸೂರತ್​ನ ಫ್ಯಾಕ್ಟರಿಯೊಂದಕ್ಕೆ ಹೋಗೋಣ. ನೆಟ್ಟಿಗರೆಲ್ಲ ಈ ವಿಡಿಯೋ ನೋಡಿ ಸ್ವಲ್ಪವೂ ಸ್ವಚ್ಛತೆಯನ್ನೇ ಕಾಪಾಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಹುರಿದ ಕಡಲೆ ತೂಕವನ್ನು ನಿರ್ವಹಿಸುವಲ್ಲಿ ಸಹಾಯಕಾರಿ ಎಂಬ ಕಾರಣಕ್ಕೆ ಮತ್ತು ಇನ್ನಿತರೇ ಆರೋಗ್ಯಕಾರಿ ಪ್ರಯೋಜನಗಳುಂಟು ಎಂಬ ಹಿನ್ನೆಲೆಯಲ್ಲಿ ದೊಡ್ಡವರೂ ಕೂಡ ಇವುಗಳನ್ನು ಬಾಯಾಡಿಸುತ್ತಿರುತ್ತಾರೆ. ಏಕೆಂದರೆ ಹುರಿದ ಕಡಲೆಕಾಳಿನಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಮತ್ತು ಪ್ರೋಟೀನ್​  ಅಂಶ ಇರುತ್ತದೆ. ಹೆಚ್ಚುಹೊತ್ತು ಹಸಿವನ್ನು ಇದು ತಡೆಗಟ್ಟುತ್ತದೆಯಾದ್ದರಿಂದ ಶರೀರದಲ್ಲಿ ಕ್ಯಾಲೊರಿಗಳ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಕಡಲೆಕಾಳಿನ ಮಹಿಮೆ ಇಷ್ಟೆಲ್ಲ ಇದ್ದರೂ ನೆಟ್ಟಿಗರು ಈ ವಿಡಿಯೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಹುರಿದ ಕಡಲೆಕಾಳನ್ನು ತಯಾರಿಸುತ್ತಿರುವ ಸೂರತ್​ನ ಕಾರ್ಖಾನೆ

ಎಂಥ ಅಶುಚಿಯಾದ ಕಾರ್ಖಾನೆ ಇದು. ಹುರಿದ ಕಡಲೆಯನ್ನು ಹೀಗೆ ಇಂಥ ಜಾಗದಲ್ಲಿ ತಯಾರಿಸುತ್ತಾರಾ? ಈ ಕಾರ್ಮಿಕರು ಸಮವಸ್ತ್ರ, ಕೈಗವಸುಗಳನ್ನು ಧರಿಸಿಲ್ಲ, ಯಂತ್ರೋಪಕರಣಗಳನ್ನು ನೋಡಲಾಗುತ್ತಿಲ್ಲ. ಇನ್ನು ಅದನ್ನು ತಯಾರಿಸುವ ಪರಿಕರಗಳೂ ಅಷ್ಟೇ ಕೊಳಕಾಗಿವೆ. ನಿಜಕ್ಕೂ ಈ ವಿಡಿಯೋ ನೋಡಿ ನಿರಾಶೆ ಉಂಟಾಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ಈ ಕಡಲೆಕಾಳಿಗೆ ಉಪ್ಪು ಬೆರೆಸುವ ಅಗತ್ಯವೇ ಇಲ್ಲ, ಅವರ ಬೆವರೇ ಚೆನ್ನಾಗಿ ಮಿಶ್ರಣಗೊಳ್ಳುತ್ತಿದೆ ಎಂದಿದ್ದಾರೆ ಒಬ್ಬರು. ಕಾರ್ಮಿಕರ ಕೈ ಮೈ ತುಂಬಾ ಕೊಳಕಾಗಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

ಈ ವಿಡಿಯೋ ಅನ್ನು ಈತನಕ 1,500 ಜನರು ಲೈಕ್ ಮಾಡಿದ್ದಾರೆ. ಇಷ್ಟು ದಿನ ಇಷ್ಟು ಕೊಳಕಾದ ಕಡಲೆಗಳನ್ನು ನಾನು ತಿಂದೆನೇ? ಎಂದಿದ್ದಾರೆ ಒಬ್ಬರು. ಶ್ರಮಿಕರ ಶ್ರಮವನ್ನು ಅವಮಾನಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ರಾಸಾಯನಿಕಗಳನ್ನು ಬಳಸಿದ ಖಾದ್ಯಗಳನ್ನು ತಿನ್ನುವುದಕ್ಕಿಂತ ಇದೇ ವಾಸಿ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:20 pm, Fri, 18 August 23

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ