Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

Food : ಬಟಾಣಿ! ಬಣ್ಣಬಣ್ಣದಾ ಬಟಾಣಿ, ಕೆಂಪು ಬಟಾಣಿ ಹಸಿರು ಬಟಾಣಿ. ಈತನಕವೂ ತಿಂದ ಇಂಥ ಬಟಾಣಿಯಿಂದಾಗಿ ಎಷ್ಟು ಕೇಜಿ ಬಣ್ಣ ನಿಮ್ಮ ಹೊಟ್ಟೆಯನ್ನು ಹೊಕ್ಕಿರಬಹುದು? ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡಿದ್ಧಾರೆ.

Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?
ಬಟಾಣಿಗೆ ಹಸಿರು ಬಣ್ಣ ಹಾಕುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Jul 13, 2023 | 5:17 PM

Green Peas : ಕಚ್ಚಾಹಾಳೆಗಳ ಪೊಟ್ಟಣಗಳಲ್ಲಿ ಅಥವಾ ಪ್ಲಾಸ್ಟೀಕಿನ ಪುಟ್ಟ ಚೀಟಿನಲ್ಲಿರುತ್ತಿದ್ದ ಈ ಬಣ್ಣದ ಬಟಾಣಿಗಳನ್ನು ತಿಂದು ಮುಗಿಸಿ ಕೈಗೆ ಹತ್ತಿದ ಒಂದೊಂದು ಉಪ್ಪಿನ ಕಣಗಳನ್ನು ನೆಕ್ಕಿ, ಟೀಚರ್​ ಕ್ಲಾಸಿನೊಳಗೆ ಬರುವುದಕ್ಕೇ ಮೊದಲು ಸಮವಸ್ತ್ರಕ್ಕೆ ಚೆನ್ನಾಗಿ ಒರೆಸಿಕೊಂಡು ಸಂಭಾವಿತರಂತೆ ಕುಳಿತುಕೊಳ್ಳುತ್ತಿದ್ದ ಆ ದಿನಗಳು ಕಣ್ಮುಂದೆ ಬರುತ್ತಿರಬೇಕಲ್ಲ? ಶಾಲೆಯ ಬಳಿಯ ತಳ್ಳುಗಾಡಿಗಳಿಂದ ಮತ್ತು ಕಾಕಾ ಅಂಗಡಿಗಳಿಂದ ಈ ಹಸಿರು ಮತ್ತು ಕೆಂಪು ಬಟಾಣಿಗಳನ್ನು ಖರೀದಿಸಿ ತಿನ್ನುತ್ತಿದ್ದದ್ದು ಬಾಲ್ಯದ (Childhood) ಸಂಭ್ರಮಗಳಲ್ಲಿ ಒಂದು. ಆದರೆ ಈ ಬಣ್ಣದ ಬಟಾಣಿಗಳನ್ನು ಹೇಗೆ ತಯಾರಿಸುತ್ತಾರೆ ಎಂದು ಈತನಕ ಗೊತ್ತಿತ್ತೆ? ಇಲ್ಲವಾದಲ್ಲಿ ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by SALONI BOTHRA (@_heresmyfood)

ಅಸ್ಸಾಮ್​ನ ಡಿಜಿಟಲ್​ ಕ್ರಿಯೇಟರ್​​ ಮತ್ತು ಫುಡ್​ ವ್ಲಾಗರ್​​ ಸಲೋನಿ ಬೋತ್ರಾ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೂ. 21ರಂದು ಹಂಚಿಕೊಂಡ ಈ ವಿಡಿಯೋ ಸುಮಾರು ಏಳು ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 3 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಇಷ್ಟು ವರ್ಷಗಳ ಕಾಲ ತಿಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇನ್ನೂ ಕೆಲವರು ಇನ್ನ್ಯಾವತ್ತೂ ಈ ಬಣ್ಣದ ಬಟಾಣಿಯನ್ನು ತಿನ್ನುವುದಿಲ್ಲ ಎಂದು ಪ್ರಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜನರೆಲ್ಲ ಬದುಕುಳಿದದ್ದಕ್ಕೆ ಈ ಕಾರಿನ ಗುಣಮಟ್ಟ ಕಾರಣವೋ, ಅವರ ಅದೃಷ್ಟವೋ?

ಅಯ್ಯೋ ನನ್ನ ಬಾಲ್ಯದಲ್ಲಿ ಈ ಬಟಾಣಿಯಿಂದಲೇ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ ಎಂದು ಒಬ್ಬರು. ಬಾಲ್ಯದಲ್ಲಿಯಷ್ಟೇ ಯಾಕೆ ದೊಡ್ಡವನಾದ ಮೇಲೂ ಎಂದು ಮತ್ತೊಬ್ಬರು. ಹಾಗಿದ್ದರೆ ನಮ್ಮೆಲ್ಲರ ಹೊಟ್ಟೆಯೊಳಗೆ ಅದೆಷ್ಟು ಕೇಜಿ ಬಣ್ಣ ಹೋಗಿರಬಹುದು ಎಂದು ಮಗದೊಬ್ಬರು. ನನ್ನ ಗ್ಯಾಸ್ಟ್ರಿಕ್​ ಮತ್ತು ಎಸಿಡಿಟಿ ಸಮಸ್ಯೆಗೆ ಈ ಬಟಾಣಿಯೂ ಕಾರಣವಾಗಿರಬಹುದೆ? ಎಂದು ಇನ್ನೂ ಒಬ್ಬರು. ಏನೇ ಆಗಲಿ ಸೀಝನ್​ ಬಂದಾಗ ತಾಜಾ ಬಟಾಣಿಗಳನ್ನು ತಿನ್ನುವುದೇ ಒಳ್ಳೆಯದು, ಇನ್ನ್ಯಾವತ್ತೂ ಪ್ಯಾಕ್ ಮಾಡಿದ ಹಸಿರು ಬಟಾಣಿಯನ್ನು ತಿನ್ನುವುದೇ ಇಲ್ಲ ಎನ್ನುತ್ತಿದ್ದಾರೆ ಸಾಕಷ್ಟು ಜನರು.

ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!