AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕೃತ ಯೋಗಗುರು

ಶಿವಾನಂದ ಬಾಬಾ ಹುಟ್ಟಿದ್ದು 1896ರ ಆಗಸ್ಟ್​ 8ರಂದು. ಅವಿಭಜಿತ ಭಾರತದ ಸೈಲ್ಹೆಟ್​ ಎಂಬುದು ಹುಟ್ಟೂರು. (ಇದೀಗ ಬಾಂಗ್ಲಾದೇಶದಲ್ಲಿದೆ). ಆರನೇ ವರ್ಷದಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡವರು. 

Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕೃತ ಯೋಗಗುರು
ಪ್ರಧಾನಿ ಮೋದಿಯವರಿಗೆ ನಮಸ್ಕರಿಸಿದ ಯೋಗಗುರು
TV9 Web
| Edited By: |

Updated on:Mar 22, 2022 | 1:08 PM

Share

ನಿನ್ನೆ ರಾಷ್ಟ್ರಪತಿ ಭವನದಲ್ಲಿ ಅನೇಕ ಮಹಾನ್ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind)​ ಅವರು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್​ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ತುಂಬ ಗಮನಸೆಳೆದವರು ವಾರಾಣಸಿಯ ಯೋಗ ಗುರು ಸ್ವಾಮಿ ಶಿವಾನಂದ ಬಾಬಾ. 126 ವರ್ಷದ ಇವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿನ್ನೆ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಇವರು ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಶಸ್ತಿ ಸ್ವೀಕಾರ ಮಾಡಲು ಬರುವ ದಾರಿಯಲ್ಲಿ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಎದುರು ಮೊಣಕಾಲೂರಿ, ನೆಲಕ್ಕೆ ಹಣೆ ಹಚ್ಚಿ ನಮಸ್ಕರ ಮಾಡಿದ್ದಾರೆ. ತಮ್ಮ ವಯಸ್ಸನ್ನು ಮರೆತು ಪ್ರಧಾನಿ ಮೋದಿಯವರಿಗೆ ನಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ತಮ್ಮ ಕುರ್ಚಿಯಿಂದ ಲಗುಬಗೆಯಿಂದ ಎದ್ದು, ಅವರೆದುರು ಬಾಗಿ ನಿಂತು ತಮ್ಮ ಕೈಯಿಂದ ನೆಲವನ್ನು ಸ್ಪರ್ಶಿಸಿ ನಮಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.  ಇವರಿಬ್ಬರ ಸಂಸ್ಕಾರ ಮೇರು ಮಟ್ಟದ್ದು ಎಂಬ ಮಾತುಗಳು ಕೇಳಿಬರುತ್ತಿವೆ.

ಸ್ವಾಮಿ ಶಿವಾನಂದ ಬಾಬಾ ಒಂದು ಧೋತಿ ಉಟ್ಟು, ಬಿಳಿಬಣ್ಣದ ಅಂಗಿ ತೊಟ್ಟು, ಬರಿಗಾಲಿನಲ್ಲಿಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಗೆ ನಮಸ್ಕರಿಸಿಯಾದ ಬಳಿಕ ಎದ್ದು ಪ್ರಶಸ್ತಿ ಸ್ವೀಕಾರ ಮಾಡುವ ವೇದಿಕೆಗೆ ಮತ್ತೊಮ್ಮೆ ಇದೇ ರೀತಿ ನಮಸ್ಕಾರ ಮಾಡಿದ್ದಾರೆ. ಹಾಗೇ, ರಾಷ್ಟ್ರಪತಿಯವರಿಗೂ ಅದೇ ರೀತಿ ನಮಿಸಿದ್ದಾರೆ. ಆಗ ರಾಷ್ಟ್ರಪತಿ ರಾಮನಾಥ ಕೋವಿಂದ್​ ತಮ್ಮ ಆಸನದಿಂದ ಎದ್ದು, ಯೋಗಗುರುವನ್ನೂ ಎಬ್ಬಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಶಿವಾನಂದ ಬಾಬಾ ಅವರು ತುಂಬ ಮುಗ್ಧತೆಯಿಂದ ಫೋಟೋಕ್ಕೆ ಪೋಸ್​ ಕೊಟ್ಟಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೇ, ಅಷ್ಟು ವಯಸ್ಸಾದರೂ ಅವರು ತುಂಬ ವೇಗವಾಗಿ ನಡೆಯುತ್ತಾರೆ. ಚುರುಕಾಗಿ, ಚಟುವಟಿಕೆಯಿಂದ ಇದ್ದಾರೆ.

ಶಿವಾನಂದ ಬಾಬಾ ಹುಟ್ಟಿದ್ದು 1896ರ ಆಗಸ್ಟ್​ 8ರಂದು. ಅವಿಭಜಿತ ಭಾರತದ ಸೈಲ್ಹೆಟ್​ ಎಂಬುದು ಹುಟ್ಟೂರು. (ಇದೀಗ ಬಾಂಗ್ಲಾದೇಶದಲ್ಲಿದೆ). ಆರನೇ ವರ್ಷದಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡವರು.  ಸದ್ಯ ಅವರು ವಾರಾಣಸಿಯ ದುರ್ಗಾಕುಂಡ್​ ಎಂಬಲ್ಲಿ, ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದು, ಪ್ರತಿದಿನ ಎರಡು ಬಾರಿ ಮೆಟ್ಟಿಲು ಹತ್ತಿ -ಇಳಿಯುತ್ತಾರೆ. ಅವರು ಯಾರದ್ದೂ ಸಹಾಯವಿಲ್ಲದೆ ಮೆಟ್ಟಿಲು ಹತ್ತುತ್ತಾರೆ ಎಂದು ಅವರ ಶಿಷ್ಯಂದಿರು ತಿಳಿಸಿದ್ದಾರೆ.  ಶಿವಾನಂದ ಬಾಬಾರ ತಂದೆ-ತಾಯಿ ಸಾಯಲು ಕಾರಣ ಹಸಿವು. ಇವರೂ ಕೂಡ ಬಾಲ್ಯವನ್ನೆಲ್ಲ ಬಹುತೇಕ ಅರ್ಧಹೊಟ್ಟೆಯಲ್ಲೇ ಕಳೆದಿದ್ದಾರೆ. ಪಾಲಕರನ್ನು ಕಳೆದುಕೊಂಡ ನಂತರ ಕಾಶಿಗೆ ಬಂದು ನೆಲೆಸಿದ ಇವರು, ಗುರು ಓಂಕಾರಾನಂದ ಎಂಬುವರ ಶಿಷ್ಯರಾದರು. 1925ರ ಹೊತ್ತಿಗೆ ಗುರುವಿನ ಆಣತಿ ಮೇರೆಗೆ ಪ್ರಪಂಚ ಪರ್ಯಟನೆ ಮಾಡಲು ತೆರಳಿದ್ದರು. ಸುಮಾರು 34 ವರ್ಷಗಳ ಕಾಲ ಇವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ.  ಯೋಗದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: Padma Awards 2022: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​​ರಿಂದ ಪ್ರಶಸ್ತಿ ಪ್ರದಾನ

Published On - 11:05 am, Tue, 22 March 22

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು