AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯಕ್ಕೆ ಜಯವಿದೆ ಎನ್ನುತ್ತಾ ವಿಕ್ಟರಿ ಸನ್ನೆ ತೋರಿಸಿ ಮೆಡಿಕಲ್ ಚೆಕಪ್ ಗೆ ಹೋದ ವಕೀಲ ಡಿ ದೇವರಾಜೇಗೌಡ!

ಸತ್ಯಕ್ಕೆ ಜಯವಿದೆ ಎನ್ನುತ್ತಾ ವಿಕ್ಟರಿ ಸನ್ನೆ ತೋರಿಸಿ ಮೆಡಿಕಲ್ ಚೆಕಪ್ ಗೆ ಹೋದ ವಕೀಲ ಡಿ ದೇವರಾಜೇಗೌಡ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 11, 2024 | 7:34 PM

ಅದರೆ ಮಾಧ್ಯಮದ ಪ್ರತಿನಿಧಿಗಳು ಛಲಬಿಡದ ತ್ರಿವಿಕ್ರಮನ ಹಾಗೆ, ಪೊಲೀಸ್ ವಾಹನಗಳನ್ನು ಹಿಂಬಾಲಿಸಿ ತಾಲ್ಲೂಕು ಆಸ್ಪತ್ರೆ ತಲುಪಿದರು. ಅಸ್ಪತ್ರೆಯ ಮುಖ್ಯದ್ವಾರದ ಬಳಿ ಅವರ ಶ್ರಮ ಸಾರ್ಥಕವಾಯಿತು. ವೈದ್ಯಕೀಯ ಚೆಕಪ್ ಸಲುವಾಗಿ ಒಳಗಡೆ ಹೋಗುವ ಮೊದಲು ದೇವರಾಜೇಗೌಡ ‘ಸತ್ಯಕ್ಕೆ ಜಯವಿದೆ’ ಅಂತ ಹೇಳುತ್ತಾ ವಿಕ್ಟರಿ ಸನ್ನೆ ತೋರಿದರು.

ಹಾಸನ: ಹೊಳೆನರಸೀಪುರ ಪೊಲೀಸರ ವಶದಲ್ಲಿರುವ ವಕೀಲ ಡಿ ದೇವರಾಜೇಗೌಡರನ್ನು (D Devarajegowda) ಇವತ್ತು ಸಾಯಂಕಾಲ ವೈದ್ಯಕೀಯ ಚೆಕಪ್ ಗಾಗಿ (medical checkup) ಕರೆದೊಯ್ಯಲಾಯಿತು. ಪಟ್ಟಣದ ವೃತ್ತ ನಿರೀಕ್ಷರ ಕಚೇರಿಯಿಂದ ಪೊಲೀಸ್ ವಾಹನಗಳಲ್ಲಿ ದೇವರಾಜೇಗೌಡರನ್ನು ತಾಲ್ಲೂಕು ಆಸ್ಪತ್ರೆಗೆ (taluk hospital) ಕರೆದೊಯ್ಯುವ ದೃಶ್ಯಗಳನ್ನು ನೋಡಬಹುದು. ಕಚೇರಿಯಿಂದ ಹೊರಬಂದಾಗ ಅವರು ಮಾಧ್ಯಮಗಳೊಂದಿಗೆ ಮಾತಾಡುವ ಉತ್ಸುಕತೆ ತೋರಿದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಅದರೆ ಮಾಧ್ಯಮದ ಪ್ರತಿನಿಧಿಗಳು ಛಲಬಿಡದ ತ್ರಿವಿಕ್ರಮನ ಹಾಗೆ, ಪೊಲೀಸ್ ವಾಹನಗಳನ್ನು ಹಿಂಬಾಲಿಸಿ ತಾಲ್ಲೂಕು ಆಸ್ಪತ್ರೆ ತಲುಪಿದರು. ಅಸ್ಪತ್ರೆಯ ಮುಖ್ಯದ್ವಾರದ ಬಳಿ ಅವರ ಶ್ರಮ ಸಾರ್ಥಕವಾಯಿತು. ವೈದ್ಯಕೀಯ ಚೆಕಪ್ ಸಲುವಾಗಿ ಒಳಗಡೆ ಹೋಗುವ ಮೊದಲು ದೇವರಾಜೇಗೌಡ ‘ಸತ್ಯಕ್ಕೆ ಜಯವಿದೆ’ ಅಂತ ಹೇಳುತ್ತಾ ವಿಕ್ಟರಿ ಸನ್ನೆ ತೋರಿದರು. ಮೆಡಿಕಲ್ ಚೆಕಪ್ ನಂತರ ದೇವರಾಜೇಗೌಡರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಟಿವಿ9 ಹಾಸನ ವರದಿಗಾರ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ವಿಚಾರಣೆ