AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಭೆಯಲ್ಲಿ ಕಾಂಗ್ರೆಸ್‌ನವರ ಕೈವಾಡ ಇದ್ದೇ ಇದೆ -ಬೇಗ್‌ ಆಕ್ರೋಶ

[lazy-load-videos-and-sticky-control id=”n6w6_KL4B3Q”] ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್​ನವರ ಕೈವಾಡ ಇದೆಯೆಂದು ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ. ಹಿಂಸಾಚಾರ ಪ್ರಕರಣದಲ್ಲಿ ಕೆಲವರು ಅಮಾಯಕರಿರಬಹುದು ಎಂದಿರುವ ರೋಷನ್ ಬೇಗ್. ಅಂತಹ ಅಮಾಯಕರನ್ನು ಪ್ರಕರಣದಿಂದ ಕೈ ಬಿಡಿ ಎಂದು ನಾನೇ ಪೊಲೀಸರಿಗೆ ಹೇಳಿದ್ದೇನೆ ಎಂದಿದ್ದಾರೆ. ಆದರೆ ಮೌಲ್ವಿಗಳ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿರುವ ರೋಷನ್ ಬೇಗ್​, ಮೌಲ್ವಿಗಳು ಗೋರಿಪಾಳ್ಯದಿಂದ ಹಾಗೂ ಟಿಪ್ಪು ನಗರದಿಂದ ಘಟನೆ ನಡೆದ ಸ್ಥಳಕ್ಕೆ […]

ಗಲಭೆಯಲ್ಲಿ ಕಾಂಗ್ರೆಸ್‌ನವರ ಕೈವಾಡ ಇದ್ದೇ ಇದೆ -ಬೇಗ್‌ ಆಕ್ರೋಶ
ಸಾಧು ಶ್ರೀನಾಥ್​
|

Updated on:Aug 18, 2020 | 6:45 PM

Share

[lazy-load-videos-and-sticky-control id=”n6w6_KL4B3Q”]

ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್​ನವರ ಕೈವಾಡ ಇದೆಯೆಂದು ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ.

ಹಿಂಸಾಚಾರ ಪ್ರಕರಣದಲ್ಲಿ ಕೆಲವರು ಅಮಾಯಕರಿರಬಹುದು ಎಂದಿರುವ ರೋಷನ್ ಬೇಗ್. ಅಂತಹ ಅಮಾಯಕರನ್ನು ಪ್ರಕರಣದಿಂದ ಕೈ ಬಿಡಿ ಎಂದು ನಾನೇ ಪೊಲೀಸರಿಗೆ ಹೇಳಿದ್ದೇನೆ ಎಂದಿದ್ದಾರೆ. ಆದರೆ ಮೌಲ್ವಿಗಳ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿರುವ ರೋಷನ್ ಬೇಗ್​, ಮೌಲ್ವಿಗಳು ಗೋರಿಪಾಳ್ಯದಿಂದ ಹಾಗೂ ಟಿಪ್ಪು ನಗರದಿಂದ ಘಟನೆ ನಡೆದ ಸ್ಥಳಕ್ಕೆ ಏಕೆ ಬರಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ಶಾಸಕ ಜಮೀರ್ ಅಹಮದ್ ವಿರುದ್ಧ ಹರಿಹಾಯ್ದಿರುವ ರೋಷನ್ ಬೇಗ್, ಜಮೀರ್ ಅಹಮದ್, ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ನಾನು ಅವರ ಮನೆ ಮುಂದೆ ವಾಚ್ಮನ್ ಆಗುತ್ತೇನೆ ಎಂದಿದ್ದರು. ಹಾಗಾಗಿ ಮೊದಲು ಜಮೀರ್ ಅಹಮದ್ ಯಡಿಯೂರಪ್ಪ ಮನೆಯವರ ಹತ್ತಿರ ವಾಚ್ಮನ್ನಾಗಿ ಕೆಲಸ ನಿರ್ವಹಿಸಲಿ ಎಂದಿದ್ದಾರೆ.

Published On - 3:03 pm, Tue, 18 August 20