AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galwan Clash Video: ಜಂಟಿ ಹೇಳಿಕೆಯ ಬೆನ್ನಲ್ಲೇ ಗಾಲ್ವಾನ್ ಘರ್ಷಣೆಯ ವಿಡಿಯೊ ಬಿಡುಗಡೆ ಮಾಡಿದ ಚೀನಾ

ಚೀನಾದ ಸೈನಿಕರು ಗಾಲ್ವಾನ್ ನದಿಯ ತಿರುವಿನಿಂದ ಎತ್ತರದಿಂದ ಭಾರತೀಯ ಸೈನಿಕರ ಮೇಲೆ ಕಲ್ಲು ಎಸೆಯುತ್ತಿರುವುದನ್ನು ಈ ದೃಶ್ಯಗಳು ತೋರಿಸಿವೆ. ಕೆಲವು ಚೀನಾದ ಸೈನಿಕರು ಆಳವಿಲ್ಲದ, ವೇಗವಾಗಿ ಹರಿಯುವ ನದಿಯಲ್ಲಿ ಅಲೆಯುತ್ತಿರುವುದನ್ನು ತೋರಿಸುತ್ತದೆ

Galwan Clash Video: ಜಂಟಿ ಹೇಳಿಕೆಯ ಬೆನ್ನಲ್ಲೇ ಗಾಲ್ವಾನ್ ಘರ್ಷಣೆಯ ವಿಡಿಯೊ ಬಿಡುಗಡೆ ಮಾಡಿದ ಚೀನಾ
ಗಾಲ್ವಾನ್ ಘರ್ಷಣೆ
TV9 Web
| Edited By: |

Updated on: Aug 03, 2021 | 11:07 PM

Share

ದೆಹಲಿ: ಚೀನಾದ ಆನ್‌ಲೈನ್ ಹ್ಯಾಂಡಲ್‌ಗಳು ಕಳೆದ ವರ್ಷ ಜೂನ್ ನಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿವೆ. ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನತೆಯನ್ನು ನಿವಾರಿಸಲು ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆಗಳನ್ನು ಮುಂದುವರಿಸುವುದಾಗಿ ಭಾರತ ಮತ್ತು ಚೀನಾ ನಿನ್ನೆ ಜಂಟಿ ಹೇಳಿಕೆಯನ್ನು ನೀಡಿದ ಕೆಲವು ಗಂಟೆಗಳ ನಂತರ ಈ ದೃಶ್ಯಗಳು ಹೊರಬಂದಿವೆ. 1962 ರ ಯುದ್ಧದ ನಂತರ ಅತ್ಯಂತ ಭೀಕರವಾದ ಭಾರತ ಮತ್ತು ಚೀನಾ ಸೈನಿಕರ ನಡುವೆ ಕಳೆದ ವರ್ಷ ಜೂನ್ 15 ರಂದು ಘರ್ಷಣೆಗಳು ನಡೆದಿತ್ತು.

ಚೀನಾದ ಸೈನಿಕರು ಗಾಲ್ವಾನ್ ನದಿಯ ತಿರುವಿನಿಂದ ಎತ್ತರದಿಂದ ಭಾರತೀಯ ಸೈನಿಕರ ಮೇಲೆ ಕಲ್ಲು ಎಸೆಯುತ್ತಿರುವುದನ್ನು ಈ ದೃಶ್ಯಗಳು ತೋರಿಸಿವೆ. ಕೆಲವು ಚೀನಾದ ಸೈನಿಕರು ಆಳವಿಲ್ಲದ, ವೇಗವಾಗಿ ಹರಿಯುವ ನದಿಯಲ್ಲಿ ಅಲೆಯುತ್ತಿರುವುದನ್ನು ತೋರಿಸುತ್ತದೆ. 1962 ರ ಯುದ್ಧದ ನಂತರ ನಡೆದ ಭೀಕರ ಘರ್ಷಣೆಯಲ್ಲಿ 20 ಅಧಿಕಾರಿಗಳು ಮತ್ತು ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಅಧಿಕೃತವಾಗಿ ಘೋಷಿಸಿದೆ. ಚೀನಾ ತನ್ನ ನಾಲ್ಕು ಸೈನಿಕರನ್ನು ಕಳೆದುಕೊಂಡಿದೆ ಎಂದು ಹೇಳುತ್ತದೆ. ಆದರೆ ಸೇನಾ ಮೂಲಗಳು ಇದನ್ನು ಅಲ್ಲಗೆಳೆದಿವೆ.

ಭಾರತ ಮತ್ತು ಚೀನಾ ಶನಿವಾರ 12 ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಸಿ ಲಡಾಖ್ ಬಿಕ್ಕಟ್ಟು ಪರಿಹರಿಸಲು ಮತ್ತು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡವು.  ಸೇನೆಯು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಉಭಯ ಪಕ್ಷಗಳು ಬೇರ್ಪಡುವಿಕೆಗೆ ಸಂಬಂಧಿಸಿದ ನೇರ ಮತ್ತು ಆಳವಾದ ವಿನಿಮಯ” ವನ್ನು ಹೊಂದಿದ್ದು, ಸಭೆಯಲ್ಲಿ ಪರಸ್ಪರ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದೆ.

ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಸೇರಿದಂತೆ ಅತ್ಯುತ್ತಮ ಫ್ಲ್ಯಾಶ್ ಪಾಯಿಂಟ್‌ಗಳ ನಿರ್ಣಯವು ಎರಡು ದೇಶಗಳ ನಡುವಿನ ಬಾಂಧವ್ಯಕ್ಕೆ ಪ್ರಮುಖವಾದುದು ಎಂದು ಭಾರತ ಪ್ರತಿಪಾದಿಸುತ್ತದೆ.

ಇತ್ತೀಚಿನ ಸುತ್ತಿನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ಅವರು ಜುಲೈ 14 ರಂದು ದುಶಾನ್‌ಬೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO) ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ವಾಸ್ತವ ನಿಯಂತ್ರಣ ರೇಖೆಯ (LAC) ಯಾವುದೇ ಏಕಪಕ್ಷೀಯ ಬದಲಾವಣೆಯು ಭಾರತಕ್ಕೆ “ಸ್ವೀಕಾರಾರ್ಹವಲ್ಲ” ಮತ್ತು ಪೂರ್ವ ಲಡಾಖ್‌ನಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆಯ ನಂತರ ಮಾತ್ರ ಒಟ್ಟಾರೆ ಸಂಬಂಧಗಳು ಅಭಿವೃದ್ಧಿ ಹೊಂದುತ್ತವೆ ಎಂದು ಜಯಶಂಕರ್ ಅವರು ವಾಂಗ್‌ಗೆ ಹೇಳಿದ್ದಾರೆ.

ಇದನ್ನೂ ಓದಿ:  ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಭಾರತ,ಚೀನಾ ಒಪ್ಪಿಗೆ

ಇದನ್ನೂ ಓದಿ: ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ; ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ: ಬಸವರಾಜ ಬೊಮ್ಮಾಯಿ

(Chinese online handles have released footage of the 2020 Galwan Clashes)