Twitter: ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಕಾರುಬಾರು ಶುರು: ಸಿಇಒ ಪರಾಗ್ ಅಗರ್​ವಾಲ್ ಸೇರಿ ಹಲವು ಉನ್ನತ ಸಿಬ್ಬಂದಿ ವಜಾ

Elon Musk: ಟ್ವಿಟರ್ ಕಂಪನಿಯ ಹಿರಿಯ ಸಿಬ್ಬಂದಿಯನ್ನು ವಜಾ ಮಾಡುವ ಮೂಲಕ ತಮ್ಮ ಆಡಳಿತ ವೈಖರಿ ಹೇಗಿರುತ್ತದೆ ಎಂಬ ಬಗ್ಗೆ ಎಲ್ಲ ಸಿಬ್ಬಂದಿಗೆ ಎಲಾನ್ ಮಸ್ಕ್ ಸಂದೇಶ ರವಾನಿಸಿದ್ದಾರೆ.

Twitter: ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಕಾರುಬಾರು ಶುರು: ಸಿಇಒ ಪರಾಗ್ ಅಗರ್​ವಾಲ್ ಸೇರಿ ಹಲವು ಉನ್ನತ ಸಿಬ್ಬಂದಿ ವಜಾ
ಎಲಾನ್ ಮಸ್ಕ್ (ಎಡಚಿತ್ರ), ಟ್ವಿಟರ್ ಕಚೇರಿಯಲ್ಲಿ ಮಸ್ಕ್ ಸಂವಾದ (ಬಲಚಿತ್ರ)
Follow us
| Updated By: ಗಣಪತಿ ಶರ್ಮ

Updated on:Oct 28, 2022 | 12:30 PM

ಸ್ಯಾನ್​ ಫ್ರಾನ್ಸಿಸ್​ಕೊ: ಸಾಮಾಜಿಕ ಜಾಲತಾಣದ ದೈತ್ಯ ಕಂಪನಿ ಟ್ವಿಟರ್​ ಅನ್ನು ಉದ್ಯಮಿ ಎಲಾನ್ ಮಸ್ಕ್ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಕಂಪೆನಿಯು ಅಧೀನಕ್ಕೆ ಬಂದ ನಂತರ ಏಕಾಏಕಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ. ಈ ಮೂಲಕ ತಮ್ಮ ಆಡಳಿತ ವೈಖರಿ ಹೇಗಿರುತ್ತದೆ ಎಂಬ ಬಗ್ಗೆ ಎಲ್ಲ ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ. ಸಿಇಒ ಪರಾಗ್ ಅಗರ್​ವಾಲ್ ಅವರೊಂದಿಗೆ ಟ್ವಿಟರ್​ನ ಸಿಎಫ್​ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ಮಸ್ಕ್ ವಜಾ ಮಾಡಿದ್ದಾರೆ ಎಂದು ‘ರಾಯಿಟರ್ಸ್​’ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಸ್ಕ್ ಅವರು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲು ಯತ್ನಿಸಿದಾಗ ಅಗರ್​ವಾಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿಯಿಂದ ಮಸ್ಕ್ ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಟ್ವಿಟರ್ ಖರೀದಿ ಪ್ರಕ್ರಿಯೆಗೆ ನ್ಯಾಯಾಲಯವು ವಿಧಿಸಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಮಹತ್ವದ ಬೆಳವಣಿಗೆ ನಡೆದಿದೆ.

ಟ್ವಿಟರ್ ಖರೀದಿ ಕುರಿತು ಗುರುವಾರ ಟ್ವೀಟ್ ಮಾಡಿದ್ದ ಮಸ್ಕ್, ‘ನಾಗರಿಕತೆಯ ಭವಿಷ್ಯಕ್ಕೆ ಒಂದು ಆರೋಗ್ಯಕರ ವೇದಿಕೆ ಬೇಕಿದೆ. ಎಲ್ಲರೂ ಬಳಸಬಹುದಾದ ಸಾಮಾನ್ಯ ಡಿಜಿಟಲ್ ಪೇಟೆಯಲ್ಲಿ ಹಲವು ನಂಬಿಕೆಗಳು, ಸಿದ್ಧಾಂತಗಳು ಇರುವ ಜನರು ಆರೋಗ್ಯಕರವಾಗಿ ಚರ್ಚಿಸಲು ಅವಕಾಶ ಇರುತ್ತದೆ’ ಎಂದು ಹೇಳಿದ್ದರು. ಟ್ವಿಟರ್ ಮುನ್ನಡೆಸುವ ಕುರಿತು ತಮ್ಮ ಆಲೋಚನೆಗಳನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲೆಂದು ಟ್ವಿಟರ್​ ಕಚೇರಿಯ ಕಾಫಿ ಬಾರ್​ನಲ್ಲಿ ಸಿಬ್ಬಂದಿಯೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು.

‘ಟ್ವಿಟರ್​ನಲ್ಲಿ ನಕಲಿ ಖಾತೆಗಳಿಗೆ ಕಡಿವಾಣ ಹಾಕಬೇಕಿದೆ. ಸಾರ್ವಜನಿಕವಾಗಿ ಯಾವುದೇ ಪೋಸ್ಟ್​ಗಳು ಹೇಗೆ ಕಾಣಿಸುತ್ತವೆ’ ಎಂಬದನ್ನು ಪತ್ತೆ ಮಾಡಲು ಟ್ವಿಟರ್​ನ ಆಲ್ಗರಿದಂ ಮಾರ್ಪಡಿಸಬೇಕು ಎಂದು ಮಸ್ಕ್ ಪ್ರತಿಪಾದಿಸಿದ್ದರು. ಟ್ವಿಟರ್ ವೇದಿಕೆಯು ದ್ವೇಷ ಮತ್ತು ವಿಭಜನೆಯ ‘ಎಕೊ ಛೇಂಬರ್’ (ಪ್ರತಿಧ್ವನಿ ಪೆಟ್ಟಿಗೆ) ಆಗಬಾರದು. ಹಾಗೆಂದು ವಿಪರೀತ ಸೆನ್ಸಾರ್​ಶಿಪ್ ಇರಬಾರದು’ ಎಂದು ಮಸ್ಕ್ ಪ್ರತಿಪಾದಿಸಿದ್ದರು.

ತಮ್ಮ ಸುಪರ್ದಿಗೆ ಬಂದ ನಂತರ ಟ್ವಿಟರ್​ ಅನ್ನು ಹೇಗೆ ನಿರ್ವಹಿಸಲಾಗುವುದು ಎಂಬ ಬಗ್ಗೆ ಮಸ್ಕ್ ಯಾವುದೇ ವಿವರ ಬಹಿರಂಗಪಡಿಸಲಿಲ್ಲ. ಬದಲಿಗೆ ‘ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲಾಗುವುದು’ ಎಂದು ಹೇಳಿ ಸುಮ್ಮನಾಗಿದ್ದರು. ಟ್ವಿಟರ್​ನ ಸುಮಾರು 7,500 ಉದ್ಯೋಗಿಗಳಲ್ಲಿ ಈ ಹೇಳಿಕೆಯು ಉದ್ಯೋಗ ಕಳೆದುಕೊಳ್ಳುವ ಭೀತಿ ಹುಟ್ಟಿಸಿದೆ. ‘ನಾನೇ ಇನ್ನಷ್ಟು ಕಾಸು ಸಂಪಾದಿಸಬೇಕೆಂದು ಟ್ವಿಟರ್ ಖರೀದಿಸಲಿಲ್ಲ. ನಾನು ತುಂಬಾ ಪ್ರೀತಿಸುವ ಮನುಕುಲಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಮಸ್ಕ್ ಹೇಳಿದ್ದರು. ತಾವು ಟ್ವಿಟರ್ ಖರೀದಿಸಿದ್ದು ಏಕೆ ಎಂದು ವಿವರಿಸಲು ಜಾಹೀರಾತುದಾರರಿಗೆ ಎರಡು ಪುಟಗಳ ಪತ್ರವನ್ನು ಮಸ್ಕ್ ಬರೆದಿದ್ದಾರೆ.

ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ್ದ ಮಸ್ಕ್

ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ತಮ್ಮ ಟ್ವೀಟ್ ಖಾತೆಯಲ್ಲಿರುವ ವೈಯಕ್ತಿಕ ವಿವರಗಳನ್ನು ನಿನ್ನೆಯಷ್ಟೇ (ಅ 27) ಬದಲಿಸಿದ್ದರು. 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ‘Chief Twit’ (ಟ್ವಿಟರ್ ಮುಖ್ಯಸ್ಥ) ಎಂದು ಕರೆದುಕೊಂಡಿದ್ದಾರೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಸ್ಯಾನ್​ಫ್ರಾನ್ಸಿಸ್ಕೊ ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈಲಿ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ ತಂದರು. ‘ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ’ (Entering Twitter HQ – let that sink in!) ಎಂದು ಈ ವಿಡಿಯೊಗೆ ಒಕ್ಕಣೆ ಬರೆದುಕೊಂಡಿದ್ದರು.

ಈ ಮಧ್ಯೆ, ಟ್ವಿಟರ್ ಖರೀದಿ ಅಧಿಕೃತವಾದ ಬಳಿಕ ‘ದ ಬರ್ಡ್ ಈಸ್ ಫ್ರೀಡ್’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

Published On - 7:42 am, Fri, 28 October 22

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು