ಅಯತೊಲ್ಲಾ ಖಮೇನಿಗೆ ತನ್ನ ಮಗ ಮೊಜ್ತಬಾ ಉತ್ತರಾಧಿಕಾರಿಯಾಗುವುದು ಇಷ್ಟವಿರಲಿಲ್ಲ

ಅಯತೊಲ್ಲಾ ಖಮೇನಿಯವರ ಮಗ ಮೊಜ್ತಬಾ ಉತ್ತರಾಧಿಕಾರಿಯಾಗಿದ್ದಾರೆ. ಆದರೆ, ಖಮೇನಿ ತಮ್ಮ ಮಗ ಉತ್ತರಾಧಿಕಾರಿಯಾಗುವುದನ್ನು ಎಂದಿಗೂ ಬಯಸಿರಲಿಲ್ಲ. ಇರಾನ್ ರಾಜವಂಶ ಆಡಳಿತಕ್ಕೆ ಮರಳಿದೆ ಎಂಬ ಸಂದೇಶ ಜಗತ್ತಿಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. 1979ರ ಇಸ್ಲಾಮಿಕ್ ಕ್ರಾಂತಿಯ ಗುರಿ ರಾಜಪ್ರಭುತ್ವವನ್ನು ಅಂತ್ಯಗೊಳಿಸುವುದಾಗಿತ್ತು. ಮೊಜ್ತಬಾ ಐಆರ್‌ಜಿಸಿ ಜೊತೆ ಆಳವಾದ ಸಂಬಂಧ ಹೊಂದಿದ್ದರು.

ಅಯತೊಲ್ಲಾ ಖಮೇನಿಗೆ ತನ್ನ ಮಗ ಮೊಜ್ತಬಾ ಉತ್ತರಾಧಿಕಾರಿಯಾಗುವುದು ಇಷ್ಟವಿರಲಿಲ್ಲ
ಖಮೇನಿ ಮೊಜ್ತಬಾ
Image Credit source: Times Of India

Updated on: Mar 11, 2026 | 8:01 AM

ಟೆಹ್ರಾನ್, ಮಾರ್ಚ್​ 11: ಇರಾನ್(Iran) ಸರ್ವೋಚ್ಚ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರಅವರ ಮಗ ಮೊಜ್ತಬಾ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಖಮೇನಿಗೆ ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ. ಖಮೇನಿ ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಾರಿ ವಿಶೇಷ ಸಭೆಯಲ್ಲಿ ಇದರ ಬಗ್ಗೆ ಮಾತನಾಡಿದ್ದರು. ಇದರ ಹಿಂದಿನ ಕಾರಣ ದಾಳಿಯ ಭಯ ಅಥವಾ ಅವರ ಮಗನ ಜೀವ ಹೋಗುತ್ತೆ ಎಂಬುದಲ್ಲ ಬೇರೆಯದೇ ಕಾರಣ ಇದೆ.

ಇರಾನ್ ವೈರ್ ವರದಿವರದಿಗಳ ಪ್ರಕಾರ, ಇರಾನ್‌ನ ತಜ್ಞರ ಸಭೆಯ ಹಿರಿಯ ಸದಸ್ಯ ಮಹಮೂದ್ ಮೊಹಮ್ಮದಿ ಇರಾಕಿ, ILNA ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಖಮೇನಿಯವರ ವಿರೋಧದ ಹಿಂದಿನ ನಿಜವಾದ ಕಾರಣವೆಂದರೆ ಅವರು ರಾಜವಂಶಸ್ಥರು ಎಂದು ಹಣೆಪಟ್ಟಿ ಕಟ್ಟಿಕೊಳ್ಳುವುದನ್ನು ಬಯಸಿರಲಿಲ್ಲ.

ಅವರು ತಮ್ಮ ಮಗನಿಗೆ ಸಿಂಹಾಸನವನ್ನು ಹಸ್ತಾಂತರಿಸಿದ್ದಾರೆಂದು ಜನರು ಹೇಳಿಕೊಳ್ಳುವುದು ಇಷ್ಟವಿರಲಿಲ್ಲ. 1979 ರ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯು ರಾಜಪ್ರಭುತ್ವವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿತ್ತು.

ತಮ್ಮ ಮಗ ತನ್ನ ಉತ್ತರಾಧಿಕಾರಿಯಾದರೆ, ಇರಾನ್ ಆನುವಂಶಿಕ ನಾಯಕತ್ವ ವ್ಯವಸ್ಥೆಗೆ, ಅಂದರೆ ರಾಜರು ಮತ್ತು ರಾಜಕುಮಾರರ ವ್ಯವಸ್ಥೆಗೆ ಮರಳಿದೆ ಎಂಬ ಸಂದೇಶವನ್ನು ಜಗತ್ತಿಗೆ ಮತ್ತು ಇರಾನಿನ ಜನರಿಗೆ ಕಳುಹಿಸುತ್ತದೆ ಎಂದು ಖಮೇನಿ ನಂಬಿದ್ದರು. 2009 ಕ್ಕಿಂತ ಮೊದಲು ಅವರು ಅಧಿಕೃತವಾಗಿ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದಿರಲಿಲ್ಲ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸಿದರೆ, ಇರಾನ್ ಒಂದು ರಾಷ್ಟ್ರವಾಗಿಯೇ ಉಳಿಯದು: ಟ್ರಂಪ್ ಎಚ್ಚರಿಕೆ

ಇದರ ಹೊರತಾಗಿಯೂ, ಅವರನ್ನು ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಯುಎಸ್ ಖಜಾನೆ ಇಲಾಖೆಯ ಪ್ರಕಾರ, ಮೊಜ್ತಬಾ ತನ್ನ ತಂದೆಯ ವಿಶ್ವಾಸವನ್ನು ಗಳಿಸುವುದಲ್ಲದೆ, ಇರಾನ್‌ನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು.

ಇರಾನ್‌ನಲ್ಲಿ, ಸರ್ವೋಚ್ಚ ನಾಯಕನನ್ನು 88 ಧಾರ್ಮಿಕ ವಿದ್ವಾಂಸರ ಗುಂಪಾದ ತಜ್ಞರ ಸಭೆಯು ಆಯ್ಕೆ ಮಾಡುತ್ತದೆ. ದೇಶವನ್ನು ಯಾರು ಮುನ್ನಡೆಸಬೇಕೆಂದು ಈ ಸಂಸ್ಥೆ ನಿರ್ಧರಿಸುತ್ತದೆ. ಅಯತೊಲ್ಲಾ ಅಲಿ ಖಮೇನಿ 1989 ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಸೆಂಬ್ಲಿಯ ಕೆಲವು ಸದಸ್ಯರು ಮೊಜ್ತಬಾ ಅವರ ಹೆಸರನ್ನು ಪರಿಗಣಿಸಲು ಬಯಸಿದ್ದರೂ, ಇರಾನ್‌ನ ಪ್ರಜಾಪ್ರಭುತ್ವ ಮತ್ತು ಕ್ರಾಂತಿಕಾರಿ ಇಮೇಜ್‌ಗೆ ಹಾನಿಯಾಗದಂತೆ ಸರ್ವೋಚ್ಚ ನಾಯಕ ಸ್ವತಃ ಇದಕ್ಕೆ ಬ್ರೇಕ್ ಹಾಕಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us