AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಹೊತ್ತ ಐಸಿಸ್​-ಕೆ; ವರದಿ ಕೇಳಿದ ಪಾಕ್​ ಆಂತರಿಕ ವ್ಯವಹಾರಗಳ ಸಚಿವಾಲಯ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದಲೂ ಐಸಿಸ್​-ಕೆ ದಾಳಿಯೂ ಹೆಚ್ಚಾಗಿದೆ. ಅಫ್ಘಾನ್​ನ ಹಲವು ಭಾಗಗಳಲ್ಲೂ ದಾಳಿ ನಡೆಸಿದೆ. ಆಗಸ್ಟ್​ 26ರಂದು ಕಾಬೂಲ್​​ ಏರ್ಪೋರ್ಟ್​​ನಲ್ಲಿ ಮಾರಣಾಂತಿಕವಾದ ಆತ್ಮಾಹುತಿ ದಾಳಿ ನಡೆಸಿತ್ತು.

ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಹೊತ್ತ ಐಸಿಸ್​-ಕೆ; ವರದಿ ಕೇಳಿದ ಪಾಕ್​ ಆಂತರಿಕ ವ್ಯವಹಾರಗಳ ಸಚಿವಾಲಯ
ಹತ್ಯೆಗೀಡಾದ ಸಿಖ್​ ನಾಯಕ
TV9 Web
| Edited By: |

Updated on:Oct 03, 2021 | 1:34 PM

Share

ಪೇಶಾವರ (Peshawar)ದಲ್ಲಿ ಇತ್ತೀಚೆಗಷ್ಟೇ ಸಿಖ್​ ಸಮುದಾಯ (Sikh Community)ದ ಖ್ಯಾತ ಯುನಾನಿ ವೈದ್ಯ (ಹಕೀಮ್​) ಸರ್ದಾರ್ ಸತ್ನಾಮ್​ ಸಿಂಗ್​​ (45)ರನ್ನು ಅವರ ಕ್ಲಿನಿಕ್​ಗೇ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅಪರಿಚಿತ ಬಂದೂಕುಧಾರಿಗಳು ಕ್ಲಿನಿಕ್​ಗೆ ಬಂದು, ಕ್ಯಾಬಿನ್​ ಬಾಗಿಲು ನೂಕಿ ಸತ್ನಾಮ್​ ಸಿಂಗ್​ರಿಗೆ ಗುಂಡು ಹಾರಿಸಿದ್ದರು. ಇದೀಗ ಈ ಹತ್ಯೆಯನ್ನು ತಾವೇ ನಡೆಸಿದ್ದಾಗಿ ಐಸಿಸ್​-ಕೆ (ISIS-K-ಇಸ್ಲಾಮಿಕ್ ಸ್ಟೇಟ್​ ಖೊರಾಸನ್​) ಒಪ್ಪಿಕೊಂಡಿದೆ. ಇದು ಇಸ್ಲಾಮಿಕ್​ ಸ್ಟೇಟ್ಸ್​ ಅಫ್ಘಾನಿಸ್ತಾನದ ಅಂಗಸಂಸ್ಥೆ. ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಐಸಿಸ್​ -ಕೆ ಹೊರುತ್ತಿದ್ದಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಇದರಲ್ಲಿ ಹಸ್ತಕ್ಷೇಪ ಮಾಡಿದೆ. ಸಿಖ್​ ವೈದ್ಯನ ಹತ್ಯೆಯ ಕುರಿತಾದ ಸಮಗ್ರ ಮಾಹಿತಿಯನ್ನು ನೀಡುವಂತೆ ಖೈಬರ್​ ಪಖ್ತುಂಖ್ವಾ ಪ್ರಾಂತೀಯ ಸರ್ಕಾರದ ಬಳಿ ಕೇಳಿದೆ. 

ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರ ಖೈಬರ್​ ಪಂಖ್ತುಂಖ್ವಾ ಪ್ರಾಂತ್ಯಕ್ಕೆ ಸೇರಿದೆ. ಹತ್ಯೆಗೀಡಾದ ಸಿಖ್​ ಹಕೀಮ್​ ಸರ್ದಾರ್ ಸತ್ನಾಮ್ ಸಿಂಗ್, ಸಿಖ್​ ಸಮುದಾಯದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು.​ ಕಳೆದ 20 ವರ್ಷಗಳಿಂದಲೂ  ಪೇಶಾವರ್​​ನ ಚರ್ಸದ್ದ ರಸ್ತೆಯಲ್ಲಿ ಧರ್ಮಂದರ್​ ಫಾರ್ಮಸಿ ಎಂಬ ಹೆಸರಿನ ಕ್ಲಿನಿಕ್​ ನಡೆಸುತ್ತಿದ್ದರು. ಹತ್ಯೆ ನಡೆದದ್ದು ಸೆಪ್ಟೆಂಬರ್​ 30ರಂದು. ಅಂದು ನಾಲ್ವರು ಅಪರಿಚಿತರು ಬಂದೂಕು ಹಿಡಿದು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ವೈದ್ಯನ ಹತ್ಯೆ ಮಾಡಿ ಅಲ್ಲಿಂದ ಪಾರಾಗಿದ್ದರು. ಶುಕ್ರವಾರ ಇವರ ಅಂತ್ಯಕ್ರಿಯೆ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದಲೂ ಐಸಿಸ್​-ಕೆ ದಾಳಿಯೂ ಹೆಚ್ಚಾಗಿದೆ. ಅಫ್ಘಾನ್​ನ ಹಲವು ಭಾಗಗಳಲ್ಲೂ ದಾಳಿ ನಡೆಸಿದೆ. ಆಗಸ್ಟ್​ 26ರಂದು ಕಾಬೂಲ್​​ ಏರ್ಪೋರ್ಟ್​​ನಲ್ಲಿ ಮಾರಣಾಂತಿಕವಾದ ಆತ್ಮಾಹುತಿ ದಾಳಿ ನಡೆಸಿತ್ತು. ಅದರಲ್ಲಿ ಸುಮಾರು 170 ಅಫ್ಘಾನ್​ ಸೈನಿಕರನ್ನು ಮತ್ತು 13 ಯುಎಸ್​ ಸೇನಾ ಸಿಬ್ಬಂದಿಯನ್ನು ಹತ್ಯೆಗೈದಿದ್ದೇವೆ ಎಂದೂ ಐಸಿಸ್​-ಕೆ ಹೇಳಿಕೊಂಡಿದೆ.  ಇದೀಗ ಸಿಖ್​ ವೈದ್ಯನ ಹತ್ಯೆಯ ಹೊಣೆಯನ್ನೂ ಹೊತ್ತಿದೆ. ಪೇಶಾವರದಲ್ಲಿ ಸಿಖ್​ರನ್ನು ಪದೇಪದೆ ಟಾರ್ಗೆಟ್​ ಮಾಡಲಾಗುತ್ತಿದೆ. 2018ರಲ್ಲಿ ಸಿಖ್​ ಪ್ರಮುಖ ನಾಯಕ ಚರಣಜಿತ್​ ಸಿಂಗ್​ ಎಂಬುವರನ್ನು ಅಪರಿಚಿತನೊಬ್ಬ ಹತ್ಯೆ ಮಾಡಿದ್ದ. ಹಾಗೇ, 2016ರಲ್ಲಿ ಪಾಕಿಸ್ತಾನ ತೆಹ್ರೀಕ್​-ಇ-ಇನ್ಸಾಫ್​ ಪಕ್ಷದ ಸದಸ್ಯ ಸೋರೆನ್​ ಸಿಂಗ್​​ರನ್ನು ಪೇಶಾವರದಲ್ಲಿಯೇ ಹತ್ಯೆ ಮಾಡಲಾಗಿತ್ತು. 2020ರಲ್ಲಿ ಸುದ್ದಿವಾಹಿನಿಯೊಂದರ ನಿರೂಪಕ ರವೀಂದರ್​ ಸಿಂಗ್​ರನ್ನು ಭೀಕರವಾಗಿ ಕೊಲ್ಲಲಾಗಿತ್ತು.

ಇದನ್ನೂ ಓದಿ: ‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ

ಬಹಿರಂಗ ಹೇಳಿಕೆ ನೀಡದಂತೆ ಜೆಡಿಎಸ್ ಶಾಸಕರಿಗೆ ಹೆಚ್ ಡಿ ಕುಮಾರಸ್ವಾಮಿ ಸೂಚನೆ

Published On - 1:32 pm, Sun, 3 October 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್