AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ್ದ ವ್ಯಕ್ತಿಗೆ ಈಗ ಪಾಂಡ ಆಗುವ ಆಸೆಯಂತೆ!

ಜಪಾನ್​ನ ಟೊಕೊ ಎಂಬ ವ್ಯಕ್ತಿ ತಾನು ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ಕಾಸ್ಟ್ಯೂಮ್ ತಯಾರಿಸಿ ಎಲ್ಲೆಡೆ ಸುದ್ದಿಯಾಗಿದ್ದರು. ಆದರೆ ಇದೀಗ ಅವರಿಗೆ ಪಾಂಡ ಅಥವಾ ಬೆಕ್ಕಾಗುವ ಕನಸಿದೆಯಂತೆ.

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ್ದ ವ್ಯಕ್ತಿಗೆ ಈಗ ಪಾಂಡ ಆಗುವ ಆಸೆಯಂತೆ!
ನಯನಾ ರಾಜೀವ್
|

Updated on: May 24, 2024 | 8:57 AM

Share

ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ್ದ ಜಪಾನ್(Japan)​ ವ್ಯಕ್ತಿಗೆ ಈಗ ಪಾಂಡ ಅಥವಾ ಬೆಕ್ಕಾಗುವ ಆಸೆಯಂತೆ. ಸಾಕು ಪ್ರಾಣಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮನುಷ್ಯರಿಗಿಂತಲೂ ಪ್ರಾಣಿಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ, ತಮ್ಮ ಮುದ್ದು ಪ್ರಾಣಿಗಳಿಗಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂದು ನಾವು ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಅವುಗಳ ಆಹಾರ ನಿರ್ವಹಣೆಗಾಗಿಯೇ ಜನ ಲಕ್ಷಾಂತರ ರೂ ವ್ಯಯಿಸುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

ಆದರೆ ಈ ವ್ಯಕ್ತಿ ಖುದ್ದಾಗಿ ನಾಯಿಯಂತೆ ಕಾಣಲು 12 ಲಕ್ಷ ರೂ. ವ್ಯಯಿಸಿದ್ದರು. ಟೊಕೊ ಎಂಬಾತನ ಈ ನಾಯಿ ಕಾಸ್ಟ್ಯೂಮ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಟೊಕೊ ಯಾವಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಈ ಬಟ್ಟೆಗಳಲ್ಲಿ ಈ ಮನುಷ್ಯ ಸೇಮ್​ ನಾಯಿಯಂತೆ ಕಾಣುತ್ತಾರೆ. ಇವರನ್ನು ನೋಡಿದರೆ ನಾಯಿಯಲ್ಲ ಮನುಷ್ಯ ಎಂದು ಯಾರೂ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ನಾಯಿ ಕಾಸ್ಟ್ಯೂಮ್ ನೈಜವಾಗಿದೆ.

ಮತ್ತಷ್ಟು ಓದಿ: ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಟೊಕೊ ಪ್ರಕಾರ, ಅವರು ಬಾಲ್ಯದಿಂದಲೂ ಪ್ರಾಣಿಗಳಂತೆ ಬದುಕಲು ಬಯಸಿದ್ದರು. ಇವರಿಗೆ ನಾಯಿಗಳ ಮೇಲೆ ವಿಶೇಷ ಪ್ರೀತಿ ಇತ್ತು. ಹಾಗಾಗಿ ನಾವು ನಾಯಿಗಳಂತೆ ಬದುಕಬೇಕೆಂದು ಅವರು ಬಯಸಿದ್ದರು.

ಇದೀಗ ಅವರಿಗೆ ಪಾಂಡ ಆಗಬೇಕೆಂದೆನಿಸುತ್ತಿದೆಯಂತೆ, ಹಾಗಾಗಿ ಅವರು ಆದಷ್ಟು ಬೇಗ ಬೆಕ್ಕು ಅಥವಾ ಪಾಂಡಾ ರೀತಿ ಕಾಸ್ಟ್ಯೂಮ್​ ಸಿದ್ಧಪಡಿಸಲಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ವ್ಯಕ್ತಿ ನಾಯಿಯಂತೆ ನಡೆಯುವ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಸಾವಿರಾರು ವೀಕ್ಷಣೆಗಳನ್ನು ಗಳಿಸಿರುವ ಈ ವೀಡಿಯೊಗಳಲ್ಲಿ, ಈ ಟೊಕೋ ನಾಯಿ ಧಿರಿಸು ಧರಿಸಿ ಹುಲ್ಲುಹಾಸಿನ ಮೇಲೆ ಕುಣಿದು ಕುಪ್ಪಳಿಸುವುದು, ನೆಲದ ಮೇಲೆ ಉರುಳಾಡುವುದು ಮತ್ತು ನಾಯಿಯಂತೆ ಆಟವಾಡುವುದನ್ನು ನೋಡಬಹುದಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ