AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ದಾನ ಬೇಡ, ಪರಿಹಾರ ಬೇಕು’; ಭೀಕರ ಪ್ರವಾಹಕ್ಕೆ ಭಾರತ, ಚೀನಾ, ಅಮೆರಿಕ ಕಾರಣವೆಂದ ನೇಪಾಳ

ನೇಪಾಳದ ಭೋಟ್‌ಕೋಶಿ ನದಿ ಕಣಿವೆಯಲ್ಲಿ ಕಳೆದ ವಾರ ನಡೆದ ಭೀಕರ ಪ್ರವಾಹಕ್ಕೆ ಇದುವರೆಗೂ 1,127ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 3,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ದುರಂತಕ್ಕೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ ಎಂದು ಕಿಡಿಕಾರಿರುವ ನೇಪಾಳ, ವಿಶ್ವದ ಅತಿದೊಡ್ಡ ಹಸಿರುಮನೆ ಅನಿಲ (ಜಿಎಚ್​ಜಿ) ಹೊರಸೂಸುವ ದೇಶಗಳಾದ ಚೀನಾ, ಅಮೆರಿಕ ಮತ್ತು ಭಾರತದಿಂದ ಹವಾಮಾನ ಪರಿಹಾರ ಕೋರಿದೆ. ನೇಪಾಳಕ್ಕೆ ಮಾನವೀಯ ನೆರವು ಕಳುಹಿಸುವ ಮೂಲಕ ಸಹಾಯಹಸ್ತ ಚಾಚಿರುವ ಭಾರತದ ವಿರುದ್ಧವೂ ನೇಪಾಳ ಗಂಭೀರ ಆರೋಪ ಮಾಡಿದೆ.

'ನಿಮ್ಮ ದಾನ ಬೇಡ, ಪರಿಹಾರ ಬೇಕು'; ಭೀಕರ ಪ್ರವಾಹಕ್ಕೆ ಭಾರತ, ಚೀನಾ, ಅಮೆರಿಕ ಕಾರಣವೆಂದ ನೇಪಾಳ
ನೇಪಾಳ ಪ್ರಧಾನಿ ಬಾಲೆನ್ ಶಾImage Credit source: Getty Image
ಸುಷ್ಮಾ ಚಕ್ರೆ
|

Updated on:Sep 02, 2026 | 3:27 PM

Share

ಕಠ್ಮಂಡು, ಸೆಪ್ಟೆಂಬರ್ 2: ನೇಪಾಳದಲ್ಲಿ ಇದುವರೆಗೂ ಕಂಡು ಕೇಳರಿಯದ ರೀತಿಯ ಭೀಕರ ಪ್ರವಾಹ ಉಂಟಾಗಿದೆ. ಭೀಕರ ಪ್ರವಾಹದಿಂದ 1,127 ಜನರನ್ನು ಕಳೆದುಕೊಂಡು ಕಂಗಾಲಾಗಿರುವ ನೇಪಾಳ, ಈಗ ಜಗತ್ತಿನ ದೊಡ್ಡ ರಾಷ್ಟ್ರಗಳ ವಿರುದ್ಧ ಸಮರ ಸಾರಿದೆ. “ನಮಗೆ ನೀವು ನೀಡುವ ಮಾನವೀಯ ನೆರವು ಅಥವಾ ದಾನ ಬೇಡ. ನಮ್ಮ ದೇಶಕ್ಕಾದ ಭಾರಿ ವಿನಾಶಕ್ಕೆ ಸೂಕ್ತ ಪರಿಹಾರ ನೀಡಿ” ಎಂದು ನೇಪಾಳ ಸರ್ಕಾರ ಭಾರತ, ಚೀನಾ ಮತ್ತು ಅಮೆರಿಕ ದೇಶಗಳಿಗೆ ಆಗ್ರಹಿಸಿದೆ.

ಕಾರ್ಬನ್ ಹೊರಸೂಸುವಿಕೆಯಲ್ಲಿ ನೇಪಾಳದ ಪಾತ್ರ ತೀರಾ ನಗಣ್ಯ. ಆದರೆ ಭಾರತ, ಚೀನಾ ಮತ್ತು ಅಮೆರಿಕದಂತಹ ದೊಡ್ಡ ಕೈಗಾರಿಕಾ ದೇಶಗಳು ಮಾಡುವ ಮಾಲಿನ್ಯದಿಂದಾಗಿ ಹಿಮಾಲಯ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ, ಉಷ್ಣಾಂಶ ಏರಿಕೆಯಿಂದ ಹಿಮನದಿಗಳು ಕರಗಿ ಈ ರೀತಿಯ ಭೀಕರ ಪ್ರವಾಹ ಉಂಟಾಗುತ್ತಿದೆ ಎಂಬುದು ನೇಪಾಳದ ವಾದವಾಗಿದೆ.

ಇದನ್ನೂ ಓದಿ: ನೇಪಾಳ ಜಲಪ್ರಳಯದ ಭೀಕರತೆ: ನುವಾಕೋಟ್‌ನಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆ

ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಶ್ರೀಮಂತ ಮತ್ತು ಕೈಗಾರಿಕಾ ರಾಷ್ಟ್ರಗಳು, ಅದರ ಪರಿಣಾಮವನ್ನು ಅನುಭವಿಸುತ್ತಿರುವ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂಬ ಅಂತಾರಾಷ್ಟ್ರೀಯ ಹವಾಮಾನ ಒಪ್ಪಂದವನ್ನು ನೇಪಾಳ ಉಲ್ಲೇಖಿಸಿದೆ.

“ಪ್ರವಾಹ ಬಂದಾಗ ಕೆಲವೇ ಕೆಲವು ಟನ್ ಪರಿಹಾರ ಸಾಮಗ್ರಿ ಅಥವಾ ಆಹಾರ ಧಾನ್ಯ ಕಳುಹಿಸುವುದು ಶಾಶ್ವತ ಪರಿಹಾರವಲ್ಲ. ನಮ್ಮ ಮೂಲಸೌಕರ್ಯ, ಹಿಮನದಿಗಳು ಮತ್ತು ಜೀವಹಾನಿಗೆ ಈ ಪ್ರಮುಖ ಮಾಲಿನ್ಯಕಾರಕ ದೇಶಗಳೇ ನೇರ ಹೊಣೆ ಹೊತ್ತು ನಷ್ಟಭರ್ತಿ ಪಾವತಿಸಬೇಕು” ಎಂದು ನೇಪಾಳ ಹೇಳಿದೆ.

ಭಾರತ ಕೂಡ 5 ಬಾರಿ ನೇಪಾಳಕ್ಕೆ ಮಾನವೀಯ ನೆರವು ಹೊತ್ತ ವಿಮಾನವನ್ನು ಕಳುಹಿಸಿತ್ತು. ನೇಪಾಳ ಸರ್ಕಾರವು ಆರಂಭದಲ್ಲಿ ವಿದೇಶಿ ರಕ್ಷಣಾ ಸಹಾಯವನ್ನು ನಿರಾಕರಿಸಿದ್ದರೂ, ಪ್ರಸ್ತುತ ಪರಿಸ್ಥಿತಿ ಕೈಮೀರುತ್ತಿದ್ದಂತೆ ಭಾರತ ಮತ್ತು ಚೀನಾದಿಂದ ವಿಶೇಷ ಸುರಂಗ ರಕ್ಷಣಾ ಪಡೆಗಳು, ಫಾರೆನ್ಸಿಕ್ ತಜ್ಞರು ಮತ್ತು ತಾಂತ್ರಿಕ ಸೇತುವೆಗಳ ನೆರವನ್ನು ಪಡೆದುಕೊಳ್ಳುತ್ತಿದೆ.

ವಿಶ್ವಸಂಸ್ಥೆಯ ಶೃಂಗಸಭೆಗೆ ಪ್ರಧಾನಿ ಬಾಲೆನ್ ಶಾ:

ಸೆಪ್ಟೆಂಬರ್ 8ರಿಂದ ಆರಂಭವಾಗಲಿರುವ 81ನೇ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ನೇಪಾಳದ ಪರವಾಗಿ ರಸುವಾ ಪ್ರವಾಹ ದುರಂತ ಹಾಗೂ ಹವಾಮಾನ ನ್ಯಾಯದ ಕುರಿತು ಮಾತನಾಡಲು ಪ್ರಧಾನಿ ಬಾಲೆನ್ ಶಾ ನ್ಯೂಯಾರ್ಕ್‌ಗೆ ತೆರಳುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಬೆಂಬಲಿತ ‘ಫಂಡ್ ಫಾರ್ ರೆಸ್ಪಾಂಡಿಂಗ್ ಟು ಲಾಸ್ ಆ್ಯಂಡ್ ಡ್ಯಾಮೇಜ್’ಗೆ ನೇಪಾಳ ಸರ್ಕಾರವು ತುರ್ತು ಆರ್ಥಿಕ ನೆರವಿಗಾಗಿ ಅಧಿಕೃತ ಪತ್ರವನ್ನು ರವಾನಿಸಿದೆ.

ಇದನ್ನೂ ಓದಿ: Nepal Floods: ನೇಪಾಳದ ಪ್ರವಾಹದ ಸಾವಿನ ಸಂಖ್ಯೆ 1,050ಕ್ಕೆ ಏರಿಕೆ; 163 ಭಾರತೀಯರ ರಕ್ಷಣೆ

ನೇಪಾಳಕ್ಕಾದ ಹಾನಿ ಎಷ್ಟು?:

ನೇಪಾಳದ ವಿತ್ತ ಸಚಿವ ಸ್ವರ್ಣಿಮ್ ವಾಗ್ಲೆ ಪ್ರಕಾರ, ಪ್ರವಾಹದಿಂದ ಮೂಲಸೌಕರ್ಯ, ಜಲವಿದ್ಯುತ್ ಯೋಜನೆಗಳು ಮತ್ತು ಸೇತುವೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಪುನರ್ನಿರ್ಮಾಣಕ್ಕೆ ಸುಮಾರು 4ರಿಂದ 5 ಶತಕೋಟಿ ಅಮೆರಿಕನ್ ಡಾಲರ್ ಅಗತ್ಯವಿದೆ. ಇದು ನೇಪಾಳದ ಒಟ್ಟು ಜಿಡಿಪಿಯ ಶೇಕಡಾ 10ರಷ್ಟಾಗಿದೆ.

ಭಾರತದ ನಿಲುವೇನು?:

ಒಟ್ಟು ಕಾರ್ಬನ್ ಹೊರಸೂಸುವಿಕೆಯಲ್ಲಿ ಭಾರತವು ಪ್ರಮುಖ ಸ್ಥಾನದಲ್ಲಿದ್ದರೂ, ತಲಾ ಒಬ್ಬ ವ್ಯಕ್ತಿಯ ಹೊರಸೂಸುವಿಕೆ ಪ್ರಮಾಣದಲ್ಲಿ ಭಾರತವು ಅಮೆರಿಕ (17 ಟನ್) ಮತ್ತು ಚೀನಾ (11 ಟನ್)ಗಿಂತ ಬಹಳ ಕಡಿಮೆ (ಕೇವಲ 3 ಟನ್) ಹೊಂದಿದೆ. ಹವಾಮಾನ ವೈಪರೀತ್ಯದ ಹೊಣೆಯನ್ನು ಹೆಚ್ಚು ಮಾಲಿನ್ಯ ಮಾಡಿದ ಅಭಿವೃದ್ಧಿ ಹೊಂದಿದ ದೇಶಗಳೇ ಹೊರಬೇಕು ಎಂಬುದು ಭಾರತ ಮೊದಲಿನಿಂದಲೂ ತಳೆದಿರುವ ನಿಲುವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:21 pm, Wed, 2 September 26

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು