AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಝೆಲೆನ್ಸ್ಕಿ ಮತ್ತು ಕುಟುಂಬವನ್ನು ಬಂಧಿಸಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು’; ಆಮೇಲೇನಾಯ್ತು ಎಂದು ವಿವರಿಸಿದ ಆಪ್ತರು

Russia Ukraine War | Volodymyr Zelensky: ಫೆ.24ರ ಕಾರ್ಯಾಚರಣೆಯು ಆರಂಭವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಾಗೂ ಅವರ ಕುಟುಂಬವನ್ನು ಸೆರೆಹಿಡಿಯಲು ರಷ್ಯನ್ ಪಡೆಗಳು ಕೆಲವೇ ನಿಮಿಷಗಳ ದೂರದಲ್ಲಿತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಲಾಗಿದೆ.

‘ಝೆಲೆನ್ಸ್ಕಿ ಮತ್ತು ಕುಟುಂಬವನ್ನು ಬಂಧಿಸಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು’; ಆಮೇಲೇನಾಯ್ತು ಎಂದು ವಿವರಿಸಿದ ಆಪ್ತರು
ವೊಲೊಡಿಮಿರ್ ಝೆಲೆನ್ಸ್ಕಿ
Follow us
TV9 Web
| Updated By: shivaprasad.hs

Updated on:Apr 30, 2022 | 10:37 AM

ಉಕ್ರೇನ್ ಮೇಲಿನ ರಷ್ಯಾ ದಾಳಿಯು (Russia Ukraine War) 66ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ಸಹಾಯಕರು ಫೆಬ್ರವರಿ 24ರಂದು ಉಕ್ರೇನ್ ಅಧ್ಯಕ್ಷರನ್ನು ಸೆರೆಹಿಡಿಯಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಫೆ.24ರ ಕಾರ್ಯಾಚರಣೆಯು ಆರಂಭವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಾಗೂ ಅವರ ಕುಟುಂಬವನ್ನು ಸೆರೆಹಿಡಿಯಲು ರಷ್ಯನ್ ಪಡೆಗಳು ಕೆಲವೇ ನಿಮಿಷಗಳ ದೂರದಲ್ಲಿತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಲಾಗಿದೆ. ‘ಟೈಮ್’ ಪ್ರಕಟಿಸಿದ ‘ಇನ್‌ಸೈಡ್ ಝೆಲೆನ್ಸ್ಕಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಸಂದರ್ಶನದಲ್ಲಿ, ಉಕ್ರೇನ್ ಅಧ್ಯಕ್ಷರ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಮಾತನಾಡಿದ್ದಾರೆ. ಅದರಲ್ಲಿ ಅವರು, ಫೆ.24ರಂದು ಕೀವ್​​ನಲ್ಲಿರುವ ಅಧ್ಯಕ್ಷೀಯ ಕಚೇರಿಗಳು ಮತ್ತು ಸರ್ಕಾರಿ ನಿವಾಸಗಳತ್ತ ರಷ್ಯನ್ ಪಡೆಗಳು ಧಾವಿಸಿದ್ದವು. ಝೆಲೆನ್​ಸ್ಕಿಯವರ ಕಚೇರಿಗೆ ಸಮೀಪದಲ್ಲಿಯೇ ಗುಂಡಿನ ಶಬ್ಧಗಳು ಕೇಳಿಬರುತ್ತಿತ್ತು ಎಂದಿದ್ದಾರೆ.

ಇಂತಹ ಪರಿಸ್ಥಿತಿಯನ್ನು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದೆವು ಎಂದು ಹೇಳಿದ್ದಾರೆ ಆಂಡ್ರಿ. ‘‘ಅಂದಿನ ಯುದ್ಧ ಆರಂಭವಾದ ಕೆಲವೇ ಗಂಟೆಗಳಲ್ಲಿಯೇ ರಷ್ಯನ್ ಪಡೆಗಳು ಝೆಲೆನ್​ಸ್ಕಿಯವರನ್ನು ಬಂಧಿಸಲು ಮುನ್ನುಗ್ಗುತ್ತಿದ್ದರು. ಆಗ ಅಧ್ಯಕ್ಷೀಯ ಕಚೇರಿಗಳು ಸುರಕ್ಷಿತ ಸ್ಥಳವಲ್ಲ ಎಂಬುದು ಸ್ಪಷ್ಟವಾಯಿತು. ರಷ್ಯನ್ ಪಡೆಗಳು ಕೀವ್‌ಗೆ ಪ್ಯಾರಾಚೂಟ್‌ ಮೂಲಕ ಧಾವಿಸಿ ಝೆಲೆನ್​ಸ್ಕಿ ಹಾಗೂ ಅವರ ಕುಟುಂಬವನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ಧುಮುಕಬಹುದು ಎಂದು ಮಿಲಿಟರಿ ಎಚ್ಚರಿಸಿತ್ತು. ಈ ಮೊದಲು ನಾವು ಚಲನಚಿತ್ರಗಳಲ್ಲಿ ಮಾತ್ರ ಅಂತಹ ದೃಶ್ಯಗಳನ್ನು ನೋಡಿದ್ದೆವು. ಆದರೆ ಆ ರಾತ್ರಿ ಎಲ್ಲವೂ ಕಣ್ಮುಂದಿತ್ತು’’ ಎಂದಿದ್ದಾರೆ ಆಂಡ್ರಿ ಯೆರ್ಮಾಕ್.

ಫೆಬ್ರುವರಿ 24 ರಂದು ಆಕ್ರಮಣದ ನಡೆದ ದಿನದ ಸಂಜೆ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಆಂಡ್ರಿ ವಿವರಿಸಿದ್ದಾರೆ. ‘‘ಝೆಲೆನ್ಸ್ಕಿ ಮತ್ತು ಅವರ ಕುಟುಂಬವು ಇನ್ನೂ ಸರ್ಕಾರಿ ನಿವಾಸದ ಒಳಗಿರುವಂತೆಯೇ ಸುತ್ತಲೂ ಗುಂಡಿನ ಕಾಳಗ ನಡೆದವು. ಕಾಂಪಾಂಡ್​ಅನ್ನು ಸಿಕ್ಕಿದ್ದನ್ನು ಬಳಸಿ ಮುಚ್ಚಲಾಯಿತು. ನಿವಾಸದ ಒಳಗಿದ್ದ ಕಾವಲುಗಾರರು ಲೈಟ್​ಗಳನ್ನು ಆಫ್ ಮಾಡಿದರು. ಝೆಲೆನ್ಸ್ಕಿ ಮತ್ತು ಅವರ ಹನ್ನೆರಡು ಸಹಾಯಕರಿಗೆ ಬುಲೆಟ್ ಪ್ರೂಫ್ ಜಾಕೆಟ್​ಗಳನ್ನು ಮತ್ತು ಆಕ್ರಮಣಕಾರಿ ರೈಫಲ್‌ಗಳನ್ನು ಒದಗಿಸಲಾಯಿತು. ಆದರೆ ಅವರಲ್ಲಿ ಕೆಲವರಿಗೆ ಮಾತ್ರ ಆಯುಧಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿತ್ತು’’ ಎಂದಿದ್ದಾರೆ ಆಂಡ್ರಿ. ಆ ಸಂದರ್ಭದಲ್ಲಿ ಝೆಲೆನ್​ಸ್ಕಿಯವರ ಹೆಂಡತಿ ಮತ್ತು ಮಕ್ಕಳು ಇನ್ನೂ ಅಲ್ಲೇ ಇದ್ದರು. ಇದು ನಂತರ ತಿಳಿಯಿತು ಎಂದಿದ್ದಾರೆ ಅವರು.

ಈ ಆಕ್ರಮಣದ ಎರಡು ದಿನಗಳ ನಂತರ, ಅಮೇರಿಕಾ ಸರ್ಕಾರವು ಝೆಲೆನ್ಸ್ಕಿಗೆ ಸುರಕ್ಷಿತ ಸ್ಥಳಾಂತರದ ಆಫರ್ ನೀಡಿತು. ಆದರೆ ಝೆಲೆನ್ಸ್ಕಿ ಅದನ್ನು ತಿರಸ್ಕರಿಸಿ, ನಮಗೆ ಮದ್ದುಗುಂಡುಗಳು ಬೇಕು, ಸ್ಥಳಾಂತರವಲ್ಲ ಎಂದಿದ್ದರು. ಇಂಗ್ಲೆಂಡ್ ಕೂಡ ಝೆಲೆನ್ಸ್ಕಿ ಹಾಗೂ ಅವರ ಕುಟುಂಬಕ್ಕೆ ಆಶ್ರಯ ನೀಡುವುದಾಗಿ ಹೇಳಿತ್ತು.

ಪ್ರಸ್ತುತ ರಷ್ಯಾ- ಉಕ್ರೇನ್ ಬಿಕ್ಕಟ್ಟು 9ನೇ ವಾರಕ್ಕೆ ಕಾಲಿಟ್ಟಿದೆ. ಈ ವೇಳೆ ಉಕ್ರೇನ್, ರಷ್ಯಾವು ಕಾರ್ಯಾಚರಣೆ ಮುಂದುವರೆಸಿದ್ದು, ಶಾಂತಿ ಮಾತುಕತೆಯು ಮುರಿದುಬೀಳುವ ಅಪಾಯದಲ್ಲಿದೆ ಎಂದು ತಿಳಿಸಿದೆ.

ರಷ್ಯಾ-ಉಕ್ರೇನ್ ಯುದ್ಧದ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್​​ ಮಾಡಿ

ಇನ್ನೂ ಹೆಚ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿಯ ದಿನವೇ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾದಿಂದ ತೀವ್ರ ದಾಳಿ

ಗೆಲುವಿನ ಭರವಸೆ ಕಳೆದುಕೊಂಡ ರಷ್ಯಾ, 3ನೇ ಮಹಾಯುದ್ಧದ ಬೆದರಿಕೆಗೆ ಉಕ್ರೇನ್ ತಿರುಗೇಟು; ಸಂಘರ್ಷದ 10 ಮುಖ್ಯ ಬೆಳವಣಿಗೆಗಳು

Published On - 8:25 am, Sat, 30 April 22

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್