AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವಂತೂ ಯಾವುದೇ ವಾಯು ದಾಳಿ ನಡೆಸಲ್ಲ, ರಷ್ಯಾನೂ ಸುಮ್ಮನಿರಲಿ ಎಂದ ಉಕ್ರೇನ್

ಅಮೆರಿಕದ ವಿಶೇಷ ರಾಯಭಾರಿಗಳ ಭೇಟಿ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಾತ್ಕಾಲಿಕ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಉಕ್ರೇನ್‌ನಿಂದ ಯಾವುದೇ ವೈಮಾನಿಕ ದಾಳಿಯಿಲ್ಲ, ರಷ್ಯಾ ಕೂಡ ತನ್ನ ಕ್ಷಿಪಣಿ-ಡ್ರೋನ್ ದಾಳಿ ನಿಲ್ಲಿಸಬೇಕು ಎಂದಿದ್ದಾರೆ. ಆದರೆ, ಈ ಪ್ರಸ್ತಾಪದ ಬೆನ್ನಲ್ಲೇ ರಷ್ಯಾ ಉಕ್ರೇನ್ ಮೇಲೆ ಭೀಕರ ವೈಮಾನಿಕ ದಾಳಿಗಳನ್ನು ಮುಂದುವರೆಸಿದ್ದು, ಅಮೆರಿಕದ ಮಧ್ಯಸ್ಥಿಕೆಯ ಶಾಂತಿ ಸಂಧಾನ ಪ್ರಯತ್ನಗಳಿಗೆ ಸವಾಲಾಗಿದೆ.

ನಾವಂತೂ ಯಾವುದೇ ವಾಯು ದಾಳಿ ನಡೆಸಲ್ಲ, ರಷ್ಯಾನೂ ಸುಮ್ಮನಿರಲಿ ಎಂದ ಉಕ್ರೇನ್
ಝೆಲೆನ್ಸ್ಕಿ-ಪುಟಿನ್-ಟ್ರಂಪ್Image Credit source: Axios
ನಯನಾ ರಾಜೀವ್
|

Updated on: Sep 05, 2026 | 7:44 AM

Share

ಕೈವ್, ಸೆಪ್ಟೆಂಬರ್ 05: ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿಗಳ ತಂಡ ಮಾಸ್ಕೋ ಮತ್ತು ಕೈವ್‌ಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಅಮೆರಿಕದ ನಿಯೋಗ ಸುರಕ್ಷಿತವಾಗಿ ಬಂದು ಮಾತುಕತೆ ನಡೆಸಲು ಅನುಕೂಲವಾಗುವಂತೆ ತಮ್ಮ ಕಡೆಯಿಂದ ಯಾವುದೇ ವೈಮಾನಿಕ ದಾಳಿಗಳನ್ನು ನಡೆಸುವುದಿಲ್ಲ ಎಂದಿರುವ ಅವರು, ರಷ್ಯಾ ಕೂಡ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಕ್ಷಣ ಸ್ಥಗಿತಗೊಳಿಸಿ ಪರಸ್ಪರ ಆಕಾಶ ಮೌನ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಸಂಧಾನಕಾರರ ತಂಡ: ಅಮೆರಿಕದ ಪ್ರಮುಖ ಸಂಧಾನಕಾರರಾದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ (ವಿಶೇಷ ರಾಯಭಾರಿ) ಶನಿವಾರ ಮತ್ತು ಭಾನುವಾರ ಮೊದಲು ಮಾಸ್ಕೋಗೆ ತೆರಳಿ ರಷ್ಯಾ ನಾಯಕರೊಂದಿಗೆ ಮಾತುಕತೆ ನಡೆಸಿ, ನಂತರ ಕೈವ್‌ಗೆ ಆಗಮಿಸಲಿದ್ದಾರೆ.

ಝೆಲೆನ್ಸ್ಕಿ ನಿಲುವು: ನಾವು ಅಮೆರಿಕದ ಮಧ್ಯಸ್ಥಿಕೆ ಮತ್ತು ರಾಜತಾಂತ್ರಿಕ ಭೇಟಿಯನ್ನು ಗೌರವಿಸುತ್ತೇವೆ. ನಮ್ಮ ಗುರಿ ರಷ್ಯಾಗೆ ನೆರವಾಗುವುದಲ್ಲ, ಈ ಯುದ್ಧವನ್ನು ಅಂತ್ಯಗೊಳಿಸಲು ವಾಸ್ತವಿಕ ಪರಿಹಾರಗಳನ್ನು ಕಂಡುಕೊಳ್ಳುವುದು. ಅಮೆರಿಕದ ರಾಯಭಾರಿಗಳು ಮಾಸ್ಕೋದಿಂದ ಯಾವ ಸಂದೇಶ ತರುತ್ತಾರೆ ಮತ್ತು ಕೈವ್‌ನಲ್ಲಿ ಏನು ಪ್ರಸ್ತಾಪಿಸುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: 2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ

ಗರಿಗೆದರಿದ ಸಂಘರ್ಷ ಮತ್ತು ಹಿನ್ನೆಲೆ

ಕದನ ವಿರಾಮ ಪ್ರಸ್ತಾಪದ ನಡುವೆಯೂ ದಾಳಿ: ವಿಪರ್ಯಾಸವೆಂದರೆ, ಈ ಶಾಂತಿ ಸಂಧಾನ ಪ್ರಸ್ತಾಪದ ಬೆನ್ನಲ್ಲೇ ಉಕ್ರೇನ್‌ನ ಸೇನಾ ಗುಪ್ತಚರ ಕೇಂದ್ರ ಕಚೇರಿ (GUR) ಗುರಿಯಾಗಿಸಿಕೊಂಡು ರಷ್ಯಾ ಹಗಲಿನ ವೇಳೆಯೇ ಭೀಕರ ವೈಮಾನಿಕ ದಾಳಿ ನಡೆಸಿದೆ. ಇತ್ತೀಚಿನ ರಷ್ಯಾದ ಡ್ರೋನ್ ದಾಳಿಗಳಲ್ಲಿ ಕನಿಷ್ಠ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಡಳಿತಗಳು ದೃಢಪಡಿಸಿವೆ.

ಹಗಲು-ರಾತ್ರಿ ನಿರಂತರ ದಾಳಿ: ಈ ಹಿಂದೆ ಕೇವಲ ರಾತ್ರಿ ವೇಳೆ ನಡೆಯುತ್ತಿದ್ದ ದಾಳಿಗಳು ಈಗ ಹಗಲಿನಲ್ಲೂ ಮುಂದುವರಿಯುತ್ತಿದ್ದು, ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಮುಂಚೂಣಿ ಯುದ್ಧರಂಗಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ.

ಟ್ರಂಪ್ ಶಾಂತಿ ಸೂತ್ರದ ಪರೀಕ್ಷೆ: ಯುದ್ಧವನ್ನು ಶೀಘ್ರ ಕೊನೆಗಾಣಿಸುವುದಾಗಿ ಘೋಷಿಸಿದ್ದ ಟ್ರಂಪ್ ಆಡಳಿತವು, ಕುಶ್ನರ್ ಮತ್ತು ವಿಟ್ಕಾಫ್ ಅವರ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಾದೇಶಿಕ ಹಕ್ಕುಗಳ ಮೇಲಿನ ಬಿಕ್ಕಟ್ಟನ್ನು ಶಮನಗೊಳಿಸಲು ಕರಡು ಒಪ್ಪಂದದ ಸಿದ್ಧತೆಯಲ್ಲಿದೆ ಎಂದು ವರದಿಯಾಗಿದೆ.

ರಷ್ಯಾದ ಪ್ರತಿಕ್ರಿಯೆ ನಿರೀಕ್ಷೆ: ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ‘ಟಾಸ್’ಕೂಡ ಅಮೆರಿಕ ನಿಯೋಗದ ಭೇಟಿಯನ್ನು ದೃಢಪಡಿಸಿದ್ದು, ಕ್ರೆಮ್ಲಿನ್ ಈ ತಾತ್ಕಾಲಿಕ ಕದನ ವಿರಾಮ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿದೆಯೇ ಅಥವಾ ದಾಳಿಯನ್ನು ಮುಂದುವರೆಸಲಿದೆಯೇ ಎಂಬುದು ಇಡೀ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್