AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಭ್ರಮದ ಮದುವೆ ಮನೆಯಲ್ಲಿ ಅಮೆರಿಕ ಬಾಂಬ್ ದಾಳಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಕ್ಕಳ ಮೃತದೇಹಗಳು

ದಕ್ಷಿಣ ಇರಾನ್‌ನ ಕುಹೆಸ್ತಾಕ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೇಲೆ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯು ಅಪಾರ ಸಾವು-ನೋವುಗಳನ್ನುಂಟು ಮಾಡಿದೆ. ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೂರಸಂಪರ್ಕ ಗೋಪುರವನ್ನು ಗುರಿಯಾಗಿಸಿಕೊಂಡಿದ್ದ ದಾಳಿ ಮದುವೆ ಮನೆಗೆ ಅಪ್ಪಳಿಸಿದೆ. ಅಮೆರಿಕದ ಶಸ್ತ್ರಾಸ್ತ್ರಗಳೇ ಇದಕ್ಕೆ ಕಾರಣವೆಂದು ತಜ್ಞರು ದೃಢಪಡಿಸಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.

ಸಂಭ್ರಮದ ಮದುವೆ ಮನೆಯಲ್ಲಿ ಅಮೆರಿಕ ಬಾಂಬ್ ದಾಳಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಕ್ಕಳ ಮೃತದೇಹಗಳು
ಅಮೆರಿಕ ದಾಳಿImage Credit source: India Today
ನಯನಾ ರಾಜೀವ್
|

Updated on: Sep 05, 2026 | 11:42 AM

Share

ಟೆಹ್ರಾನ್, ಸೆಪ್ಟೆಂಬರ್ 05: ದಕ್ಷಿಣ ಇರಾನ್‌ನ ಸಣ್ಣ ಕರಾವಳಿ ಪಟ್ಟಣ ಕುಹೆಸ್ತಾಕ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೇಲೆ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯು ಅಪಾರ ಸಾವು-ನೋವಿಗೆ ಕಾರಣವಾಗಿದೆ. ದೂರಸಂಪರ್ಕ ಗೋಪುರವನ್ನು ಗುರಿಯಾಗಿಸಿಕೊಂಡಿದ್ದ ಕ್ಷಿಪಣಿ ಮತ್ತು ಡ್ರೋನ್‌ಗಳು ಸಮೀಪದ ನಿವಾಸದ ಮೇಲೆ ಅಪ್ಪಳಿಸಿದ ಪರಿಣಾಮ, ಮಗು ಸೇರಿದಂತೆ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮದುವೆ ಮನೆ ಕ್ಷಣಾರ್ಧದಲ್ಲಿ ಹೆಣಗಳ ರಾಶಿ ಮತ್ತು ರಕ್ತಸಿಕ್ತ ಅವಶೇಷಗಳ ತಾಣವಾಗಿ ಮಾರ್ಪಟ್ಟಿದೆ.

ವಧು-ವರರು ಬರುವ ಮುನ್ನವೇ ಬಿದ್ದ ಬಾಂಬ್: ಸಮಾರಂಭ ಆರಂಭವಾಗುವ ಮುನ್ನವೇ ಮಹಿಳೆಯರು ಮತ್ತು ಮಕ್ಕಳು ಆವರಣದಲ್ಲಿ ಜಮಾಯಿಸಿದ್ದರು. ಮೊದಲು ಹತ್ತಿರದ ಟೆಲಿಕಾಂ ಟವರ್ ಮೇಲೆ ಕ್ಷಿಪಣಿ ಬಿದ್ದ ಬೆನ್ನಲ್ಲೇ, ಸತತ ಎರಡು ಡ್ರೋನ್‌ಗಳು ಮದುವೆ ಮನೆಗೆ ನುಗ್ಗಿದವು ಎಂದು ಸ್ಥಳೀಯ ನಿವಾಸಿ ಸುಲೇಮಾನ್ ಜಕಿರಿ ವಿವರಿಸಿದ್ದಾರೆ.

ಸ್ಥಳೀಯ ಮಾರಾಟಗಾರ ಸಸಾನ್ ಜರೈ ಮಾತನಾಡಿ, ಅವಶೇಷಗಳಡಿ ಸಿಲುಕಿದವರಲ್ಲಿ ಹೆಚ್ಚಿನವರು ಪುಟ್ಟ ಮಕ್ಕಳು. ಆವರಣದ ತುಂಬಾ ಮಕ್ಕಳ ಶೂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮಿಲಿಟರಿ ತಾಣವಲ್ಲ:ಇದು ಯಾವುದೇ ಸೇನಾ ನೆಲೆಯಲ್ಲ, ಮುಗ್ಧ ಜನರ ಮನೆ. ಇರಾನ್ ಕ್ಷಿಪಣಿಗಳ ಭಯದಿಂದ ಹತಾಶೆಗೊಂಡ ಅಮೆರಿಕ ಈ ಅಮಾಯಕರನ್ನು ಬಲಿಪಡೆದಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಇರಾನ್‌ ಜೊತೆ ಮಾತುಕತೆ ಓಕೆ, ವ್ಯಾಪಾರ ಒಪ್ಪಂದಕ್ಕೆ ಕೈಹಾಕಬೇಡಿ: ಭಾರತಕ್ಕೆ ನಯವಾಗಿಯೇ ಎಚ್ಚರಿಕೆ ರವಾನಿಸಿದ ಅಮೆರಿಕ

ಅಮೆರಿಕದ ಶಸ್ತ್ರಾಸ್ತ್ರ ದೃಢ: ರಾಯಿಟರ್ಸ್ ನಡೆಸಿದ ವಿಶ್ಲೇಷಣೆಯಲ್ಲಿ, ಘಟನಾ ಸ್ಥಳದ ಫೋಟೋಗಳನ್ನು ಪರಿಶೀಲಿಸಿದ ನಾಲ್ವರು ಶಸ್ತ್ರಾಸ್ತ್ರ ತಜ್ಞರ ಪೈಕಿ ಮೂವರು ಇದು ಅಮೆರಿಕ ಸೇನೆಗೆ ಸೇರಿದ ಬಾಂಬ್ ತುಣುಕುಗಳೇ ಆಗಿವೆ ಎಂದು ಖಚಿತಪಡಿಸಿದ್ದಾರೆ. ಟೆಲಿಕಾಂ ಟವರ್‌ನಿಂದ ಕೇವಲ 135 ಮೀಟರ್ ದೂರದಲ್ಲಿದ್ದ ಮನೆಯ ಮೇಲೆ ಗುರಿ ತಪ್ಪಿ ಈ ಬಾಂಬ್ ಬಿದ್ದಿರುವ ಸಾಧ್ಯತೆಯಿದೆ.

ಜೆಡಿ ವ್ಯಾನ್ಸ್ ಹೇಳಿಕೆ: ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಮೆರಿಕ ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದಿಲ್ಲ. ಆದರೆ ಯುದ್ಧ ನಡೆಯುವಾಗ ಕೆಲವೊಮ್ಮೆ ಇಂತಹ ಅನಿರೀಕ್ಷಿತ ಘಟನೆಗಳು ನಡೆದುಹೋಗುತ್ತವೆ. ಈ ಬಗ್ಗೆ ವಾಷಿಂಗ್ಟನ್ ಆಂತರಿಕ ತನಿಖೆ ನಡೆಸುತ್ತಿದೆ ಎಂದಿದ್ದಾರೆ.

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು: ಕುಹೆಸ್ತಾಕ್ ಪಟ್ಟಣವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಅತ್ಯಂತ ಸಮೀಪದಲ್ಲಿದೆ. ಕದನ ವಿರಾಮ ಮುರಿದುಬಿದ್ದ ನಂತರ, ಅಮೆರಿಕವು ಇರಾನ್‌ನ ರೇಡಾರ್ ಮತ್ತು ಸಂವಹನ ಕೇಂದ್ರಗಳನ್ನು ನಾಶಮಾಡಲು ದಿನಂಪ್ರತಿ ಬಾಂಬ್ ದಾಳಿ ನಡೆಸುತ್ತಿದೆ.

ಮಿನಾಬ್ ಶಾಲಾ ದುರಂತದ ನೆನಪು: ಇದೇ ವರ್ಷ ಫೆಬ್ರವರಿಯಲ್ಲಿ ಕುಹೆಸ್ತಾಕ್‌ನಿಂದ 30 ಕಿ.ಮೀ ದೂರದ ಮಿನಾಬ್ ಎಂಬಲ್ಲಿ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಗೆ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡು 175ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ನಾಗರಿಕ ಹತ್ಯಾಕಾಂಡ ನಡೆದಿರುವುದು ಇರಾನ್ ಜನತೆಯನ್ನು ತೀವ್ರ ರೊಚ್ಚಿಗೆಬ್ಬಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ