AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1.5 ಲಕ್ಷ ರೂ. ಬೆಲೆಯ ಐಫೋನ್​ ಆನ್​​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆ; ಮನೆಗೆ ಬಂದ ಬಾಕ್ಸ್ ತೆರೆದಾಗ ಆಗಿತ್ತು ನಿರಾಸೆ !

ಘಟನೆಯ ಬಗ್ಗೆ ಆ್ಯಪಲ್ ಇನ್​ಸೈಡರ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಆ್ಯಪಲ್​ ಕಂಪನಿಯಿಂದ ಇಂಥ ಪ್ರಮಾದ ಆಗಿರಲು ಸಾಧ್ಯವೇ ಇಲ್ಲ. ಇದು ಆನ್​ಲೈನ್​ ಡೆಲಿವರಿ ಸಂಸ್ಥೆಯಿಂದಲೇ ಆಗಿರುವ ತಪ್ಪು ಎಂದಿದೆ.

1.5 ಲಕ್ಷ ರೂ. ಬೆಲೆಯ ಐಫೋನ್​ ಆನ್​​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆ; ಮನೆಗೆ ಬಂದ ಬಾಕ್ಸ್ ತೆರೆದಾಗ ಆಗಿತ್ತು ನಿರಾಸೆ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 08, 2022 | 11:19 AM

Share

ಇ-ಕಾಮರ್ಸ್​​ ಆನ್​ಲೈನ್​ ವೆಬ್​ಸೈಟ್​ಗಳು ಎಷ್ಟು ಅನುಕೂಲಕರವೋ ಅಷ್ಟೇ ಎಡವಟ್ಟುಗಳಿಗೂ ಕಾರಣವಾಗುತ್ತವೆ. ಆರ್ಡರ್ ಮಾಡಿದ್ದೇ ಒಂದು, ಬಂದಿದ್ದು ಇನ್ನೊಂದು ಎಂಬ ಅನುಭವವನ್ನು ಹಲವು ಗ್ರಾಹಕರು ಈಗಾಗಲೇ ಪಡೆದಿದ್ದಾರೆ. ಅದೆಷ್ಟೋ ಜನರು ಅಮೂಲ್ಯವಾದ ವಸ್ತುಗಳನ್ನು ಆರ್ಡರ್ ಮಾಡಿ, ಆನ್​​ಲೈನ್​ನಲ್ಲೇ ದುಡ್ಡೂ ತುಂಬಿ, ಬಳಿಕ ಅದರ ಬದಲಿಗೆ ಯಾವ್ಯಾವುದೋ ಚಿಕ್ಕಪುಟ್ಟ ವಸ್ತುಗಳನ್ನು ಪಡೆದ ಬಗ್ಗೆಯೂ ವರದಿಯಾಗಿದೆ. ಹಾಗೇ ಇದೀಗ ಲಂಡನ್​ ಮೂಲದ ಮಹಿಳೆಯೊಬ್ಬರು ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಆ್ಯಪಲ್​ ಐಫೋನ್​​ ಆರ್ಡರ್​ ಮಾಡಿದ್ದರು. ಆದರೆ ಮನೆಬಾಗಿಲಿಗೆ ಬಂದ ಬಾಕ್ಸ್ ತೆರೆದಾಗ ಅದರಲ್ಲಿ 1 ರೂಪಾಯಿ ಬೆಲೆಯ ಹ್ಯಾಂಡ್​ ಸೋಪ್​ ಇತ್ತು. ಅದನ್ನು ನೋಡಿ ಮಹಿಳೆ ಶಾಕ್​ ಆಗಿದ್ದಾರೆ

ಮಹಿಳೆಯ ಹೆಸರು ಖೌಲಾ ಲಫಾಯಿಲಿ. ಸ್ಥಳೀಯವಾಗಿ ಇರುವ ಒಂದು ಪ್ರತಿಷ್ಠಿತ ಆನ್​ ಲೈನ್ ಸಂಸ್ಥೆಯಿಂದ ಐಫೋನ್​ 13 ಪ್ರೋ ಮ್ಯಾಕ್ಸ್​ ಆರ್ಡರ್​ ಮಾಡಿ, ಫುಲ್​ ಖುಷಿಯಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದು, ಮನೆ ಬಾಗಿಲಿಗೆ ಬಾಕ್ಸ್​ ಬಂತು. ಅದನ್ನು ತೆರೆದಾಗ ಮಹಿಳೆ ಅಕ್ಷರಶಃ ಶಾಕ್​ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಐಫೋನ್ ಬದಲಿಗೆ 1 ರೂಪಾಯಿಯ ಹ್ಯಾಂಡ್​ ಸೋಪ್​ ಬಾಟಲಿ ಇತ್ತು. ಅಂದರೆ ಅದು ಕೈತೊಳೆಯುವ ಒಂದು ಸೋಪಿನ ಬಾಟಲಿಯಾಗಿತ್ತು. ಸೋಪ್​ ಖಾಲಿಯಾದಂತೆ ಮತ್ತೆ ತುಂಬಿ ಅದರಿಂದ ಕೈ ವಾಶ್​ ಮಾಡಬಹುದು.

ಘಟನೆಯ ಬಗ್ಗೆ ಆ್ಯಪಲ್ ಇನ್​ಸೈಡರ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಆ್ಯಪಲ್​​ ಸಂಸ್ಥೆಯ ಅಪ್​ಡೇಟ್​ಗಳು, ಮತ್ತಿತರ ವಿಷಯಗಳನ್ನು ಪ್ರಕಟಿಸುವ ಮಾಧ್ಯಮವಾಗಿರುವ ಆ್ಯಪಲ್​ ಇನ್​ಸೈಡರ್​, ಆ್ಯಪಲ್​ ಕಂಪನಿಯಿಂದ ಇಂಥ ಪ್ರಮಾದ ಆಗಿರಲು ಸಾಧ್ಯವೇ ಇಲ್ಲ. ಇದು ಆನ್​ಲೈನ್​ ಡೆಲಿವರಿ ಸಂಸ್ಥೆಯಿಂದಲೇ ಆಗಿರುವ ತಪ್ಪು ಎಂದಿದೆ. ಇನ್ನು ಮಹಿಳೆ ಸ್ಕೈಮೊಬೈಲ್​ನಿಂದ ಖರೀದಿಸಿ, ಆರ್ಡರ್ ಹಾಕಿದ್ದರು.  ಮಹಿಳೆ ಪೂರ್ಣ ಪ್ರಮಾಣದ ಹಣವನ್ನು ಪಾವತಿಸಿರಲಿಲ್ಲ. ಆರ್ಡರ್ ಹಾಕಿದ ಮರುದಿನ ಮೊಬೈಲ್​ ಡೆಲಿವರಿ ಆಗುವಂತೆ ಮಹಿಳೆ ಆಯ್ಕೆ ಮಾಡಿಕೊಂಡಿದ್ದರು. ಆದರೆ ಎರಡು ದಿನ ಬಿಟ್ಟು ಅವರಿಗೆ ಮೊಬೈಲ್​ ತಲುಪಿದೆ. ಕಾರಣ ಕೇಳಿದ್ದಕ್ಕೆ, ನಾನು ಟ್ರಾಫಿಕ್​​ನಲ್ಲಿ ಸಿಕ್ಕಿದ್ದೆ, ಹಾಗಾಗಿ ಸರಿಯಾದ ಸಮಯಕ್ಕೆ ನಿಮ್ಮ ವಸ್ತುವನ್ನು ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಡೆಲಿವರಿ ಸಿಬ್ಬಂದಿ ಹೇಳಿದ್ದಾನೆ ಎಂದು ಆ್ಯಪಲ್ ಇನ್​ಸೈಡರ್​ ತನ್ನ ವರದಿಯಲ್ಲಿ ಹೇಳಿದೆ.

ಅಷ್ಟೇ ಅಲ್ಲ, ಈ ಡೆಲಿವರಿ ಸಿಬ್ಬಂದಿ, ಖೌಲಾ ಲಫಾಯಿಲಿ ಮನೆಗೆ ಒಮ್ಮೆ ಭೇಟಿ ಮಾಡಿದ್ದಾನೆ. ಆದರೆ ಅವರ ಮನೆಯ ಮುಚ್ಚಿದ ಬಾಗಿಲ ಫೋಟೋ ತೆಗೆದು, ಗ್ರಾಹಕರು ಮನೆಯಲ್ಲಿಲ್ಲ ಎಂದು ತನ್ನ ಸಂಸ್ಥೆಗೆ ಅಪ್​ಡೇಟ್ ಕೊಟ್ಟಿದ್ದಾನೆ ಎಂಬುದೂ ಬೆಳಕಿಗೆ ಬಂದಿದೆ.  ನಾನು ಎಲ್ಲಿಗೂ ಹೋಗಿರಲಿಲ್ಲ. ಬಾಗಿಲು ಬಡಿದಿದ್ದರೆ ತೆಗೆಯುತ್ತಿದ್ದೆ. ಆದರೆ ಆತ ಬಾಗಿಲು ಬಡಿಯಲಿಲ್ಲ ಎಂದು ಖೌಲಾ ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ, ಆಕೆ ಯಾವ ಆನ್​ಲೈನ್​ ಕಂಪನಿ ಮೂಲಕ ಆರ್ಡರ್​ ಹಾಕಿದ್ದರೋ, ಆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. (ಈಕೆ ಆರ್ಡರ್​ ಮಾಡಿದ ಐಫೋನ್ ಬೆಲೆ ಯುಕೆನಲ್ಲಿ 1.5 ಲಕ್ಷ ರೂ.ಆಗಿದ್ದು, ಭಾರತದಲ್ಲಿ 1,29,900 ರೂಪಾಯಿಗೆ ಮಾರಾಟವಾಗುತ್ತಿದೆ.)

ಇದನ್ನೂ ಓದಿ: ವಾಕಿಂಗ್ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಐಫೋನ್ ಕಿತ್ಕೊಂಡು ಪರಾರಿಯಾದ ಖದೀಮರು, ಕೇಸ್ ದಾಖಲು

Published On - 9:51 am, Tue, 8 February 22

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್