AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Recruitment: 2021ರಲ್ಲಿ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತಿನ ಸತ್ಯಾಂಶ ಏನು?

2021ರಲ್ಲಿ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಜಾಹೀರಾತು ನೀಡಿದ್ದ ಎಚ್​ಡಿಎಫ್​ಸಿ ಈಗ ಸ್ಪಷ್ಟನೆ ನೀಡುವಂತಾಗಿದೆ.

Job Recruitment: 2021ರಲ್ಲಿ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತಿನ ಸತ್ಯಾಂಶ ಏನು?
ಎಚ್​ಡಿಎಫ್​ಸಿ ಉದ್ಯೋಗ ನೇಮಕಾತಿ ಜಾಹೀರಾತು
Follow us
TV9 Web
| Updated By: Srinivas Mata

Updated on:Aug 04, 2021 | 12:56 PM

ಉದ್ಯೋಗ ನೇಮಕಾತಿ ಅಧಿಸೂಚನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಓಹ್ ಆ ಕೆಲಸಕ್ಕೆ ಅಷ್ಟೊಂದು ಸಂಬಳವಾ ಅಥವಾ ಅಷ್ಟೊಂದು ಡಿಮ್ಯಾಂಡಾ ಅಂತೆಲ್ಲ ಅಂದುಕೊಳ್ಳಬೇಡಿ. ಜತೆಗೆ ಈ ವರದಿಯಲ್ಲಿ ಟ್ವಿಸ್ಟ್​ ಸಹ ಇದೆ. ಎಚ್​ಡಿಎಫ್​ಸಿ ಗೊತ್ತಲ್ಲಾ? ಅದರಿಂದ ಉದ್ಯೋಗ ನೇಮಕಾತಿಯ ಸುತ್ತೋಲೆ ಹೊರಡಿಸಲಾಗಿದ್ದು, 2021ರಲ್ಲಿ ತೇರ್ಗಡೆಯಾದ ಪದವೀಧರರು ಈ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಅರ್ಹರಲ್ಲ ಎಂಬ ಒಕ್ಕಣೆ ಇದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಗಿರಕಿ ಹೊಡೆಯುತ್ತಿದೆ. ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್​ ಆದ ಎಚ್​ಡಿಎಫ್​ಸಿಯಿಂದ ಸ್ಪಷ್ಟನೆ ನೀಡುವಂಥ ಸ್ಥಿತಿ ಬಂದಿದೆ. “ಟೈಪ್ ಮಾಡುವಾಗ ಆಗಿರುವಂಥ ತಪ್ಪಿದು. ಅದಕ್ಕಾಗಿ ವಿಷಾದಿಸುತ್ತೇವೆ,” ಎಂದು ಎಚ್​ಡಿಎಫ್​ಸಿ ವಕ್ತಾರರು ಟ್ವಿಟ್ಟರ್ ಬಳಕೆದಾರರೊಬ್ಬರಿಗೆ ಆಗಸ್ಟ್​ 3ನೇ ತಾರೀಕಿನಂದು ಪ್ರತಿಕ್ರಿಯಿಸಿದ್ದಾರೆ.

ಆ ವಕ್ತಾರರು ಇನ್ನೂ ಮುಂದುವರಿದು, ವಯೋಮಿತಿಯ ಮಾನದಂಡವನ್ನು ಪೂರ್ತಿಗೊಳಿಸುವುದಾದರೆ ಯಾವುದೇ ವರ್ಷ ಪದವಿ ಪಡೆದಂಥವರು ಸಹ ಅರ್ಜಿ ಹಾಕಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ. ಮದುರೈನಲ್ಲಿ 28 ವರ್ಷದೊಳಗಿನವರನ್ನು ವಾಕ್-ಇನ್ ಸಂದರ್ಶನಕ್ಕಾಗಿ ಕರೆದಂಥ ನಿಯತಕಾಲಿಕೆ ಜಾಹೀರಾತಿನಲ್ಲಿ ಈ ಅಂಶ ಒಳಗೊಂಡಿದೆ. “ನಾವು ಈಗಾಗಲೇ ಸರಿಯಾದ ಜಾಹೀರಾತನ್ನು ಇಲ್ಲಿ ಹಂಚಿಕೊಂಡಿದ್ದೇವೆ,” ಎಂದು ಎಚ್​ಡಿಎಫ್​ಸಿಯಿಂದ ಹೇಳಲಾಗಿದೆ. ಆದರೆ ಈ ಸ್ಪಷ್ಟನೆ ನೀಡುವ ಹೊತ್ತಿಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಜಾಬ್ ಅಡ್ವರ್ಟೈಸ್​ಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡಿಯಾಗಿತ್ತು.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2020-21ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ನೇರವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಿಯೇ ಇಲ್ಲ. ಪರೀಕ್ಷೆಗಳು ಸರಿಯಾಗಿ ನಡೆದಿಲ್ಲ. ಮತ್ತೆ ಕೆಲವು ಕಡೆ ಪಠ್ಯಕ್ರಮದ ಪ್ರಮಾಣವನ್ನೇ ಇಳಿಕೆ ಮಾಡಿ, ಪರೀಕ್ಷೆಗಳನ್ನು ನಡೆಸಿ, ಪಾಸ್ ಮಾಡಲಾಗಿದೆ. ಈ ಪರೀಕ್ಷೆ ಹಾಗೂ ಪಾಸ್ ಮಾಡುವ ವಿಧಾನದ ಬಗ್ಗೆಯೇ ಗೇಲಿ, ತಮಾಷೆ ಹಾಗೂ ಲೇವಡಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್​ಡಿಎಫ್​ಸಿಯ ಉದ್ಯೋಗ ನೇಮಕಾತಿ ಸುತ್ತೋಲೆಯನ್ನು ನೋಡಿದಾಗ, ಮತ್ತೂ ಹೆಚ್ಚಿನ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ.

ಇದನ್ನೂ ಓದಿ: HDFC Bank: 2013ರಿಂದ 2020ರ ಮಧ್ಯೆ ಎಚ್​ಡಿಎಫ್​ಸಿ ಬ್ಯಾಂಕ್ ವಾಹನ ಸಾಲ ಪಡೆದವರಿಗೆ ಒಂದಿಷ್ಟು ಹಣ ರೀಫಂಡ್; ಯಾರಿಗೆ?

(2021 Passed Out Candidates Are Not Eligible Goes Viral On Social Media Here Is The Clarification By HDFC)

Published On - 12:55 pm, Wed, 4 August 21

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್