Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Row: ಹಿಂಡನ್​​ಬರ್ಗ್ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಪಿಐಎಲ್; ಶಾರ್ಟ್ ಸೆಲ್ಲಿಂಗ್ ಅಕ್ರಮ ಎಂದು ಘೋಷಿಸಲೂ ಮನವಿ

ಅದಾನಿ ಸಮೂಹದ ವಿರುದ್ಧ ಅಕ್ರಮದ ಆರೋಪ ಮಾಡಿರುವ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಮತ್ತು ಅದರ ಸ್ಥಾಪಕ ನಾಥನ್ ಆ್ಯಂಡರ್ಸನ್​ ವಿರುದ್ಧ ತನಿಖೆ ನಡೆಸಬೇಕು. ಷೇರು ಮಾರುಕಟ್ಟೆಯಲ್ಲಿ ನಡೆಯುವ ‘ಶಾರ್ಟ್​​ ಸೆಲ್ಲಿಂಗ್’ ಪ್ರಕ್ರಿಯೆಯನ್ನು ಅಕ್ರಮ, ಅಪರಾಧ ಎಂದು ಘೋಷಿಸಬೇಕು ಎಂಬುದಾಗಿ ಮನವಿ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Adani Row: ಹಿಂಡನ್​​ಬರ್ಗ್ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಗೆ ಪಿಐಎಲ್; ಶಾರ್ಟ್ ಸೆಲ್ಲಿಂಗ್ ಅಕ್ರಮ ಎಂದು ಘೋಷಿಸಲೂ ಮನವಿ
ಸುಪ್ರೀಂಕೋರ್ಟ್
Follow us
Ganapathi Sharma
|

Updated on: Feb 03, 2023 | 4:43 PM

ನವದೆಹಲಿ: ಅದಾನಿ ಸಮೂಹದ (Adani group) ವಿರುದ್ಧ ಅಕ್ರಮದ ಆರೋಪ ಮಾಡಿರುವ ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ (Hindenburg Research) ಮತ್ತು ಅದರ ಸ್ಥಾಪಕ ನಾಥನ್ ಆ್ಯಂಡರ್ಸನ್​ (Nathan Anderson) ವಿರುದ್ಧ ತನಿಖೆ ನಡೆಸಬೇಕು. ಷೇರು ಮಾರುಕಟ್ಟೆಯಲ್ಲಿ ನಡೆಯುವ ‘ಶಾರ್ಟ್​​ ಸೆಲ್ಲಿಂಗ್’ ಪ್ರಕ್ರಿಯೆಯನ್ನು ಅಕ್ರಮ, ಅಪರಾಧ ಎಂದು ಘೋಷಿಸಬೇಕು ಎಂಬುದಾಗಿ ಮನವಿ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ (Supreme Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ವಕೀಲ ಎಂಎಲ್​ ಶರ್ಮಾ ಎಂಬವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂಡನ್​ಬರ್ಗ್ ಆರೋಪದ ಪರಿಣಾಮವಾಗಿ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿರುವುದು, ಹೂಡಿಕೆದರರಿಗೆ ನಷ್ಟವಾಗಿರುವ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ.

‘ಶಾರ್ಟ್​​ ಸೆಲ್ಲಿಂಗ್’ ಅನ್ನು ಅಕ್ರಮ, ವಂಚನೆ ಎಂದು ಘೋಷಿಸಬೇಕು. ‘ಶಾರ್ಟ್​​ ಸೆಲ್ಲಿಂಗ್’ ಮೂಲಕ ಕೃತಕವಾಗಿ ಷಧೇರು ಮೌಲ್ಯ ಕುಸಿಯುವಂತೆ ಮಾಡಿ ಮುಗ್ದ, ಅಮಾಯಕ ಹೂಡಿಕೆದಾರರನ್ನು ವಂಚಿಸಿರುವ ಆ್ಯಂಡರ್ಸನ್ ಮತ್ತು ಹಿಂಡನ್​​ಬರ್ಗ್ ವಿರುದ್ಧ ತನಿಖೆ ನಡೆಸಬೇಕು ಎಂದು ಪಿಐಎಲ್​​​ನಲ್ಲಿ ಉಲ್ಲೇಖಿಸಲಾಗಿದೆ. ‘ಶಾರ್ಟ್​​ ಸೆಲ್ಲಿಂಗ್’ ಮಾಡಿದ ಅಮೆರಿಕದ ಕಂಪನಿಗೆ ದಂಡ ವಿಧಿಸಿ, ಅದರಿಂದ ಸಂಗ್ರಹಿಸಿದ ಮೊತ್ತವನ್ನು ನಷ್ಟ ಅನುಭವಿಸಿದ ಹೂಡಿಕೆದಾರರಿಗೆ ನೀಡಬೇಕು ಎಂದೂ ಮನವಿ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ‘ಶಾರ್ಟ್ ಸೆಲ್ಲಿಂಗ್’ ಮಾಡುವುದು ಮಾರುಕಟ್ಟೆ ನಿಯಂತ್ರಕ ಸೆಬಿಯ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದೂ ವಕೀಲ ಎಂಎಲ್​ ಶರ್ಮಾ ಪ್ರತಿಪಾದಿಸಿದ್ದಾರೆ.

ಶಾರ್ಟ್​​ ಸೆಲ್ಲಿಂಗ್ ಎಂದರೇನು?

ಹೂಡಿಕೆದಾರರು ಷೇರುಗಳನ್ನು ಎರವಲು ಪಡೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ಕಡಿಮೆ ಹಣಕ್ಕೆ ಖರೀದಿ ಮಾಡಲು ಮುಂದಾಗುವುದನ್ನು ಶಾರ್ಟ್​​ ಸೆಲ್ಲಿಂಗ್ ಎನ್ನಲಾಗುತ್ತದೆ. ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುವ ಹೂಡಿಕೆದಾರ ಅಥವಾ ಹೂಡಿಕೆ ಸಂಸ್ಥೆಗಳನ್ನು ಶಾರ್ಟ್​ ಸೆಲ್ಲರ್​​ಗಳು ಎಂದು ಕರೆಯಲಾಗುತ್ತದೆ. ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಅನ್ನು ‘ಶಾರ್ಟ್ ಸೆಲ್ಲಿಂಗ್’ ಸಂಸ್ಥೆ ಎಂದು ಅಲ್ಲಿನ ಮ್ಯಾನ್​ಹಾಟನ್ ನ್ಯಾಯಾಲಯ ಇತ್ತೀಚೆಗೆ ಘೋಷಿಸಿತ್ತು. ಜತೆಗೆ, ಶಾರ್ಟ್​ ಸೆಲ್ಲರ್​​ಗಳ ವರದಿ ಆಧಾರದಲ್ಲಿ ಮಾಡಿದ ಆರೋಪಗಳನ್ನು ಒಪ್ಪಲಾಗದು ಎಂದೂ ಹೇಳಿದ್ದರು.

ಇದನ್ನೂ ಓದಿ: Hindenburg Research: ಹಿಂಡನ್​​ಬರ್ಗ್​ ವರದಿಗೆ ಕಿಮ್ಮತ್ತೇ ನೀಡಿರಲಿಲ್ಲ ಅಮೆರಿಕದ ನ್ಯಾಯಾಲಯ; ಕಾರಣ ಇಲ್ಲಿದೆ ನೋಡಿ

ಅಮೆರಿಕದ ಸ್ಪೋರ್ಟ್ಸ್​ ಬೆಟ್ಟಿಂಗ್ ಕಂಪನಿ ‘ಡ್ರಾಫ್ಟ್​​ಕಿಂಗ್ಸ್’ ವಿರುದ್ಧದ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಮ್ಯಾನ್​ಹಾಟನ್ ನ್ಯಾಯಾಲಯ ಇತ್ತೀಚೆಗೆ ಆದೇಶ ಪ್ರಕಟಿಸಿತ್ತು. ಶಾರ್ಟ್​ ಸೆಲ್ಲರ್​​ಗಳನ್ನು ಪಕ್ಷಪಾತ ಮಾಡದೆ ವರದಿ ನೀಡುವವರು ಎಂಬುದಾಗಿ ಭಾವಿಸಲಾಗದು ಎಂದು ಹೇಳಿದ್ದರು. ಇಂಥ ಪ್ರಕರಣಗಳಲ್ಲಿ ನ್ಯಾಯಾಲಯವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲಿಯೂ ಮಾಹಿತಿದಾರರ ಹೆಸರನ್ನು ಉಲ್ಲೇಖಿಸದೆಯೇ ಮಾಡಿರುವ ಆರೋಪಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಶಾರ್ಟ್​​ಸೆಲ್ಲರ್​​ಗಳು ಮಾಡಿರುವ ಆರೋಪಗಳನ್ನು ವಕೀಲರು ವೈಯಕ್ತಿಕವಾಗಿ ದೃಢೀಕರಿಸದಿದ್ದರೆ ನ್ಯಾಯಾಲಯಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತವೆ ಎಂದು ನ್ಯಾಯಾಧೀಶರು ಹೇಳಿದ್ದರು. ಹಿಂಡನ್​ಬರ್ಗ್ ವರದಿ ಆಧಾರದಲ್ಲಿ ಮಾಡಿದದ್ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್