AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPOs after Liberalisation: ಝಣಝಣ ಹಣ! ಉದಾರೀಕರಣದ ನಂತರ IPO ಕಂಪನಿಗಳ ಕಾರುಬಾರು ಹೇಗಿದೆ ಗೊತ್ತಾ?

ಷೇರು ಮಾರುಕಟ್ಟೆ ಭಾರೀ ಇಳುವರಿ ಕೊಟ್ಟಿದ್ದು 2017-18 ನೇ ಸಾಲಿನಲ್ಲಿ. ಆಗ 81 ಕಂಪನಿಗಳು 98,984 ಕೋಟಿ ರೂಪಾಯಿ ಸಂಗ್ರಹಿಸಿದವು. ವರ್ಷದಿಂದ ವರ್ಷಕ್ಕೆ IPO ಗಳು ಸಂಗ್ರಹಿಸುತ್ತಿರುವ ಬಂಡವಾಳದ ಮೊತ್ತ ಹೆಚ್ಚಾಗುತ್ತಾ ಸಾಗುತ್ತಿದೆ. ಇದರಿಂದ 1990ರ ದಶಕದಲ್ಲಿನ ಅಲ್ಪ ಸಂಖ್ಯೆಗಳನ್ನು ಮರೆಯುವಂತಿದೆ. 2010ರ ದಶಕದ ಬಳಿಕ ಈ ವಿದ್ಯಮಾನ ಮತ್ತಷ್ಟು ಗಟ್ಟಿಗೊಂಡಿದೆ.

IPOs after Liberalisation: ಝಣಝಣ ಹಣ! ಉದಾರೀಕರಣದ ನಂತರ IPO ಕಂಪನಿಗಳ ಕಾರುಬಾರು ಹೇಗಿದೆ ಗೊತ್ತಾ?
ಉದಾರೀಕರಣದ ನಂತರ IPO ಗಳು ಬಂದಿರುವುದು ಕಡಿಮೆಯಾಯ್ತು; ಆದರೆ ಕ್ರೋಢೀಕರಿಸಿದ ಹಣ ಮಾತ್ರ ಝಣಝಣ!
TV9 Web
| Updated By: ಸಾಧು ಶ್ರೀನಾಥ್​|

Updated on: May 17, 2022 | 9:39 PM

Share

ಲೇಟೆಸ್ಟ್ ಸಂಸ್ಥೆಯೊಂದು ಷೇರು ಮಾರುಕಟ್ಟೆ ಪ್ರವೇಶಿಸಿದ್ದು ಅದರ ಹಣಕಾಸಿನ ಬಗ್ಗೆ ಚಿಕ್ಕದಾಗಿ ವಿವರಿಸುವುದಾದರೆ… ಭಾರತೀಯ ಜೀವ ವಿಮಾ ನಿಗಮದ ಎಲ್​ಐಸಿ (LIC) ಷೇರು ಮಾರುಕಟ್ಟೆಗೆ ಪ್ರವೇಶಿಸಿದ್ದು ಇಂದು (ಮೇ 17) ಮೊದಲ ಬಾರಿಗೆ ಲಿಸ್ಟಿಂಗ್​ನಲ್ಲಿ ಕಾಣಿಸಿಕೊಂಡಿದೆ (Initial Public Offering). ಲಿಸ್ಟಿಂಗ್​ಗೆ (LIC IPO) ಮುಂಚೆ ಎಲ್​ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿ ಇತ್ತು. ಆದರೆ ಲಿಸ್ಟಿಂಗ್ ಆದ ಮೊದಲ ಕೆಲವು ನಿಮಿಷಗಳಲ್ಲೇ 5,57,675.05 ಕೋಟಿ ರೂಪಾಯಿಗೆ ಇಳಿಯಿತು. ಆದರೆ ಈಗಲೂ ಹಿಂದೂಸ್ತಾನ್ ಯುನಿಲಿವರ್ (5.33 ಲಕ್ಷ ಕೋಟಿ ರೂ), ಐಸಿಐಸಿಐ ಬ್ಯಾಂಕ್ (4.85 ಲಕ್ಷ ಕೋಟಿ ರೂಪಾಯಿ)ಗಿಂತ ಮುಂದಿದೆ. ಆದರೆ ಇನ್ಫೋಸಿಸ್​ಗಿಂತ (6.32 ಲಕ್ಷ ಕೋಟಿ ರೂಪಾಯಿ) ಹಿಂದಿದೆ. ಸರ್ಕಾರಿ ಸ್ವಾಮ್ಯದ ಎಲ್​ಐಸಿ ಬಿಎಸ್​ಇಯಲ್ಲಿ ಶೇ 8.62ರಷ್ಟು ರಿಯಾಯಿತಿಯೊಂದಿಗೆ 867.2ರಲ್ಲಿ ಲಿಸ್ಟಿಂಗ್ ಹಾಗೂ ಎನ್​ಎಸ್​ಇಯಲ್ಲಿ ಶೇ 8.11ರಷ್ಟು ಕಡಿಮೆಗೆ ಲಿಸ್ಟಿಂಗ್ ಆಗಿದೆ. ಇದು ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಿದಾಗ ಅದರ ಮಾರುಕಟ್ಟೆ ಮೌಲ್ಯ ಹೇಗೆ ಬದಲಾಗುತ್ತದೆ ಎಂಬದಕ್ಕೆ ಒಂದು ತಾಜಾ ಉದಾಹರಣೆಯಷ್ಟೆ. ಇದಕ್ಕಿಂತ ಹಿಂದಿನ ಅಂದರೆ 1991ರ ಉದಾರೀಕರಣ ನಂತರದ ದಿನಗಳಲ್ಲಿ ಹೀಗೆ ಮಾರುಕಟ್ಟೆಗೆ ಬಂದ ಕಂಪನಿಗಳು ಎಷ್ಟು, ಅವು ಎತ್ತುವಳಿ ಮಾಡಿದ ಅಂದರೆ ಕ್ರೋಢೀಕರಿಸಿದ ಮೊತ್ತವೆಷ್ಟು ಎಂಬುದನ್ನು ಸ್ಥೂಲವಾಗಿ ನೋಡಿದಾಗ…

6,300 ಕಂಪನಿಗಳು 8.4 ಲಕ್ಷ ಕೋಟಿ ರೂ ಕ್ರೋಢೀಕರಿಸಿವೆ… 1990-91 ಮತ್ತು 2021-22 ನಡುವಣ ಅವಧಿಯಲ್ಲಿ 6,300 ಕಂಪನಿಗಳು ಸಾರ್ವಜನಿಕ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇವಿಷ್ಟೂ ಕಂಪನಿಗಳು 8.4 ಲಕ್ಷ ಕೋಟಿ ರೂಪಾಯಿ ಕ್ರೋಢೀಕರಿಸಿವೆ. ಇವುಗಳ ಪೈಕಿ ಆರಂಭದಲ್ಲಿಯೇ 1990-91 to 1995-96 ಅವಧಿಯಲ್ಲಿ ಮೂರನೆಯ ಎರಡರಷ್ಟು ಕಂಪನಿಗಳು ಮಾರುಕಟ್ಟೆಗೆ ಬಂದವು. ಆದರೆ ಬಂದ ಏಟಿಗೆ ಅವು ಹೆಚ್ಚು ಬಂಡವಾಳ ಕ್ರೋಢೀಕರಿಸುವಲ್ಲಿ ಎಡವಿದವು. ಕಳೆದ ಮೂರು ದಶಕದಲ್ಲಿ ಎಲ್ಲ ಕಂಪನಿಗಳೂ ಎತ್ತಿದ ಹಣದಲ್ಲಿ ಕೇವಲ ಶೇ. 5 ರಷ್ಟು ಮಾತ್ರವೇ ಹಣ ಕ್ರೋಢೀಕರಿಸುವಲ್ಲಿ ಏದುಸಿರು ಬಿಟ್ಟವು.

ಇದನ್ನೂ ಓದಿ: LIC ಬಳಿ ಇದೆ ವಾರಸುದಾರರಿಲ್ಲದ 21,336 ಕೋಟಿ ರೂಪಾಯಿ! ಪಾಲಿಸಿದಾರರು ಅದನ್ನು ವಾಪಸ್​ ಪಡೆಯುವ ಕ್ರಮ ಇಲ್ಲಿ ವಿವರಿಸಲಾಗಿದೆ

ಇದನ್ನೆ ಮತ್ತೊಂದು ಲೆಕ್ಕಾಚಾರದಲ್ಲಿ ತಾಳೆ ಹಾಕಿ ನೋಡಿದಾಗ ಕಳೆದ ಆರು ವರ್ಷಗಳಲ್ಲಿ (2016-17 ರಿಂದ 2021-22) ಅರ್ಧಕ್ಕರ್ಧ ಹಣ ಸಂಗ್ರಹವಾಗಿದೆ. 1990-91 to 1995-96 ಅವಧಿಯಲ್ಲಿ 4,363 ಪಬ್ಲಿಕ್ ಷೇರು ಕಂಪನಿಗಳು ಬಂದವು. ಮತ್ತು ಅವು 40,973 ಕೋಟಿ ಸಂಗ್ರಹಿಸಿದವು. ಇನ್ನು 2016 ರಿಂದ 2022 ಅವಧಿಯಲ್ಲಿ 360 ಪಬ್ಲಿಕ್ ಷೇರು ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದವು. ಇವು ಮಾತ್ರ 4.1 ಲಕ್ಷ ಕೋಟಿ ರೂಪಾಯಿಯನ್ನೇ ಗುಡ್ಡೆ ಹಾಕಿದವು. ಈ ಮಧ್ಯೆ, 1996-97 to 2015-16 ಅವಧಿಯಲ್ಲಿ 1,642 ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಿ, 3.8 ಲಕ್ಷ ಕೋಟಿ ರೂಪಾಯಿ ಬಂಡವಾಳ ಬಾಚಿಕೊಂಡವು.

ಮೊದಲ ಆರು ವರ್ಷಗಳಲ್ಲಿ 1995-96 ನೇ ಆರ್ಥಿಕ ವರ್ಷದಲ್ಲಿ ಗರಿಷ್ಠ ಅಂದರೆ 1,402 ಕಂಪನಿಗಳು ತನ್ನ ಷೇರು ಬಿಟ್ಟವು. ಇನ್ನು ಗರಿಷ್ಠ ಬಂಡವಾಳ ಸಂಗ್ರಹಗೊಂಡಿದ್ದು 1994-95 ನೇ ಸಾಲಿನಲ್ಲಿ, ಒಟ್ಟು 12,928 ಕೋಟಿ ರೂಪಾಯಿ. ಕಳೆದ 6 ವರ್ಷಗಳಲ್ಲಿ ಅತ್ಯಧಿಕ ಷೇರು ಕಂಪನಿಗಳು (76) ಮತ್ತು ಗರಿಷ್ಠ ಹಣ ಸಂಗ್ರಹಗೊಂಡಿದ್ದು (1.3 ಲಕ್ಷ ಕೋಟಿ ರೂಪಾಯಿ) 2021-22 ಆರ್ಥಿಕ ವರ್ಷದಲ್ಲಿ.

ಇದನ್ನೂ ಓದಿ: LIC unclaimed funds: ಭಾರತೀಯ ಜೀವ ವಿಮಾ ನಿಗಮದ ಬಳಿ ವಾರಸುದಾರರಿಲ್ಲದ ಒಟ್ಟು ಮೊತ್ತ ಎಷ್ಟಿದೆಯೆಂದರೆ ನಮ್ಮ ಬಿಬಿಎಂಪಿ ಬಜೆಟ್​ನ ಎರಡು ಪಟ್ಟು ಜಾಸ್ತಿ ಇದೆ!

2022-23 ನೇ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ (ಏಪ್ರಿಲ್) 4 ಕಂಪನಿಗಳು ಷೇರತು ಮಾರುಕಟ್ಟೆ ಪ್ರವೇಶಿಸಿ, ಬರೋಬ್ಬರಿ 3,204 ಕೋಟಿ ರೂಪಾಯಿ ಸಂಗ್ರಹಿಸಿದವು. ಹೀಗೆ ಷೇರು ಮಾರುಕಟ್ಟೆ ಭಾರೀ ಇಳುವರಿ ಕೊಟ್ಟಿದ್ದು 2017-18 ನೇ ಸಾಲಿನಲ್ಲಿ. ಆಗ 81 ಕಂಪನಿಗಳು 98,984 ಕೋಟಿ ರೂಪಾಯಿ ಸಂಗ್ರಹಿಸಿದವು. ವರ್ಷದಿಂದ ವರ್ಷಕ್ಕೆ IPO ಗಳು ಸಂಗ್ರಹಿಸುತ್ತಿರುವ ಬಂಡವಾಳದ ಮೊತ್ತ ಹೆಚ್ಚಾಗುತ್ತಾ ಸಾಗುತ್ತಿದೆ. ಇದರಿಂದ 1990ರ ದಶಕದಲ್ಲಿನ ಅಲ್ಪ ಸಂಖ್ಯೆಗಳನ್ನು ಮರೆಯುವಂತಿದೆ. 2010ರ ದಶಕದ ಬಳಿಕ ಈ ವಿದ್ಯಮಾನ ಮತ್ತಷ್ಟು ಗಟ್ಟಿಗೊಂಡಿದೆ. (Source link)

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ