AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳತು ಕೊಡಿ, ಹೊಸತು ಪಡೆಯಿರಿ; ಈ ಅಕ್ಷಯ ತೃತೀಯದಲ್ಲಿ Tanishqನತ್ತ ಹೆಜ್ಜೆ ಹಾಕಿ ನವಜೀವನ ಆರಂಭಿಸಿ

Exchange old jewellery for elegant new gold jewellery in Tanishq: ಅಕ್ಷಯ ತೃತೀಯವು ಭಾರತೀಯ ಸಂಸ್ಕೃತಿಯಲ್ಲಿ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವಾಗಿದೆ. ಈ ಶುಭ ಸಂದರ್ಭದಲ್ಲಿ, Tanishq ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ Tanishq ನೀಡುತ್ತಿರುವ ಈ ಕೊಡುಗೆಗಳು ಗ್ರಾಹಕರಿಗೆ ಬಹಳ ಲಾಭದಾಯಕವಾಗಿವೆ.

ಹಳತು ಕೊಡಿ, ಹೊಸತು ಪಡೆಯಿರಿ; ಈ ಅಕ್ಷಯ ತೃತೀಯದಲ್ಲಿ Tanishqನತ್ತ ಹೆಜ್ಜೆ ಹಾಕಿ ನವಜೀವನ ಆರಂಭಿಸಿ
ತಾನಿಷ್ಕ್
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on: Apr 26, 2025 | 10:16 AM

Share

ಅಕ್ಷಯ ತೃತೀಯ ದಿನಕ್ಕೆ ಭಾರತದ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಇದೆ. ಇದು ಸಮೃದ್ಧಿ, ಶುಭಾರಂಭಕ್ಕೆ ಸಂಕೇತವಾಗಿದೆ. ಹೊಸ ಕೆಲಸ, ಹೊಸ ಸಾಹಸ, ಹೊಸ ಜೀವನ, ಹೊಸ ಆಕಾಂಕ್ಷೆಗಳಿಗೆ ಮನಸ್ಸು ತೆರೆಯುವ ಸಂದರ್ಭ ಇದು. ಮದುವೆಯ ಸೀಸನ್ ಕೂಡ ಆರಂಭವಾಗುತ್ತದೆ. ಮದುವೆ ಎಂದರೆ ಯಾರದೇ ಬಾಳಿನಲ್ಲಿ ಬರುವ ಸುಮಧುರ ಮತ್ತು ಅತಿ ಮಹತ್ವದ ಕ್ಷಣ. ಮದುವೆಯಾಗುವ ಜೋಡಿ ಹಾಗೂ ಅವರ ಕುಟುಂಬಗಳಿಗೆ ಸಂಭ್ರಮದ ಕ್ಷಣ. ಮದುವೆಯಲ್ಲಿ ಆಭರಣಗಳಿಗೆ ಮಹತ್ವದ ಸ್ಥಾನ ಇದೆ. ಆದರೆ, ಇವತ್ತಿನ ದಿನದಲ್ಲಿ ಚಿನ್ನದ ಬೆಲೆಯನ್ನು ನೋಡಿದರೆ ಒಡವೆ ಖರೀದಿಸುವುದೇ ಬಹಳ ದೊಡ್ಡ ಸಾಹಸ ಎನಿಸಿಬಿಡಬಹುದು.

ಭಾರತದ ಸುಪ್ರಸಿದ್ಧ ಆಭರಣ ಬ್ರ್ಯಾಂಡ್ ಆದ Tanishq ಈ ಬಾರಿಯ ಅಕ್ಷಯ ತೃತೀಯಕ್ಕೆ ಸುವರ್ಣಾವಕಾಶ ನೀಡುತ್ತಿದೆ. ಚಿನ್ನಕ್ಕೆ ನೀವೆಂದೂ ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಮೌಲ್ಯ ತಂದುಕೊಡುತ್ತಿದೆ. ಬೆಸ್ಟ್ ಗೋಲ್ಡ್ ರೇಟ್ ಪ್ರೊಟೆಕ್ಷನ್ ಮೂಲಕ ಅತ್ಯುತ್ತಮ ಬೆಲೆಗೆ ಚಿನ್ನ ಪಡೆಯುವ ಅವಕಾಶ ನಿಮ್ಮದಾಗುವಂತೆ ಮಾಡುತ್ತಿದೆ.

ಹಳೆಯ ಆಭರಣಗಳಿಗೆ ಪೂರ್ಣ ಬೆಲೆ ನೀಡುವ ತಾನಿಷ್ಕ್

ಪಾರಂಪರಿಕವಾಗಿ ಕೈಸೇರಿದ ಒಡವೆಯೋ, ಅಥವಾ ವಿವಿಧ ಸಂದರ್ಭದಲ್ಲಿ ಖರೀದಿಸಿದ ಸಣ್ಣ ಪುಟ್ಟ ಒಡವೆಯೋ ಇದ್ದು, ಅವನ್ನು ಬಳಸಲು ಆಗದೇ ಬಹಳಷ್ಟು ಜನರು ಸುಮ್ಮನೆ ಇಟ್ಟಿರಬಹುದು. ಇವುಗಳನ್ನು ಮಾರಲು ಹೋದರೆ, ಅಥವಾ ವಿನಿಮಯ ಮಾಡಲು ಹೋದರೆ ವೇಸ್ಟೇಜ್ ಇತ್ಯಾದಿ ಕಡಿತಗೊಂಡು ಮೌಲ್ಯ ಕಡಿಮೆ ಆಗುತ್ತದೆ. ಆದರೆ, Tanishqನ Rivaah ಈ ಅಕ್ಷಯ ತೃತೀಯಕ್ಕೆ ಭರ್ಜರಿ ಆಫರ್ ನೀಡಿದೆ. ನಿಮ್ಮ ಹಳೆಯ ಆಭರಣಗಳನ್ನು ತಂದುಕೊಟ್ಟರೆ ಅದರ ಪೂರ್ಣ ಮೌಲ್ಯವನ್ನು ಪರಿಗಣಿಸಿ, ಅದಕ್ಕೆ ಬದಲಿಯಾಗಿ ಬಹಳ ಸುಂದರವಾದ ಹೊಸ ವೈವಾಹಿಕ ಆಭರಣವನ್ನು ತಾನಿಷ್ಕ್​​ನಿಂದ ನೀವು ಪಡೆಯಬಹುದು.

Akshaya Tritiya, Big offer from Tanishq, get best gold rate lock, great wedding purchases

ತಾನಿಷ್ಕ್ ಜ್ಯೂವೆಲರಿ

ಬಹಳ ಸುಂದರವಾದ ವಿನ್ಯಾಸದ ಆಭರಣಗಳ ಸಂಗ್ರಹ ತಾನಿಷ್ಕ್​​​ನಲ್ಲಿ

ಚಿನ್ನದ ಬೆಲೆ ಈಗ ಗಗನಕ್ಕೇರುತ್ತಿದೆ. ಮದುವೆಗೆ ಚಿನ್ನಾಭರಣ ಖರೀದಿಸಬೇಕೆನ್ನುವವರು ಹೈರಾಣಾಗಿ ಹೋಗಬಹುದು. ಈ ಅಕ್ಷಯ ತೃತೀಯಕ್ಕೆ ತಾನಿಷ್ಕ್ ತಂದಿರುವ ಅತ್ಯುತ್ತಮ ಗೋಲ್ಡ್ ರೇಟ್ ಪ್ರೊಟೆಕ್ಷನ್ ಸ್ಕೀಮ್ ಬಹಳ ಉಪಯುಕ್ತ ಎನಿಸಬಹುದು. ವಿವಿಧ ಕಾರಣಕ್ಕೆ ಬಳಕೆಯಾಗದೇ ನಿರುಪಯುಕ್ತವಾಗಿ ಲಾಕರ್ನಲ್ಲಿ ಇರುವ ಒಡವೆಗಳನ್ನು ನೀವು ತಾನಿಷ್ಕ್ ಸುಪರ್ದಿಗೆ ಒಪ್ಪಿಸಿದರೆ ಸಾಕು. ನಿಮಗೆ ಹೊಸ ಟ್ರೆಂಡ್ನ ವಿನ್ಯಾಸ ಇರುವ, ತಾನಿಷ್ಕ್ನಿಂದ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಒಡವೆಗಳನ್ನು ಪಡೆಯಬಹುದು. ಅದೂ ಕೈಯಿಂದ ಹೆಚ್ಚಿನ ಹಣ ನೀಡದೆಯೇ, ನೆಮ್ಮದಿಯಿಂದ, ಹೆಮ್ಮೆಯಿಂದ ಹೊಸ ಆಭರಣದೊಂದಿಗೆ ಮನೆಗೆ ಹೋಗಬಹುದು.

Tanishqನಲ್ಲಿ ದೊರೆಯುವ ಚಿನ್ನಾಭರಣಗಳು ಮಧುಮಗಳ ಸೌಂದರ್ಯವನ್ನು ಇಮ್ಮಡಿಗೊಳಿಸಬಲ್ಲುವು. ಅತ್ಯುತ್ತಮ ಕುಸುರಿಕಲೆಗಳಿಂದ ಕೂಡಿದ ಈ ಒಡವೆಗಳು ನಿಜಕ್ಕೂ ನಯನಮನೋಹರ ಎನಿಸುತ್ತವೆ. ಹಳೆಯ ನಿರುಪಯುಕ್ತ ಒಡವೆಗಳನ್ನು ಮರಳಿಸಿ ತಾನಿಷ್ಕ್ನ ಈ ಅಪೂರ್ವ ಆಭರಣಗಳನ್ನು ಪಡೆಯುವುದೆಂದರೆ ಹೊಸ ಜೀವನಕ್ಕೆ ಹೊಸ ಖುಷಿಯಿಂದ ಅಡಿ ಇಟ್ಟಂತೆಯೇ. ಈ ಅಕ್ಷಯ ತೃತೀಯದಲ್ಲಿ ನೀವು ತಾನಿಷ್ಕ್ ಕಡೆ ಹೆಜ್ಜೆ ಹಾಕುವುದು ಜಾಣ್ಮೆಯ ನಡೆಯಾಗಬಲ್ಲುದು.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್