AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyperloop: ಬೆಂಗಳೂರಿಂದ ಚೆನ್ನೈಗೆ ಕೇವಲ 30 ನಿಮಿಷದಲ್ಲಿ ಪ್ರಯಾಣ; ಇದು ವಿಮಾನ ಅಲ್ಲ, ಹೈಪರ್​​ಲೂಪ್; ವಿಶ್ವದ ಅತಿಉದ್ದದ ಟ್ರ್ಯಾಕ್ ಸದ್ಯದಲ್ಲೇ

Hyperloop prototype ready at a facility in IIT Madras: ಐಐಟಿ ಮದ್ರಾಸ್​​ನಲ್ಲಿ 410 ಮೀಟರ್ ಉದ್ದದ ಹೈಪರ್​​ಲೂಪ್ ಟ್ರ್ಯಾಕ್​​ನ ಪ್ರೋಟೋಟೈಪ್ ಸಿದ್ಧವಾಗಿದೆ. ಇದು ಸದ್ಯ ಏಷ್ಯಾದ ಅತಿದೊಡ್ಡ ಹೈಪರ್​ಲೂಪ್ ಟ್ರ್ಯಾಕ್ ಎನಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಐಐಟಿ ಮದ್ರಾಸ್​​ಗೆ ಹೋಗಿ ಈ ಪ್ರೋಟೋಟೈಪ್ ವೀಕ್ಷಿಸಿದರು. ಶೀಘ್ರದಲ್ಲೇ ಇದು ವಿಶ್ವದ ಅತಿ ಉದ್ದದ ಹೈಪರ್​​ಲೂಪ್ ಟ್ರ್ಯಾಕ್ ಆಗಲಿದೆ ಎಂದಿದ್ದಾರೆ. ಈ ಬಗ್ಗೆ ಒಂದು ವರದಿ.

Hyperloop: ಬೆಂಗಳೂರಿಂದ ಚೆನ್ನೈಗೆ ಕೇವಲ 30 ನಿಮಿಷದಲ್ಲಿ ಪ್ರಯಾಣ; ಇದು ವಿಮಾನ ಅಲ್ಲ, ಹೈಪರ್​​ಲೂಪ್; ವಿಶ್ವದ ಅತಿಉದ್ದದ ಟ್ರ್ಯಾಕ್ ಸದ್ಯದಲ್ಲೇ
ಹೈಪರ್​​ಲೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 16, 2025 | 12:26 PM

Share

ಚೆನ್ನೈ, ಮಾರ್ಚ್ 16: ಭಾರತದ ಮೊದಲ ಹೈಪರ್​ಲೂಪ್ ಪ್ರಾಜೆಕ್ಟ್ (Hyperloop Project) ಶೀಘ್ರದಲ್ಲೇ ಸಾಕಾರಗೊಳ್ಳುವ ಹಾದಿಯಲ್ಲಿದೆ. ಐಐಟಿ ಮದ್ರಾಸ್​​ನ ಆವಿಷ್ಕಾರ್ ಹೈಪರ್​​ಲೂಪ್ (Avishkar Hyperloop) ತಂಡ ಹಾಗೂ ಟುಟರ್ (TuTr) ಎನ್ನುವ ಸ್ಟಾರ್ಟಪ್ ಜಂಟಿಯಾಗಿ ಐಐಟಿ ಸೆಂಟರ್​​​ನಲ್ಲಿ ಹೈಪರ್​​ಲೂಪ್ ಮಾದರಿಯೊಂದನ್ನು ನಿರ್ಮಿಸಿವೆ. ಈ ಪ್ರೋಟೋಟೈಪ್ 410 ಮೀಟರ್ ಉದ್ದ ಇದೆ. ಸದ್ಯ ಇದು ಏಷ್ಯಾದ ಅತಿ ಉದ್ದದ ಪ್ರೋಟೋಟೈಪ್ ಹೈಪರ್​ಲೂಪ್ ಟೆಸ್ಟ್ ಟ್ರ್ಯಾಕ್ ಆಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ನಿನ್ನೆ ಶನಿವಾರ ಐಐಟಿ ಮದ್ರಾಸ್​​ನಲ್ಲಿರುವ ಈ ಹೈಪರ್​​ಲೂಪ್ ಪ್ರಯೋಗ ಆಗುತ್ತಿರುವ ಕೇಂದ್ರಕ್ಕೆ ಭೇಟಿ ನೀಡಿದರು. ಕಾರ್ಯದ ಪ್ರಗತಿ ಬೆಳವಣಿಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಅವರು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಏಷ್ಯಾದ ಅತಿದೊಡ್ಡ ಹೈಪರ್​ಲೂಪ್ ಟ್ಯೂಬ್ ಅತಿಶೀಘ್ರದಲ್ಲೇ ವಿಶ್ವದ ಅತಿದೊಡ್ಡದ ಟ್ರ್ಯಾಕ್ ಆಗಲಿದೆ… ಹೈಪರ್​​ಲೂಪ್ ಟ್ರಾನ್ಸ್​​ಪೋರ್ಟೇಶನ್​​ಗೆ ಬೇಕಾದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಬಹಳ ಶೀಘ್ರದಲ್ಲಿ ಭಾರತದಲ್ಲಿ ಹೈಪರ್​​ಲೂಪ್ ಸಾರಿಗೆ ವ್ಯವಸ್ಥೆ ಸಿದ್ಧವಾಗಲಿದೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಚಿತ ಯೋಜನೆಗಳಿಂದ ಬಡತನ ಹೋಗಲ್ಲ: ಸಮಾಜವಾದದಿಂದ ಪರಿಹಾರ ಇಲ್ಲ: ಇನ್ಫೋಸಿಸ್ ನಾರಾಯಣಮೂರ್ತಿ

ಇದನ್ನೂ ಓದಿ
Image
ಏಪ್ರಿಲ್​ನಲ್ಲೂ ಬಡ್ಡಿದರ ಕಟ್; 2025ರಲ್ಲಿ 4 ಬಾರಿ ಬಡ್ಡಿಕಡಿತ?
Image
ಹತ್ತು ವರ್ಷದಲ್ಲಿ ಹತ್ತು ಲಕ್ಷಕ್ಕೇರಲಿದೆ ಸ್ಟಾರ್ಟಪ್ಸ್ ಸಂಖ್ಯೆ
Image
ಫೆಬ್ರುವರಿಯಲ್ಲಿ ಶೇ. 3.61ಕ್ಕೆ ಇಳಿದ ಹಣದುಬ್ಬರ
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?

ಭಾರತೀಯ ರೈಲ್ವೆ, ಎಲ್ ಅಂಡ್ ಟಿ, ಆವಿಷ್ಕಾರ್ ಹೈಪರ್​​ಲೂಪ್ ಸಂಸ್ಥೆಗಳು ಸೇರಿ ಹೈಪರ್​ಲೂಪ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಕಾರ್ಯ ಮುಗಿಸಿವೆ. 40ರಿಂದ 50 ಕಿಮೀಯಷ್ಟು ಉದ್ದದ ಟೆಸ್ಟ್ ಟ್ರ್ಯಾಕ್ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಇದು ವಿಶ್ವದ ಅತಿ ಉದ್ದದ ಹೈಪರ್​​ಲೂಪ್ ಟೆಸ್ಟ್ ಟ್ರ್ಯಾಕ್ ಎನಿಸಲಿದೆ. ಗಂಟೆಗೆ 1,100 ಕಿಮೀ ವೇಗದಲ್ಲಿ ಪ್ರಯಾಣಿಸಬಹುದಾ ಎಂದು ಈ ಟ್ರ್ಯಾಕ್​​ನಲ್ಲಿ ಪರೀಕ್ಷಿಸಲಾಗುತ್ತದೆ.

ಬೆಂಗಳೂರಿನಿಂದ ಚೆನ್ನೈಗೆ ಹೈಪರ್​​ಲೂಪ್ ಟ್ರ್ಯಾಕ್​​ನಲ್ಲಿ ಕೇವಲ 30 ನಿಮಿಷದಲ್ಲಿ ಪ್ರಯಾಣ?

ಬೆಂಗಳೂರು ಮತ್ತು ಚೆನ್ನೈ ನಡುವೆ ಸುಮಾರು 350 ಕಿಮೀ ಅಂತರ ಇದೆ. ಹೈಪರ್​ಲೂಪ್ ಟ್ರ್ಯಾಕ್ ನಿರ್ಮಾಣವಾದರೆ ಕೇವಲ 30 ನಿಮಿಷದಲ್ಲಿ ಪ್ರಯಾಣಿಸಲು ಸಾಧ್ಯ. ಬುಲೆಟ್ ಟ್ರೈನು, ವಿಮಾನಕ್ಕಿಂತಲೂ ವೇಗವಾಗಿ ಸಾಗಬಹುದು.

ಹೈಪರ್​​ಲೂಪ್ ತತ್ವ ಬಹಳ ಸರಳ. ಗಾಳಿಯ ಒತ್ತಡವೇ ಇಲ್ಲದ ಬೃಹತ್ ಟ್ಯೂಬ್​​ನೊಳಗೆ ಕ್ಯಾಪ್ಸೂಲ್ ಆಕಾರದ ಪೋಡ್ ಅನ್ನು ಅಯಸ್ಕಾಂತೀಯ ಶಕ್ತಿ ಮೂಲಕ ಚಲಿಸುವಂತೆ ಮಾಡಲಾಗುತ್ತದೆ. ಟ್ಯೂಬ್​​ನ ಒಳಗೆ ಈ ಪೋಡ್ ಯಾವುದಕ್ಕೂ ಘರ್ಷಿಸುವುದಿಲ್ಲ. ಟ್ರ್ಯಾಕ್​​ ಮತ್ತು ಗಾಳಿಯ ಘರ್ಷಣೆ ಇಲ್ಲದ್ದರಿಂದ ಪೋಡ್ ಬಹಳ ವೇಗವಾಗಿ ಸಾಗಬಲ್ಲುದು. ಗಂಟೆಗೆ 1,000 ಕಿಮೀಯಷ್ಟು ವೇಗದಲ್ಲಿ ಹೋಗಲು ಸಾಧ್ಯ.

ಇದನ್ನೂ ಓದಿ: 2035ಕ್ಕೆ ಭಾರತದಲ್ಲಿ ಸ್ಟಾರ್ಪಟ್ ಸಂಖ್ಯೆ 10,00,000 ಆಗುವ ನಿರೀಕ್ಷೆ: ನಂದನ್ ನಿಲೇಕಣಿ ನಿರೀಕ್ಷೆ

ಸ್ವಿಟ್ಜರ್​​ಲ್ಯಾಂಡ್, ನೆದರ್​​ಲ್ಯಾಂಡ್ಸ್ ಮೊದಲಾದ ಕೆಲ ದೇಶಗಳಲ್ಲಿ ಹೈಪರ್​​ಲೂಪ್ ಟೆಸ್ಟಿಂಗ್ ಟ್ರ್ಯಾಕ್ ನಿರ್ಮಿಸಿ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಿಯೂ ಕೂಡ ಇನ್ನೂ ಪೂರ್ಣವಾಗಿ ಟ್ರ್ಯಾಕ್ ನಿರ್ಮಾಣವಾಗಿಲ್ಲ. ಐಐಟಿ ಮದ್ರಾಸ್​​ನಲ್ಲಿ ಕೆಲವಾರು ತಿಂಗಳಿಂದ ಈ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಪೂರ್ಣ ಬೆಂಬಲ ನೀಡಿದೆ. ಇದೀಗ ಪ್ರೋಟೋಟೈಪ್ ಸಿದ್ಧವಾಗಿದ್ದು, ಶೀಘ್ರದಲ್ಲೇ 50 ಕಿಮೀಯಷ್ಟು ಟೆಸ್ಟಿಂಗ್ ಟ್​ರ್ಯಾಕ್ ಕೂಡ ಸಿದ್ಧವಾಗಲಿದೆ. ಪ್ರಯೋಗಗಳು ಯಶಸ್ವಿಯಾದ ಬಳಿಕ ಬೆಂಗಳೂರು ಮತ್ತು ಚೆನ್ನೈ ಮಧ್ಯೆ ಹೈಪರ್​​ಲೂಪ್ ಟ್ರ್ಯಾಕ್ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ