Business Tips: ಬಿಸಿನೆಸ್ ಮಾಡಬೇಕು, ಆದರೆ ಯಾವ ವ್ಯವಹಾರ ಆರಂಭಿಸಬೇಕು ಅಂತ ಗೊಂದಲವಾ? ಇಲ್ಲಿದೆ ಒಂದಷ್ಟು ಐಡಿಯಾ

How To Start a Business: ಸ್ವಂತ ಬಿಸಿನೆಸ್ ಮಾಡಬೇಕೆಂದು ಎಲ್ಲರಿಗೂ ಬಯಕೆ ಇರುತ್ತದೆ. ಆದರೆ ಯಾವ ವ್ಯವಹಾರ ಆರಂಭಿಸಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ಮೊತ್ತಮೊದಲಿಗೆ ನೀವು ಯಾವ ವ್ಯವಹಾರ ಆರಂಭಿಸಬೇಕು ಎಂಬುದನ್ನು ನಿಶ್ಚಯಿಸಿಕೊಂಡು, ಬಳಿಕ ಆ ವ್ಯವಹಾರಕ್ಕೆ ಇರುವ ಮಾರುಕಟ್ಟೆ, ನಿಮ್ಮ ಗ್ರಾಹಕರು ಯಾರು ಎಂಬುದನ್ನೆಲ್ಲಾ ಅಧ್ಯಯನ ಮಾಡಬೇಕಾಗುತ್ತದೆ. ಇವೆಲ್ಲವೂ ನಿಮಗೆ ಸಮಾಧಾನ ತರುವಂತಿದ್ದರೆ ಮುಂದುವರಿಯಬಹುದು.

Business Tips: ಬಿಸಿನೆಸ್ ಮಾಡಬೇಕು, ಆದರೆ ಯಾವ ವ್ಯವಹಾರ ಆರಂಭಿಸಬೇಕು ಅಂತ ಗೊಂದಲವಾ? ಇಲ್ಲಿದೆ ಒಂದಷ್ಟು ಐಡಿಯಾ
ಬಿಸಿನೆಸ್
Follow us
|

Updated on: Mar 13, 2024 | 10:15 AM

ಮಾಸಿಕ ಸಂಬಳ ಕೊಡುವ ಕೆಲಸ ಸಾಕು, ನಮ್ಮದೇ ಸ್ವಂತ ಬಿಸಿನೆಸ್ (Business Idea) ಆರಂಭಿಸಬೇಕು ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡವರು ಬಹಳ ಮಂದಿ ಇದ್ದಾರೆ. ಆದರೆ, ಏನು ಮಾಡಬೇಕು ಎಂದು ತೋಚದೇ ವಿವಿಧ ಹಂತಗಳಲ್ಲಿ ಕೈಚೆಲ್ಲಿ ಕೂತವರೇ ಹೆಚ್ಚು. ದೇಶಕ್ಕೀಗ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಸ್ಟಾರ್ಟಪ್​ಗಳು ಬಹಳ ಬೇಕು. ಆಂಟ್ರಪ್ರನ್ಯೂರ್​ಗಳು ಬೇಕಾಗಿದ್ದಾರೆ. ಹೀಗಾಗಿ, ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಬಿಸಿನೆಸ್ ಮಾಡಬೇಕೆಂಬ ಸಂಕಲ್ಪ ಇದ್ದರೆ ಖಂಡಿತ ಪ್ರಯತ್ನಿಸಬಹುದು. ಆದರೆ, ಮೊದಲಿಗೆ ಒಂದು ವಿಚಾರ ತಿಳಿದಿರಲಿ, ಸಂಬಳ ತರುವ ಉದ್ಯೋಗಸ್ಥಳದಲ್ಲಿ ಹೆಚ್ಚು ಒತ್ತಡ ಎಂದು ನೀವು ಭಾವಿಸಿ ಸ್ವಂತ ವ್ಯವಹಾರ ಮಾಡುತ್ತೇನೆಂದರೆ, ಬಿಸಿನೆಸ್​ನಲ್ಲಿ ತಲೆಬೇನೆ ಮತ್ತು ಒತ್ತಡ ಇನ್ನೂ ಹೆಚ್ಚಾಗಿರುತ್ತದೆ ಎಂಬುದು ಗೊತ್ತಿರಲಿ.

ಏನು ಬಿಸಿನೆಸ್ ಮಾಡಬೇಕು ಎಂದು ನಿಶ್ಚಯಿಸಿಕೊಳ್ಳಿ

ನಿಮ್ಮ ತಲೆಯಲ್ಲಿ ಒಂದೊಳ್ಳೆಯ ಬಿಸಿನೆಸ್ ಐಡಿಯಾ ಬಂದಿದ್ದರೆ ಒಳ್ಳೆಯದು. ಅದು ಬಹಳ ಮುಖ್ಯ. ಒಂದು ವೇಳೆ ಏನು ಬಿಸಿನೆಸ್ ಮಾಡಬೇಕೆಂಬುದು ಗೊತ್ತಾಗದಿದ್ದರೆ ಮಾರುಕಟ್ಟೆ ಶೋಧನೆ ಮಾಡಬೇಕಾಗುತ್ತದೆ. ನಿಮ್ಮ ಸುತ್ತಮುತ್ತಲು ಯಶಸ್ವಿಯಾಗಿರುವ ಉದ್ದಿಮೆಗಳ್ಯಾವುವು? ಯಾವ ಕ್ಷೇತ್ರದ ಉದ್ದಿಮೆಗಳು ಯಶಸ್ವಿಯಾಗಿವೆ? ಭವಿಷ್ಯದ ದಿನಗಳಲ್ಲಿ ಯಾವ ಉದ್ದಿಮೆ ಬೆಳಗಬಹುದು?

ಒಟ್ಟಾರೆ ಬಿಸಿನೆಸ್ ಐಡಿಯಾ ನಿಮ್ಮ ತಲೆಗೆ ಬಂದಿದ್ದರೆ ಎರಡನೇ ಹಂತಕ್ಕೆ ಹೋಗಲು ಸಿದ್ದರಾಗಿರುತ್ತೀರಿ.

ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಉತ್ತೇಜನಕ್ಕಾಗಿ SIDBI ಕ್ರೆಡಿಟ್ ಸ್ಕೀಮ್; ಅಡಮಾನರಹಿತ ಸಾಲಗಳ ವಿತರಣೆಗೆ ಯೋಜನೆ

ಮಾರುಕಟ್ಟೆ ಸಂಶೋಧನೆ ಮಾಡಿ…

ನೀವು ಮಾಡಬೆಕೆಂದಿರುವ ಬಿಸಿನೆಸ್​ನಲ್ಲಿ ಸಂಪನ್ಮೂಲ ಹೇಗೆ ಬರುತ್ತೆ, ಗ್ರಾಹಕರು ಯಾರು, ಅವರ ಅವಶ್ಯಕತೆಗಳೇನು, ಅವರ ಬೇಡಿಕೆಗೆ ತಕ್ಕಂತಹ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾ ಎಂದು ಅವಲೋಕಿಸಬೇಕಾಗುತ್ತದೆ. ಆ ಬಿಸಿನೆಸ್​ನಲ್ಲಿ ಎಷ್ಟು ಪ್ರತಿಸ್ಪರ್ಧೆ ಇದೆ, ಅವರಲ್ಲಿ ಯಶಸ್ವಿಯಾದವರು ಎಷ್ಟು? ಸೋಲಪ್ಪಿ ಹಿಂದಕ್ಕೆ ಸರಿದವರಿದ್ದಾರಾ? ರಿಸ್ಕ್ ಎಷ್ಟಿದೆ ಇವೆಲ್ಲವನ್ನೂ ಗಮನಿಸಬೇಕು.

ಯಾವುದಾದರೂ ಬಿಸಿನೆಸ್ ಫ್ರಾಂಚೈಸಿ ಪಡೆಯುವುದಾದರೆ ಈಗಾಗಲೇ ಅಸ್ತಿತ್ವದಲ್ಲಿರುವ ಫ್ರಾಂಚೈಸಿ ಔಟ್​ಲೆಟ್​ಗಳಿಗೆ ಹೋಗಿ ಅಲ್ಲಿ ಯಾವ ರೀತಿ ಬಿಸಿನೆಸ್ ನಡೆಯುತ್ತಿದೆ, ಎಷ್ಟು ಲಾಭ ಆಗುತ್ತಿದೆ ಎಂದು ಅರ್ಥೈಸಿಕೊಳ್ಳಲು ಯತ್ನಿಸಬಹುದು.

ಬಿಸಿನೆಸ್ ಪ್ಲಾನ್ ಹಾಕಿರಿ…

ನಿಮ್ಮ ಬಿಸಿನೆಸ್​ಗೆ ಗ್ರಾಹಕರನ್ನು ಹಿಡಿಯಬಹುದು ಎಂಬ ವಿಶ್ವಾಸ ನಿಮಗೆ ಬಂದಿದ್ದರೆ, ಪೂರ್ಣ ಬಿಸಿನೆಸ್ ಪ್ಲಾನ್ ರೂಪಿಸಿ. ನಿಮ್ಮ ಉತ್ಪನ್ನ, ನಿಮ್ಮ ಗ್ರಾಹಕರು, ಮಾರುಕಟ್ಟೆ ವಿಶ್ಲೇಷಣೆ, ಪ್ರತಿಸ್ಪರ್ಧಿಗಳ ಬಲಾಬಲ, ಹಣಕಾಸು ವ್ಯವಸ್ಥೆ ಎಲ್ಲವನ್ನೂ ದಾಖಲಿಸಿ.

ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ

ಕಂಪನಿ ನೊಂದಾಯಿಸಿಕೊಳ್ಳಿ…

ನೀವು ಬಿಸಿನೆಸ್ ಆರಂಭಿಸಬೇಕಿದ್ದರೆ ಅದನ್ನು ಸ್ಥಳೀಯ ಪ್ರಾಧಿಕಾರದಲ್ಲಿ ನೊಂದಾಯಿಸಬೇಕು. ಸೂಕ್ತ ಪರವಾನಿಗೆ ಪಡೆಯಬೇಕು. ಜಿಎಸ್​ಟಿ ನೊಂದಣಿ ಮಾಡಬೇಕು.

ಇವೆಲ್ಲವೂ ಆದ ಬಳಿಕ ಕಚೇರಿ ಸ್ಥಾಪಿಸಬಹುದು. ಪ್ರತ್ಯೇಕ ಇಮೇಲ್ ಐಡಿ, ಸೋಷಿಯಲ್ ಮೀಡಿಯಾ ಅಕೌಂಟ್​​ಗಳನ್ನು ತೆರೆಯಬಹುದು. ಅಗತ್ಯ ಬಿದ್ದರೆ ವೆಬ್​ಸೈಟ್ ಆರಂಭಿಸಬಹುದು.

ಕೊನೆಯದಾಗಿ ಒಂದು ಪ್ರಮುಖ ವಿಚಾರ ಎಂದರೆ, ನೀವು ಬಿಸಿನೆಸ್ ಆರಂಭಿಸಿದ ಕೂಡಲೇ ಆದಾಯ ನಿರೀಕ್ಷಿಸುವುದು ದೊಡ್ಡ ಪ್ರಮಾದವಾಗುತ್ತದೆ. ಬ್ಯಾಕಪ್ ಆಗಿ ಒಂದಷ್ಟು ಹಣಕಾಸು ವ್ಯವಸ್ಥೆ ಸಿದ್ಧಪಡಿಸಿಕೊಂಡಿರಬೇಕು. ನಿಮ್ಮದು ಪಕ್ಕಾ ಬಿಸಿನೆಸ್ ಪ್ಲಾನ್ ಇದ್ದರೆ ಒಂದಷ್ಟು ಅವಧಿ ಬಳಿಕ ನಿರೀಕ್ಷಿತ ಆದಾಯ ಬರತೊಡಗುತ್ತದೆ. ಅಲ್ಲಿಯವರೆಗೆ ಲಾಭದ ಅಪೇಕ್ಷೆ ಇಟ್ಟುಕೊಳ್ಳದಿರುವುದು ಸರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​