ಬೆಂಗಳೂರಿಗನ ಖಾತೆಯಿಂದ 90 ಲಕ್ಷ ಹಣ ಕಾಣದಂತೆ ಮಾಯ; ಖದೀಮರು 2 ವರ್ಷದಲ್ಲಿ5,000 ಬಾರಿ ಕನ್ನ ಹಾಕಿದರೂ ಗೊತ್ತಾಗದೇಹೋಯಿತಾ?

Bengalurean Lost Rs 90 Lakh to Cyber Fraud: ಬೆಂಗಳೂರಿನ ಸಗಟು ವ್ಯಾಪಾರಿಯೊಬ್ಬರ ಖಾತೆಯಿಂದ ದುಷ್ಕರ್ಮಿಗಳು ಒಂದೂವರೆ ವರ್ಷದ ಅಂತರದಲ್ಲಿ 90 ಲಕ್ಷ ರೂ ಹಣ ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಐದು ಸಾವಿರ ಬಾರಿ ಹಣವನ್ನು ಹಿಂಪಡೆಯಲಾಗಿದ್ದರೂ ಒಮ್ಮೆಯೂ ಈ ವ್ಯಕ್ತಿಗೆ ಅಲರ್ಟ್ ಬಂದಿಲ್ಲದಿರುವುದು ಅಚ್ಚರಿ ಮೂಡಿಸಿದೆ.

ಬೆಂಗಳೂರಿಗನ ಖಾತೆಯಿಂದ 90 ಲಕ್ಷ ಹಣ ಕಾಣದಂತೆ ಮಾಯ; ಖದೀಮರು 2 ವರ್ಷದಲ್ಲಿ5,000 ಬಾರಿ ಕನ್ನ ಹಾಕಿದರೂ ಗೊತ್ತಾಗದೇಹೋಯಿತಾ?
ಸೈಬರ್ ವಂಚನೆ
Follow us
|

Updated on: Aug 18, 2023 | 2:39 PM

ಬೆಂಗಳೂರು, ಆಗಸ್ಟ್ 18: ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಕಷ್ಟು ಬಲಿಷ್ಠಗೊಳಿಸಲಾಗಿದ್ದರೂ ಆನ್​ಲೈನ್ ವಂಚನೆ (Online Fraud) ಮೂಲಕ ದುಷ್ಕರ್ಮಿಗಳು ಹಣ ಲಪಟಾಯಿಸುವ ಘಟನೆಗಳು ನಿಂತಿಲ್ಲ. ನೀವು ಎಷ್ಟೇ ಹುಷಾರಾಗಿದ್ದರೂ ದುಷ್ಕರ್ಮಿಗಳು ಯಾಮಾರಿಸುವ ಪ್ರಯತ್ನ ಬಿಡೋದಿಲ್ಲ. ಬೆಂಗಳೂರಿನಲ್ಲಿ ಸಣ್ಣ ಉದ್ಯಮಿಯೊಬ್ಬರು ತಮಗೇ ಅರಿವಿಲ್ಲದಂತೆ 90 ಲಕ್ಷ ರು ಹಣವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಅಂತರದಲ್ಲಿ ಈ ಉದ್ಯಮಿಯ ಬ್ಯಾಂಕ್ ಖಾತೆಯಿಂದ 5,000 ಬಾರಿ ದುಷ್ಕರ್ಮಿಗಳು ಹಣ ಪಡೆದಿದ್ದಾರೆ. ಇವೆಲ್ಲವೂ 2021ರಿಂದ 2023ರವರೆಗೆ 18 ತಿಂಗಳ ಅಂತರದಲ್ಲಿ ನಡೆದಿದೆ. ಇವ್ಯಾವುವೂ ಈ ವ್ಯಕ್ತಿಗೆ ಗೊತ್ತಾಗಿಲ್ಲ. ಇತ್ತೀಚೆಗೆ ಯಾರಿಗೂ ಹಣ ಪಾವತಿ ಮಾಡಬೇಕಾಗಿ ಬಂದು ಪ್ರಯತ್ನಿಸಿದಾಗ ಬ್ಯಾಲನ್ಸ್ ಇಲ್ಲದಿರುವುದು ತಿಳಿದು ಆಘಾತಗೊಂಡಿದ್ದಾರೆ. ಈಸ್ಟ್ ಸಿಇಎನ್ (Cyber Crime PS) ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಯಾರಿಗೂ ಕಾರ್ಡ್ ಕೊಟ್ಟಿಲ್ಲ, ಒಟಿಪಿ ಹೇಳಿಲ್ಲ, ಅಲರ್ಟ್ ಬಂದಿಲ್ಲ

ಬೆಂಗಳೂರಿನಲ್ಲಿ ಹೋಲ್​ಸೇಲ್ ಅಂಗಡಿ ಇಟ್ಟುಕೊಂಡಿರುವ 62 ವರ್ಷದ ಈ ಉದ್ಯಮಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 90 ಲಕ್ಷ ರೂ ಹಣ ಏನು ಆಯಿತು ಎಂದು ಚಿಂತಾಕ್ರಾಂತರಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ಅವರು ಈಗ ತಮ್ಮ ಅಂಗಡಿ ಮಾರುವ ಪರಿಸ್ಥಿತಿಗೆ ಬಂದಿದ್ದಾರೆ.

ಈ ವ್ಯಕ್ತಿ ತನ್ನ ಎಟಿಎಂ ಕಾರ್ಡನ್ನು ಮನೆಯಲ್ಲೇ ಇಟ್ಟಿದ್ದು ಯಾವತ್ತೂ ಬಳಸಿಲ್ಲ. ಹೀಗಾಗಿ, ಎಟಿಎಂ ಸೆಂಟರ್​ಗಳಲ್ಲಿ ಕಾರ್ಡ್ ಸ್ಕಿಮಿಂಗ್ ಮೂಲಕ ದುಷ್ಕರ್ಮಿಗಳು ಮಾಹಿತಿ ಕದ್ದಿರುವ ಸಾಧ್ಯತೆ ಇಲ್ಲ. ಹಣ ವರ್ಗಾವಣೆ ಆಗಿದ್ದಕ್ಕೆ ಮೊಬೈಲ್​ಗೆ ಮೆಸೇಜ್​ಗಳೂ ಬಂದಿಲ್ಲ. ಯಾವುದೇ ಒಟಿಪಿಯೂ ಬಂದಿಲ್ಲ ಎಂದು ಇವರು ಹೇಳುತ್ತಾರೆ.

ಇದನ್ನೂ ಓದಿ: RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್​ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್​ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?

ಪೊಲೀಸರು ಮತ್ತು ಬ್ಯಾಂಕು ಹೇಳುವುದೇನು?

ಈ ವ್ಯಕ್ತಿಯ ಕಾರ್ಡನ್ನು ಸ್ಕಿಮಿಂಗ್ ಮಾಡಿ ದುಷ್ಕರ್ಮಿಗಳು ಹಣ ಲಪಟಾಯಿಸಿರಬಹುದು. ಅಥವಾ ಗೊತ್ತಿರುವ ವ್ಯಕ್ತಿಯಿಂದ ಈ ವಹಿವಾಟುಗಳು ನಡೆದಿರಬಹುದು ಎಂದು ಸೈಬರ್ ಪೊಲೀಸರು ಸದ್ಯಕ್ಕೆ ಶಂಕಿಸಿದ್ದಾರೆ.

ಹ್ಯಾಂಡ್ಸಮ್ ಹಂಕ್ ಆದ ವಿಕ್ಕಿ ಕೌಶಲ್
ಹ್ಯಾಂಡ್ಸಮ್ ಹಂಕ್ ಆದ ವಿಕ್ಕಿ ಕೌಶಲ್
ಹ್ಯಾಂಡ್​​​ಬ್ಯಾಗ್ ಖರೀದಿಸುವ ಮುನ್ನ ಈ ಸಿಂಪಲ್​​​ ಟಿಪ್ಸ್​​ ನೆನಪಿನಲ್ಲಿಟ್ಟುಕೊಳ್ಳಿ
ಹ್ಯಾಂಡ್​​​ಬ್ಯಾಗ್ ಖರೀದಿಸುವ ಮುನ್ನ ಈ ಸಿಂಪಲ್​​​ ಟಿಪ್ಸ್​​ ನೆನಪಿನಲ್ಲಿಟ್ಟುಕೊಳ್ಳಿ

ಬ್ಯಾಂಕ್ ಅನ್ನು ಸಂಪರ್ಕಿಸಿರುವ ಪೊಲೀಸರು, ಆ ಎಲ್ಲಾ ವಹಿವಾಟುಗಳು ಯಾವ್ಯಾವ ಸ್ಥಳಗಳಿಂದ ನಡೆದವು ಎಂಬ ವಿವರ ಕೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ: 3D Printed Post Office: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಗೆ ಎಷ್ಟು ವೆಚ್ಚ? ಇದನ್ನು ನಿರ್ಮಾಣ ಹೇಗೆ? ಇಲ್ಲಿದೆ ಡೀಟೇಲ್ಸ್

ಇನ್ನು, ಐದು ಸಾವಿರ ಬಾರಿ ವಹಿವಾಟುಗಳು ನಡೆದರೂ ಬ್ಯಾಂಕ್ ವತಿಯಿಂದ ವ್ಯಕ್ತಿಗೆ ಯಾವುದೇ ಅಲರ್ಟ್ ಮೆಸೇಜ್ ಬಂದಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದ್ದು, ವ್ಯಕ್ತಿಯ ಮೊಬೈಲ್ ನಂಬರ್ ಬದಲಾಗಿರುವುದಾಗಲೀ, ಅಥವಾ ಟ್ರಾನ್ಸಾಕ್ಷನ್ ಅಲರ್ಟ್ ಅನ್ನು ಡಿಸೇಬಲ್ ಮಾಡಿರುವುದಾಗಲೀ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ