AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್​ಪೇ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ದಂಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್

ಭಾರತ್​ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಮತ್ತು ಅವರ ಹೆಂಡತಿ ಮಾಧುರಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಯಾವುದರ ಹಿನ್ನೆಲೆಯಲ್ಲಿ ಹೀಗೆ ಹೇಳಿದೆ ಎಂಬ ವಿವರ ಇಲ್ಲಿದೆ.

ಭಾರತ್​ಪೇ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ದಂಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 10, 2022 | 12:01 PM

Share

ಕೊಟಕ್ ಮಹೀಂದ್ರಾ ಬ್ಯಾಂಕ್ ಭಾನುವಾರದಂದು ಹೇಳಿರುವ ಪ್ರಕಾರ, ಫಿನ್​ಟೆಕ್ ಭಾರತ್​ಪೇ ಸಹ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ವಿರುದ್ಧ “ಕಾನೂನು ಕ್ರಮ” ಕೈಗೊಳ್ಳಲು ಮುಂದಾಗಿದೆ. ನಿಂದನೆಯ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ವಿಸ್ತೃತವಾಗಿ ಕಾರಣಗಳನ್ನು ತಿಳಿಸದೆ ಇದೇ ವಿಚಾರವಾಗಿ ಅಕ್ಟೋಬರ್​ 30ನೇ ತಾರೀಕಿನಂದು ದಂಪತಿಗೆ ನೋಟಿಸ್​ ಕಳಿಸಿದ್ದರ ಬಗ್ಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಮಾಧ್ಯಮಗಳ ವರದಿ ಮಾಡಿರುವಂತೆ, ನೈಕಾ ಐಪಿಒದಲ್ಲಿ ಷೇರು ವಿತರಣೆ ಮತ್ತು ಹಣಕಾಸು ನೆರವು ಪಡೆಯುವುದಕ್ಕೆ ವಿಫಲವಾಗಿರುವುದಕ್ಕೆ ಈ ದಂಪತಿ ಬ್ಯಾಂಕ್​ ಮೇಲೆ ಆರೋಪ ಮಾಡಿದ್ದು, ಹಾನಿಗೆ ಪರಿಹಾರವಾಗಿ 500 ಕೋಟಿ ರೂಪಾಯಿ ಕೇಳಿದ್ದಾರೆ.

“ಆ ನೋಟಿಸ್ ನಮಗೆ ತಲುಪಿದೆ. ಆ ಸಮಯದಲ್ಲಿ ಸೂಕ್ತವಾಗಿ ಉತ್ತರಿಸಿದ್ದೇವೆ. ಗ್ರೋವರ್ ಅಸಂಬದ್ಧ ಭಾಷೆ ಬಳಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಾಗುವುದು,” ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಬ್ಯಾಂಕ್ ತಿಳಿಸಿದೆ. ನಿರ್ದಿಷ್ಟವಾಗಿ ಯಾವ ಅಂಶದ ಮೇಲೆ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂದಾಗಿರುವುದು ಎಂಬ ಬಗ್ಗೆ ವಿವರಣೆ ಇಲ್ಲ. ಮಾಧ್ಯಮಗಳು ಭಾರತ್​ಪೇ ವಕ್ತಾರರನ್ನು ಈ ಬಗ್ಗೆ ಸಂಪರ್ಕಿಸಲು ಯತ್ನಿಸಿದಾಗ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ ಕ್ಲಿಪ್​ವೊಂದು ಕಾಣಿಸಿಕೊಂಡಿತ್ತು. ಅದರ ಪ್ರಕಾರವಾಗಿ, ಈ ದಂಪತಿ ಬ್ಯಾಂಕ್​ನ ರಿಲೇಷನ್​ಷಿಪ್ ಮ್ಯಾನೇಜರ್​ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅದಾಗಿತ್ತು. ಒಬ್ಬ ಪುರುಷರ ಧ್ವನಿ ಬೈಗುಳ ಮೂಲಕ ನಿಂದಿಸಿದರೆ, ಮತ್ತೊಂದು ಪುರುಷರ ಧ್ವನಿ ಸಮಾಧಾನ ಮಾಡಲು ಯತ್ನಿಸಿದೆ. ಅಲ್ಲಿರುವುದು ಅಶ್ನೀರ್ ಗ್ರೋವರ್ ದಂಪತಿಯ ಕ್ಲಿಪ್ ಎನ್ನಲಾಗುತ್ತಿದೆ. ಆದರೆ ಆ ಟೇಪ್ “ನಕಲಿ” ಎನ್ನುತ್ತಿದ್ದಾರೆ ಗ್ರೋವರ್.

ನನ್ನಿಂದ 2,40,000 ಯುಎಸ್​ಡಿ ಬಿಟ್​ಕಾಯಿನ್​ ವಸೂಲಿ ಮಾಡಿಕೊಳ್ಳುವ ಸಲುವಾಗಿ ಕೆಲವು ವಂಚಕರು ಈ ನಕಲಿ ಆಡಿಯೋ ಬಿಟ್ಟಿದ್ದಾರೆ. ಆದರೆ ಅದಕ್ಕೆ ನಾನು ನಿರಾಕರಿಸಿದ್ದೇ. “ನನ್ನ ನಡವಳಿಕೆ ಉತ್ತಮವಾಗಿ, ಮತ್ತು ಇಂಟರ್​ನೆಟ್​ನಲ್ಲಿ ಸಾಕಷ್ಟು ವಂಚಕರಿದ್ದಾರೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಭಾರತ್ ಪೇ 150 ನಗರಗಳಲ್ಲಿ 75 ಲಕ್ಷ ವರ್ತಕರಿಗೆ ಸೇವೆ ಒದಗಿಸುತ್ತಿದೆ. ಕಂಪೆನಿಯ ಆರಂಭದಿಂದ ಇಲ್ಲಿಯ ತನಕ ವರ್ತಕರಿಗೆ 3000 ಕೋಟಿ ರೂಪಾಯಿಯಷ್ಟು ಸಾಲವನ್ನು ವಿತರಣೆ ಮಾಡಿದೆ. ಸಾಲ ಹಾಗೂ ಈಕ್ವಿಟಿಯಾಗಿ ಕಂಪೆನಿಯು ಇಲ್ಲಿಯ ತನಕ 650 ಮಿಲಿಯನ್ ಯುಎಸ್​ಡಿ ಸಂಗ್ರಹ ಮಾಡಿದೆ. ಅದರ ಹೂಡಿಕೆದಾರರಲ್ಲಿ ಟೈಗರ್ ಗ್ಲೋಬಲ್, ಡ್ರಾಗೊನೀರ್ ಇನ್ವೆಸ್ಟ್​ಮೆಂಟ್ ಗ್ರೂಪ್, ಸ್ಟೆಡ್​ಫಾಸ್ಟ್ ಕ್ಯಾಪಿಟಲ್, ಕೋಟ್ಯೂ ಮ್ಯಾನೇಜ್​ಮೆಂಟ್​, ರಿಬಿಟ್​ ಕ್ಯಾಪಿಟಲ್​ ಇತರರು ಒಳಗೊಂಡಿದ್ದಾರೆ.

ಇದನ್ನೂ ಓದಿ: Kotak Mahindra Bank: ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಕನಿಷ್ಠ ಮಟ್ಟದ ಬಡ್ಡಿ ದರಕ್ಕೆ ಗೃಹ ಸಾಲ; ಇಲ್ಲಿದೆ ವಿವರ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ