ಚಂದ್ರಯಾನ 3 ಯಶಸ್ಸು, ಷೇರುಪೇಟೆ ಮೇಲೇನು ಪರಿಣಾಮ? ಯಾವ್ಯಾವ ಸ್ಟಾಕುಗಳಿಗೆ ಡಿಮ್ಯಾಂಡ್? ಇಲ್ಲಿದೆ ತಜ್ಞರ ಶಿಫಾರಸು

Chandrayaan Success Effect: ಚಂದ್ರಯಾನ ಯೋಜನೆ ಯಶಸ್ವಿಯಾಗಿದ್ದೇ ಬಂತು ಈಗ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಯೋಜನೆಯಲ್ಲಿ ಕೈಜೋಡಿಸಿದ ಲಿಸ್ಟೆಡ್ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಬಹುದು. ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.

ಚಂದ್ರಯಾನ 3 ಯಶಸ್ಸು, ಷೇರುಪೇಟೆ ಮೇಲೇನು ಪರಿಣಾಮ? ಯಾವ್ಯಾವ ಸ್ಟಾಕುಗಳಿಗೆ ಡಿಮ್ಯಾಂಡ್? ಇಲ್ಲಿದೆ ತಜ್ಞರ ಶಿಫಾರಸು
ಷೇರುಮಾರುಕಟ್ಟೆ
Follow us
|

Updated on: Aug 24, 2023 | 1:05 PM

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬಳಿಕ ಎಲ್ಲರ ಗಮನ ಭಾರತದ ಬಾಹ್ಯಾಕಾಶ ಉದ್ಯಮದ ಇನ್​ಫ್ರಾಸ್ಟ್ರಕ್ಚರ್​ನತ್ತ ನೆಟ್ಟಿದೆ. ಭಾರತದ ಚಂದ್ರಯಾನ (Chandrayaan-3) ಯಶಸ್ಸು ಸಾಧಾರಣವಾದುದಲ್ಲ. ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡ ಈ ಯೋಜನೆ ಭಾರತದ ಕೀರ್ತಿಪತಾಕೆ ಹಾರಿಸಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ (Moon South Pole) ಮೊದಲು ಮುಟ್ಟಿದ ದೇಶ ಭಾರತವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಬಿಟ್ಟರೆ ಚಂದಿರ ಅಂಗಳ ತಲುಪಿದ ದೇಶ ಭಾರತವಾಗಿದೆ. ಅತೀ ಕಡಿಮೆ ಬಜೆಟ್​ನಲ್ಲಿ ಚಂದ್ರಯಾನ ರೂಪುಗೊಂಡಿದ್ದು ಭಾರತದ ತಾಂತ್ರಿಕ ನಿಪುಣತೆಗೆ ಸಾಕ್ಷಿಯಾಗಿದೆ. ಈ ಯೋಜನೆ ಯಶಸ್ಸಿಗೆ ಇಸ್ರೋ ಜೊತೆ ಹಲವು ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ಸಹಕಾರ ಇದ್ದದ್ದು ವಿಶೇಷ. ಮುಂದೆಯೂ ಭಾರತದಿಂದ ಹಲವು ಬಾಹ್ಯಾಕಾಶ ಯೋಜನೆಗಳು ನಡೆಯಲಿರುವುದರಿಂದ ಡಿಫೆನ್ಸ್, ಸ್ಪೇಸ್ ಕ್ಷೇತ್ರದಲ್ಲಿರುವ ಕಂಪನಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರುವುದು ಹೌದು.

ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯಿಂದ ಷೇರುಪೇಟೆಯಲ್ಲಿ ಲಾಭ ಮಾಡಬಲ್ಲ ಕಂಪನಿಗಳನ್ನು ಗುರುತಿಸಲಾಗುತ್ತಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಇಂಥ 13 ಕಂಪನಿಗಳನ್ನು ಕೆಲ ತಜ್ಞರು ಹೆಸರಿಸಿದ್ದು, ಇವುಗಳ ಮೇಲೆ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆ ಹೆಚ್ಚು ಎಂದು ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: ಚಂದ್ರಯಾನ ಯಶಸ್ಸಿನಲ್ಲಿ ಭಾಗಿದಾರರಾದ ಪ್ರಮುಖ 10 ಸಂಸ್ಥೆಗಳು ಮತ್ತವುಗಳ ಕೊಡುಗೆ

ಭಾರತದ ಬಾಹ್ಯಾಕಾಶ ಯೋಜನೆಯ ವರದಾನ ಪಡೆಯುವ ಕಂಪನಿಗಳಿವು

  • ಲಾರ್ಸನ್ ಅಂಡ್ ಟೌಬ್ರೋ (ಎಲ್ ಅಂಡ್ ಟಿ)
  • ಬಿಎಚ್​ಇಎಲ್
  • ಸೆಂಟ್ರಮ್ ಎಲೆಕ್ಟ್ರಾನಿಕ್ಸ್
  • ಹೆಚ್​ಎಎಲ್
  • ಲಿಂಡೆ ಇಂಡಿಯಾ
  • ಪರಸ್ ಡಿಫೆನ್ಸ್
  • ವಾಲ್​ಚಂದ್ ನಗರ್ ಇಂಡಸ್ಟ್ರೀಸ್
  • ಭಾರತ್ ಫೋರ್ಜ್
  • ಆಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್
  • ಅವನ್​ಟೆಲ್
  • ಎಂಟಿಎಆರ್ ಟೆಕ್ನಾಲಜೀಸ್
  • ಬಿಇಎಲ್

ಭಾರತದ ಬಾಹ್ಯಾಕಾಶ ಕ್ಷೇತ್ರ ಬೆಳವಣಿಗೆ ಎಷ್ಟಿದೆ?

ಜಾಗತಿಕವಾಗಿ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆ ಅಗಾಧವಾಗಿದೆ. ಈ ಆರ್ಥಿಕತೆಯಲ್ಲಿ ಭಾರತದ ಕೊಡುಗೆ ಸದ್ಯ ಶೇ. 2-3 ರಷ್ಟಿದೆ. ಮುಂದಿನ ಎಂಟತ್ತು ವರ್ಷಗಳಲ್ಲಿ ಈ ಪ್ರಮಾಣವು ಶೇ. 10ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್​ ಬೆನ್ನಲ್ಲೇ ರಾಕೆಟ್​ ಸ್ಪೀಡ್​ನಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್​

ಭಾರತದ ಬಳಿ ಇರುವ ರಾಕೆಟ್​ಗಳು ಕಡಿಮೆ ಶಕ್ತಿಯದ್ದಾಗಿದ್ದರೂ ಭೂಮಿಯ ಕೆಳ ಕಕ್ಷೆಗಳಿಗೆ ಉಪಗ್ರಹ ತಲುಪಿಸಲು ಸಮರ್ಥವಾಗಿವೆ. ಬಹಳ ಕಡಿಮೆ ದರದಲ್ಲಿ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಬಲ್ಲುದು. ಈಗಾಗಲೇ ಸಾಕಷ್ಟು ದೇಶಗಳಿಂದ ಗ್ರಾಹಕರು ಉಪಗ್ರಹ ಉಡಾವಣೆಗೆ ಇಸ್ರೋ ನೆರವು ಪಡೆಯುತ್ತಿದ್ದಾರೆ.

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ವಲಯಕ್ಕೂ ಮುಕ್ತ ಅವಕಾಶ ಕೊಡಲಾಗಿದೆ. ಇಸ್ರೋದಂತೆ ಖಾಸಗಿ ಕಂಪನಿಗಳೂ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಭಾರತದಲ್ಲಿ 140ಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್​ಗಳಿವೆ. ಈಗ ಚಂದ್ರಯಾನ ಯಶಸ್ವಿಯಾಗಿರುವುದರಿಂದ ಭಾರತದ ಸ್ಪೇಸ್ ಕಂಪನಿಗಳ ಮೇಲೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಬಹುದು. ಹೀಗಾಗಿ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿರುವ ಕಂಪನಿಗಳು ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಸಾಧಿಸುವ ಎಲ್ಲಾ ಲಕ್ಷಣಗಳು ಮತ್ತು ವಾತಾವರಣ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?