AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಫೈಟರ್ ಜೆಟ್ ಕಂಪನಿ: ಮೋದಿ ಭಾಷಣದ ಬಳಿಕ ಮೂರು ದಿನದಲ್ಲಿ ಶೇ. 11ರಷ್ಟು ಕುಸಿದಿದೆ ಷೇರುಬೆಲೆ

China's AVIC Chengdu Aircraft company share price down: ಭಾರತದ ವಿರುದ್ಧ ಪಾಕಿಸ್ತಾನ ಬಳಸಿದ ಜೆ-10 ಫೈಟರ್ ಜೆಟ್ ತಯಾರಿಸಿದ ಚೀನಾದ ಚೆಂಗ್ಡು ಏರ್​​ಕ್ರಾಫ್ಟ್ ಕಂಪನಿಯ ಷೇರುಬೆಲೆ 3 ದಿನದಲ್ಲಿ ಶೇ. 11.5ರಷ್ಟು ಕುಸಿದಿದೆ. ನರೇಂದ್ರ ಮೋದಿ ಅವರು ಆಪರೇಷನ್ ಸಿಂದೂರದ ಯಶಸ್ಸಿನ ಬಗ್ಗೆ ತಮ್ಮ ಭಾಷಣದಲ್ಲಿ ಹೇಳಿದ ಬಳಿಕ ಚೀನಾದ ಡಿಫೆನ್ಸ್ ಸ್ಟಾಕ್​​ಗಳಿಗೆ ಹಿನ್ನಡೆಯಾಗುತ್ತಿದೆ. ಇದೇ ವೇಳೆ, ಭಾರತದ ಡಿಫೆನ್ಸ್ ಸ್ಟಾಕುಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

ಚೀನಾದ ಫೈಟರ್ ಜೆಟ್ ಕಂಪನಿ: ಮೋದಿ ಭಾಷಣದ ಬಳಿಕ ಮೂರು ದಿನದಲ್ಲಿ ಶೇ. 11ರಷ್ಟು ಕುಸಿದಿದೆ ಷೇರುಬೆಲೆ
ಜೆ10 ಫೈಟರ್ ಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 15, 2025 | 12:02 PM

Share

ನವದೆಹಲಿ, ಮೇ 15: ಚೀನಾದ ಫೈಟರ್ ಜೆಟ್​​ಗಳನ್ನು ತಯಾರಿಸುವ ಎವಿಐಸಿ ಚೆಂಗಡು ಏರ್​​​ಕ್ರಾಫ್ಟ್ ಕಂಪನಿಯ (AVIC Chengdu Aircraft company) ಷೇರುಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಆಪರೇಷನ್ ಸಿಂದೂರದ (Operation Sindoor) ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣದವರೆಗೂ ಈ ಕಂಪನಿ ಷೇರುಬೆಲೆ ಏರಿಕೆ ಕಾಣುತ್ತಾ ಬಂದಿತ್ತು. ಮೋದಿ ತಮ್ಮ ಭಾಷಣದಲ್ಲಿ ಚೀನೀ ಶಸ್ತ್ರಾಸ್ತ್ರಗಳು ಹೇಗೆ ವಿಫಲವಾದವು ಎಂಬುದನ್ನು ಜಾಹೀರುಗೊಳಿಸಿದರೋ, ಆಗಿನಿಂದ ಈ ಕಂಪನಿಯ ಷೇರುಬೆಲೆ ಇಳಿಕೆಯಾಗುತ್ತಾ ಬಂದಿದೆ. ಮೂರು ದಿನದಲ್ಲಿ ಶೇ. 11.5ರಷ್ಟು ಕುಸಿತ ಕಂಡಿದೆ.

ಆಪರೇಷನ್ ಸಿಂದೂರದಲ್ಲಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಚೀನಾದ ಜೆ-10 ಫೈಟರ್ ಜೆಟ್​​ಗಳು ಹಾಗೂ ಪಿಎಲ್-15 ಕ್ಷಿಪಣಿ, ಟರ್ಕಿಯ ಡ್ರೋನ್​​ಗಳು ಇತ್ಯಾದಿಯನ್ನು ಬಳಸಿತ್ತು. ಚೀನಾದ ಡಿಫೆನ್ಸ್ ಸಿಸ್ಟಂ ಅನ್ನೂ ನಿಯೋಜಿಸಿತ್ತು ಪಾಕಿಸ್ತಾನ. ಆದರೆ, ಭಾರತದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಚೀನೀ ಡಿಫೆನ್ಸ್ ಸಿಸ್ಟಂ ನಿಷ್ಕ್ರಿಯಗೊಂಡಿತು. ಪಾಕಿಸ್ತಾನದಿಂದ ದಾಳಿ ಮಾಡಲು ಬಳಸಿದ್ದ ಫೈಟರ್ ಜೆಟ್​​ಗಳು ಹಾಗೂ ಕ್ಷಿಪಣಿಗಳು ಭಾರತದ ಡಿಫೆನ್ಸ್ ಸಿಸ್ಟಂನಿಂದ ನಾಶಗೊಂಡವು ಎನ್ನಲಾಗಿದೆ.

ಪ್ರಧಾನಿಗಳು ಮೂರು ದಿನಗಳ ಹಿಂದೆ ತಮ್ಮ ಭಾಷಣದಲ್ಲಿ ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಬಗ್ಗೆ ಹೇಳಿದ್ದರು. ಅದಕ್ಕೂ ಮುನ್ನ ಭಾರತದ ವಿವಿಧ ಪಡೆಗಳ ಡಿಜಿಗಳು ಆಪರೇಷನ್ ಸಿಂದೂರದ ಯಶಸ್ವಿ ಕಾರ್ಯಾಚರಣೆಯ ವಿವರ ನೀಡಿದರು. ಪಾಕಿಸ್ತಾನದ ವಿವಿಧ ಮಿಲಿಟರಿ ನೆಲೆಗಳನ್ನು ನಾಶ ಮಾಡಲಾಗಿದ್ದನ್ನು ಉಪಗ್ರಹ ಚಿತ್ರಗಳ ಮೂಲಕ ಸಾಕ್ಷ್ಯಗಳನ್ನು ತೋರಿಸಿದ್ದಾರೆ.

ಇದನ್ನೂ ಓದಿ
Image
ಆಪರೇಷನ್ ಸಿಂದೂರದಲ್ಲಿ ಸ್ವಾವಲಂಬಿ, ಪ್ರಬಲ ಭಾರತದ ಅನಾವರಣ
Image
ಬಿಇಎಲ್​​ನ ಆಕಾಶತೀರ ಈಗ ಆಪರೇಷನ್ ಸಿಂದೂರದ ಹೀರೋ
Image
ಡ್ರೋನ್ ಉಡಾಯಿಸಲು ಭಾರತದಿಂದ ಭಾರ್ಗವ ಅಸ್ತ್ರ; ಯಶಸ್ವಿ ಪರೀಕ್ಷೆ
Image
ಪಾಕಿಸ್ತಾನ ಸ್ನೇಹಿ ಟರ್ಕಿ ಜೊತೆ ಭಾರತದ ಸಂಬಂಧ ಎಂಥದ್ದು?

ಇದನ್ನೂ ಓದಿ: ಆಪರೇಷನ್ ಸಿಂದೂರ, ಹೀರೋ ಆದ ಆಕಾಶತೀರ; ಬೆಂಗಳೂರಿನ ಕಂಪನಿ ನಿರ್ಮಿಸಿದ ಅಭೇದ್ಯ ರಕ್ಷಣಾ ಕೋಟೆ ಅಂತಿಂಥದ್ದಲ್ಲ…

ಭಾರತದ ಬಳಸಿದ ರಫೇಲ್ ಜೆಟ್​​ಗಳನ್ನು ತಯಾರಿಸುವ ಫ್ರಾನ್ಸ್​​​ನ ಡಸೋ ಏವಿಯೇಶನ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ಏರುತ್ತಿರುವುದೂ ಗಮನಾರ್ಹ. ಆಪರೇಷನ್ ಸಿಂದೂರ ಆರಂಭವಾದಾಗಿನಿಂದ ಭಾರತದ ಡಿಫೆನ್ಸ್ ಸ್ಟಾಕ್​​ಗಳೂ ಕೂಡ ಉತ್ತಮ ಸ್ಪಂದನೆ ಪಡೆಯುತ್ತಿವೆ. ಎಚ್​​ಎಎಲ್, ಬಿಇಎಲ್ ಷೇರುಗಳು ಗಣನೀಯವಾಗಿ ಏರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Thu, 15 May 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ