AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಜೆರ್ಸಿ ಗಿಫ್ಟ್; ಮಾಸ್ಟರ್​​ಕಾರ್ಡ್​​ನಿಂದ ಸಿಎಸ್​​​ಕೆ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್​​ಗಳ ಬಿಡುಗಡೆ

Mastercard releases CSK co-branded credit cards: ಸಿಎಸ್​​ಕೆ ಕೋ-ಬ್ರ್ಯಾಂಡಿಂಗ್ ಇರುವ ಎರಡು ಕ್ರೆಡಿಟ್ ಕಾರ್ಡ್​​​ಗಳನ್ನು ಸಿಟಿ ಯೂನಿಯನ್ ಬ್ಯಾಂಕ್ ಹಾಗೂ ಮಾಸ್ಟರ್​​ಕಾರ್ಡ್ ಸಂಸ್ಥೆಗಳು ಬಿಡುಗಡೆ ಮಾಡಿವೆ. ಸಿಎಸ್​​​ಕೆ ಮಾಸ್ಟರ್​​ವರ್ಲ್ಡ್ ಕ್ರೆಡಿಟ್ ಕಾರ್ಡ್ ಮತ್ತು ಸಿಎಸ್​​​ಕೆ ಮಾಸ್ಟರ್ ಕ್ರೆಡಿಟ್ ಕಾರ್ಡ್ ಲಭ್ಯ ಇವೆ. ಸಿಎಸ್​​ಕೆ ಮತ್ತು ಧೋನಿ ಫ್ಯಾನ್ಸ್​​​ಗೆ ಜೆರ್ಸಿಗಳು ವೆಲ್ಕಂ ಗಿಫ್ಟ್ ಆಗಿ ಸಿಗುತ್ತವೆ. ಪ್ರಮುಖ ರೆಸ್ಟೋರೆಂಟ್​​​ಗಳಲ್ಲಿ ಡೈನಿಂಗ್ ಡಿಸ್ಕೌಂಟ್ ಮತ್ತಿತರ ಆಫರ್ಸ್ ಇವೆ.

ಧೋನಿ ಜೆರ್ಸಿ ಗಿಫ್ಟ್; ಮಾಸ್ಟರ್​​ಕಾರ್ಡ್​​ನಿಂದ ಸಿಎಸ್​​​ಕೆ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್​​ಗಳ ಬಿಡುಗಡೆ
ಸಿಎಸ್​​​ಕೆ ಮತ್ತು ಧೋನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2025 | 7:01 PM

Share

ನವದೆಹಲಿ, ಏಪ್ರಿಲ್ 16: ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತರಾದರೂ ಐಪಿಎಲ್​​ನಲ್ಲಿ (IPL- 2025) ಅವರಿನ್ನೂ ಸೂಪರ್ ಸ್ಟಾರ್. ಚೆನ್ನೈ ಸೂಪರ್ ಕಿಂಗ್ಸ್​​ನಲ್ಲಿ ಅವರ ಆಟಕ್ಕಾಗಿ ಕಾಯುವ ಫ್ಯಾನ್ಸ್ ಅಸಂಖ್ಯ. ಧೋನಿ ಈಗಲೂ ಸಾಕಷ್ಟು ಜಾಹೀರಾತುಗಳಿಗೆ ಡಿಮ್ಯಾಂಡ್ ಹೊಂದಿರುವ ವ್ಯಕ್ತಿ. ಇದೀಗ ಮಾಸ್ಟರ್​ಕಾರ್ಡ್ ಸಿಎಸ್​​ಕೆ ಬ್ರ್ಯಾಂಡ್​​ನಲ್ಲಿ ಕ್ರೆಡಿಟ್ ಕಾರ್ಡ್​ವೊಂದನ್ನು ಬಿಡುಗಡೆ ಮಾಡಿದೆ. ಸಿಟಿ ಯೂನಿಯನ್ ಬ್ಯಾಂಕ್ ಸಿಎಸ್​​​ಕೆ ಮಾಸ್ಟರ್​​ವರ್ಲ್ಡ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಇದು. ಹಾಗೆಯೇ ಸಿಎಸ್​​ಕೆ ಮಾಸ್ಟರ್ ಕ್ರೆಡಿಟ್ ಕಾರ್ಡ್ ಅನ್ನೂ ಬಿಡುಗಡೆ ಮಾಡಲಾಗಿದೆ.

ಈ ಕ್ರೆಡಿಟ್ ಕಾರ್ಡ್​​​ಗಳಲ್ಲಿ ಹಲವು ಬೆನಿಫಿಟ್​​ಗಳಿವೆ ಎಂದು ಮಾಸ್ಟರ್ ಕಾರ್ಡ್ ಹೇಳಿಕೊಂಡಿದೆ. ಐಪಿಎಲ್ ಕ್ರಿಕೆಟ್ ಪ್ರೇಮಿಗಳು ಮತ್ತು ಧೋನಿ ಫ್ಯಾನ್ಸ್​​ಗೆ ಖುಷಿ ಕೊಡುವ ಸಂಗತಿಯೂ ಇದೆ. ಕ್ರಿಕೆಟ್ ಪ್ರೇಮಿಗಳನ್ನು ಖುಷಿಪಡಿಸಲೆಂದೇ ಕಾರ್ಡ್ ಫೀಚರ್ಸ್ ರೂಪಿಸಲಾಗಿದೆ. ಸಿಎಸ್​ಕೆ ಮಾತ್ರವಲ್ಲ, ಎಸ್​​ಆರ್​​ಎಚ್ ಕೋ-ಬ್ರ್ಯಾಂಡಿಂಗ್​​ನಲ್ಲೂ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಐ 5ಜಿ ಸರ್ವಿಸ್ ಸಕ್ರಿಯ; 11 ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವೊಡಾಫೋನ್ ಐಡಿಯಾ 5ಜಿ ಸೇವೆ ವಿಸ್ತರಣೆ

ಇದನ್ನೂ ಓದಿ
Image
MS Dhoni: ಧೋನಿಗೆ ಗಾಯ: ಮತ್ತೆ ಬದಲಾಗುತ್ತಾ CSK ನಾಯಕ
Image
ಒಂದೇ ಕೈಯಿಂದ ಸಿಕ್ಸ್ ಸಿಡಿಸಿ 11 ಎಸೆತಗಳಲ್ಲಿ ಪಂದ್ಯವನ್ನೇ ತಿರುಗಿಸಿದ ಧೋನಿ
Image
ನಾವು ಅಂದುಕೊಂಡಂತೆ ಏನೂ ನಡೆದಿಲ್ಲ, ಅದಕ್ಕೆ ಗೆಲ್ತಿರಲಿಲ್ಲ: ಧೋನಿ
Image
ಬೆಂಗಳೂರು ಸೇರಿ 11 ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಐ 5ಜಿ ಲಭ್ಯ

ಸಿಎಸ್​​​ಕೆ ಮತ್ತು ಧೋನಿ ಫ್ಯಾನ್ಸ್​​ಗೆ ಗಿಫ್ಟ್ ನೀಡುವ ಕಾರ್ಡ್​​ಗಳು

ಸಿಎಸ್​​ಕೆ ಕೋ-ಬ್ರ್ಯಾಂಡಿಂಗ್​​ನ ಸಿಟಿ ಯೂನಿಯನ್ ಬ್ಯಾಂಕ್ ಮಾಸ್ಟರ್ ಕ್ರೆಡಿಟ್ ಕಾರ್ಡ್ ಅನ್ನು ಪಡೆದರೆ ಸಿಎಸ್​​ಕೆ ಫ್ಯಾನ್ ಜೆರ್ಸಿ ವೆಲ್ಕಂ ಗಿಫ್ಟ್ ಆಗಿ ಸಿಗುತ್ತದೆ. ಆದರೆ, ನಿರ್ದಿಷ್ಟ ಪ್ರಮಾಣದಲ್ಲಿ ಕಾರ್ಡ್ ವೆಚ್ಚ ಇರಬೇಕು ಎನ್ನುವ ನಿಯಮ ಇದೆ. ಕಾರ್ಡ್ ಬಳಸುತ್ತಾ ಹೋದಂತೆ ಸಿಎಸ್​​​ಕೆ ಬ್ರ್ಯಾಂಡೆಡ್ ಗಿಫ್ಟ್ ಸಿಗುವ ಅವಕಾಶ ಇದೆ. ವಿವಿಧ ಶಾಪಿಂಗ್​​​ನಲ್ಲಿ ಡಿಸ್ಕೌಂಟ್ ಸಿಗುತ್ತದೆ. ಈ ವಿವರನ್ನು ಸಿಟಿ ಯೂನಿಯನ್ ಬ್ಯಾಂಕ್​​ನಲ್ಲಿ ಪಡೆಯಬಹುದು.

ಸಿಎಸ್​​​ಕೆ ಕೋ-ಬ್ರ್ಯಾಂಡಿಂಗ್​​ನ ಮಾಸ್ಟರ್​ವರ್ಲ್ಡ್ ಕ್ರೆಡಿಟ್ ಕಾರ್ಡ್​ನಲ್ಲಿ ಧೋನಿಯ ಒರಿಜಿನಲ್ 7ನೇ ನಂಬರ್ ಜೆರ್ಸಿಯು ವೆಲ್ಕಂ ಗಿಫ್ಟ್ ಆಗಿ ಸಿಗುತ್ತದೆ. ಇಲ್ಲಿಯೂ ಕೂಡ ಚೆನ್ನೈ ಫ್ರಾಂಚೈಸಿಯ ಬೇರೆ ಬೇರೆ ಗಿಫ್ಟ್ ಮತ್ತು ಡಿಸ್ಕೌಂಟ್​ ಪಡೆಯುವ ಅವಕಾಶ ಇರುತ್ತದೆ.

ಸಿಎಸ್​​ಕೆ ಕೋ-ಬ್ರ್ಯಾಂಡ್​​ನ ಕ್ರೆಡಿಟ್ ಕಾರ್ಡ್​ಗಳಲ್ಲಿ ಮತ್ತೇನು ಫೀಚರ್ಸ್?

ಸಿಎಸ್​​ಕೆ ಕೋ-ಬ್ರ್ಯಾಂಡ್​​ನ ಈ ಎರಡು ಕ್ರೆಡಿಟ್ ಕಾರ್ಡ್​​​ಗಳು ಮಾಸ್ಟರ್​​​ಕಾರ್ಡ್​​ನ ವಿವಿಧ ಸೌಲಭ್ಯಗಳನ್ನು ನೀಡುತ್ತವೆ. ಒನ್ ಡೈನ್ಸ್ ಫ್ರೀ, ಒನ್ ನೈಟ್ ಫ್ರೀ ಪ್ರೋಗ್ರಾಮ್, ಕ್ಯೂಲಿನರಿ ಕ್ಲಬ್ ಪ್ರೋಗ್ರಾಮ್ ಫೀಚರ್ ಇರುತ್ತದೆ.

ಇದನ್ನೂ ಓದಿ: IPL 2025: ಸತತ ಸೋಲುಗಳಿಂದ ಕಂಗೆಟ್ಟು ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ

ಮಾಸ್ಟರ್​​​ಕಾರ್ಡ್ ಒನ್ ಡೈನ್ಸ್ ಫ್ರೀ ಪ್ರೋಗ್ರಾಮ್​​​ನಲ್ಲಿ ಕಾರ್ಡ್​​ದಾರರು ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ಪ್ರಮುಖ ನಗರಗಳ ದೊಡ್ಡ ರೆಸ್ಟೋರೆಂಟ್​​​ಗಳಲ್ಲಿ ಊಟ ಮಾಡಿದರೆ ಒಂದು ಕಾಂಪ್ಲಿಮೆಂಟರಿ ಮೈನ್ ಕೋರ್ಸ್ ಉಚಿತವಾಗಿ ಸಿಗುತ್ತದೆ.

ಒನ್ ನೈಟ್ ಫ್ರೀ ಪ್ರೋಗ್ರಾಮ್​​ನಲ್ಲಿ ಪಾರ್ಟ್ನರ್ ಹೋಟೆಲ್ ಮತ್ತು ರೆಸಾರ್ಟ್​​ನಲ್ಲಿ ಒಂದು ರಾತ್ರಿ ಸ್ಟೇ ಉಚಿತ ಸಿಗುತ್ತದೆ. ಇವಷ್ಟೇ ಅಲ್ಲದೆ, ಏರ್​​ಪೋರ್ಟ್​​​ಗಳಲ್ಲಿ ಲಾಂಜ್ ಸರ್ವಿಸ್ ಕೂಡ ಲಭ್ಯ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​