Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 30ರ ನಂತರ ಬದಲಾಗುವ ಕೆಲ ಹಣಕಾಸು ನಿಯಮಗಳು, ಕ್ರಮಗಳೇನು? ಇವುಗಳಿಂದ ಪರಿಣಾಮಗಳೇನು ತಿಳಿಯಿರಿ

Imp Rules Changes In 2023 December: ಡಿಸೆಂಬರ್​ನಲ್ಲಿ ಕೆಲವಿಷ್ಟು ಮಹತ್ವದ ನಿಯಮ ಬದಲಾವಣೆ, ಡೆಡ್​ಲೈನ್​ಗಳು ಇದ್ದು, ಇವುಗಳು ಜನಸಾಮಾನ್ಯರ ಹಣಕಾಸು ಚಟುವಟಿಕೆ ಮೇಲೆ ಪರಿಣಾಮ ಬೀರುತ್ತವೆ. ಬ್ಯಾಂಕ್ ಲಾಕರ್ ನವೀಕರಣ, ಸಕ್ರಿಯವಲ್ಲದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಡಿಸೆಂಬರ್ 1ರಿಂದ ಸಿಮ್ ಕಾರ್ಡ್ ವಿತರಣೆ, ಜೀವನ್ ಪ್ರಮಾಣ್ ಪತ್ರ ಸಲ್ಲಿಕೆ ಇವೆಲ್ಲವಕ್ಕೂ ನಿರ್ಬಂಧ ಇದೆ. ಉಚಿತವಾಗಿ ಆಧಾರ್ ಮಾಹಿತಿ ಅಪ್​ಡೇಟ್ ಮಾಡಲು ಡಿ. 14ಕ್ಕೆ ಡೆಡ್​ಲೈನ್ ಇದೆ.

ನವೆಂಬರ್ 30ರ ನಂತರ ಬದಲಾಗುವ ಕೆಲ ಹಣಕಾಸು ನಿಯಮಗಳು, ಕ್ರಮಗಳೇನು? ಇವುಗಳಿಂದ ಪರಿಣಾಮಗಳೇನು ತಿಳಿಯಿರಿ
ಡಿಸೆಂಬರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 30, 2023 | 5:37 PM

ನವದೆಹಲಿ, ನವೆಂಬರ್ 30: ಇವತ್ತು ನವೆಂಬರ್ ತಿಂಗಳ ಕೊನೆಯ ದಿನ. ಡಿಸೆಂಬರ್​ನಿಂದ ನಮ್ಮ ನಿತ್ಯದ ಬದುಕಿನ ಮತ್ತು ಹಣಕಾಸು ಚಟುವಟಿಕೆಯ (financial activities) ಮೇಲೆ ಸೀಮಿತ ಮಟ್ಟದಲ್ಲಿ ಪರಿಣಾಮ ಬೀರುವಂತಹ ಕೆಲ ನಿಯಮ ಬದಲಾವಣೆಗಳಿವೆ. ಬ್ಯಾಂಕ್ ಲಾಕರ್ ವಿಚಾರದಲ್ಲಿ ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಒಪ್ಪಂದದ ನವೀಕರಣ, ಯುಪಿಐ ಐಡಿ ನಿಷ್ಕ್ರಿಯಗೊಳ್ಳುವುದು, ಸಿಮ್ ಕಾರ್ಡ್ ವಿತರಣೆ ನಿರ್ಬಂಧ ಹೀಗೆ ಹಲವು ನಿಯಮ ಬದಲಾವಣೆಗಳು ಡಿಸೆಂಬರ್​ನಲ್ಲಿ ಇವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಡಿಸೆಂಬರ್​ನಲ್ಲಿ ಸಿಮ್ ಕಾರ್ಡ್ ನಿಯಮದಲ್ಲಿ ಬದಲಾವಣೆ

ಸಿಮ್ ಕಾರ್ಡ್ ವಿತರಣೆ ಮೇಲೆ ಪರಿಣಾಮ ಬೀರುವಂತಹ ಕೆಲ ನಿಯಮಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಡಿಸೆಂಬರ್ 1ರಿಂದ ಜಾರಿಗೆ ತರುತ್ತಿದೆ. ಅದರ ಪ್ರಕಾರ, ಸಿಮ್ ಕಾರ್ಡ್ ಡೀಲರ್​ಗಳು ಕಡ್ಡಾಯವಾಗಿ ವೆರಿಫಿಕೇಶನ್ ಪಡೆದುಕೊಳ್ಳಬೇಕು. ಬಲ್ಕ್ ಕನೆಕ್ಷನ್ ಕೊಡುವ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ನಿಯಮವನ್ನು ಆಗಸ್ಟ್ 1ರಿಂದಲೇ ಜಾರಿಗೊಳಿಸಬೇಕಿತ್ತು. ಆದರೆ, ಡಿಸೆಂಬರ್ 1ಕ್ಕೆ ಮುಂದೂಡಲಾಗಿತ್ತು.

ಇದನ್ನೂ ಓದಿ: ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ

ಡಿಸೆಂಬರ್​ನಲ್ಲಿ ಬ್ಯಾಂಕ್ ಲಾಕರ್ ಅಗ್ರೀಮೆಂಟ್ ನಿಯಮ ಬದಲಾವಣೆ

ಬ್ಯಾಂಕ್​ಗಳು ಮತ್ತು ಗ್ರಾಹಕರ ನಡುವಿನ ಲಾಕರ್ ಒಪ್ಪಂದಗಳ ನವೀಕರಣಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಈ ವರ್ಷದ ಜನವರಿ 1ರಂದೇ ಲಾಕರ್ ಅಗ್ರೀಮೆಂಟ್ ರಿನಿವಲ್​ಗೆ ಡೆಡ್​ಲೈನ್ ಇತ್ತು. ಆದರೆ, ಬಹಳಷ್ಟು ಮಂದಿ ಲಾಕರ್ ಒಪ್ಪಂದ ಇನ್ನೂ ನವೀಕರಿಸದೇ ಇದ್ದ ಹಿನ್ನೆಲೆಯಲ್ಲಿ ಡಿಸೆಂಬರ್ 31ರವರೆಗೂ ಅದನ್ನು ವಿಸ್ತರಿಸಲು ಆರ್​ಬಿಐ ನಿರ್ಧರಿಸಿತ್ತು.

ಡಿಸೆಂಬರ್​ನಲ್ಲಿ ಯುಪಿಐ ಐಡಿ ನಿಯಮ ಬದಲಾವಣೆ

ಸಕ್ರಿಯವಾಗಿಲ್ಲದ ಯುಪಿಐ ಐಡಿಗಳನ್ನು ಡಿಸೆಂಬರ್ 31ರೊಳಗೆ ನಿಷ್ಕ್ರಿಯಗೊಳಿಸಬೇಕು ಎಂದು ಎನ್​ಪಿಸಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಯುಪಿಐ ಬಳಕೆದಾರರು ಕೂಡಲೇ ತಮ್ಮ ನಿಷ್ಕ್ರಿಯ ಯುಪಿಐ ಐಡಿಯನ್ನು ಕೂಡಲೇ ಆ್ಯಕ್ಟಿವೇಟ್ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕ್ ಹಾಗೂ ಥರ್ಡ್ ಪಾರ್ಟ ಆ್ಯಪ್​ಗಳು ನಿಮ್ಮ ಯುಪಿಐ ಐಡಿ ಬಳಕೆಯನ್ನು ಸ್ಥಗಿತಗೊಳಿಸಬಹುದು.

ಡಿಸೆಂಬರ್​ನಲ್ಲಿ ಆಧಾರ್ ಕಾರ್ಡ್ ನಿಯಮ ಬದಲಾವಣೆ

ಆಧಾರ್​ನಲ್ಲಿರುವ ಮಾಹಿತಿಯನ್ನು ಉಚಿತವಾಗಿ, ಅಂದರೆ ಶುಲ್ಕರಹಿತವಾಗಿ ಅಪ್​ಡೇಟ್ ಮಾಡಲು ಸರ್ಕಾರ ಡಿಸೆಂಬರ್ 14ರವರೆಗೂ ಕಾಲಾವಕಾಶ ಕೊಟ್ಟಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ಈ ಸೌಲಭ್ಯ ಇದೆ. ಆದರೆ, ಡಿಸೆಂಬರ್ 15ರಿಂದ ಶುಲ್ಕ ಪಾವತಿಸಿಯೇ ಆಧಾರ್ ಮಾಹಿತಿ ಅಪ್​ಡೇಟ್ ಮಾಡಬೇಕು.

ಇದನ್ನೂ ಓದಿ: UPI: ತಪ್ಪಾಗಿ ಯುಪಿಐನಲ್ಲಿ ಹಣ ಕಳುಹಿಸಿದ್ದೀರಾ? ಬರಲಿದೆ 4 ಗಂಟೆ ನಿಯಮ; ಸಿಗಲಿದೆ ಹಣ ಹಿಂಪಡೆಯುವ ದಾರಿ

ಡಿಸೆಂಬರ್​ನಲ್ಲಿ ಜೀವನ್ ಪ್ರಮಾಣಪತ್ರ ನಿಯಮ ಬದಲಾವಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿವೃತ್ತ ಉದ್ಯೋಗಿಗಳು ತಮ್ಮ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ಪ್ರತೀ ವರ್ಷವೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಈ ಬಾರಿ ನವೆಂಬರ್ 30ರೊಳಗೆ ಜೀವನ್ ಪ್ರಮಾಣಪತ್ರ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಇವತ್ತು ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಮುಂದಿನ ತಿಂಗಳ ಪಿಂಚಣಿ ನಿಮ್ಮ ಕೈಸೇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್