AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP growth: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್​ಎ ನಿರೀಕ್ಷೆ

GDP growth rate: 2024-25ರ ಹಣಕಾಸು ವರ್ಷದ ಮೂರನೇ ಕ್ವಾರ್ಟರ್​​ನಲ್ಲಿ ಭಾರತದ ಆರ್ಥಿಕತೆ ಶೇ. 6.4ರಷ್ಟು ಹೆಚ್ಚಬಹುದು ಎಂದು ಐಸಿಆರ್​ಎ ಸಂಸ್ಥೆ ಅಂದಾಜು ಮಾಡಿದೆ. ಎರಡನೇ ಕ್ವಾರ್ಟರ್​ನಲ್ಲಿ ಶೇ. 5.4ರಷ್ಟು ಮಾತ್ರವೇ ಜಿಡಿಪಿ ಹೆಚ್ಚಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಬೆಳವಣಿಗೆ ಕಾಣಬಹುದು. ಆದರೆ, ಐಸಿಆರ್​​ಎ ಅಂದಾಜು ಮಾಡಿರುವ ಬೆಳವಣಿಗೆ ದರ, ಆರ್​ಬಿಐ ಮತ್ತು ಸರ್ಕಾರ ಮಾಡಿರುವ ಅಂದಾಜಿಗಿಂತ ಕಡಿಮೆ ಇದೆ.

GDP growth: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್​ಎ ನಿರೀಕ್ಷೆ
ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2025 | 2:12 PM

Share

ನವದೆಹಲಿ, ಫೆಬ್ರುವರಿ 18: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (ಜುಲೈನಿಂದ ಸೆಪ್ಟೆಂಬರ್) ಜಿಡಿಪಿ ಬೆಳವಣಿಗೆ ದರ ಶೇ. 5.4ಕ್ಕೆ ಕುಂಠಿತಗೊಂಡಿತ್ತು. ಆದರೆ, ಮೂರನೇ ಕ್ವಾರ್ಟರ್​ನಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಿನ ಮಟ್ಟದಲ್ಲಿ ಆಗುವ ನಿರೀಕ್ಷೆ ಇದೆ. ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಆ 3ನೇ ಕ್ವಾರ್ಟರ್​ನಲ್ಲಿ ಜಿಡಿಪಿ ವೃದ್ಧಿ ದರ ಶೇ. 6.4ರಷ್ಟಿರಬಹುದು ಎಂದು ಐಸಿಆರ್​ಎ ಅಂದಾಜು ಮಾಡಿದೆ. ಆಂತರಿಕ ಅನುಭೋಗ (domestic consumption) ಅನಿಶ್ಚಿತ ಮಟ್ಟದಲ್ಲಿರುವ ಹೊತ್ತಲ್ಲಿ ಜಿಡಿಪಿ ಬೆಳವಣಿಗೆ ಹೆಚ್ಚಲಿರುವುದು ಗಮನಾರ್ಹ ಸಂಗತಿ. ಐಸಿಆರ್​ಎ ಪ್ರಕಾರ, ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಿದ್ದು ಇದಕ್ಕೆ ಕಾರಣವಿರಬಹುದು.

ಸರ್ಕಾರದ ಅಂದಾಜು ಪ್ರಕಾರ ಮೂರನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.7ರಷ್ಟು ಬೆಳೆಯಬಹುದು. ಆರ್​ಬಿಐ ಮಾಡಿದ ಅಂದಾಜು ಪ್ರಕಾರ ಜಿಡಿಪಿ ದರ ಶೇ. 6.8ರಷ್ಟಿರಬಹುದು. ಆದರೆ, ಐಸಿಆರ್​ಎ ವರದಿಯಲ್ಲಿ ಜಿಡಿಪಿ ಬೆಳವಣಿಗೆ ಶೇ. 6.4ರಷ್ಟು ಮಾತ್ರವೇ ಇರಬಹುದು ಎಂದು ಅಭಿಪ್ರಾಯಪಡಲಾಗಿದೆ. ಈ ಅಂದಾಜು ಸರಿಯಾಗಿದ್ದಲ್ಲಿ, ಅನುಭೋಗ ಕೊರತೆಯು ಬೆಳವಣಿಗೆಯನ್ನು ಕುಂಠಿತಗೊಳಿಸಿದ್ದಿರಬಹುದು. ಅಲ್ಲದೇ ಮೂರನೇ ಕ್ವಾರ್ಟರ್ ಅವಧಿಯಲ್ಲಿ ಚುನಾವಣೆಗಳು, ನೀತಿ ಸಂಹಿತೆ, ಬೇಸಿಗೆಯ ರಣ ಬಿಸಿಲು (heat wave) ಇವೆಲ್ಲವೂ ಕೆಲ ವಲಯಗಳ ಬೆಳವಣಿಗೆಗೆ ಹಿನ್ನಡೆ ತಂದಿರಬಹುದು ಎಂದು ಹೇಳಲಾಗುತ್ತಿದೆ.

ಐಸಿಆರ್​ಎ ಕೂಡ ಇದೇ ಅಭಿಪ್ರಾಯ ಅನುಮೋದಿಸಿದೆ. ಈ ಮೂರನೇ ಕ್ವಾರ್ಟರ್​ನಲ್ಲಿ ಪರೋಕ್ಷ ತೆರಿಗೆಗಳ (ಜಿಎಸ್​ಟಿ ಇತ್ಯಾದಿ Indirect taxes) ಏರಿಕೆ ಪ್ರಮಾಣ ಕಡಿಮೆ ಆಗಿರುವುದು, ಸರ್ಕಾರದಿಂದ ಸಬ್ಸಿಡಿ ಹೆಚ್ಚಿದ್ದು ಇವೆಲ್ಲವೂ ಜಿಡಿಪಿ ಬೆಳವಣಿಗೆಗೆ ತಡೆಯಾಗಿರಬಹುದು ಎಂದು ಇದು ಹೇಳುತ್ತಿದೆ.

ಇದನ್ನೂ ಓದಿ: ಭಾರತ-ಅಮೆರಿಕದಿಂದ ಸದ್ಯದಲ್ಲೇ ದೊಡ್ಡ ನಡೆ..? ಚೀನಾ ಸ್ಥಾನಕ್ಕೆ ಭಾರತವನ್ನು ಕೂರಿಸುವ ಪ್ರಯತ್ನವಾ?

ಇದೇ ವೇಳೆ, ಸರ್ಕಾರದಿಂದ ಬಂಡವಾಳ ವೆಚ್ಚ (govt  expenditure) ಹೆಚ್ಚಾಗಿರುವುದು, ಸರ್ವಿಸ್ ಸೆಕ್ಟರ್​ನ ರಫ್ತು ಹೆಚ್ಚಾಗಿರುವುದು, ಪ್ರಮುಖ ಮುಂಗಾರು ಬೆಳೆಗಳು ಉತ್ತಮ ಫಸಲು ಕಂಡಿದ್ದು, ಸರಕು ರಫ್ತಿನಲ್ಲೂ ಹೆಚ್ಚಳ ಆಗಿದ್ದು ಈ ಅಂಶಗಳು ಆರ್ಥಿಕತೆಗೆ ಹೆಚ್ಚಿನ ಹಿನ್ನಡೆಯಾಗಲು ಬಿಟ್ಟಿಲ್ಲದೇ ಇರಬಹುದು ಎಂದು ಐಸಿಆರ್​​ಎನ ಆರ್ಥಿಕ ತಜ್ಞರಾದ ಅದಿತಿ ನಾಯರ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ