AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Household Debt: ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಕುಟುಂಬದ ಸಾಲ ಹೆಚ್ಚು

ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಕುಟುಂಬದ ಸಾಲ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Household Debt: ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಕುಟುಂಬದ ಸಾಲ ಹೆಚ್ಚು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 28, 2021 | 7:57 PM

ದೇಶದ ಇತರ ಭಾಗಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಕುಟುಂಬಗಳ ಸಾಲ ಹೆಚ್ಚಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. 2013-2019ರ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ (ಎಐಡಿಐಎಸ್) ಡೇಟಾವನ್ನು ಉಲ್ಲೇಖಿಸಿರುವ ದೇಶೀಯ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್, ದೇಶದ ಇತರ ಭಾಗಗಳಿಗಿಂತ ದಕ್ಷಿಣದ ರಾಜ್ಯಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಲದ ಭಾರ ಹೆಚ್ಚಾಗಿದೆ ಎಂದಿದೆ. 2019ರಲ್ಲಿ ಶೇಕಡಾ 67.2ರ ಪ್ರಮಾಣದೊಂದಿಗೆ ಗ್ರಾಮೀಣ ಕುಟುಂಬಗಳ ಪೈಕಿ ತೆಲಂಗಾಣವು ಹೆಚ್ಚಿನ ಸಾಲವನ್ನು ಹೊಂದಿತ್ತು ಮತ್ತು ಶೇ 6.6ರ ಪ್ರಮಾಣದೊಂದಿಗೆ ನಾಗಾಲ್ಯಾಂಡ್ ರಾಜ್ಯವು ಗ್ರಾಮೀಣ ಕುಟುಂಬಗಳ ಪೈಕಿ ಕಡಿಮೆ ಸಾಲದ ಪ್ರಮಾಣವನ್ನು ಹೊಂದಿತ್ತು. ನಗರ ಪ್ರದೇಶಗಳ ಪೈಕಿ ಶೇಕಡಾ 47.8ರ ಪ್ರಮಾಣದೊಂದಿಗೆ ಕೇರಳ ರಾಜ್ಯವು ಅತಿ ಹೆಚ್ಚಿನ ಸಾಲವನ್ನು ಹೊಂದಿದೆ. ಅದೇ ರೀತಿ ಶೇ 5.1ರ ಸಾಲದ ಪ್ರಮಾಣದ ಜತೆ ಮೇಘಾಲಯ ರಾಜ್ಯವು ಅತಿ ಕಡಿಮೆ ಸಾಲವನ್ನು ಹೊಂದಿರುವ ಕುಟುಂಬಗಳ ನಗರ ಪ್ರದೇಶ ಹೊಂದಿರುವ ರಾಜ್ಯವಾಗಿದೆ.

ನಗರ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಾಲ ಹೊಂದಿರುವ ಕುಟುಂಬಗಳ ಪ್ರಮುಖ ರಾಜ್ಯ ಉತ್ತರಾಖಂಡ್ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಾಲದ ಕುಟುಂಬಗಳಿರುವ ಪ್ರಮುಖ ರಾಜ್ಯ ಛತ್ತಿಸ್​ಗಡ ಆಗಿದೆ. ದಕ್ಷಿಣದ ರಾಜ್ಯಗಳಲ್ಲಿ ತಲಾ ಆದಾಯವು ದೇಶದ ಇತರ ರಾಜ್ಯಗಳಿಗಿಂತ ಹೆಚ್ಚಾಗಿದ್ದರೂ ಈ ರಾಜ್ಯಗಳಲ್ಲಿನ ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿ ಹೆಚ್ಚಿನ ಸಾಲ ಇರುವುದನ್ನು ಕಾಣಿಸಬಹುದು. “ಈ ದ್ವಂದ್ವವನ್ನು ಅರ್ಥ ಮಾಡಿಕೊಳ್ಳುವ ಮಾರ್ಗವೆಂದರೆ ಕುಟುಂಬ ಸಾಲದ ಸರಾಸರಿ ಮೊತ್ತ, ಕುಟುಂಬ ಸ್ವತ್ತುಗಳ ಸರಾಸರಿ ಮೌಲ್ಯ ಮತ್ತು ಸಾಲ-ಸ್ವತ್ತಿನ ಅನುಪಾತವನ್ನು ನೋಡುವುದು ಎಂದು Ind-Ra ನಂಬುತ್ತದೆ. ಸಾಲದ ಪ್ರಮಾಣವು ಒಬ್ಬ ವ್ಯಕ್ತಿ ಹೊಂದಿರುವ ಮತ್ತು/ಅಥವಾ ಅಡಮಾನ ಮಾಡಬಹುದಾದ ಆಸ್ತಿಗೆ ಜೋಡಣೆ ಆಗಿರುತ್ತದೆ,” ಎಂದು ವರದಿ ಹೇಳಿದೆ.

ಕರ್ನಾಟಕ ಐದನೇ ಸ್ಥಾನ ಕೇರಳವನ್ನು ಹೊರತುಪಡಿಸಿ ದಕ್ಷಿಣ ರಾಜ್ಯಗಳಲ್ಲಿನ ಗ್ರಾಮೀಣ ಮತ್ತು ನಗರ ಕುಟುಂಬಗಳಲ್ಲಿ ಹೆಚ್ಚಿನ ಸಾಲವು ಕುಟುಂಬಕ್ಕೆ ಹೆಚ್ಚಿನ ಸರಾಸರಿ ಸಾಲದ ಪ್ರತಿಫಲನ ಅಥವಾ ಪ್ರತಿ ಗ್ರಾಮೀಣ ಕುಟುಂಬಕ್ಕೆ ಹೆಚ್ಚಿನ ಸರಾಸರಿ ಮೌಲ್ಯದ ಪ್ರತಿಫಲನದಂತೆ ಕಾಣುವುದಿಲ್ಲ. ವರದಿಯ ಪ್ರಕಾರ, 2019ರಲ್ಲಿ ಈ ರಾಜ್ಯಗಳಲ್ಲಿ ಆಸ್ತಿ ಅನುಪಾತಕ್ಕಿಂತ ಹೆಚ್ಚಿನ ಸಾಲ ಇತ್ತು. ದಕ್ಷಿಣದ ಐದು ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳು – ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ – ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಅತಿ ಹೆಚ್ಚು ಆಸ್ತಿ ಅನುಪಾತ ಹೊಂದಿದ್ದು, ಐದನೆಯದು – ಕರ್ನಾಟಕ ಆಗಿದ್ದು- ಭಾರತದ ಎಲ್ಲ ರಾಜ್ಯಗಳ ನಗರ ಹಾಗೂ ಗ್ರಾಮೀಣ ಪ್ರದೇಶ ಕುಟುಂಬದ ಸರಾಸರಿಗಿಂತ ಹೆಚ್ಚಿನ ಸಾಲದ ಆಸ್ತಿ ಅನುಪಾತವನ್ನು ಹೊಂದಿವೆ. “ಇದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಕುಟುಂಬಗಳು ಕೇವಲ ಋಣಭಾರವನ್ನು ಹೊಂದಿರುವುದನ್ನು ಸೂಚಿಸುತ್ತದೆ. ಆದರೆ ಅವುಗಳು ಹೆಚ್ಚು ಹತೋಟಿಯಲ್ಲಿವೆ,” ಎಂದು ಸಹ ಸೂಚಿಸಿದೆ.

ಆರ್ಥಿಕ ದುರ್ಬಲತೆ ಸಂಕೇತ ಹೆಚ್ಚಿನ ಹತೋಟಿಯನ್ನು ಸಾಮಾನ್ಯವಾಗಿ ಆರ್ಥಿಕ ದುರ್ಬಲತೆ ಸಂಕೇತವೆಂದು ಅರ್ಥೈಸಲಾಗುತ್ತದೆ. ಆದರೆ ರೇಟಿಂಗ್ ಏಜೆನ್ಸಿ ಹೆಚ್ಚಿನ ಸಾಲ ಮತ್ತು ಸೇವೆಯನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಮನೆಗಳ ಆಸ್ತಿ/ಆದಾಯದ ಪ್ರೊಫೈಲ್‌ನೊಂದಿಗೆ ಕೂಡ ಸಂಬಂಧ ಹೊಂದಿದೆ ಮತ್ತು ತಲಾ ಆದಾಯವನ್ನು ಸೇರಿಸುತ್ತದೆ ಎಂದು ಹೇಳುತ್ತದೆ. ದಕ್ಷಿಣದ ಎಲ್ಲ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿವೆ. “ಹೆಚ್ಚಿನ ತಲಾದಾಯ ಮತ್ತು ತಲಾದಾಯದ ಬೆಳವಣಿಗೆಯು ಹೆಚ್ಚಿನ ಹಣಕಾಸು ಸಾಂದ್ರತೆ/ ಸೇರ್ಪಡೆಯೊಂದಿಗೆ ಬಹುಶಃ ಈ ರಾಜ್ಯಗಳಲ್ಲಿನ ಕುಟುಂಬಗಳಲ್ಲಿ ಹೆಚ್ಚಿನ ಋಣಭಾರ ಮತ್ತು ಹತೋಟಿಗೆ ಕಾರಣವಾಗಿದೆ,” ಎಂದು ಅದು ಹೇಳಿದೆ.

ವೆಚ್ಚ ಮಾಡುವುದರೊಂದಿಗೆ ಆರ್ಥಿಕತೆಗೆ ಬೆಂಬಲ ಕೊವಿಡ್ -19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಇತ್ತೀಚೆಗೆ ಕುಟುಂಬದ ಋಣಭಾರವು ಉಲ್ಬಣಗೊಂಡಿದೆ. ಆರ್‌ಬಿಐ ಡೇಟಾ ಈಗಾಗಲೇ ಜಿಡಿಪಿ ಅನುಪಾತದಿಂದ ಕುಟುಂಬ ಸಾಲವು Q3 FY21 ರಲ್ಲಿ ಶೇ 37.9ಕ್ಕೆ ತಲುಪಿದ್ದು, ಅದಕ್ಕೂ ಮುನ್ನ Q4 FY20ರಲ್ಲಿ ಶೇಕಡಾ 33.8 ಇತ್ತು ಎಂದು ಸೂಚಿಸುತ್ತದೆ. ಆದಾಯದ ಬೆಳವಣಿಗೆ ಸಾಧ್ಯತೆಗಳ ಅನುಪಸ್ಥಿತಿಯಲ್ಲಿ ಅಗತ್ಯವಸ್ತುಗಳಿಂದ ಮಾತ್ರ ವಿವೇಚನೆಯ ವೆಚ್ಚಕ್ಕೆ ಅರ್ಥಪೂರ್ಣವಾದ ಬದಲಾವಣೆ ಸಂಭವಿಸುವ ಸಾಧ್ಯತೆಯಿಲ್ಲ, ಎಂದು ಏಜೆನ್ಸಿ ಹೇಳಿದೆ. ಸರ್ಕಾರವು ಖರ್ಚು ಮಾಡುವುದರೊಂದಿಗೆ ಆರ್ಥಿಕತೆಯನ್ನು ಬೆಂಬಲಿಸಬೇಕಾಗುತ್ತದೆ.

ಇದನ್ನೂ ಓದಿ: Loan Transfer: ಸಾಲ ವರ್ಗಾವಣೆಗೆ ಹೊಸ ಮಾರ್ಗದರ್ಶಿ ನಿಯಮಾವಳಿ ಘೋಷಿಸಿದ ಆರ್​ಬಿಐ

(Household Indebtedness Is Higher In The Southern States Compared To Other Part Of The Country)

Published On - 7:39 pm, Tue, 28 September 21

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​