AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಕ್ಕೆ ಷೇರುದಾರರ ಸಮ್ಮತಿ

IDFC and IDFC First Bank Merger proposal: ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ವಿಲೀನ ಪ್ರಸ್ತಾವಕ್ಕೆ ಷೇರುದಾರರು ಸಮ್ಮತಿ ನೀಡಿದ್ದಾರೆ. ಎನ್​ಸಿಎಲ್​ಟಿ ಮೊನ್ನೆ (ಮೇ 17) ನಡೆಸಿದ ಇವೋಟಿಂಗ್​ನಲ್ಲಿ ಶೇ. 99.95ರಷ್ಟು ಷೇರುದಾರರು ಮರ್ಜ್ ಸ್ಕೀಮ್​ಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಐಡಿಎಫ್​ಸಿ ಜೊತೆ ಐಡಿಎಫ್​ಸಿ ಐಎಚ್​ಎಸ್​ಸಿ ವಿಲೀನಗೊಳ್ಳಲಿದೆ. ಅದಾದ ಬಳಿಕ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಜೊತೆ ಐಡಿಎಫ್​ಸಿ ವಿಲೀನಗೊಳ್ಳುತ್ತದೆ. ಐಡಿಎಫ್​ಸಿಯ ಷೇರುದಾರರಿಗೆ ಪ್ರತೀ 100 ಷೇರಿಗೆ 155 ಬ್ಯಾಂಕ್ ಷೇರು ಸಿಗುತ್ತದೆ.

ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಕ್ಕೆ ಷೇರುದಾರರ ಸಮ್ಮತಿ
ಐಡಿಎಫ್​ಸಿ ಫಸ್ಟ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2024 | 10:52 AM

Share

ನವದೆಹಲಿ, ಮೇ 19: ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ಗಳು ವಿಲೀನಗೊಂಡ ರೀತಿಯಲ್ಲೇ ಎರಡು ಐಡಿಎಫ್​ಸಿ ಸಂಸ್ಥೆಗಳು ಸೇರಲಿವೆ. ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನಗೊಳಿಸುವ ಪ್ರಸ್ತಾವಕ್ಕೆ (IDFC First Bank merger proposal) ಷೇರುದಾರರು ಸಮ್ಮತಿಸಿದ್ದಾರೆ. ಕಾನೂನು ಪ್ರಕ್ರಿಯೆಯಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಮೇ 17ರಂದು ವಿಡಿಯೋ ಕಾನ್ಫರೆನ್ಸ್ ಮತ್ತಿತರ ಆನ್ಲೈನ್ ಮೂಲಕ ಷೇರುದಾರರು ಹಾಗು ಎಲ್ಲಾ ಹಕ್ಕುದಾರರ ಸಭೆ ನಡೆಸಿತು. ಈ ವೇಳೆ ವಿಲೀನ ಪ್ರಸ್ತಾವಕ್ಕೆ ಹೆಚ್ಚೂಕಡಿಮೆ ನೂರಕ್ಕೆ ನೂರರಷ್ಟು ಅನುಮೋದನೆ ಸಿಕ್ಕಿದೆ. ಇದರೊಂದಿಗೆ ಐಡಿಎಫ್​ಸಿ ಸಂಸ್ಥೆ ತನ್ನ ಅಂಗಸಂಸ್ಥೆಯಾದ ಐಡಿಎಫ್​ಸಿ ಬ್ಯಾಂಕ್​ನೊಂದಿಗೆ ವಿಲೀನವಾಗಲಿದೆ.

‘ವಿಲೀನಗೊಳಿಸುವ ಈ ಯೋಜನೆಗೆ ಒಪ್ಪಿಗೆ ಬೇಡುವ ನಿರ್ಣಯಕ್ಕೆ ಶೇ. 99.95ರಷ್ಟು ಬಹುಮತದೊಂದಿಗೆ ಈಕ್ವಿಟಿ ಷೇರುದಾರರು ಒಪ್ಪಿಗೆ ಕೊಟ್ಟಿದ್ದಾರೆ’ ಎಂದು ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಆಡಳಿತ ಮಂಡಳಿ ತಿಳಿಸಿದೆ.

ಸಭೆಯಲ್ಲಿ ಇ-ವೋಟಿಂಗ್ ಮೂಲಕ ನಿರ್ಣಯ ಪಾಸ್ ಆಗಿದೆ. ಬ್ಯಾಂಕ್​ನ ಶೇ. 75ಕ್ಕೂ ಮೌಲ್ಯದ ಷೇರುಗಳನ್ನು ಹೊಂದಿರುವ ಈಕ್ವಿಟಿ ಷೇರುದಾರು ಈ ವೋಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ಅಧಿಕೃತವಾಗಿ ಐಡಿಎಫ್​ಸಿ ಮತ್ತು ಐಡಿಎಫ್​ಸಿ ಬ್ಯಾಂಕ್ ವಿಲೀನಕ್ಕೆ ಒಪ್ಪಿಗೆ ಮುದ್ರೆ ಸಿಕ್ಕಂತಾಗಿದೆ. ನಾನ್ ಕನ್ವರ್ಟಿಬಲ್ ಡಿಬಂಚರ್ ಅಥವಾ ಎನ್​ಸಿಡಿಗಳನ್ನು ಹೊಂದಿರುವ ಹೂಡಿಕೆದಾರರೂ ಈ ಸ್ಕೀಮ್​ಗೆ ಸಮ್ಮತಿಸಿದ್ದಾರೆ.

ಇದನ್ನೂ ಓದಿ: Sundar Pichai: AI ಆತಂಕ ಬೇಡ, ಅರ್ಥ ಮಾಡಿಕೊಳ್ಳಿ: ಭಾರತದ ಯುವ ಟೆಕ್ಕಿಗಳಿಗೆ ಸುಂದರ ಸಲಹೆ ನೀಡಿದ ಪಿಚೈ!

ಐಡಿಎಫ್​ಸಿ ಸಂಸ್ಥೆ 1997ರಲ್ಲಿ ಆರಂಭವಾಗಿದೆ. 2015ರಲ್ಲಿ ಆರ್​ಬಿಐ ಲೈಸೆನ್ಸ್ ಪಡೆದು ಬ್ಯಾಂಕ್ ಸ್ಥಾಪಿಸಿದೆ. 2018ರಲ್ಲಿ ಕ್ಯಾಪಿಟಲ್ ಫಸ್ಟ್ ಎಂಬ ಬ್ಯಾಂಕೇತರ ಸಂಸ್ಥೆಯನ್ನು ಖರೀದಿಸಿತು. ಐಡಿಎಫ್​ಸಿ ಬ್ಯಾಂಕ್ ಹೆಸರು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಎಂದು ಬದಲಾಯಿತು.

ಈಗ ಬ್ಯಾಂಕ್ ಜೊತೆ ಮಾತೃ ಸಂಸ್ಥೆ ವಿಲೀನವಾಗುತ್ತಿದೆ. ಮೊದಲಿಗೆ ಐಡಿಎಫ್​ಸಿ ಜೊತೆ ಐಡಿಎಫ್​ಸಿ ಎಫ್​ಎಚ್​ಎಸ್​ಎಲ್ ಸೇರ್ಪಡೆ ಆಗುತ್ತದೆ. ಬಳಿಕ ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನವಾಗುತ್ತದೆ. ಅಂತಿಮವಾಗಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಉಳಿಯಲಿದೆ.

ಇದನ್ನೂ ಓದಿ: Forbes 30 Under 30 List: ಫೋರ್ಬ್ಸ್ ಪಟ್ಟಿಯಲ್ಲಿ ಮಿಂಚುತ್ತಿರುವ ಭಾರತೀಯ ಯುವ ಉದ್ಯಮಿಗಳು

ಎರಡು ಸಂಸ್ಥೆಗಳ ಷೇರುದಾರರಿಗೆ ಏನು ಸಿಗುತ್ತೆ?

ಐಡಿಎಫ್​ಸಿ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಎರಡೂ ಕೂಡ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸಂಸ್ಥೆಗಳಾಗಿವೆ. ಐಡಿಎಫ್​ಸಿ ಸಂಸ್ಥೆಯ ಷೇರುದಾರರಿಗೆ ಪ್ರತೀ 100 ಷೇರಿಗೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ 155 ಷೇರುಗಳು ಸಿಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ