Success Story: ಕೃಷಿ ಮಾಡ್ತೀನಿ ಅಂತ ನಿಂತ ಮಗ; ಹೊರಗೆ ಹೋಗಿ ಸಂಪಾದಿಸು ಎಂದ ಅಪ್ಪ-ಅಮ್ಮ; ಇವತ್ತು ಆ ಮಗ ಸಿಇಒ; ಇದು ಬಾಲಸುಬ್ರಮಣಿಯನ್ ಕಥೆ

A Balasubramanian, From Tanjore to Mumbai: 3 ಲಕ್ಷಕೋಟಿ ರೂನಷ್ಟು ಮೌಲ್ಯದ ಹೂಡಿಕೆಗಳನ್ನು ನಿರ್ವಹಿಸುವ ಅದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಂಸ್ಥೆಯ ಸಿಇಒ ಎ ಬಾಲಸುಬ್ರಮಣಿಯನ್ ಅವರು ಹೊಸ ಹೆಜ್ಜೆಗಳನ್ನಿಡದೇ ಇದ್ದಿದ್ದರೆ ಇವತ್ತು ಹೊಲದಲ್ಲಿ ಕೃಷಿಗಾರಿಕೆ ಮಾಡುತ್ತಾ ಉಳಿಯುತ್ತಿದ್ದರು.

Success Story: ಕೃಷಿ ಮಾಡ್ತೀನಿ ಅಂತ ನಿಂತ ಮಗ; ಹೊರಗೆ ಹೋಗಿ ಸಂಪಾದಿಸು ಎಂದ ಅಪ್ಪ-ಅಮ್ಮ; ಇವತ್ತು ಆ ಮಗ ಸಿಇಒ; ಇದು ಬಾಲಸುಬ್ರಮಣಿಯನ್ ಕಥೆ
ಅದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಿಇಒ ಎ ಬಾಲಸುಬ್ರಮಣಿಯನ್
Follow us
|

Updated on: Jul 05, 2023 | 4:38 PM

ನಾವೊಂದು ಬಗೆದರೆ ದೈವವೊಂದು ಬಗೆದೀತುಹಾಗೆಯೇ, ಬಹಳ ಮಂದಿಯ ವಿದ್ಯಾಭ್ಯಾಸಕ್ಕೂ ಅವರು ಮಾಡುವ ಕೆಲಸಕ್ಕೂ ಸಂಬಂಧವೇ ಇರುವುದಿಲ್ಲ. ಏನೋ ಆಗಲು ಹೋಗಿ ಇನ್ನೇನೋ ಆಗಿ ಫ್ಲಾಪ್ ಆದವರು ಇದ್ದಾರೆ, ಟಾಪ್ ಆದವರೂ ಇದ್ದಾರೆ. ಭಾರತದ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಬಹಳ ಹೆಸರುವಾಸಿಯಾದ ಮತ್ತು ಅತ್ಯಂತ ಅನುಭವಿ ಎನಿಸಿರುವ ಎ ಬಾಲಸುಬ್ರಮಣಿಯನ್ (A Balasubramanian) ಅವರ ಜೀವನ ಕತೆ ನಿಜಕ್ಕೂ ಅದ್ಭುತ. ಹಳ್ಳಿಗಾಡಿನ ಈ ವ್ಯಕ್ತಿ ಕೃಷಿಗಾರಿಕೆಗೆ ನಿಂತಿದ್ದವು, ಬ್ಯಾಂಕರ್ ಆಗಬೇಕಿದ್ದವರು, ಸಾಫ್ಟ್​ವೇರ್ ಎಂಜಿನಿಯರ್ ಕೂಡ ಆಗುತ್ತಿದ್ದವರುಎಲ್ಲವೂ ಬಿಟ್ಟು ದೇಶದ ಅತಿದೊಡ್ಡ ಮ್ಯೂಚುವಲ್ ಫಂಡ್ ಸಂಸ್ಥೆಗೆ ಅಧಿಪತಿಯಾಗಿದ್ದಾರೆ. ಲಕ್ಷಾಂತರ ಮಂದಿ ಹೂಡಿಕೆದಾರರ ಆಸೆ ಈಡೇರಿಸುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಂಸ್ಥೆಯ ಸಿಇಒ ಮತ್ತು ಎಂಡಿ ಎ ಬಾಲಸುಬ್ರಮಣಿಯನ್. ಇವರ ಸುಪರ್ದಿಯಲ್ಲಿ 3 ಲಕ್ಷ ಕೋಟಿ ರೂ ಮೌಲ್ಯದ ಹೂಡಿಕೆಗಳ ನಿರ್ವಹಣೆ ಆಗುತ್ತದೆ.

ತಂಜಾವೂರ್​ನಿಂದ ಮುಂಬೈಗೆ ಬಾಲಸುಬ್ರಮಣಿಯನ್ ಕುತೂಹಲಕಾರಿ ಪ್ರಯಾಣ

ಎ ಬಾಲಸುಬ್ರಮಣಿಯನ್ ಅವರು ತಮಿಳುನಾಡಿನ ತಂಜಾವೂರ್​ನ ಮೇಲಟ್ಟೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದವರು. ಹಳ್ಳಿಯಲ್ಲೇ ಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುವ ಆಸೆ ಹೊಂದಿದ್ದರು. ಆದರೆ, ಫೀಸ್ ಕಟ್ಟಲು ಸಾಕಷ್ಟು ಹಣ ಇಲ್ಲದ್ದರಿಂದ ಬಿಎಸ್​ಸಿ ಸೇರುತ್ತಾರೆ. ಆಗ ಕೋಬಾಲ್ ಮೊದಲಾದ ಕಂಪ್ಯೂಟರ್ ಲ್ಯಾಂಗ್ವೇಜ್​ಗಳ ಕಾಲ. ಕಂಪ್ಯೂಟರ್ ಎಂಜಿನಿಯರುಗಳ ಕೊರತೆ ಇದ್ದ ಆ ಸಂದರ್ಭದಲ್ಲಿ ಬಾಲಸುಬ್ರಮಣಿಯನ್ ಸುಲಭವಾಗಿ ಐಟಿ ಉದ್ಯಮಕ್ಕೆ ಹೋಗಬಹುದಿತ್ತು. ಅದೇಕೋ ಅವರಿಗೆ ಮನಸು ಒಪ್ಪದೇ ಕುಟುಂಬದ ಕಾಯಕವಾದ ಕೃಷಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಬಿಎಸ್​ಸಿ ಓದಿದ ಮಗ ತಮ್ಮಂತೆ ಮಣ್ಣು ಹೊರುವುದನ್ನು ನೋಡಲು ಇಚ್ಛಿಸದ ಪೋಷಕರು ಬಾಲಸುಬ್ರಮಣಿಯನ್ ಅವರನ್ನು ಹೊರಗೆ ಹೋಗಿ ಸಂಪಾದನೆ ಮಾಡುವಂತೆ ಉತ್ತೇಜಿಸುತ್ತಾರೆ. ಆಗ ತಂಜಾವೂರ್ ಜಿಲ್ಲೆ ಬಿಟ್ಟು ಬಾಲಸುಬ್ರಮಣಿಯನ್ 1988ರಲ್ಲಿ ಬಾಂಬೆಗೆ ಹೋಗುತ್ತಾರೆ.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

ಕಲಿತ ವಿದ್ಯೆಯಿಂದಲೇ ಮುಂಬೈನಲ್ಲಿ ಹೆಜ್ಜೆ ಹಾಕತೊಡಗಿದ ಅವರು ಕೆಲ ಸಾಫ್ಟ್​ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಈ ಪ್ರಯಾಣ ಹೆಚ್ಚು ದಿನ ಸಾಗುವುದಿಲ್ಲ. ಕೆಲ ಸ್ನೇಹಿತರ ಸಲಹೆ ಮೇರೆಗೆ ಬ್ಯಾಂಕಿಂಗ್ ಉದ್ಯಮಕ್ಕೆ ಕಾಲಿಡುತ್ತಾರೆ. ಕೆನ್​ಬ್ಯಾಂಕ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಅವರ ಜೀವನಕ್ಕೆ ಪ್ರಮುಖ ಟರ್ನಿಂಗ್ ಪಾಯಿಂಟ್ ಸಿಗುತ್ತದೆ.

ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಕಾಲಿಟ್ಟಿದ್ದು ತಿರುವು

ಬಾಲಸುಬ್ರಮಣಿಯನ್ ಅವರ ಹಣಕಾಸು ಕುಶಲತೆಯು ಗಮನ ಸೆಳೆಯತೊಡಗುತ್ತದೆ. ಕೆಲಸದಲ್ಲಿ ಮಿಂಚುತ್ತಲೇ ಬಾಲಸುಬ್ರಮಣಿಯನ್ ಅವರು ಎಂಬಿಎ ಮಾಡುತ್ತಾರೆ. ಅಲ್ಲಿ ಜಿಐಸಿ ಮ್ಯೂಚುವಲ್ ಫಂಡ್ ಸಂಸ್ಥೆಗೆ ಡೀಲರ್ ಆಗಿ ಸೇರುತ್ತಾರೆ. ಇದು 1992ರಲ್ಲಿ ಆದ ಬೆಳವಣಿಗೆ. ಇವರ ವೃತ್ತಿಜೀವನದ ಮತ್ತೊಂದು ಮಹತ್ವದ ತಿರುವು ಅದಾಗಿತ್ತು.

ಅ ಕಾಲದಲ್ಲಿ ಷೇರು ಮಾರುಕಟ್ಟೆ ಸಮಯ ದಿನದಲ್ಲಿ ಕೇವಲ 2 ಗಂಟೆ ಮಾತ್ರ. ಉಳಿದ ಸಮಯವನ್ನು ಬಾಲಸುಬ್ರಮಣಿಯನ್ ಅವರು ರಿಸರ್ಚ್, ಮಾರುಕಟ್ಟೆ ವಿಚಾರ ಅರಿಯಲು, ಜನರ ಜೊತೆ ಒಡನಾಡಲು, ಓದಲು ವಿನಿಯೋಗಿಸುತ್ತಿದ್ದರು. ಬಾಂಡ್ ಮಾರ್ಕೆಟ್ ಟ್ರೇಡಿಂಗ್ ಕೂಡ ಮಾಡಲು ಸಮಯಾವಕಾಶ ಸಿಗುತ್ತಿತ್ತು.

ಇದನ್ನೂ ಓದಿSuccess Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ

ಅದಿತ್ಯ ಬಿರ್ಲಾ ಸಂಸ್ಥೆಗೆ ಸೇರುವ ಹಣೆಬರಹ

ಅವರು ಕೆಲಸ ಮಾಡುತ್ತಿದ್ದ ಜಿಐಸಿ ಮ್ಯೂಚುವಲ್ ಫಂಡ್ ಸರ್ಕಾರಿ ಸ್ವಾಮ್ಯದ್ದಾಗಿತ್ತು. ಆಗ ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡಲು ಆಫರ್ ಬಂದಿತು. ಆ ಕಾಲದಲ್ಲಿ ಸರ್ಕಾರಿ ಕೆಲಸ ಬಿಟ್ಟು ಖಾಸಗಿ ವಲಯಕ್ಕೆ ಹೋಗುವುದೆಂದರೆ ಅದು ಪವಾಡಸದೃಶದಂತೆಯೇ. ಸ್ನೇಹಿತನೊಬ್ಬರನ ಉತ್ತೇಜನದಿಂದ ಬಾಲಸುಬ್ರಮಣಿಯನ್ ಅವರು ಆದಿತ್ ಬಿರ್ಲಾ ಕಂಪನಿಗೆ ಸೇರಿದರು.

ಮೂವತ್ತು ವರ್ಷದಿಂದ ಅವರು ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಡೀಲರ್ ಆಗಿ ಕೆಲಸ ಆರಂಭಿಸಿ ಅವರು ಇದೀಗ ಸಿಇಒ ಹುದ್ದೆಗೆ ಬೆಳೆದಿದ್ದಾರೆ. ಷೇರುಮಾರುಕಟ್ಟೆ, ಬಾಂಡ್ ಇತ್ಯಾದಿ ಎಲ್ಲಾ ಹಣಕಾಸು ಎಳೆಗಳನ್ನೂ ಅವರು ಬಲ್ಲವರಾಗಿದ್ದಾರೆ.

ಇದನ್ನೂ ಓದಿAyyo Oyo: ಸಿನಿಮಾ ಕತೆಯಲ್ಲ..! ಕ್ಲೀನಿಂಗ್ ಕೆಲಸ ಮಾಡುವ ನೌಕರನೆಂದು ಭಾವಿಸಿ ಓಯೋ ಸಿಇಒಗೆ ಆವಾಜ್ ಹಾಕಿದ್ದ ಗ್ರಾಹಕ; ಆದರೂ ಗುರುತು ಬಿಟ್ಟುಕೊಡಲಿಲ್ಲ ರಿತೇಶ್

ಕುತೂಹಲ ಎಂದರೆ ಎ ಬಾಲಸುಬ್ರಮಣಿಯನ್ ಅವರಂತೆ ಇಂದು ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಸಿಇಒಗಳಾಗಿರುವ ನಿಲೇಶ್ ಶಾ, ರಾಜೀವ್ ಶಾಸ್ತ್ರಿ, ಸಂದೀಪ್ ಬಾಗ್ಲಾ ಮೊದಲಾದವರು ಹಿಂದೆ ಬಾಂಡ್ ಮ್ಯಾನೇಜರುಗಳೇ ಆಗಿದ್ದವರು.

ಮತ್ತೆ ಕೃಷಿಯತ್ತ ಒಲವು

ಕುತೂಹಲ ಎಂದರೆ ಬಿಎಸ್​ಸಿ ಓದಿ ಕೃಷಿ ಮಾಡಲು ಆಸಕ್ತಿ ತೋರಿದ್ದ ಎ ಬಾಲಸುಬ್ರಮಣಿಯನ್ ಇದೀಗ ತಮ್ಮ ಅ ಕೃಷಿ ಕನಸು ಮರೆತಿಲ್ಲ. ತಮ್ಮ ಸ್ವಂತ ಊರಿನಲ್ಲಿ ಕೃಷಿಗಾರಿಕೆ ನಡೆಸಬೇಕೆಂಬ ಅಭಿಲಾಷೆಯಲ್ಲಿದ್ದಾರೆ. ಊರಿನ ಜನರಿಗೆ ಒಳ್ಳೆಯದು ಮಾಡುವ ಆಲೋಚನೆಯಲ್ಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ