AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೀಲರ್​ಗಳಿಗೆ ಪ್ರೋತ್ಸಾಹಕವಾಗಿ ನೀಡುವ ಚಿನ್ನ ಮತ್ತಿತರ ಸರಕುಗಳ ಮೇಲೆ ಐಟಿಸಿ ಕ್ಲೈಮ್ ಸಾಧ್ಯ: ಎಎಆರ್ ಕರ್ನಾಟಕ ಪೀಠದ ತೀರ್ಪು

Input Tax Credit: ಮಾರಾಟದ ಗುರಿ ಈಡೇರಿಸಿದ್ದಕ್ಕೆ ಪ್ರೋತ್ಸಾಹಕವಾಗಿ ಚಿನ್ನ ಮತ್ತಿತರ ವಸ್ತುಗಳನ್ನು ನೀಡುವುದು ಉಡುಗೊರೆಯಲ್ಲ. ಅದನ್ನು ಸರಬರಾಜಾಗಿ ಪರಿಗಣಿಸಬಹುದು. ಇಂಥ ಉದ್ದೇಶಗಳಿಗೆ ಖರೀದಿಸುವ ವಸ್ತುಗಳಿಗೆ ತೆರಿಗೆ ಪಾವತಿಸಿದರೆ ಅದರ ಮೇಲೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಬಹುದು ಎಂದು ಕರ್ನಾಟಕ ಪೀಠದ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ತೀರ್ಪು ನೀಡಿದೆ.

ಡೀಲರ್​ಗಳಿಗೆ ಪ್ರೋತ್ಸಾಹಕವಾಗಿ ನೀಡುವ ಚಿನ್ನ ಮತ್ತಿತರ ಸರಕುಗಳ ಮೇಲೆ ಐಟಿಸಿ ಕ್ಲೈಮ್ ಸಾಧ್ಯ: ಎಎಆರ್ ಕರ್ನಾಟಕ ಪೀಠದ ತೀರ್ಪು
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2023 | 3:09 PM

ಬೆಂಗಳೂರು, ಸೆಪ್ಟೆಂಬರ್ 3: ಮಾರಾಟ ಗುರಿ ಈಡೇರಿಸಿರುವುದು ಸೇರಿದಂತೆ ಷರುತ್ತುಬದ್ಧ ಸಾಧನೆಗೆ ಉತ್ತೇಜನವಾಗಿ ಡೀಲರ್​ಗಳಿಗೆ ನೀಡಲಾಗುವ ಚಿನ್ನದ ನಾಣ್ಯಗಳು ಮತ್ತಿತರ ಬಿಳಿ ಸರಕುಗಳ ಮೇಲೆ ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಬಹುದು ಎಂದು ಅಡ್ವಾನ್ಸ್ ರೂಲಿಂಗ್ ಅಥಾರಿಟಿ ಎಎಆರ್​ನ (Authority for Advance Ruling) ಕರ್ನಾಟಕ ಪೀಠ ತೀರ್ಪು ನೀಡಿದೆ. ಈ ರೀತಿ ಉತ್ತೇಜನಕ್ಕೆ (Incentive) ಕೊಡುವುದನ್ನು ಸರಬರಾಜು ಎಂದು ಪರಿಗಣಿಸಬಹುದು. ಇಂಥ ಉದ್ದೇಶದಿಂದ ಖರೀದಿಸಲಾಗುವ ಚಿನ್ನ ಹಾಗೂ ಬಿಳಿ ಸರಕುಗಳಿಗೆ ತೆರಿಗೆ ಪಾವತಿಸಿದ್ದರೆ ಅದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಬಹುದು ಎಂದು ಈ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ. ಇಲ್ಲಿ ಬಿಳಿ ಸರಕುಗಳೆಂದರೆ, ಗೃಹಬಳಕೆಯ ದೊಡ್ಡ ಯಂತ್ರೋಪಕರಣಗಳಾದ ವಾಷಿಂಗ್ ಮೆಷೀನ್, ರೆಫ್ರಿಜರೇಟರ್ ಇತ್ಯಾದಿಯವು.

ಓರಿಯಂಟ್ ಸಿಮೆಂಟ್ ಲಿ ಎಂಬ ಸಂಸ್ಥೆ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೋರಿ ಜಿಎಸ್​ಟಿಯ ಎಎಆರ್ ಪ್ರಾಧಿಕಾರದ ಬಳಿ ಅರ್ಜಿ ಸಲ್ಲಿಸಿತ್ತು. ತನ್ನ ಡೀಲರ್​ಗಳಿಗೆ ಗುರಿ ಮುಟ್ಟಲು ಪ್ರೋತ್ಸಾಹಕವಾಗಿ ವಿವಿಧ ಅವಧಿಯ ಡಿಸ್ಕೌಂಟ್ ಸ್ಕೀಮ್​ಗಳನ್ನು ಹಮ್ಮಿಕೊಂಡಿದೆ. ಈ ಸ್ಕೀಮ್ ಪ್ರಕಾರ ನಿಗದಿತ ಗುರಿಯನ್ನು ಮುಟ್ಟುವ ಡೀಲರ್​ಗಳಿಗೆ ಗೋಲ್ಡ್ ಕಾಯಿನ್ ಹಾಗೂ ಬಿಳಿ ಸರಕುಗಳನ್ನು ಒದಗಿಸುತ್ತದೆ. ಡೀಲರ್​ಗಳಿಗೆಂದು ಖರೀದಿಸಲಾಗುವ ಇಂಥ ವಸ್ತುಗಳಿಗೆ ಪಾವತಿಸಲಾಗುವ ತೆರಿಗೆಗಳಿಗೆ ಐಟಿಸಿ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಾ ಎಂಬುದು ಓರಿಯಂಟ್ ಸಿಮೆಂಟ್ ಕಂಪನಿ ಸಲ್ಲಿಸಿದ ಅರ್ಜಿಯಲ್ಲಿ ಎತ್ತಿದ ಪ್ರಮುಖ ಪ್ರಶ್ನೆಯಾಗಿತ್ತು.

ಇದನ್ನೂ ಓದಿ: ಆವತ್ತಿನ 10,000 ರೂ ಹೂಡಿಕೆ ಇವತ್ತು 300 ಕೋಟಿ ರೂ; ಕೋಟಕ್ ಮಹೀಂದ್ರ ಬ್ಯಾಂಕ್​ನ ಅಸಾಮಾನ್ಯ ಬೆಳವಣಿಗೆ ಬಣ್ಣಿಸಿದ ಉದಯ್ ಕೋಟಕ್

ಮಾರಾಟದ ಟಾರ್ಗೆಟ್ ಮುಟ್ಟಿದರೆ ಮಾತ್ರವೇ ಗೋಲ್ಡ್ ಕಾಯಿನ್​ಗಳನ್ನು ಒದಗಿಸಲಾಗುತ್ತದೆ. ಇದು ಸರಬರಾಜಾಗುತ್ತದೆಯೇ ಹೊರತು ಗಿಫ್ಟ್ ಎನಿಸಿಕೊಳ್ಳುವುದಿಲ್ಲ. ಇಂಥ ಸರಕುಗಳಿಗೆ ಪಾವತಿಸುವ ತೆರಿಗೆಯನ್ನು ಐಟಿಸಿ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು ಎಂಬುದು ಎಎಆರ್​ನ ಅಭಿಪ್ರಾಯವಾಗಿದೆ.

ಹಿಂದಿನ ಪ್ರಕರಣಗಳಲ್ಲಿ ವಿಭಿನ್ನ ತೀರ್ಪು

ಸೇಲ್ಸ್ ಟಾರ್ಗೆಟ್ ಮುಟ್ಟಿದರೆ ಪ್ರೋತ್ಸಾಹಕವಾಗಿ ಉಡುಗೊರೆಗಳನ್ನು ನೀಡುವುದು ಯಾವುದೇ ಬ್ಯುಸಿನೆಸ್​ಗೆ ಹೊಸತಲ್ಲ. ಇಂಥ ಪ್ರೋತ್ಸಾಹಕ ವಸ್ತುಗಳಿಗೆ ಪಾವತಿಸಿದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡಲು ಹಿಂದೆಯೂ ಪ್ರಯತ್ನಗಳಾಗಿವೆ. ಆದರೆ, ಇವು ಗಿಫ್ಟ್ ಆಗಿದ್ದು ಐಟಿಸಿ ಕ್ಲೈಮ್ ಮಾಡಲು ಆಗುವುದಿಲ್ಲ ಎಂದು ಇದೇ ಎಎಆರ್ ಹಿಂದೆ ತೀರ್ಪು ನೀಡಿದ್ದಿದೆ. ಈಗ ಕರ್ನಾಟಕ ಬೆಂಚ್​ನ ಎಎಆರ್ ವಿಭಿನ್ನವಾಗಿ ತೀರ್ಪು ನೀಡಿರುವುದು ಇನ್ನಷ್ಟು ಗೊಂದಲ ನಿರ್ಮಿಸಿದೆ.

ಇದನ್ನೂ ಓದಿ: Byju’s: ಎಇಎಸ್​ಎಲ್​ಗೆ ಸಿಇಒ, ಸಿಎಫ್​ಒ ನೇಮಿಸಲು ಬೈಜು ರವೀಂದ್ರನ್ ಸೇರಿ ನಾಲ್ವರು ಸದಸ್ಯರ ಸಮಿತಿ ರಚನೆ

ಇಂತಹ ಸಂದರ್ಭದಲ್ಲಿ ಸರ್ಕಾರ ಈ ಬಗ್ಗೆ ಒಂದು ಸ್ಪಷ್ಟ ನೀತಿ ರೂಪಿಸುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಉದ್ಯಮವಲಯ ವ್ಯಕ್ತಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ