AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CRR: ಆರ್​​ಬಿಐ ಸಿಆರ್​​ಆರ್ ಕಡಿತದಿಂದ ಲಕ್ಷಾಂತರ ಕೋಟಿ ರೂ ಹಣದ ಹರಿವಿನ ನಿರೀಕ್ಷೆ; ಇದು ಹೇಗೆ ಸಾಧ್ಯ?

RBI reduces cash reserve ratio to 3pc: ಆರ್​​ಬಿಐ ಶೇ. 4 ಇದ್ದ ತನ್ನ ಸಿಆರ್​ಆರ್ ಅನ್ನು ಶೇ. 3ಕ್ಕೆ ಇಳಿಸಿದೆ. ಅಂದರೆ, ಬರೋಬ್ಬರಿ 100 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಸಿಆರ್​​ಆರ್ ಇಳಿಕೆಯಿಂದ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ಎರಡೂವರೆ ಲಕ್ಷ ಕೋಟಿ ರೂ ಹಣದ ಹರಿವು ಹೆಚ್ಚಲಿದೆ. ರಿಪೋದರವನ್ನೂ 50 ಮೂಲಾಂಕಗಳಷ್ಟು ಇಳಿಸಲಾಗಿದೆ. ಇವೆರಡು ಸೇರಿ ಆರ್ಥಿಕತೆಗೆ ದೊಡ್ಡ ಪುಷ್ಟಿ ಕೊಡುವ ನಿರೀಕ್ಷೆ ಇದೆ.

CRR: ಆರ್​​ಬಿಐ ಸಿಆರ್​​ಆರ್ ಕಡಿತದಿಂದ ಲಕ್ಷಾಂತರ ಕೋಟಿ ರೂ ಹಣದ ಹರಿವಿನ ನಿರೀಕ್ಷೆ; ಇದು ಹೇಗೆ ಸಾಧ್ಯ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 06, 2025 | 12:44 PM

Share

ನವದೆಹಲಿ, ಜೂನ್ 6: ಭಾರತೀಯ ರಿಸರ್ವ್ ಬ್ಯಾಂಕ್​​ನ ಮಾನಿಟರಿ ಪಾಲಿಸಿ ಸಮಿತಿ (RBI MPC meeting) ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡುವ ಬಹಳ ದೊಡ್ಡ ನಿರ್ಧಾರದ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರವೂ ಹೊರಬಂದಿದೆ. ಅದು ಸಿಆರ್​​ಆರ್ (CRR) ಅಥವಾ ಕ್ಯಾಷ್ ರಿಸರ್ವ್ ರೇಶಿಯೋದ ಇಳಿಕೆ. ಈ ಸಿಆರ್​​ಆರ್ ದರವನ್ನು 100 ಮೂಲಾಂಕಗಳಷ್ಟು ಇಳಿಸಲಾಗಿದೆ ಎಂದು ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಶೇ. 4ರಷ್ಟಿರುವ ಸಿಆರ್​​ಆರ್ ಅನ್ನು ಶೇ 3ಕ್ಕೆ ಇಳಿಸಲಾಗಲಿದೆ.

2025ರ ಸೆಪ್​ಟೆಂಬರ್​​ನಿಂದ ಆರಂಭವಾಗಿ ನಾಲ್ಕು ಹಂತಗಳಲ್ಲಿ ತಲಾ 25 ಮೂಲಾಂಕಗಳಂತೆ ಸಿಆರ್​ಆರ್ ಅನ್ನು ಇಳಿಸಲಾಗುವುದು ಎಂದು ಆರ್​​ಬಿಐ ಗವರ್ನರ್ ಹೇಳಿದ್ದಾರೆ. ಈ ಕ್ರಮದಿಂದ ಮುಂಬರುವ ದಿನಗಳಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 2.50 ಲಕ್ಷ ಕೋಟಿ ರೂ ಲಿಕ್ವಿಡಿಟಿ ಸಿಗಲಿದೆ ಎಂದಿದ್ದಾರೆ. ಲಿಕ್ವಿಡಿಟಿ ಹೆಚ್ಚಲಿದೆ ಎಂದರೆ ಹಣದ ಹರಿವು ಹೆಚ್ಚಲಿದೆ. ಅಂದರೆ, ಬ್ಯಾಂಕುಗಳ ಬಳಿ ಇರುವ ಹಣ ಎರಡೂವರೆ ಲಕ್ಷ ಕೋಟಿ ರೂನಷ್ಟು ಹೆಚ್ಚಲಿದೆ. ಸಾಲ ಕೊಡಲು ಬ್ಯಾಂಕುಗಳ ಬಳಿ ಹೆಚ್ಚು ಹಣ ಇರಲಿದೆ.

ಇದನ್ನೂ ಓದಿ: 2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್​​ಬಿಐ ಅಂದಾಜು

ಕ್ಯಾಷ್ ರಿಸರ್ವ್ ರೇಶಿಯೋ ಎಂದರೆ ಏನು?

ಸಿಆರ್​ಆರ್ ಅಥವಾ ಕ್ಯಾಷ್ ರಿಸರ್ವ್ ರೇಶಿಯೋ ಎನ್ನುವುದು ಬ್ಯಾಂಕುಗಳು ತಮ್ಮಲ್ಲಿರುವ ಒಟ್ಟಾರೆ ಠೇವಣಿಯಲ್ಲಿ ನಿರ್ದಿಷ್ಟ ಭಾಗವನ್ನು ಆರ್​​ಬಿಐನಲ್ಲಿ ಇರಿಸಬೇಕು ಎನ್ನುವ ನಿಯಮ. ಉದಾಹರಣೆಗೆ, ಸಿಆರ್​​ಆರ್ ಶೇ. 4 ಎಂದಿದೆ ಎಂದು ಭಾವಿಸೋಣ. ಒಂದು ಬ್ಯಾಂಕ್ ತನ್ನ ಗ್ರಾಹಕರಿಂದ ಪಡೆದ ಠೇವಣಿಗಳ ಒಟ್ಟು ಮೊತ್ತ 1,000 ಕೋಟಿ ರೂ ಆಗುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕು ಶೇ. 4ರಷ್ಟು ಹಣವನ್ನು, ಅಂದರೆ, 40 ಕೋಟಿ ರೂನಷ್ಟು ಹಣವನ್ನು ಆರ್​​ಬಿಐನಲ್ಲಿ ಇರಿಸಬೇಕು. ಇದು ಸಿಆರ್​​ಆರ್.

ಸಿಆರ್​ಆರ್ ಎನ್ನುವುದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವಿನ ಮೇಲೆ ನಿಯಂತ್ರಣ ಸಾಧಿಸಲು ಆರ್​​ಬಿಐ ಬಳಿ ಇರುವ ಕೆಲ ಪ್ರಮುಖ ಮಾರ್ಗಗಳಲ್ಲಿ ಒಂದು. ರಿಪೋ ದರ, ಸಿಆರ್​​ಆರ್ ಇತ್ಯಾದಿಯನ್ನು ಹಣದುಬ್ಬರ ನಿಯಂತ್ರಣಕ್ಕೆ ಆರ್​​ಬಿಐ ಬಳಸುತ್ತದೆ.

ಸಿಆರ್​​ಆರ್ ಇಳಿಕೆಯಿಂದ ಹಣದ ಹರಿವು ಹೇಗೆ ಹೆಚ್ಚುತ್ತದೆ?

ಕ್ಯಾಷ್ ರಿಸರ್ವ್ ರೇಶಿಯೋವನ್ನು ಶೇ. 4ರಿಂದ ಶೇ. 3ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 6, ಅಕ್ಟೋಬರ್ 4, ನವೆಂಬರ್ 1 ಮತ್ತು ನವೆಂಬರ್ 29ರಂದು ನಾಲ್ಕು ಬಾರಿ ತಲಾ 25 ಮೂಲಾಂಕಗಳಷ್ಟು ಸಿಆರ್​​ಆರ್ ಇಳಿಕೆ ಪ್ರಕ್ರಿಯೆ ನಡೆಯುತ್ತದೆ.

ಇದನ್ನೂ ಓದಿ: ಆರ್​​​ಬಿಐ ರಿಪೋ ದರ 50 ಮೂಲಾಂಕಗಳಷ್ಟು ಕಡಿತ; ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆ

ಇದರಿಂದ ಹಂತ ಹಂತವಾಗಿ ಬ್ಯಾಂಕುಗಳಿಗೆ ಹಣದ ಹರಿವು ಹೆಚ್ಚುತ್ತಾ ಹೋಗುತ್ತದೆ. ಆರ್​ಬಿಐ ಬಳಿ ಹಣ ಇರಿಸಬೇಕಾದ ಪ್ರಮಾಣ ಕಡಿಮೆಗೊಳ್ಳುವುದರಿಂದ ಬ್ಯಾಂಕುಗಳ ಬಳಿ ಹೆಚ್ಚು ಹಣ ಇರುತ್ತದೆ. ಇದರಿಂದ ಮತ್ತಷ್ಟು ಸಾಲ ಕೊಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ.

ಈ ರಿಪೋ ದರ ಇಳಿಸಲಾಗಿರುವುದರಿಂದ ಸಾಲಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಸಿಆರ್​​ಆರ್ ಅನ್ನು ಇಳಿಸುವ ಆರ್​​ಬಿಐ ನಿರ್ಧಾರ ಸರಿಯಾದ ಸಂದರ್ಭದಲ್ಲೇ ಬಂದಿದೆ. ಸಾಲ ಹೆಚ್ಚಾದಾಗ ಜನರ ಖರ್ಚು ವೆಚ್ಚ ಅನುಭೋಗ ಹೆಚ್ಚುತ್ತದೆ. ಇದು ಆರ್ಥಿಕ ಬೆಳವಣಿಗೆಗೆ ಚುರುಕು ಮೂಡಿಸುತ್ತದೆ ಎನ್ನಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ