AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ

Bank holidays in Karnataka and across nations in 2026 March: ಆರ್​ಬಿಐ ಕ್ಯಾಲಂಡರ್ ಪ್ರಕಾರ, 2026ರ ಮಾರ್ಚ್ ತಿಂಗಳಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 18 ದಿನಗಳವರೆಗೂ ರಜೆ ಇದೆ. ಮಾರ್ಚ್ ತಿಂಗಳಲ್ಲಿ ಹೋಳಿ, ಶ್ರೀರಾಮನವಮಿ, ಯುಗಾದಿ, ರಂಜಾನ್ ಇತ್ಯಾದಿ ಹಬ್ಬ ಹರಿದಿನಗಳ ಸರಮಾಲೆಯೇ ಇದೆ. ಕರ್ನಾಟಕದಲ್ಲಿ ಯುಗಾದಿ, ಮಹಾವೀರ ಜಯಂತಿ ದಿನಗಳಂದು ಬ್ಯಾಂಕುಗಳಿಗೆ ರಜೆ ಇದೆ.

Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾದಿನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2026 | 4:17 PM

Share

ನವದೆಹಲಿ, ಫೆಬ್ರುವರಿ 24: ಮಾರ್ಚ್ ತಿಂಗಳಲ್ಲಿ ಹಬ್ಬಗಳ ಸರಮಾಲೆಯೇ ಇದೆ. ಹೋಳಿ, ಯುಗಾದಿ, ರಂಜಾನ್, ಮಹಾವೀರ್ ಜಯಂತಿ, ಶ್ರೀರಾಮ ನವಮಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಮಾರ್ಚ್​ನ್ಲಲಿ ಇದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ, ಆ ತಿಂಗಳು ಶನಿವಾರ, ಭಾನುವಾರಗಳನ್ನೂ ಒಳಗೊಂಡು ಒಟ್ಟು 18 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸ ಇದೆ. ಹೋಳಿ ಹಬ್ಬಕ್ಕೆ ಕರ್ನಾಟಕದಲ್ಲಿ ರಜೆ ಇಲ್ಲ. ಆದರೆ, ಉತ್ತರಪ್ರದೇಶದಲ್ಲಿ ಆ ಹಬ್ಬಕ್ಕೆ ಮೂರು ದಿನ ರಜೆ ಇದೆ. ಕರ್ನಾಟಕದಲ್ಲಿ ಶ್ರೀರಾಮನವಮಿಗೆ ರಜೆ ಇರುವುದಿಲ್ಲ, ಆದರೆ, ಮಹಾವೀರ ಜಯಂತಿಗೆ ರಜೆ (Bank Holidays) ಇರುತ್ತದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರದ ರಜೆಗಳೂ ಸೇರಿ ಒಟ್ಟು 10 ದಿನಗಳು ಮಾರ್ಚ್​ನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.

2026ರ ಮಾರ್ಚ್​ನಲ್ಲಿ ಬ್ಯಾಂಕ್ ರಜಾದಿಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 2, ಸೋಮವಾರ: ಹೋಳಿ ಹಬ್ಬ (ಉ.ಪ್ರ.ದಲ್ಲಿ ರಜೆ)
  • ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ (ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ್, ಉತ್ತರಪ್ರದೇಶ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 4, ಬುಧವಾರ: ಹೋಳಿ ಹಬ್ಬ, ಧುಲೇತಿ, ಯಾವೊಸಾಂಗ್ (ಉತ್ತರ ಪ್ರದೇಶ, ದೆಹಲಿ, ಛತ್ರೀಸ್​ಗಡ್, ಜಾರ್ಖಂಡ್ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 13, ಶುಕ್ರವಾರ: ಚಾಪಚಾರ್ ಕುತ್ (ಮಿಝೋರಾಂ, ಜಮ್ಮುವಿನಲ್ಲಿ ರಜೆ)
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 17, ಮಂಗಳವಾರ: ಶಬಿ ಖಾದರ್ (ಮಣಿಪುರ್, ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
  • ಮಾರ್ಚ್ 19, ಗುರುವಾರ: ಯುಗಾದಿ, ಗುಧಿ ಪಡವಾ, ಸಜಿಬು ನೊಂಗ್ಮಪಣ್ಬ (ಅನೇಕ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 20, ಶುಕ್ರವಾರ: ಈದ್ ಉಲ್ ಫಿತರ್, ರಂಜಾನ್, ಜಮಾತ್ ಉಲ್ ವಿದಾ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 21, ಶನಿವಾರ: ರಂಜಾನ್ ಈದ್, ಖುದುಬ್ ಇ ರಂಜಾನ್ (ಮೇಘಾಲಯ, ಮಧ್ಯಪ್ರದೇಶ, ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 26, ಗುರುವಾರ: ಶ್ರೀರಾಮನವಮಿ ಹಬ್ಬ (ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 27, ಶುಕ್ರವಾರ: ಶ್ರೀರಾಮನವಮಿ (ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ (ಅನೇಕ ರಾಜ್ಯಗಳಲ್ಲಿ ರಜೆ)

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ಕರ್ನಾಟಕದಲ್ಲಿ ಮಾರ್ಚ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 19, ಗುರುವಾರ: ಯುಗಾದಿ ಹಬ್ಬ
  • ಮಾರ್ಚ್ 20, ಶುಕ್ರವಾರ: ರಂಜಾನ್ ಹಬ್ಬ
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ

ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿಯ ಬಾಗಿಲು ಮಾತ್ರ ಬಂದ್ ಆಗಿರುತ್ತದೆ. ಎಟಿಎಂ, ಯುಪಿಐ, ನೆಟ್​ಬ್ಯಾಂಕಿಂಗ್ ಸೇವೆಗಳ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ನಿರಂತರವಾಗಿ ಅವಕಾಶ ಇರುತ್ತದೆ. ಡಿಮ್ಯಾಂಡ್ ಡ್ರಾಫ್ಟ್ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಹೋಗಬೇಕಾದವರು ರಜಾದಿನಗಳ ಬಗ್ಗೆ ಗಮನ ಹರಿಸುವುದು ಸರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಸ್ಪಷನೆ ಇಲ್ಲಿದೆ
ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಸ್ಪಷನೆ ಇಲ್ಲಿದೆ
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ 5 ಸಾವಿರ ರೂ. ದಂಡ ಫಿಕ್ಸ್!
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ 5 ಸಾವಿರ ರೂ. ದಂಡ ಫಿಕ್ಸ್!
ದೇವರು ಬಂದಂತೆ ನಟಿಸಿ ದಲಿತ ನವದಂಪತಿಯನ್ನು ದೇಗುಲದಿಂದ ಹೊರಗಟ್ಟಿದ ಅರ್ಚಕ
ದೇವರು ಬಂದಂತೆ ನಟಿಸಿ ದಲಿತ ನವದಂಪತಿಯನ್ನು ದೇಗುಲದಿಂದ ಹೊರಗಟ್ಟಿದ ಅರ್ಚಕ
ಮುನಿರತ್ನಗೆ ಮಹತ್ವದ ಭರವಸೆ ನೀಡಿದ ಡಿಕೆ ಶಿವಕುಮಾರ್
ಮುನಿರತ್ನಗೆ ಮಹತ್ವದ ಭರವಸೆ ನೀಡಿದ ಡಿಕೆ ಶಿವಕುಮಾರ್
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ರೂಲ್ಸ್ ಏಕೆ?
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ರೂಲ್ಸ್ ಏಕೆ?
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ