AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೀ ಸಂಸ್ಥಾಪಕ ಸುಭಾಷ್ ಚಂದ್ರಗೆ ಮತ್ತೆ ಸಂಕಟ; ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ತಡೆ

Zee founder Subhash Chandra faces setback in NCLT proceedings: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಐವರು ಸದಸ್ಯರ ವಿಶೇಷ ಪೀಠವು ಸುಭಾಷ್ ಚಂದ್ರ ವಿರುದ್ಧದ ಇನ್ಸಾಲ್ವೆನ್ಸಿ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ. ಹಿಂದಿನ ಏಕಸದಸ್ಯ ಪೀಠವು ಸುಭಾಷ್ ಚಂದ್ರರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ನೀಡಿದ್ದ ಅನುಮೋದನೆಯನ್ನು ಹಿರಿಯ ಪೀಠವು ರದ್ದುಗೊಳಿಸಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳು ಸುಭಾಷ್ ಚಂದ್ರರಿಂದ 22,006 ಕೋಟಿ ರೂ ವಸೂಲಿ ಮಾಡಬೇಕು ಎಂದು ಕೋರಿಕೊಂಡಿವೆ.

ಝೀ ಸಂಸ್ಥಾಪಕ ಸುಭಾಷ್ ಚಂದ್ರಗೆ ಮತ್ತೆ ಸಂಕಟ; ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ತಡೆ
ಸುಭಾಷ್ ಚಂದ್ರImage Credit source: x user @subhashchandra
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2026 | 2:22 PM

Share

ನವದೆಹಲಿ, ಸೆಪ್ಟೆಂಬರ್ 1: ಎಸ್ಸೆಲ್ ಗ್ರೂಪ್ (Essel Group) ಸಂಸ್ಥಾಪಕ ಸುಭಾಷ್ ಚಂದ್ರ (Subhash Chandra) ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿಯ (NCLT) ಏಕಸದಸ್ಯ ಪೀಠವು ನೀಡಿದ ಅನುಮತಿಗೆ ಐವರು ಸದಸ್ಯರ ವಿಶೇಷ ಪೀಠವೊಂದು ತಡೆ ನೀಡಿದೆ. ಈ ಮರುಪಾವತಿ ಯೋಜನೆ ಸದ್ಯಕ್ಕೆ ಜಾರಿಯಾಗುವುದು ಬೇಡ ಎಂದು ಮಧ್ಯಂತರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಅನುಪೀಂದರ್ ಸಿಂಗ್ ಗ್ರೆವಾಲ್, ಬಚ್ಚು ವೆಂಕಟ ಬಲರಾಮ್ ದಾಸ್, ಮಹೇಂದ್ರ ಖಂಡೇಲ್​ವಾಲ್, ಅತಾನು ಚಂದ್ರ ಚತುರ್ವೇದಿ ಮತ್ತು ರವೀಂದ್ರ ಚತುರ್ವೇದಿ ಅವರಿರುವ ಐವರು ಸದಸ್ಯರ ನ್ಯಾಯಮಂಡಳಿ ಪೀಠವು ಈ ಆದೇಶ ಹೊರಡಿಸಿದೆ. ಸುಭಾಷ್ ಚಂದ್ರ ಅವರು ತಮ್ಮ ಯಾವುದೇ ಆಸ್ತಿಗಳನ್ನು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಮಾರುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ ಎಂದು ನ್ಯಾಯಮಂಡಳಿಯು ಆದೇಶಿಸಿದೆ.

ಇದನ್ನೂ ಓದಿ: ಝೀ ಸಂಸ್ಥಾಪಕ ಸುಭಾಷ್​ಚಂದ್ರರ 6.5 ಕೋಟಿ ರೂ ರೀಪೇಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿ ಸಮ್ಮತಿ; ಏನಿದು ಪ್ರಕರಣ?

ಬೃಹತ್ ಮೊತ್ತದ ಸಾಲ ಪಾವತಿ ಆಗಬೇಕಿದೆ ಎನ್ನುತ್ತಿರುವ ಸಾಲ ನೀಡುಗರು

ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು (Creditors) ಸುಭಾಷ್ ಚಂದ್ರ ಅವರಿಂದ ಒಟ್ಟು ₹22,006 ಕೋಟಿಗೂ ಹೆಚ್ಚು ಮೊತ್ತದ ಸಾಲದ ಮರುಪಾವತಿಯಾಗಬೇಕು ಎಂದು ಹೇಳುತ್ತಿವೆ. ಅಷ್ಟು ಹಣ ಮರುಪಾವತಿಸುವಂತೆ ಮಾಡಿ ಎಂದು ಕೋರಿ ಎನ್​ಸಿಎಲ್​ಟಿಯಲ್ಲಿ ಮನವಿ ಮಾಡಿದ್ದವು ಈ ಹಣಕಾಸು ಸಂಸ್ಥೆಗಳು.

ಎಸ್ಸೆಲ್ ಗ್ರೂಪ್​ನ ವಿವಿಧ ಕಂಪನಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಸುಭಾಷ್ ಚಂದ್ರ ಅವರು ವೈಯಕ್ತಿಕವಾಗಿ ಶೂರಿಟಿ ಅಥವಾ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಇದರ ಮೊತ್ತವು ₹22,006 ಕೋಟಿ ಎಂದು ಕ್ಲೇಮ್ ಮಾಡಲಾಗುತ್ತಿದೆ. ಆದರೆ, ತಾವು ಇತ್ತ ಗ್ಯಾರಂಟಿಗಳಲ್ಲಿ ಹೆಚ್ಚಿನ ಸಾಲವನ್ನು ಮರುಪಾವತಿಸಲಾಗಿದೆ. ತಾವು ಮರುಪಾವತಿಸಬೇಕಿರುವ ಬಾಕಿ ಸಾಲ ಇಷ್ಟಿಲ್ಲ ಎಂಬುದು ಸುಭಾಷ್ ಚಂದ್ರ ಅವರ ವಾದವಾಗಿದೆ.

ಎನ್​ಸಿಎಲ್​ಟಿಯಲ್ಲಿ ಸುಭಾಷ್ ಚಂದ್ರ ವಿರುದ್ಧ ವೈಯಕ್ತಿಕ ದಿವಾಳಿತನ ಮತ್ತು ಸಾಲಮರುಪಾವತಿ ಕ್ರಮದ (Personal Insolvency Proceedings) ವಿಚಾರಣೆ 2024ರಲ್ಲಿ ಆರಂಭವಾಯಿತು. ಸುಭಾಷ್ ಚಂದ್ರ ಅವರು 6.25 ಕೋಟಿ ರೂ ಮರುಪಾವತಿ ಮಾಡುವುದಾಗಿ ಹೇಳಿದ್ದರು. ಎರಡು ಸದಸ್ಯರ ನ್ಯಾಯಮಂಡಳಿ ಪೀಠವು ಈ ಪ್ಲಾನ್​ಗೆ ಬಹುಮತದ ತೀರ್ಪು ನೀಡಲು ವಿಫಲವಾಯಿತು. 2026ರ ಆಗಸ್ಟ್ 25ರಂದು ಮೂರನೇ ಸದಸ್ಯರು ಸುಭಾಷ್ ಚಂದ್ರ ಅವರ ಪ್ಲಾನ್​ಗೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?

ಸಾಲದಾತರಿಂದ ನಡೆದ ಮತದಾನದಲ್ಲಿ ರೀಪೇಮೆಂಟ್ ಪ್ಲಾನ್ ಪರವಾಗಿ ಶೇ. 80ಕ್ಕಿಂತಲೂ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ, ಅವರ ಪ್ಲಾನ್​ಗೆ ನ್ಯಾಯಮಂಡಳಿ ಅನುಮೋದನೆ ನೀಡಿತು. ಆದರೆ, ಬ್ಯಾಂಕುಗಳು ಹಾಗು ಹಣಕಾಸು ಸಂಸ್ಥೆಗಳು ಈ ಮತದಾನದ ಬಗ್ಗೆ ತಗಾದೆ ಎತ್ತಿವೆ. ಪ್ಲಾನ್ ಪರವಾಗಿ ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಸುಭಾಷ್ ಚಂದ್ರ ಅವರಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳೇ ಆಗಿವೆ ಎನ್ನುವುದು ಇವರ ವಾದ.

ಹಣಕಾಸು ಸಂಸ್ಥೆಗಳು ಈ ತೀರ್ಪನ್ನು ಆಕ್ಷೇಪಿಸಿವೆ. ಸುಭಾಷ್ ಚಂದ್ರ ಅವರ ಹಣಕಾಸು ಆಸ್ತಿಗಳನ್ನು ಸರಿಯಾಗಿ ವಿಚಾರಿಸದೆಯೇ ತೀರ್ಪು ನೀಡಲಾಗಿದೆ ಎಂಬುದು ಇವರ ಇನ್ನೊಂದು ಪ್ರಮುಖ ಆಕ್ಷೇಪ. ಈ ಹಿನ್ನೆಲೆಯಲ್ಲಿ ಎನ್​ಸಿಎಲ್​ಟಿ ನ್ಯಾಯಮಂಡಳಿಯ ದೊಡ್ಡ ಪೀಠವು ಮತ್ತೊಮ್ಮೆ ಹೊಸದಾಗಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us