AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 1ರಿಂದ ಎಟಿಎಂ ಟ್ರಾನ್ಸಾಕ್ಷನ್ ಶುಲ್ಕಗಳ ಏರಿಕೆ; ಮಿತಿಮೀರಿದರೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

New ATM transaction fees from May 1st: ಎಟಿಎಂಗಳಲ್ಲಿ ಕ್ಯಾಷ್ ಪಡೆಯುವುದು, ಬ್ಯಾಲನ್ಸ್ ಪರಿಶೀಲನೆ ಮಾಡುವುದು ಇತ್ಯಾದಿ ಟ್ರಾನ್ಸಾಕ್ಷನ್​​​ಗೆ ಒಂದು ಮಿತಿ ಇರುತ್ತದೆ. ಒಂದು ತಿಂಗಳಲ್ಲಿ ಸ್ವಂತ ಬ್ಯಾಂಕ್​​ನ ಎಟಿಎಂಗಳಲ್ಲಿ 5 ಟ್ರಾನ್ಸಾಕ್ಷನ್ ಮಾಡಬಹುದು. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ 3 ಟ್ರಾನ್ಸಾಕ್ಷನ್ ಮಾಡಬಹುದು. ಈ ಮಿತಿ ಮೀರಿದರೆ ಟ್ರಾನ್ಸಾಕ್ಷನ್ ಶುಲ್ಕ ತೆರಬೇಕಾಗುತ್ತದೆ. ಕ್ಯಾಷ್ ವಿತ್​ಡ್ರಾಯಲ್​​​ಗೆ ಟ್ರಾನ್ಸಾಕ್ಷನ್ ಫೀ ಅನ್ನು 23 ರೂಗೆ ಏರಿಸಲಾಗಿದೆ.

ಮೇ 1ರಿಂದ ಎಟಿಎಂ ಟ್ರಾನ್ಸಾಕ್ಷನ್ ಶುಲ್ಕಗಳ ಏರಿಕೆ; ಮಿತಿಮೀರಿದರೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?
ಎಟಿಎಂ ವಹಿವಾಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2025 | 4:23 PM

Share

ನೀವು ಹೆಚ್ಚೆಚ್ಚು ಬಾರಿ ಎಟಿಎಂ ಬಳಕೆ ಮಾಡುತ್ತಿರುವಿರಾದರೆ ಈ ಸುದ್ದಿಯನ್ನು ತಪ್ಪದೇ ಓದಬೇಕು. ಎಟಿಎಂ ಟ್ರಾನ್ಸಾಕ್ಷನ್ ಶುಲ್ಕಗಳು (ATM transaction fees) ಪರಿಷ್ಕರಣೆಗೊಂಡಿದ್ದು, ಹೊಸ ದರಗಳು ಮೇ 1ರಿಂದ ಚಾಲನೆಗೆ ಬರಲಿವೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ನೀವು ಎಟಿಎಂ ಬಳಸಿದರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಮೇ 1ರಿಂದ ಈ ಶುಲ್ಕ 2 ರೂನಷ್ಟು ಹೆಚ್ಚಳವಾಗಲಿದೆ. ಕ್ಯಾಷ್ ವಹಿವಾಟು ಮಿತಿ ಮೀರಿದರೆ ಪ್ರತೀ ವಹಿವಾಟಿಗೆ ಇದ್ದ ಶುಲ್ಕವನ್ನು 21 ರೂನಿಂದ 23 ರೂಗೆ ಹೆಚ್ಚಿಸಲಾಗಿದೆ. ಆರ್​​ಬಿಐ ಮಾರ್ಚ್ 28ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿ, ಹೊಸ ಎಟಿಎಂ ವಹಿವಾಟು ಶುಲ್ಕಗಳು ಮೇ 1ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿತ್ಉ.

ಎಟಿಎಂ ವಹಿವಾಟು ಮಿತಿ ಎಷ್ಟಿದೆ?

ಆರ್​​ಬಿಐ ಆಗಾಗ್ಗೆ ಎಟಿಎಂ ವಹಿವಾಟು ಶುಲ್ಕಗಳನ್ನು ಪರಿಷ್ಕರಿಸುತ್ತಿರುತ್ತದೆ. ಸದ್ಯದ ಪರಿಷ್ಕರಣೆ ಪ್ರಕಾರ ಮೆಟ್ರೋ ನಗರಗಳಲ್ಲಿ ಜನರು ತಮ್ಮ ಕಾರ್ಡ್​ನ ಬ್ಯಾಂಕುಗಳ ಎಟಿಎಂಗಳಲ್ಲಿ ಯಾವುದೇ ಶುಲ್ಕ ಇಲ್ಲದೇ ಒಂದು ತಿಂಗಳಲ್ಲಿ ಐದು ಬಾರಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಫ್ರೀ ಟ್ರಾನ್ಸಾಕ್ಷನ್ 3ಕ್ಕೆ ನಿಗದಿ ಮಾಡಲಾಗಿದೆ. ಈ ಸಂಖ್ಯೆ ಮೀರಿದರೆ ಆಗ ಶುಲ್ಕ ಜಾರಿಗೆ ಬರುತ್ತದೆ. ಇಲ್ಲಿ ವಹಿವಾಟು ಎಂದರೆ ಹಣ ವಿತ್​​ಡ್ರಾ ಆಗಿರಬಹುದು, ಬ್ಯಾಲನ್ಸ್ ಪರಿಶೀಲನೆ ಆಗಿರಬಹುದು, ಪಿನ್ ಬದಲಾವಣೆ ಇರಬಹುದು.

ಇನ್ನು, ಮೆಟ್ರೋ ಅಲ್ಲದ ನಗರಗಳಲ್ಲಾದರೆ ಸ್ವಂತ ಬ್ಯಾಂಕ್ ಎಟಿಎಂಗಳಲ್ಲಿ 5 ಮತ್ತು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ 5 ವಹಿವಾಟುಗಳನ್ನು ಶುಲ್ಕ ರಹಿತವಾಗಿ ಮಾಡಬಹುದು.

ಇದನ್ನೂ ಓದಿ
Image
ಇಂಡಸ್​​ಇಂಡ್ ಬ್ಯಾಂಕ್: ಹಂಗಾಮಿ ನಾಯಕತ್ವಕ್ಕೆ ಆರ್​​ಬಿಐ ಒಪ್ಪಿಗೆ
Image
ಮೇ 2025ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
Image
ಎಸ್​​ಬಿಐ, ಎಚ್​​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕುಗಳ ಎಫ್​​​ಡಿ ದರಪಟ್ಟಿ
Image
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ

ಇದನ್ನೂ ಓದಿ: ಇಂಡಸ್​​ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್​​ಬಿಐ ಅನುಮತಿ

ಎಟಿಎಂ ವಹಿವಾಟಿಗೆ ಶುಲ್ಕ ಯಾಕೆ?

ಎಟಿಎಂ ಸ್ಥಾಪಿಸಿ ಅದಕ್ಕೆ ಹಣ ತುಂಬಿ ಮೇಂಟೇನ್ ಮಾಡಲು ಬ್ಯಾಂಕುಗಳಿಗೆ ಒಂದಷ್ಟು ವೆಚ್ಚವಾಗುತ್ತದೆ. ಬ್ಯಾಂಕ್ ಕಚೇರಿಗಳಲ್ಲಿ ಜನದಟ್ಟನೆ ತಪ್ಪಿಸಲು ಮತ್ತು ಜನರಿಗೆ ಬ್ಯಾಂಕಿಂಗ್ ಕೆಲಸ ಸುಲಭಗೊಳಿಸಲು ಈ ಎಟಿಎಂಗಳು ಸಹಾಯಕವಾಗುತ್ತವೆ. ಇದನ್ನು ನಿರ್ವಹಿಸಲು ಆಗುವ ಖರ್ಚನ್ನು ಭರಿಸಲು ಬ್ಯಾಂಕುಗಳು ಇಂಟರ್​​​​ಚೇಂಜ್ ಫೀ ವಿಧಿಸುತ್ತವೆ.

ಅಂದರೆ, ಒಂದು ಬ್ಯಾಂಕ್​​ನ ಗ್ರಾಹಕ ಬೇರೊಂದು ಬ್ಯಾಂಕ್​​ನ ಎಟಿಎಂ ಬಳಸಿದಾಗ, ಆತನ ಬ್ಯಾಂಕು ಒಂದು ಕ್ಯಾಷ್ ವಹಿವಾಟಿಗೆ 17 ರೂ ಇಂಟರ್​​ಚೇಂಜ್ ಫೀ ನೀಡಬೇಕು. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ಹಣಕಾಸೇತರ ವಹಿವಾಟಿಗೆ 6 ರೂ ಶುಲ್ಕ ತೆರಬೇಕು. ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕುಗಳು ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಶುಲ್ಕ ರಹಿತ ವಹಿವಾಟಿಗೆ ಅನುಮತಿಸುತ್ತವೆ.

ಇದನ್ನೂ ಓದಿ: 2025ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ, ಕರ್ನಾಟಕದಲ್ಲಿ 7 ದಿನ ರಜೆ; ಇಲ್ಲಿದೆ ಪಟ್ಟಿ

ಇಂಟರ್​​ಚೇಂಜ್ ಫೀ 17 ರೂ ಇದ್ದರೂ ಹೆಚ್ಚಿನ ಬ್ಯಾಂಕುಗಳು ಫ್ರೀಟ್ರಾನ್ಸಾಕ್ಷನ್ ಹೊರೆ ತಗ್ಗಿಸಲು 23 ರೂ ಶುಲ್ಕವನ್ನು ಗ್ರಾಹಕರಿಂದ ಪಡೆಯುತ್ತವೆ. ಅದು ಫ್ರೀ ಟ್ರಾನ್ಸಾಕ್ಷನ್ ಮಿತಿಯನ್ನು ಮೀರಿದಾಗ ಮಾತ್ರ. ಕೆಲ ಬ್ಯಾಂಕುಗಳು ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್​ಗಳಿಗೆ ಶುಲ್ಕ ಪಡೆಯುವುದಿಲ್ಲ. ಕೆಲ ಬ್ಯಾಂಕುಗಳು 11 ರೂ ಶುಲ್ಕ ಪಡೆಯುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ