AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಐಸಿಯಿಂದ ಎರಡು ಹೊಸ ಆ್ಯಪ್​ಗಳು ಬಿಡುಗಡೆ; ಗ್ರಾಹಕರಿಗೆ MyLIC, ಮಾರಾಟಗಾರರಿಗೆ Super Sales Saathi ಆ್ಯಪ್

LIC Launches MyLIC & Super Sales Saathi Apps: ಎಲ್‌ಐಸಿ ತನ್ನ ಡಿಜಿಟಲ್ ರೂಪಾಂತರದ ಭಾಗವಾಗಿ 'MyLIC' ಮತ್ತು 'ಸೂಪರ್ ಸೇಲ್ಸ್ ಸಾಥಿ' ಎಂಬ ಎರಡು ಹೊಸ ಮೊಬೈಲ್ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. MyLIC ಗ್ರಾಹಕರಿಗೆ ಪಾಲಿಸಿ ನಿರ್ವಹಣೆ, ಪ್ರೀಮಿಯಂ ಪಾವತಿ ಮತ್ತು ಲೋನ್‌ಗಳಿಗೆ ಅನುಕೂಲ ಮಾಡಿಕೊಟ್ಟರೆ, ಸೂಪರ್ ಸೇಲ್ಸ್ ಸಾಥಿ ಏಜೆಂಟರಿಗೆ AI-ಆಧಾರಿತ ಸಹಾಯ ಮತ್ತು ಡಿಜಿಟಲ್ ಸೇಲ್ಸ್ ಕಿಟ್ ನೀಡುತ್ತದೆ. ಈ ಆ್ಯಪ್‌ಗಳಿಂದ ಗ್ರಾಹಕರು ಮತ್ತು ಏಜೆಂಟರಿಗೆ ಸೇವೆಗಳು ಸುಲಭವಾಗಿ ತಲುಪುತ್ತವೆ.

ಎಲ್​ಐಸಿಯಿಂದ ಎರಡು ಹೊಸ ಆ್ಯಪ್​ಗಳು ಬಿಡುಗಡೆ; ಗ್ರಾಹಕರಿಗೆ MyLIC, ಮಾರಾಟಗಾರರಿಗೆ Super Sales Saathi ಆ್ಯಪ್
ಎಲ್‌ಐಸಿImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2026 | 9:23 PM

Share

ಮುಂಬೈ, ಏಪ್ರಿಲ್ 16: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಡಿಜಿಟಲ್ ರೂಪಾಂತರದ ಭಾಗವಾಗಿ ಗ್ರಾಹಕರು ಮತ್ತು ಮಾರಾಟ ಪ್ರತಿನಿಧಿಗಳಿಗಾಗಿ (Intermediaries) ಎರಡು ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಅವರು ಈ ಆಪ್‌ಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್‌ಐಸಿ ಸಿಇಒ ಮತ್ತು ಎಂಡಿ ಆರ್. ದೊರೈಸ್ವಾಮಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಹಕರಿಗಾಗಿ ಇರುವ MyLIC ಆಪ್

MyLIC ತನ್ನ ಪಾಲಿಸಿದಾರರಿಗಾಗಿ ವಿನ್ಯಾಸಗೊಳಿಸಲಾದ ಮುಂದಿನ ಪೀಳಿಗೆಯ ಆಪ್ ಆಗಿದ್ದು, ಇನ್ಷೂರೆನ್ಸ್ ಪೋರ್ಟ್‌ಫೋಲಿಯೋ ನಿರ್ವಹಣೆಯನ್ನು ಸುಲಭಗೊಳಿಸಲಿದೆ. ಇದರಲ್ಲಿ ಇರುವ ಪ್ರಮುಖ ಫೀಚರ್ಸ್ ಇಂತಿವೆ:

  • ಪೋರ್ಟ್‌ಫೋಲಿಯೋ ನಿರ್ವಹಣೆ: ನಿಮ್ಮ ಎಲ್ಲಾ ಪಾಲಿಸಿಗಳನ್ನು ಒಂದೇ ಕಡೆ ನೋಡಬಹುದು ಮತ್ತು ನಿರ್ವಹಿಸಬಹುದು.
  • ತ್ವರಿತ ಪ್ರೀಮಿಯಂ ಪಾವತಿ: ಯಾವುದೇ ವಿಳಂಬವಿಲ್ಲದೆ ಆನ್‌ಲೈನ್ ಮೂಲಕ ಪ್ರೀಮಿಯಂ ಕಟ್ಟಬಹುದು.
  • ಪೇಪರ್‌ಲೆಸ್ ಲೋನ್: ಪಾಲಿಸಿ ಮೇಲೆ ಸಾಲ ಪಡೆಯಲು ಕಚೇರಿಗೆ ಹೋಗುವ ಅಗತ್ಯವಿಲ್ಲ, ಡಿಜಿಟಲ್ ಆಗಿಯೇ ಸಾಲ ಸೌಲಭ್ಯ ಪಡೆಯಬಹುದು.
  • ಪಾಲಿಸಿ ನವೀಕರಣ: ಸ್ಥಗಿತಗೊಂಡಿರುವ (Lapsed) ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿಯೇ ಪುನಶ್ಚೇತನಗೊಳಿಸಬಹುದು.
  • ಇ-ಕೆವೈಸಿ (e-KYC): ವೇಗವಾದ ಮತ್ತು ಕಾಗದರಹಿತ ಕೆವೈಸಿ ಪ್ರಕ್ರಿಯೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ

ಸೂಪರ್ ಸೇಲ್ಸ್ ಸಾಥಿ ಆ್ಯಪ್ (Super Sales Saathi)

ಇದು ಎಲ್‌ಐಸಿ ವಿಮಾ ಏಜೆಂಟ್‌ಗಳು ಮತ್ತು ಮಾರ್ಕೆಟಿಂಗ್ ಸಿಬ್ಬಂದಿಗಾಗಿ ರೂಪಿಸಲಾದ ಆಪ್ ಆಗಿದೆ. ಇದರಲ್ಲಿರುವ ಪ್ರಮುಖ ಫೀಚರ್ಸ್ ಇಂತಿವೆ:

  • ರಿಯಲ್-ಟೈಮ್ ಟ್ರ್ಯಾಕಿಂಗ್: ಗ್ರಾಹಕರ ಪಾಲಿಸಿ ಸ್ಥಿತಿಗತಿಗಳನ್ನು ಕ್ಷಣಕ್ಷಣಕ್ಕೂ ಗಮನಿಸಬಹುದು.
  • AI ಆಧಾರಿತ ನೆರವು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೂಕ್ತ ಸಲಹೆ ನೀಡಲು ಇದು ನೆರವಾಗಲಿದೆ.
  • ಡಿಜಿಟಲ್ ಸೇಲ್ಸ್ ಕಿಟ್: ಪಾಲಿಸಿಗಳ ಬಗ್ಗೆ ವಿವರಿಸಲು ಬೇಕಾದ ಡಿಜಿಟಲ್ ಮಾಹಿತಿಗಳು ಮತ್ತು ಪ್ರೆಸೆಂಟೇಶನ್‌ಗಳು ಈ ಆಪ್‌ನಲ್ಲಿ ಲಭ್ಯವಿರುತ್ತವೆ.
  • ಸ್ವಯಂಚಾಲಿತ ರಿಮೈಂಡರ್: ಗ್ರಾಹಕರನ್ನು ಫಾಲೋ-ಅಪ್ ಮಾಡಲು ಇದು ಏಜೆಂಟ್‌ಗಳಿಗೆ ನೆನಪಿಸುತ್ತದೆ.

ಡಿಜಿಟಲ್ ರೂಪಾಂತರದ ‘ಡೈವ್’ (DIVE)

ಈ ಎರಡೂ ಅಪ್ಲಿಕೇಶನ್‌ಗಳನ್ನು ಎಲ್‌ಐಸಿಯ ‘ಡೈವ್’ (DIVE- Digital Innovation & Value Enhancement) ಎಂಬ ಡಿಜಿಟಲ್ ರೂಪಾಂತರ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಲ್‌ಐಸಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಗ್ರಾಹಕರಿಗೆ ತಡೆರಹಿತ ಸೇವೆ ನೀಡಲು ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

ಈ ಆಪ್‌ಗಳ ಬಳಕೆಯಿಂದಾಗಿ ಎಲ್‌ಐಸಿ ಗ್ರಾಹಕರು ಈಗ ವಿಮಾ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಲಿದ್ದು, ಬೆರಳ ತುದಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ