AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insurance

Insurance

ಇನ್ಷೂರೆನ್ಸ್ ಅಥವಾ ವಿಮೆ ಎಂದರೆ ನಿರ್ದಿಷ್ಟ ಆಸ್ತಿ ಮತ್ತು ಜೀವಕ್ಕೆ ಹಾನಿಯಾದರೆ ಅದಕ್ಕೆ ಪರಿಹಾರ ಸಿಗುವಂತೆ ಮಾಡಿಕೊಳ್ಳಲಾಗುವ ಒಂದು ಒಪ್ಪಂದ. ಇನ್ಷೂರೆನ್ಸ್​​ನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಪ್ರಮುಖವಾದುವು ಆರೋಗ್ಯ ವಿಮೆ, ಆಸ್ತಿ ವಿಮೆ, ವಾಹನ ವಿಮೆ, ಜೀವ ವಿಮೆ. ನೀವು ಯಾವುದಕ್ಕೆ ಬೇಕಾದರೂ ಇನ್ಷುರೆನ್ಸ್ ಮಾಡಿಸಬಹುದು. ಒಂದು ಕಟ್ಟಡಕ್ಕೆ ಇನ್ಷೂರೆನ್ಸ್ ಮಾಡಿಸಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಮಧ್ಯದಲ್ಲಿ ಅಪಘಾತ ಸಂಭವಿಸುವ ಅಪಾಯ ಇದೆ ಎಂದಲ್ಲಿ ಅದಕ್ಕೂ ಇನ್ಷೂರೆನ್ಸ್ ಮಾಡಿಸಬಹುದು. ವಿಮೆ ಪಾಲಿಸಿ ಮಾಡಿಸುವಾಗ ನಾಮಿನಿ ಸೇರಿಸುವುದು ಕಡ್ಡಾಯ. ಅವಘಡದಲ್ಲಿ ಏನಾದರೂ ಪಾಲಿಸಿದಾರ ಮೃತಪಟ್ಟರೆ ಪರಿಹಾರ ಹಣವು ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಹೋಗುತ್ತದೆ. ಭಾರತದಲ್ಲಿ ಹೆಚ್ಚಿನ ಜನರಿಗೆ ಇನ್ಷೂರೆನ್ಸ್ ಮಹತ್ವ ಗೊತ್ತಿಲ್ಲ. ಹೆಚ್ಚಿನ ಜನರು ಇನ್ಷೂರೆನ್ಸ್ ಪಾಲಿಸಿ ಹೊಂದಿಲ್ಲ. ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವರನ್ನು ನಂಬಿದ ಕುಟುಂಬ ಬಹುತೇಕ ಬೀದಿಗೆ ಬೀಳುವಂತಾಗುತ್ತದೆ. ಹೀಗಾಗಿ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಬಹಳ ಮುಖ್ಯ ಎನಿಸುತ್ತದೆ

ಇನ್ನೂ ಹೆಚ್ಚು ಓದಿ

ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

India plans to open Insurance sector to co-operatives: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ಸಹಕಾರಿ ಇನ್ಷೂರೆನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಪ್ರಕಟಿಸಿದ್ದಾರೆ. ಇಫ್​ಕೋ-ಟೋಕಿಯೋ ಇನ್ಷೂರೆನ್ಸ್ ಸೇವೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರ ಸಹಕಾರಿ ವಿಮಾ ಸೇವೆಗೆ ಕೈಹಾಕಿದೆ. ಕ್ಯಾಬ್ ಅಗ್ರಿಗೇಟರ್ ಆಗಿರುವ ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಯುಟಿಲಿಟಿ ಅಗ್ರಿಗೇಟರ್ ಸ್ಥಾಪಿಸಲಿದೆ ಸರ್ಕಾರ.

ಅಲ್ಪ ಹೂಡಿಕೆ; ಮೆಚ್ಯೂರಿಟಿಗೆ 35 ಲಕ್ಷ ರೂವರೆಗೆ ಗಳಿಕೆ; ಇದು ಪೋಸ್ಟ್ ಆಫೀಸ್ ಆರ್​ಪಿಎಲ್​ಐ ಯೋಜನೆಯ ಕೊಡುಗೆ

Post Office Gram Suraksha Yojana: ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಹಲವು ಸ್ಕೀಮ್​ಗಳಲ್ಲಿ ಗ್ರಾಮ್ ಸುರಕ್ಷಾ ಯೋಜನೆ ಒಂದು. ಇದು ಗ್ರಾಮೀಣ ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಅಡಿಯಲ್ಲಿ ಇರುವ ಒಂದು ಯೋಜನೆ. ದೀರ್ಘಕಾಲದ ಉಳಿತಾಯ ಮತ್ತು ಹೂಡಿಕೆ ಹಾಗೂ ಜೀವ ವಿಮಾ ಸೌಲಭ್ಯ ಇವು ಮಿಳಿತಗೊಂಡಿರುವ ಯೋಜನೆ ಇದು.

E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು

E20 Fuel & Car Insurance: E20 ಇಂಧನ ಬಳಸುವ ವಾಹನಗಳಿಗೆ ವಿಮಾ ಕ್ಲೇಮ್ ತಿರಸ್ಕೃತವಾಗಬಹುದು ಎಂಬ ವೈರಲ್ ಸುದ್ದಿಗೆ ಸರ್ಕಾರ ಮತ್ತು ವಿಮಾ ಕಂಪನಿಗಳು ಸ್ಪಷ್ಟನೆ ನೀಡಿವೆ. E20 ಇಂಧನದಿಂದ ನಿಮ್ಮ ವಿಮಾ ಪಾಲಿಸಿಗಳು ರದ್ದಾಗುವುದಿಲ್ಲ, ಸಂಪೂರ್ಣವಾಗಿ ಚಾಲ್ತಿಯಲ್ಲಿರುತ್ತವೆ. ಅಪಘಾತ ಕ್ಲೇಮ್‌ಗಳಿಗೆ ಇಂಧನ ವಿಧ ಮುಖ್ಯವಲ್ಲ. ಆದರೆ, ಹಳೆಯ ವಾಹನಗಳಲ್ಲಿ E20 ಬಳಕೆ ಇಂಜಿನ್ ಭಾಗಗಳ ಸವೆತಕ್ಕೆ ಕಾರಣವಾದರೆ, ಅಂತಹ 'ಪರಿಣಾಮಕಾರಿ ಹಾನಿಗಳಿಗೆ' ಸಾಮಾನ್ಯ ವಿಮೆಯಲ್ಲಿ ಪರಿಹಾರ ಸಿಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.

ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

Get Free Life Insurance Up To ₹7 Lakhs With EDLI: ಇಪಿಎಫ್ ಖಾತೆದಾರರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹7 ಲಕ್ಷದವರೆಗೆ ಉಚಿತ ಜೀವ ವಿಮೆ (EDLI) ಸೌಲಭ್ಯವಿದೆ. ಹೆಚ್ಚಿನ ಉದ್ಯೋಗಿಗಳಿಗೆ ಇದರ ಅರಿವಿಲ್ಲ. ಉದ್ಯೋಗಿ ಮೃತಪಟ್ಟಾಗ ನಾಮಿನಿ ಹಣ ಪಡೆಯಲು ಇ-ನಾಮಿನೇಷನ್ ಕಡ್ಡಾಯ. ಅರ್ಹತೆ, ಲೆಕ್ಕಾಚಾರ ಮತ್ತು ಕ್ಲೈಮ್ ಪ್ರಕ್ರಿಯೆ ಬಗ್ಗೆ ತಿಳಿಯಿರಿ. ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಈಗಲೇ ನಾಮಿನೇಷನ್ ಮಾಡಿ.

ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

Common reasons why health insurance policies may not work during needy hour: ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾದಾಗ ನಗದು ರಹಿತ (Cashless) ಆರೋಗ್ಯ ವಿಮೆ ಕ್ಲೈಮ್‌ಗಳು ಹಲವು ಬಾರಿ ನಿರಾಕರಣೆಯಾಗುತ್ತವೆ ಅಥವಾ ವಿಳಂಬವಾಗುತ್ತವೆ. ಪಾಲಿಸಿದಾರರು ನಿಯಮಿತವಾಗಿ ಪ್ರೀಮಿಯಂ ಪಾವತಿಸುತ್ತಿದ್ದರೂ, ಕ್ಲೈಮ್ ಮಾಡುವಾಗ ಎದುರಾಗುವ ಇಂತಹ ಸಮಸ್ಯೆಗಳಿಗೆ ಪ್ರಮುಖ ಕಾರಣಗಳ ವಿವರ ಇಲ್ಲಿದೆ.

10ನೇ ಕ್ಲಾಸ್ ಓದಿದ್ರೆ ಸಾಕು, ಹೆಣ್ಮಕ್ಕಳಿಗೆ ಎಲ್​ಐಸಿ ಬಿಮಾ ಸಖಿ ಯೋಜನೆಯಿಂದ ಮಾಸಿಕ ಆದಾಯ ಮತ್ತು ವೃತ್ತಿಜೀವನ

LIC Bima Sakhi Yojana: ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ 10ನೇ ಕ್ಲಾಸ್ ಪಾಸಾದ ಮಹಿಳೆಯರಿಗೆ ಎಲ್​ಐಸಿ ಏಜೆಂಟ್ ಆಗಲು ಪ್ರೇರೇಪಿಸುತ್ತಿದೆ. ಈ ನಿಟ್ಟಿನಲ್ಲಿ ಬಿಮಾ ಸಖಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಸ್ಕೀಮ್ ಅಡಿಯಲ್ಲಿ ಮಹಿಳೆಯರಿಗೆ ಎಲ್​ಐಸಿ ಏಜೆಂಟ್ ಆಗಲು ತರಬೇತಿ ಕೊಡಲಾಗುತ್ತದೆ. ಮೂರು ವರ್ಷದ ತರಬೇತಿಯಲ್ಲಿ ಮಾಸಿಕ ಸ್ಟೈಪೆಂಡ್ ಕೂಡ ಸಿಗುತ್ತದೆ.

ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್

AB PM-JAY Auto-Adjudication Hackathon Showcase 2026: ಬೆಂಗಳೂರಿನ ಐಐಎಸ್​ಸಿ ಕ್ಯಾಂಪಸ್​ನಲ್ಲಿ ಎರಡು ದಿನಗಳ ಕಾಲ ಆಯುಷ್ಮಾನ್ ಭಾರತ್ ಪಿಎಂ ಜೆಎವೈ ಆಟೊ ಅಡ್ಜುಡಿಕೇಶನ್ ಹ್ಯಾಕಥಾನ್ ಆರಂಭವಾಗಿದೆ. ಜನ್ ಆರೋಗ್ಯ ಯೋಜನೆಯಲ್ಲಿ ಆರೋಗ್ಯ ವಿಮೆಯ ಕ್ಲೇಮ್​ಗಳ ಪರಿಶೀಲನೆಯಲ್ಲಿ ಎಐ ಅನ್ನು ಹೇಗೆ ಸಮರ್ಪಕವಾಗಿ ಬಳಸಬೇಕೆಂದು ಈ ಹ್ಯಾಕಥಾನ್​ನಲ್ಲಿ ಚರ್ಚಿಸಲಾಗುತ್ತಿದೆ.

ಎಲ್​ಐಸಿಯಿಂದ ಎರಡು ಹೊಸ ಆ್ಯಪ್​ಗಳು ಬಿಡುಗಡೆ; ಗ್ರಾಹಕರಿಗೆ MyLIC, ಮಾರಾಟಗಾರರಿಗೆ Super Sales Saathi ಆ್ಯಪ್

LIC Launches MyLIC & Super Sales Saathi Apps: ಎಲ್‌ಐಸಿ ತನ್ನ ಡಿಜಿಟಲ್ ರೂಪಾಂತರದ ಭಾಗವಾಗಿ 'MyLIC' ಮತ್ತು 'ಸೂಪರ್ ಸೇಲ್ಸ್ ಸಾಥಿ' ಎಂಬ ಎರಡು ಹೊಸ ಮೊಬೈಲ್ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. MyLIC ಗ್ರಾಹಕರಿಗೆ ಪಾಲಿಸಿ ನಿರ್ವಹಣೆ, ಪ್ರೀಮಿಯಂ ಪಾವತಿ ಮತ್ತು ಲೋನ್‌ಗಳಿಗೆ ಅನುಕೂಲ ಮಾಡಿಕೊಟ್ಟರೆ, ಸೂಪರ್ ಸೇಲ್ಸ್ ಸಾಥಿ ಏಜೆಂಟರಿಗೆ AI-ಆಧಾರಿತ ಸಹಾಯ ಮತ್ತು ಡಿಜಿಟಲ್ ಸೇಲ್ಸ್ ಕಿಟ್ ನೀಡುತ್ತದೆ. ಈ ಆ್ಯಪ್‌ಗಳಿಂದ ಗ್ರಾಹಕರು ಮತ್ತು ಏಜೆಂಟರಿಗೆ ಸೇವೆಗಳು ಸುಲಭವಾಗಿ ತಲುಪುತ್ತವೆ.

ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

Nithin Kamath explains the importance of personal health insurance: ಭಾರತದಲ್ಲಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದಿರುವವರ ಸಂಖ್ಯೆ ಬಹಳ ಕಡಿಮೆ. ಇನ್ಷೂರೆನ್ಸ್ ಅರಿವು ಹೆಚ್ಚು ಇರುವ ನಗರ ಭಾಗಗಳಲ್ಲೂ ಆರೋಗ್ಯ ವಿಮೆ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಕಾರ್ಪೊರೇಟ್ ಉದ್ಯೋಗಿಗಳು ತಮ್ಮ ಕಂಪನಿ ಮಾಡಿಸುವ ಇನ್ಷೂರೆನ್ಸ್ ಕವರೇಜ್ ಹೊಂದಿರುತ್ತಾರೆ. ಆದರೆ, ಪರ್ಸನಲ್ ಪಾಲಿಸಿ ಮಾಡಿಸದೆ ತಪ್ಪು ಮಾಡುತ್ತಾರೆ. ನಿತಿನ್ ಕಾಮತ್ ಈ ಬಗ್ಗೆ ಒಂದಿಷ್ಟು ಕಿವಿ ಮಾತು ಹೇಳಿದ್ದಾರೆ.

ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

Important financial tasks to be done before March 31st: 2025-26ರ ಹಣಕಾಸು ವರ್ಷ ಮಾರ್ಚ್ 31ಕ್ಕೆ ಮುಗಿಯುತ್ತದೆ. ಏಪ್ರಿಲ್ 1ರಿಂದ 2026-27ರ ಹಣಕಾಸು ವರ್ಷ ಆರಂಭವಾಗುತ್ತದೆ. ಹೊಸ ವರ್ಷಕ್ಕೆ ಪ್ಯಾನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಕೆಲ ನಿಯಮ ಬದಲಾವಣೆಗಳು ಇವೆ. ಹಾಗೆಯೇ, ಉದ್ಯೋಗಿಗಳು ತಮ್ಮ ಸಂಬಳದಿಂದ ಟಿಡಿಎಸ್ ಕಡಿತಗೊಳ್ಳದೇ ಇರಲು ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು.

ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್

ನವದೆಹಲಿ, ಜನವರಿ 29: ಕಳೆದ ಬಾರಿಯ ಬಜೆಟ್​ನಲ್ಲಿ ಇನ್ಷೂರೆನ್ಸ್ ಕ್ಷೇತ್ರವನ್ನು ಬಲಪಡಿಸುವ ಕೆಲ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ಜಿಎಸ್​ಟಿಯಿಂದ ವಿನಾಯಿತಿ ಕೊಡುವುದು ಸೇರಿದಂತೆ ಕೆಲ ಉತ್ತಮ ಕ್ರಮ ಬಂದಿತ್ತು. ಈ ಬಜೆಟ್​ನಲ್ಲಿ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಪ್ರಮುಖ ಸುಧಾರಣೆಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಕ್ಷೇತ್ರದ ಕೆಲ ಉದ್ಯಮಿಗಳು ಬಜೆಟ್​ನಿಂದ ಏನೇನು ನಿರೀಕ್ಷಿಸುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ...

ಆರ್ಥಿಕ ಸಮೀಕ್ಷೆ 2026; ಜಿಡಿಪಿ, ಹಣದುಬ್ಬರ, ಎಫ್​ಡಿಐ, ಇನ್ಷೂರೆನ್ಸ್ ಇತ್ಯಾದಿ ಬಗ್ಗೆ ವರದಿಯಲ್ಲಿ ಹೇಳಿದ್ದಿದು

ನವದೆಹಲಿ, ಜನವರಿ 29: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್​ನಲ್ಲಿ ಮಂಡಿಸಲಾಗಿದೆ. ಬಜೆಟ್​ಗೆ ಕೆಲ ದಿನ ಮುನ್ನ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವುದು ವಾಡಿಕೆ. ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎನ್ನುವುದರ ಅಮೂಲಾಗ್ರ ಚಿತ್ರಣವನ್ನು ದೇಶದ ಮುಂದಿಡಲಾಗುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರಾದ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ವತಿಯಿಂದ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ. ಈ ವರದಿಯಲ್ಲಿ ಮುಖ್ಯಾಂಶಗಳೇನಿವೆ ಎನ್ನುವುದರ ಮಾಹಿತಿ ಇಲ್ಲಿದೆ...

ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ