AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್​ಟಿಪಿ; ಏನಿದು ಫಾರ್ಮುಲಾ?

STP formula for wealth creation: ಸಂಪತ್ತು ಹೆಚ್ಚಿಸುವುದು ಹೇಗೆ ಎಂದು ಹೂಡಿಕೆ ತಜ್ಞ ನವನೀತ್ ಮುನೋತ್ ತಮ್ಮ ದಶಕಗಳ ಅನುಭವದಿಂದ ಒಂದು ಸೂತ್ರ ರೂಪಿಸಿದ್ದಾರೆ. ಅವರ ಪ್ರಕಾರ ಎಸ್​ಟಿಪಿ ಸದ್ಯ ಅತ್ಯುತ್ತಮ ಮಾರ್ಗ ಎನಿಸಿದೆ. ಒಳ್ಳೆಯ ಕಂಪನಿಗಳ ಷೇರುಗಳಲ್ಲಿ, ಯಾವುದೇ ತಾತ್ಕಾಲಿಕ ಮಾರುಕಟ್ಟೆ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳದೇ ದೀರ್ಘಾವಧಿ ಹೂಡಿಕೆ ಮಾಡುವುದೇ ಈ ಫಾರ್ಮುಲಾ.

STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್​ಟಿಪಿ; ಏನಿದು ಫಾರ್ಮುಲಾ?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 02, 2024 | 12:30 PM

Share

ಶ್ರೀಮಂತರಾಗಬೇಕೆಂದರೆ ಮೂರು ಅಂಶಗಳು ಬಹಳ ಮೂಲಭೂತವಾದುದು. ಒಂದು ಹಣ ಸಂಪಾದನೆ, ಎರಡನೆಯದು ಹಣ ಉಳಿತಾಯ, ಮೂರನೆಯದು ಹಣ ಹೂಡಿಕೆ. ಈ ಮೂರು ಅಂಶಗಳು ಅತ್ಯಗತ್ಯ. ಹಣ ಸಂಪಾದನೆ ಮತ್ತು ಹಣ ಉಳಿತಾಯವು ಅವರವರ ವೈಯಕ್ತಿಕ ಸಾಮರ್ಥ್ಯ, ಅಭಿರುಚಿ, ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತವೆ. ಈ ಮೂರನೆಯ ಅಂಶವಾದ ಹೂಡಿಕೆ ಎಲ್ಲರಿಗೂ ಸಮಾನ ಅವಕಾಶ ನೀಡಬಲ್ಲುದು. ಹೂಡಿಕೆ ಹೇಗಿರಬೇಕು ಎಂದು ಹೇಳುವ ಹಲವು ಸಲಹೆಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಎಚ್​ಡಿಎಫ್​ಸಿ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಿಇಒ ನವನೀತ್ ಮುನೋಟ್ ಈ ವಿಚಾರದಲ್ಲಿ ಎಸ್ ಟಿ ಪಿ ಎನ್ನುವ ಒಂದು ಫಾರ್ಮುಲಾ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಇಂಡಿಯಾ ಟುಡೇ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಎಸ್​ಟಿಪಿ ತಮ್ಮ ಅನುಭವದಲ್ಲಿ ಹೊರಹೊಮ್ಮಿದ ಸೂತ್ರ ಎಂದಿದ್ದಾರೆ. ಅವರ ಪ್ರಕಾರ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಎಸ್​ಟಿಪಿ ಬಿಟ್ಟರೆ ಬೇರೆ ಯಾವುದೇ ಸೂತ್ರ ಇಲ್ಲ.

ಏನಿದು ಎಸ್​ಟಿಪಿ?

ಎಸ್​ಟಿಪಿ ಎಂದರೆ, ಸೌಂಡ್ ಇನ್ವೆಸ್ಟ್​ಮೆಂಟ್, ಟೈಮ್ ಮತ್ತು ಪೇಶೆನ್ಸ್. ಅಂದರೆ, ಸಮರ್ಪಕ ಹೂಡಿಕೆ ಕ್ರಮ, ಸಮಯ ಮತ್ತು ಸಂಯಮ. ಬಹಳ ಸಿಂಪಲ್ ಎನಿಸಬಹುದು. ನವನೀತ್ ಮುನೋತ್ ಪ್ರಕಾರ ಇದು ಬಹಳ ಪರಿಣಾಮಕಾರಿ ಸಂಯೋಜನೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ

ಮೂಲಭೂತವಾಗಿ ಉತ್ತಮವಾಗಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಹೂಡಿಕೆ ದೀರ್ಘಾವಧಿಯಾದಷ್ಟೂ ಉತ್ತಮ. ಅಂತಿಮವಾಗಿ, ಮಾರುಕಟ್ಟೆ ಆಗಾಗ ಅಲುಗಾಡುತ್ತಿರುತ್ತದೆ. ಈ ಅಲ್ಪಾವಧಿ ವ್ಯತ್ಯಯಗಳಿಗೆ ನೀವು ಸ್ಪಂದಿಸದೇ, ವಿಚಲಿತರಾಗದೇ ಸಂಯಮ ಕಾಯ್ದುಕೊಂಡು ಹೂಡಿಕೆ ಮುಂದುವರಿಸಬೇಕು. ಇದು ಎಸ್​ಟಿಪಿ ಸೂತ್ರ.

ಎಚ್​ಡಿಎಫ್​ಸಿ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಎಂಡಿಯೂ ಆಗಿರುವ ನವನೀತ್ ಅವರು ಭಾರತೀಯ ಮಾರುಕಟ್ಟೆ ದೀರ್ಘಾವಧಿಯಲ್ಲಿ ಉತ್ತಮವಾಗಿ ಬೆಳೆಯುವುದರಲ್ಲಿ ಯಾವ ಸಂಶಯ ಬೇಡ ಎನ್ನುತ್ತಾರೆ. ಹೀಗಾಗಿ, ದೀರ್ಘಾವಧಿ ಹೂಡಿಕೆಯಿಂದ ನಿಶ್ಚಿತ ಲಾಭ ಸಿಗುತ್ತದೆ ಎನ್ನುವುದು ಅವರ ಅನಿಸಿಕೆ.

ಇದನ್ನೂ ಓದಿ: ಶೀಘ್ರದಲ್ಲೆ ಸೆನ್ಸೆಕ್ಸ್ 1,00,000 ಗಡಿ ಮುಟ್ಟುತ್ತೆ, ಷೇರು ಖರೀದಿಗೆ ಸಿದ್ಧವಾಗಿ; ಶೇ. 10 ಹೂಡಿಕೆ ಚಿನ್ನದ ಮೇಲಿರಲಿ: ಮಾರ್ಕ್ ಮೋಬಿಯಸ್

ನವನೀತ್ ಮುನೋಟ್ ಎಂಬತ್ತರ ದಶಕದಿಂದಲೇ ಇನ್ವೆಸ್ಟ್​ಮೆಂಟ್ ಆರಂಭಿಸಿದ್ದಾರೆ. ಆಗ ಸೆನ್ಸೆಕ್ಸ್ 400 ಅಂಕಗಳಲ್ಲಿ ಹೊಯ್ದಾಡುತ್ತಿತ್ತು. ಇವತ್ತು 85,000 ಅಂಕಗಳ ಮಟ್ಟ ಮುಟ್ಟಿದೆ. ಭಾರತೀಯ ಮಾರುಕಟ್ಟೆ ಕೆಲ ದಶಕಗಳಿಂದಲೂ ನಂಬಿದರ ಕೈ ಹಿಡಿದಿದೆ. ಮುಂದಿನ ಕೆಲ ದಶಕಗಳಲ್ಲೂ ದೇಶದ ಆರ್ಥಿಕ ಓಟ ಅದ್ಭುತವಾಗಿ ಸಾಗಲಿದೆ. ಅದರ ಪರಿಣಾಮವಾಗಿ ಮಾರುಕಟ್ಟೆಯ ಓಟವೂ ಮುಂದುವರಿಯಲಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ