AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax-Saving Investments: ಪಿಪಿಎಫ್​ನಿಂದ ಎನ್​ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ

ಉತ್ತಮ ರಿಟರ್ನ್ಸ್ ನೀಡುವ, ತೆರಿಗೆ ಉಳಿತಾಯಕ್ಕೂ ನೆರವಾಗಬಲ್ಲಂಥ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ಬಯಸುತ್ತೀರಾದರೆ ಈ ಐದು ಯೋಜನೆಗಳನ್ನು ಗಮನಿಸಬಹುದು.

Tax-Saving Investments: ಪಿಪಿಎಫ್​ನಿಂದ ಎನ್​ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 10, 2022 | 11:42 AM

Share

ಹೊಸ ವರ್ಷ ಆರಂಭವಾಗಲು ಇನ್ನೇನು ಕೆಲವೇ ದಿನಗಳಿವೆ. ತೆರಿಗೆ ಉಳಿತಾಯಕ್ಕಾಗಿ (Tax Savings) ಹೂಡಿಕೆ ದಾಖಲೆಗಳನ್ನು ಸಲ್ಲಿಸುವ ಸಮಯವೂ ಬಂದಿದೆ. ಉತ್ತಮ ರಿಟರ್ನ್ಸ್ ನೀಡುವ, ತೆರಿಗೆ ಉಳಿತಾಯಕ್ಕೂ ನೆರವಾಗಬಲ್ಲಂಥ ಹೂಡಿಕೆ ಯೋಜನೆಗಳನ್ನು (Investment) ಆಯ್ಕೆ ಮಾಡಿಕೊಳ್ಳಲು ನೀವು ಬಯಸುತ್ತೀರಾದರೆ ಈ ಕೆಳಗೆ ನೀಡಿರುವ ಐದು ಯೋಜನೆಗಳನ್ನು ಗಮನಿಸಬಹುದು.

ಪಿಪಿಎಫ್ (PPF)

ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಒಂದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಅನುವು ಮಾಡಿಕೊಡುತ್ತದೆ. ಪಿಪಿಎಫ್ ಯೋಜನೆಯಡಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶವಿದೆ. ವರ್ಷದ ಹೂಡಿಕೆಯನ್ನು ಹಲವು ಕಂತುಗಳಲ್ಲಿ ಅಥವಾ ಒಂದೇ ಬಾರಿಗೆ ಪಾವತಿಸುವ ಅವಕಾಶವಿದೆ. ಈ ಹೂಡಿಕೆ ಯೋಜನೆ ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದು. ಪ್ರಸ್ತುತ ಪಿಪಿಎಫ್​ ಹೂಡಿಕೆ ಮೇಲೆ ಶೇಕಡಾ 7.1 ರ ಬಡ್ಡಿ ನೀಡಲಾಗುತ್ತಿದೆ.

ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್​ಗಳು (Tax-Saving Mutual Funds)

ಈಕ್ವಿಟಿ ಸಂಯೋಜಿತ ಉಳಿತಾಯ ಯೋಜನೆಗಳು (ELSS) ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದ್ದಾಗಿವೆ. ಜತೆಗೆ ತೆರಿಗೆ ಉಳಿಕೆಗೂ ಸಹಕಾರಿಯಾಗಿವೆ. ಈ ಯೋಜನೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಅನುವು ಮಾಡಿಕೊಡುವುದಲ್ಲದೆ ತೆರಿಗೆ ಉಳಿಸುವ ಮ್ಯೂಚುವಲ್​ ಫಂಡ್​ಗಳೆಂದು ಗುರುತಿಸಲ್ಪಟ್ಟಿವೆ. ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್​ಗಳಲ್ಲಿ ವಾರ್ಷಿಕ 1.5 ಲಕ್ಷ ವರೆಗೆ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್​​ಪಿಎಸ್ (NPS)

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್​​ಪಿಎಸ್ ಸರ್ಕಾರಿ ಪ್ರಾಯೋಜಿತ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ನಂತರದ ಆದಾಯವನ್ನು ಗಮನದಲ್ಲಿಟ್ಟುಕೊಂಡು ಮಾಡಬಹುದಾದ ಹೂಡಿಕೆ ಇದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಗರಿಷ್ಠ 2 ಲಕ್ಷ ರೂ. ಹಾಗೂ ಸೆಕ್ಷನ್ ಸಿಸಿಡಿ (1) ಅಡಿ 1.5 ಲಕ್ಷ ರೂ. ಹಾಗೂ ಸೆಕ್ಷನ್ ಸಿಸಿಡಿ (1ಬಿ) ಅಡಿ 50,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ: NPS: ಎನ್​ಪಿಎಸ್​ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ

ವಿಮಾ ಯೋಜನೆಗಳು (Insurance Plans)

ಜೀವ ವಿಮೆ ಮತ್ತು ಆರೋಗ್ಯ ವಿಮೆಯು ಅನಿವಾರ್ಯ ಭಾಗವಾಗಿದ್ದು, ಅನಿರೀಕ್ಷಿತ ನಷ್ಟಗಳಿಂದ ಸ್ವತ್ತುಗಳನ್ನು ರಕ್ಷಿಸಲು ನೆರವಾಗುತ್ತವೆ. ಈ ವಿಮೆಗಳ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್​​ಗಳ ಅಡಿಯಲ್ಲಿ ವಿನಾಯಿತಿ ದೊರೆಯುತ್ತದೆ.

ಪಿಎಫ್​ (PF)

ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ್​ ಯೋಜನೆಗೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ದೊರೆಯುತ್ತದೆ.

ಹೂಡಿಕೆ ಮತ್ತು ತೆರಿಗೆ ಯೋಜನೆ ಯಶಸ್ವಿಯಾಗಿ ಉಳಿತಾಯ ಮಾಡುವಲ್ಲಿ ಮತ್ತು ಸಂಪತ್ತು ಗಳಿಸುವಲ್ಲಿ ಪ್ರಮುಖವಾದದ್ದಾಗಿವೆ. ಪಿಪಿಎಫ್, ಸುಕನ್ಯಾ ಸಮೃಧ್ಧಿ ಯೋಜನೆ, ಈಕ್ವಿಟಿ ಸಂಯೋಜಿತ ಉಳಿತಾಯ ಯೋಜನೆಗಳು, ತೆರಿಗೆ ಉಳಿಸುವ ಎಫ್​ಡಿಗಳು ತೆರಿಗೆ ಉಳಿಸಲು ಉತ್ತಮ ಯೋಜನೆಗಳಾಗಿವೆ ಎಂದು ಬ್ಯಾಂಕ್​ ಬಜಾರ್ ಸಿಇಒ ಅದಿಲ್ ಶೆಟ್ಟಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ತೆರಿಗೆ ಉಳಿತಾಯವು ಹೂಡಿಕೆಯ ಮೇಲೆ ಹಲವು ವಿಧಗಳಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದರ ಜತೆ ಆದಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ನಿಮ್ಮ ಸಂಪತ್ತು ವೃದಚ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ