AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪಿಎಫ್ ಖಾತೆಗೆ ಕಂಪನಿಯಿಂದ ಹಣ ಜಮೆ ಆಗಿಲ್ಲವಾ? ಹೀಗೆ ಮಾಡಿ

EPF Tips: ಸಂಬಳದಿಂದ ಪಿಎಫ್ ಹಣ ಕಡಿತಗೊಳಿಸಿದ್ದರೂ ಕೆಲವೊಮ್ಮೆ ಪಿಎಫ್ ಖಾತೆಗೆ ಹಣ ಜಮೆ ಆಗಿರುವುದಿಲ್ಲ. ಕಂಪನಿ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿದ್ದರೆ ಅದು ಅಪರಾಧ ಆಗುತ್ತದೆ. ನೀವು ಇಪಿಎಫ್​ಒಗೆ ದೂರು ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ನಿಮ್ಮ ಪಿಎಫ್ ಖಾತೆಗೆ ಕಂಪನಿಯಿಂದ ಹಣ ಜಮೆ ಆಗಿಲ್ಲವಾ? ಹೀಗೆ ಮಾಡಿ
ಇಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2023 | 5:20 PM

Share

ಇಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಗೂ ಲಭ್ಯ ಇರುವ ನಿವೃತ್ತಿ ಯೋಜನೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಬಹಳ ಉಪಯುಕ್ತವಾಗಿರುವ ಈ ಸ್ಕೀಮ್​ನಲ್ಲಿ (EPF Scheme) ಪ್ರತಿ ಉದ್ಯೋಗಿಗೂ ಪ್ರತ್ಯೇಕವಾಗಿ ಇಪಿಎಫ್ ಖಾತೆ ತೆರೆಯಲಾಗುತ್ತದೆ. ಉದ್ಯೋಗಿಯ ಮೂಲವೇತನದ (Basic Salary) ಶೇ. 12ರಷ್ಟು ಭಾಗವನ್ನು ಪಿಎಫ್ ಖಾತೆಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ತುಂಬುತ್ತದೆ. ಇಪಿಎಫ್​ಒ ಸಂಸ್ಥೆ ವರ್ಷಕ್ಕೊಮ್ಮೆ ಸರ್ಕಾರ ನಿಗದಿ ಮಾಡಿದಷ್ಟು ಬಡ್ಡಿಹಣವನ್ನು ಪಿಎಫ್ ಖಾತೆಯ ಹಣಕ್ಕೆ ಸೇರಿಸಿಕೊಡುತ್ತದೆ. ಹೀಗೆ ಉದ್ಯೋಗಿ ನಿವೃತ್ತಿ ಆಗುವವರೆಗೂ ಇಪಿಎಫ್ ಹಣ ಬೆಳೆಯುತ್ತಾ ಹೋಗುತ್ತದೆ.

ಪಿಎಫ್ ಖಾತೆಗೆ ಹಣ ತುಂಬಿಲ್ಲದೇ ಹೋದರೆ?

ನಿಮ್ಮ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಹಣ ಭರ್ತಿಯಾಗುತ್ತಾ ಇರುತ್ತದೆ. ಕೆಲವೊಮ್ಮೆ ಹಣ ಜಮೆ ಆಗದೇ ಇರಬಹುದು. ನಿಮ್ಮ ಸ್ಯಾಲರಿ ಸ್ಲಿಪ್​ನಲ್ಲಿ ಅಥವಾ ಸಂಬಳ ಚೀಟಿಯಲ್ಲಿ ಇಪಿಎಫ್ ಹಣ ಮುರಿದುಕೊಳ್ಳಲಾಗಿದ್ದರೂ ಖಾತೆಗೆ ಹಣ ಹೋಗಿರುವುದಿಲ್ಲ. ಇಂಥ ಘಟನೆಗಳು ಒಮ್ಮೊಮ್ಮೆ ಆಗಬಹುದು. ನಿಮ್ಮ ಸಂಬಳದಿಂದ ಕಡಿತಗೊಂಡಾಗ್ಯೂ ಪಿಎಫ್ ಖಾತೆಗೆ ಹಣ ಜಮೆ ಆಗದೇ ಇದ್ದಲ್ಲಿ ಏನು ಮಾಡಬೇಕು? ಇದರ ಮೇಲೆ ಕ್ರಮ ಕೈಗೊಳ್ಳಲು ನಿಮ್ಮ ಮುಂದೆ ಕೆಲವಾರು ಆಯ್ಕೆಗಳಿವೆ.

ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ

  • ಮೊದಲಿಗೆ ನೀವು ಇಪಿಎಫ್​ಒ ಅಥವಾ ಯುಎಎನ್ ವೆಬ್​​ಸೈಟ್​ಗೆ ಹೋಗಿ ಲಾಗಿನ್ ಆಗಿ ಇಪಿಎಫ್ ಬ್ಯಾಲನ್ಸ್ ಅನ್ನು ಪರಿಶೀಲಿಸಿ.
  • ಇಲ್ಲಿ ನಿಮ್ಮ ಇಪಿಎಫ್ ಖಾತೆಗೆ ಹಣ ಜಮೆ ಆಗಿರುವುದನ್ನು ತೋರಿಸದೇ ಇದ್ದಲ್ಲಿ ಕಂಪನಿಯ ಫೈನಾನ್ಸ್ ಅಥವಾ ಹೆಚ್​ಆರ್ ವಿಭಾಗದವರನ್ನು ಸಂಪರ್ಕಿಸಿ.
  • ಕಂಪನಿಯವರು ಉದ್ಯೋಗಿಯ ಸಂಬಳದಲ್ಲಿ ಮುರಿದುಕೊಂಡ ಪಿಎಫ್ ಹಣವನ್ನು ಖಾತೆಗೆ ಹಾಕಲೇಬೇಕು ಎಂಬ ಕಡ್ಡಾಯ ನಿಯಮ ಇದೆ. ಒಂದು ವೇಳೆ ಕಂಪನಿಯಿಂದ ಈ ಲೋಪವಾಗಿದ್ದರೆ ಅದು ಅಪರಾಧ ಆಗುತ್ತದೆ. ನೀವು ಇಪಿಎಫ್​ಒ ಸಂಸ್ಥೆಯ ಬಳಿ ದೂರು ದಾಖಲಿಸಬಹುದು.

ಇದನ್ನೂ ಓದಿ: PM Narendra Modi: ಸ್ವಂತ ಸೂರು ಬೇಕೆನ್ನುವವರಿಗೆ ಸರ್ಕಾರದಿಂದ ಹೊಸ ಸ್ಕೀಮ್; ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಬಳಿ ನೀವು ದೂರು ನೀಡುವುದಿದ್ದರೆ ಅದಕ್ಕೆಂದು ಇಪಿಎಫ್ ಗ್ರೀವೆನ್ಸ್ ಪೋರ್ಟಲ್ (epfigms.gov.in/) ಇದೆ. ಇಲ್ಲಿ ನಿಮ್ಮ ಸಮಸ್ಯೆಯನ್ನು ದಾಖಲಿಸಿದರೆ ಇಪಿಎಫ್​ಒ ಸಂಸ್ಥೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ.

ಕಂಪನಿ ಕಡೆಯಿಂದ ಹಣ ವರ್ಗಾವಣೆ ಆಗದೇ ಇದ್ದು, ಅಥವಾ ಸಾಫ್ಟ್​ವೇರ್ ಪರಿಷ್ಕರಣೆ ಕಾರಣ ಹಣ ಕ್ರೆಡಿಟ್ ಆಗದೇ ಇದ್ದು ಇಪಿಎಫ್ ಖಾತೆಗೆ ಹಣ ಜಮೆ ಆಗುವುದು ವಿಳಂಬವಾದರೆ ಚಿಂಪ ಪಡಬೇಕಿಲ್ಲ. ಸರ್ಕಾರ ಅಥವಾ ಇಪಿಎಫ್​ಒ ಸಂಸ್ಥೆಯಿಂದ ಬಡ್ಡಿ ಹಣ ವರ್ಷಕ್ಕೊಮ್ಮೆ ಎಲ್ಲಾ ಹಣಕ್ಕೂ ಸೇರಿಸಿ ತುಂಬಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ