AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?

RBI to issue new Rs 10 and Rs 500 bank notes: ಆರ್​​ಬಿಐ ಸದ್ಯದಲ್ಲೇ 10 ರೂ ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ. ಕಳೆದ ತಿಂಗಳು 100 ರೂ ಹಾಗೂ 200 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್​​ಬಿಐ ಹೇಳಿತ್ತು. ಈ ಹೊಸ ನೋಟುಗಳಲ್ಲಿ ನೂತನ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರಲಿದೆ.

ಆರ್​​ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?
500 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 04, 2025 | 7:01 PM

ಮುಂಬೈ, ಏಪ್ರಿಲ್ 4: ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಶೀಘ್ರದಲ್ಲೇ ಎರಡು ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. 10 ರೂ ಮತ್ತು 500 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು (bank notes) ಬಿಡುಗಡೆ ಮಾಡುತ್ತಿರುವುದಾಗಿ ಆರ್​​ಬಿಐ ಹೇಳಿದೆ. ಈಗಾಗಲೇ ಇರುವ ಮಹಾತ್ಮ ಗಾಂಧಿ ಸರಣಿಯ ಈ ನೋಟುಗಳಿಗಿಂತ ಹೊಸ ನೋಟುಗಳು ಭಿನ್ನವಾಗಿರುವುದಿಲ್ಲ. ಅದೇ ವಿನ್ಯಾಸವನ್ನು ಒಳಗೊಳ್ಳಲಾಗಿರುತ್ತದೆ. ಆದರೆ, ಆರ್​​ಬಿಐ ಗವರ್ನರ್ ಹಸ್ತಾಕ್ಷರ ಮಾತ್ರವೇ ಬದಲಾಗುತ್ತದೆ. ಮಿಕ್ಕಂತೆ ಎಲ್ಲವೂ ಹಾಗೇ ಇರುತ್ತದೆ.

ಆರ್​​ಬಿಐಗೆ ಸಂಜಯ್ ಮಲ್ಹೋತ್ರಾ ಅವರು ಜನವರಿಯಲ್ಲಿ ನೂತನ ಗವರ್ನರ್ ಆಗಿ ನೇಮಕವಾಗಿದ್ದರು. ಅವರಿಗಿಂತ ಮೊದಲು ಶಕ್ತಿಕಾಂತ್ ದಾಸ್ ಅವರು ಆರ್​​ಬಿಐ ಗವರ್ನರ್ ಆಗಿದ್ದರು. ಸಂಜಯ್ ಮಲ್ಹೋತ್ರಾ ಅವರು ಗವರ್ನರ್ ಆದ ಬಳಿಕ ಎರಡನೇ ಬಾರಿಗೆ ಬ್ಯಾಂಕ್ ನೋಟುಗಳ ಮುದ್ರಣ ಮಾಡಲಾಗುತ್ತಿದೆ. ಹೊಸ ನೋಟಾದ್ದರಿಂದ ಹೊಸ ಗವರ್ನರ್ ಅವರ ಹಸ್ತಾಕ್ಷರವನ್ನು ಸೇರಿಸಲಾಗಿದೆ.

ಕಳೆದ ತಿಂಗಳಷ್ಟೇ ಆರ್​ಬಿಐ 100 ರೂ ಹಾಗೂ 200 ರೂ ಮುಖಬೆಲೆ ಬ್ಯಾಂಕ್ ನೋಟುಗಳನ್ನು ಹೊರತರುತ್ತಿರುವುದಾಗಿ ಆರ್​​ಬಿಐ ಹೇಳಿತ್ತು. ಅವುಗಳಲ್ಲೂ ಹೊಸ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರುತ್ತದೆ.

ಇದನ್ನೂ ಓದಿ
Image
ಏಪ್ರಿಲ್​​ನಲ್ಲಿ ಬ್ಯಾಂಕುಗಳಿಗೆ 15 ರಜಾ ದಿನಗಳು
Image
ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ
Image
ಸಣ್ಣ ಸಾಲಗಳಿಗೆ ಹೆಚ್ಚುವರಿ ಶುಲ್ಕ ಬೇಡ: ಆರ್​​ಬಿಐ
Image
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?

ಇದನ್ನೂ ಓದಿ: 3 ರಾಜ್ಯಗಳು, 4 ರೈಲ್ವೆ ಯೋಜನೆ; 18,658 ಕೋಟಿ ರೂ ಹೂಡಿಕೆ: ಕೇಂದ್ರ ಸಂಪುಟ ಅನುಮೋದನೆ

ಶಕ್ತಿಕಾಂತ ದಾಸ್ ಹಸ್ತಾಕ್ಷರ ಇರುವ ನೋಟುಗಳು ಅಸಿಂಧುವಾಗುತ್ತಾ?

ಹಿಂದಿನ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಸ್ತಾಕ್ಷರ ಇರುವ ಬ್ಯಾಂಕ್ ನೋಟುಗಳು ಸಾಕಷ್ಟಿವೆ. ಅವುಗಳ ಬಳಕೆ ಅಬಾಧಿತವಾಗಿ ಮುಂದುವರಿಸಬಹುದು. ಸದ್ಯ ಚಾಲನೆಯಲ್ಲಿರುವ ಯಾವ ನೋಟು ಕೂಡ ಅಸಿಂಧುಗೊಳ್ಳುವುದಿಲ್ಲ. ಶಕ್ತಿಕಾಂತ ದಾಸ್ ಮಾತ್ರವಲ್ಲ, ಅವರಿಗಿಂತ ಮೊದಲು ಗವರ್ನರ್ ಆಗಿದ್ದವರ ಹಸ್ತಾಕ್ಷರ ಇರುವ ನೋಟುಗಳು ಇನ್ನೂ ಚಾಲನೆಯಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 4 April 25

ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು