ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ

Cyber crime and Telcos: ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಯೋಜಿಸಿದ್ದು, ವಂಚಕರು ಬಳಸುವ ಮೊಬೈಲ್ ಸೆಟ್ ಮತ್ತು ನಂಬರ್​ಗಳನ್ನು ಪತ್ತೆ ಮಾಡಿ ರದ್ದುಗೊಳಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ತನಿಖೆ ವೇಳೆ ಸಾವಿರಾರು ಸಿಮ್​ಗಳನ್ನು ಒಂದು ಮೊಬೈಲ್ ಹ್ಯಾಂಡ್​ಸೆಟ್​​ಗಳಲ್ಲಿ ಬಳಸಿರುವ ಅನೇಕ ನಿದರ್ಶನಗಳು ಸಿಕ್ಕಿವೆ. ಇಂಥ 28 ಸಾವಿರ ಹ್ಯಾಂಡ್​ಸೆಟ್​​ಗಳನ್ನು ಡಿಸೇಬಲ್ ಮಾಡಲಾಗಿದೆ. ಇದರಲ್ಲಿ ಬಳಸಲಾದ 20 ಲಕ್ಷ ಮೊಬೈಲ್ ನಂಬರ್​ಗಳನ್ನು ವೆರಿಫೈ ಮಾಡಲಾಗುತ್ತಿದೆ. ವೆರಿಫಿಕೇಶನ್​ನಲ್ಲಿ ವಿಫಲವಾಗುವ ಸಿಮ್​ಗಳನ್ನು ಡಿಸ್​ಕನೆಕ್ಟ ಮಾಡಲಾಗುತ್ತದೆ.

ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ
ಮೊಬೈಲ್
Follow us
|

Updated on: May 20, 2024 | 2:31 PM

ನವದೆಹಲಿ, ಮೇ 20: ಸೈಬರ್ ಕ್ರೈಮ್ ಇತ್ಯಾದಿ ಆನ್​ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ ಟೆಲಿಕಾಂ ಕಂಪನಿಗಳು ಬರೋಬ್ಬರಿ 18 ಲಕ್ಷ ಮೊಬೈಲ್ ಕನೆಕ್ಷನ್​ಗಳನ್ನು ಕಡಿತಗೊಳಿಸುವ (disconnect) ಸಾಧ್ಯತೆ ಇದೆ. ಮೊಬೈಲ್ ಕನೆಕ್ಷನ್​ಗಳನ್ನು ದುರ್ಬಳಕೆ ಮಾಡಿಕೊಂಡು ಜನರು ವಂಚಿಸುತ್ತಿರುವ ಬಗ್ಗೆ ಬಹಳಷ್ಟು ಪ್ರಕರಣಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ದುರ್ಬಳಕೆಯಾಗಿರಬಹುದಾದ ಮೊಬೈಲ್ ಕನೆಕ್ಷನ್​ಗಳನ್ನು ರದ್ದುಗೊಳಿಸುವಂತೆ ಟೆಲಿಕಾಂ ಆಪರೇಟರ್​ಗಳಿಗೆ ಸರ್ಕಾರ ಸೂಚಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

‘ಸಮಗ್ರ ತನಿಖೆ ವೇಳೆ, ಒಂದೇ ಹ್ಯಾಂಡ್​ಸೆಟ್​ನಲ್ಲಿ ಸಾವಿರಾರು ಮೊಬೈಲ್ ಕನೆಕ್ಷನ್ಸ್ ಬಳಸಿರುವ ಹಲವು ನಿದರ್ಶನಗಳು ಬೆಳಕಿಗೆ ಬಂದಿದ್ದವು,’ ಎಂದು ಅಧಿಕಾರಿಯೊಬ್ಬರು ತಮಗೆ ಮಾಹಿತಿ ಕೊಟ್ಟಿದ್ದಾರೆ ಈ ವರದಿಯಲ್ಲಿ ಹೇಳಲಾಗಿದೆ.

ಈ ವರದಿ ಪ್ರಕಾರ ಮೇ 9ರಂದು ಕೇಂದ್ರ ದೂರ ಸಂಪರ್ಕ ಇಲಾಖೆ 28,220 ಮೊಬೈಲ್ ಹ್ಯಾಂಡ್​ಸೆಟ್​ಗಳನ್ನು ಡಿಸ್​ಕನೆಕ್ಟ್ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಅಲ್ಲದೇ ಈ ಹ್ಯಾಂಡ್​ಸೆಟ್​ಗಳಿಂದ ಬಳಸಲಾಗುತ್ತಿದ್ದ ಇಪತ್ತು ಲಕ್ಷ ಸಿಮ್​ಗಳನ್ನು ರೀವೆರಿಫಿಕೇಶನ್​ಗೆ ಒಳಪಡಿಸಲು ಸೂಚಿಸಿತ್ತು.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

ಇಂತಹ ಪ್ರಕರಣಗಳಲ್ಲಿ ಸಿಮ್​ಗಳು ಯಶಸ್ವಿಯಾಗಿ ವೆರಿಫೈ ಆಗುವುದು ಶೇ. 10 ಮಾತ್ರ ಎಂಬುದು ಅಧಿಕಾರಿಗಳ ಅನಿಸಿಕೆ. ಅದರಂತೆ ನೋಡಿದರೆ, ಈಗ ಕಣ್ಗಾವಲಿನಲ್ಲಿರುವ 20 ಲಕ್ಷ ಸಿಮ್​ಗಳಲ್ಲಿ ಶೇ. 10ರಷ್ಟು ಮೊಬೈಲ್ ಕನೆಕ್ಷನ್ಸ್ ಮಾತ್ರ ವೆರಿಫೈ ಆಗಬಹುದು. ಇನ್ನುಳಿದವುಗಳ ವೆರಿಫಿಕೇಶನ್ ಆಗದೇ ಹೋಗಬಹುದು. ಅಂದರೆ 18 ಲಕ್ಷದಷ್ಟು ಮೊಬೈಲ್ ನಂಬರ್​ಗಳನ್ನು ಡಿಸ್​ಕನೆಕ್ಟ್ ಮಾಡಬಹುದು.

‘ಹದಿನೈದು ದಿನದಲ್ಲಿ ಟೆಲಿಕಾಂ ಕಂಪನಿಗಳು ಈ ನಂಬರ್​ಗಳ ರೀವೆರಿಫಿಕೇಶನ್ ಪೂರ್ಣಗೊಳಿಸಲಿದ್ದಾರೆ. ಅದಾದ ಬಳಿಕ ವೆರಿಫೈ ಆಗದ ನಂಬರ್​ಗಳನ್ನು ಡಿಸ್​ಕನೆಕ್ಟ್ ಮಾಡಲಾಗುವುದು,’ ಎಂದು ಅಧಿಕಾರಿಗಳು ಹೇಳಿದ್ದಾರೆ ವರದಿಯಲ್ಲಿ ತಿಳಿಸಲಾಗಿದೆ.

ನ್ಯಾಷನಲ್ ಸೈಬರ್​ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ 2023ರಲ್ಲಿ ಆನ್​ಲೈನ್​ನಲ್ಲಿ ಆಗಿರುವ ಹಣಕಾಸು ವಂಚನೆಯಲ್ಲಿ ಜನರು 10,319 ಕೋಟಿ ರೂ ಕಳೆದುಕೊಂಡಿದ್ದಾರೆ. ಆ ವರ್ಷ ಸುಮಾರು ಏಳು ಲಕ್ಷ ಸಮೀಪದಷ್ಟು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ

ವಂಚಕರ ತಂತ್ರ ಹೇಗಿರುತ್ತೆ ನೋಡಿ…!

ವಂಚಕರು ಸಿಮ್ ಕಾರ್ಡ್​ಗಳನ್ನು ಬಹಳ ಚಾಣಾಕ್ಷ್ಯತನದಿಂದ ನಿರ್ವಹಿಸುತ್ತಾರೆ. ಒಂದು ಟೆಲಿಕಾಂ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಬೇರೆ ಟೆಲಿಕಾಂ ಸರ್ಕಲ್​ನಲ್ಲಿ ಬಳಸಬಹುದು. ಉದಾಹರಣೆಗೆ, ಮಧ್ಯಪ್ರದೇಶ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಬೆಂಗಳೂರಿನಲ್ಲಿ ಬಳಸಬಹುದು.

ವಂಚಕರು ಒಂದು ಸಿಮ್ ಕಾರ್ಡ್ ಅನ್ನು ಬೇರೆ ಬೇರೆ ಹ್ಯಾಂಡ್​ಸೆಟ್​ಗಳಿಗೆ ಹಾಕಿ ಬಳಸುತ್ತಾರೆ. ಒಂದೇ ಮೊಬೈಲ್ ಹ್ಯಾಂಡ್​ಸೆಟ್​ನಿಂದ ವಂಚಕ ಕರೆ ಹೋಗುತ್ತಿದ್ದರೆ ಬೇಗ ಪತ್ತೆಯಾಗಬಹುದು ಎಂಬ ಕಾರಣಕ್ಕೆ ಈ ದೂರ್ತರು ಸಿಮ್ ಕಾರ್ಡ್ ಮತ್ತು ಹ್ಯಾಂಡ್​ಸೆಟ್​ಗಳನ್ನು ಅದಲುಬದಲು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಒಂದು ಹ್ಯಾಂಡ್​ಸೆಟ್​ನಿಂದ ಒಂದಷ್ಟು ಮೊಬೈಲ್ ಕರೆಗಳು ಹೋದ ಬಳಿಕ ಸಿಮ್ ತೆಗೆದು ಬೇರೆ ಹ್ಯಾಂಡ್​ಸೆಟ್​ಗೆ ಹಾಕಿ ಕರೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ