AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Changes: ಎಸ್​ಬಿಐ ಹೋಮ್​ ಲೋನ್ ದುಬಾರಿಯಿಂದ ಚಿನ್ನದ ಹಾಲ್​ ಮಾರ್ಕಿಂಗ್ ತನಕ ಜೂನ್ ತಿಂಗಳ 5 ಪ್ರಮುಖ ಬದಲಾವಣೆಗಳಿವು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹ ಸಾಲ ಬಡ್ಡಿ ದರ ಹೆಚ್ಚಳದಿಂದ ಚಿನ್ನದ ಹಾಲ್ ಮಾರ್ಕಿಂಗ್ ತನಕ 2022ರ ಜೂನ್​ನಿಂದ ಆಗಲಿರುವ ಪ್ರಮುಖ ಹಣಕಾಸು ಬದಲಾವಣೆಗಳ ವಿವರ ಇಲ್ಲಿದೆ.

Financial Changes: ಎಸ್​ಬಿಐ ಹೋಮ್​ ಲೋನ್ ದುಬಾರಿಯಿಂದ ಚಿನ್ನದ ಹಾಲ್​ ಮಾರ್ಕಿಂಗ್ ತನಕ ಜೂನ್ ತಿಂಗಳ 5 ಪ್ರಮುಖ ಬದಲಾವಣೆಗಳಿವು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 31, 2022 | 11:08 AM

Share

2022ರ ಜೂನ್​ ತಿಂಗಳಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಜೂನ್ 1ರ ಬುಧವಾರದಿಂದಲೇ ಕೆಲವು ಬದಲಾವಣೆಗಳು ಆಗಲಿವೆ. ಅದರಲ್ಲೂ ಮುಖ್ಯವಾಗಿ ಎಸ್​ಬಿಐ (SBI) ಹೋಮ್ ಲೋನ್ ಪಡೆದಂಥವರಿಗೆ ಬಡ್ಡಿ ದರ ಏರಿಕೆ ಅನ್ವಯಿಸುತ್ತದೆ. ಈ ಸಂಬಂಧವಾಗಿ ಗ್ರಾಹಕರಿಗೆ ಮಾಹಿತಿ ಕಳುಹಿಸಲಾಗಿದೆ. ಬೇರೆಯದು ಎಂದು ಗಮನಿಸಿದರೆ ಆಕ್ಸಿಸ್​ ಬ್ಯಾಂಕ್ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​ ಗ್ರಾಹಕರು, ವಾಹನಗಳ ಮಾಲೀಕರಿಗೆ ಕೆಲವು ಬದಲಾವಣೆಗಳು ಪರಿಣಾಮ ಬೀರಲಿದೆ. ಅದು ಅವರ ಹಣಕಾಸಿನ ವಿಚಾರದ ಮೇಲೆ ಪ್ರಭಾವ ಮಾಡುತ್ತದೆ. ಪ್ರಮುಖ ಹಣಕಾಸಿನ ಮತ್ತು ಕಾರ್ಯ ನಿರ್ವಹಣೆ ಬದಲಾವಣೆಗಳು ಜೂನ್ ಆರಂಭದಿಂದ ಆಗಲಿವೆ. ಯಾವುವು ಅವು ಎಂಬ ವಿವರ ಇಲ್ಲಿವೆ.

ಎಸ್​ಬಿಐ ಗೃಹ ಸಾಲದ ಬಡ್ಡಿ ಹೆಚ್ಚಳ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದರ ಗೃಹ ಸಾಲದ ಎಕ್ಸ್​ಟರ್ನಲ್ ಬೆಂಚ್​ಮಾರ್ಕ್ ಲೆಂಡಿಂಗ್ ರೇಟ್ (EBLR) 40 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿ, ಶೇ 7.05 ತಲುಪಲಿದೆ. ಇನ್ನು ಆರ್​ಎಲ್​ಎಲ್ಆರ್​ ಶೇ 6.65 ಪ್ಲಸ್ ಸಿಆರ್​ಪಿ. ಎಸ್​ಬಿಐ ವೆಬ್​ಸೈಟ್ ಪ್ರಕಾರ, ಜೂನ್ 1, 2022ರಿಂದ ಹೆಚ್ಚಿನ ಬಡ್ಡಿ ದರ ಜಾರಿಗೆ ಬರಲಿದೆ. ಈ ಹಿಂದೆ ಇಬಿಎಲ್​ಆರ್​ ಶೇ 6.65 ಇದ್ದರೆ, ರೆಪೋ ಜೋಡಣೆಯಾದ ಸಾಲದ ದರ (RLLR) ಶೇ 6.25ರಷ್ಟಿತ್ತು. ಎಸ್​ಬಿಐ ವೆಬ್​ಸೈಟ್​ ಪ್ರಕಾರ, ಎಕ್ಸ್​ಟರ್ನಲ್ ಬೆಂಚ್​ಮಾರ್ಕ್ ಬೇಸ್ಡ್ ರೇಟ್= ಎಕ್ಸ್​ಟರ್ನಲ್ ಬೆಂಚ್​ಮಾರ್ಕ್ ರೇಟ್ (EBR) + ಕ್ರೆಡಿಟ್ ರಿಸ್ಕ್ ಪ್ರೀಮಿಯಂ (CRP). ಇದರ ಜತೆಗೆ ಎಸ್​ಬಿಐನಿಂದ ಸಾಲದ ಮೇಲಿನ (bp) ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ರೇಟ್ಸ್ (MCLR) 10 ಬೇಸಿಸ್ ಪಾಯಿಂಟ್ಸ್ ಏರಿಸಲಾಗಿದೆ. ಮೇ 15ರಿಂದ ಹೊಸ ಎಂಸಿಎಲ್ಆರ್ ಬಡ್ಡಿ ದರ ಜಾರಿಗೆ ಬಂದಿದೆ.

ಥರ್ಡ್ ಪಾರ್ಟಿ ಮೋಟಾರ್ ಇನ್ಷೂರೆನ್ಸ್ ಪ್ರೀಮಿಯಂ ಹೆಚ್ಚಳ

ರಸ್ತೆ, ಸಾರಿಗೆ, ಮತ್ತು ಹೆದ್ದಾರಿ ಸಚಿವಾಲಯದ ಗೆಜೆಟ್ ಅಧಿಸೂಚನೆ ಪ್ರಕಾರ, 1000 cc ಮೀರದ ಖಾಸಗಿ ಕಾರುಗಳಿಗೆ ಥರ್ಡ್-ಪಾರ್ಟಿ ವಿಮೆಯ ವಾರ್ಷಿಕ ದರವನ್ನು 2019-20 ರಲ್ಲಿ ರೂ. 2,072ರಿಂದ ರೂ. 2,094ಕ್ಕೆ ನಿಗದಿಪಡಿಸಲಾಗಿದೆ. ಹೊಸ ದರಗಳ ಅಡಿಯಲ್ಲಿ, 1000cc ಮತ್ತು 1500cc ನಡುವಿನ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು 2019-20ರಲ್ಲಿ ಇದ್ದ 3,221ರಿಂದ 3,416ಕ್ಕೆ ಹೆಚ್ಚಿಸಲಾಗಿದೆ. 1500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಖಾಸಗಿ ವಾಹನಗಳ ಪ್ರೀಮಿಯಂಗಳು ರೂ. 7,890 ರಿಂದ ರೂ 7,897ಕ್ಕೆ ಇಳಿಯುತ್ತವೆ.

150 ಸಿಸಿಗಿಂತ ಹೆಚ್ಚಿನ ಆದರೆ 350 ಸಿಸಿಗಿಂತ ಹೆಚ್ಚು ಇರದ ದ್ವಿಚಕ್ರ ವಾಹನಗಳಿಗೆ ವಿಮಾ ಪ್ರೀಮಿಯಂ ರೂ. 1,366 ಆಗಿರುತ್ತದೆ ಮತ್ತು 350 ಸಿಸಿಗಿಂತ ಹೆಚ್ಚಿನ ದ್ವಿಚಕ್ರ ವಾಹನಗಳಿಗೆ ರೂ. 2,804 ಪ್ರೀಮಿಯಂ ಇರಲಿದೆ. 1000 ಸಿಸಿ ಮೀರದ ಹೊಸ ಕಾರಿಗೆ ಮೂರು ವರ್ಷಗಳ ಸಿಂಗಲ್ ಪ್ರೀಮಿಯಂ ಅನ್ನು 6,521 ರೂ.ಗೆ ನಿಗದಿಪಡಿಸಲಾಗಿದ್ದು, 1000 ಸಿಸಿ ಮತ್ತು 1500 ಸಿಸಿ ನಡುವಿನ ಕಾರಿಗೆ 10,640 ರೂ. ಹೊಸದಾಗಿ ಅಧಿಸೂಚಿತ ದರಗಳ ಅಡಿಯಲ್ಲಿ 1500 ಸಿಸಿಗಿಂತ ಹೆಚ್ಚಿನ ಹೊಸ ಖಾಸಗಿ ವಾಹನವನ್ನು ಮೂರು ವರ್ಷಗಳವರೆಗೆ ರೂ. 24,596 ಕ್ಕೆ ವಿಮೆ ಮಾಡಲಾಗುವುದು.

75 ಸಿಸಿ ಮೀರದ ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳ ಸಿಂಗಲ್ ಪ್ರೀಮಿಯಂ 2,901 ರೂ., 75 ಸಿಸಿ ಆದರೆ 150 ಸಿಸಿ ಮೀರದ್ದಕ್ಕೆ 3,851 ರೂ, ಮತ್ತು 150 ಸಿಸಿ ಆದರೆ 350 ಸಿಸಿ ಮೀರದ್ದಕ್ಕೆ 7,365 ರೂ. ಹೊಸ ದರಗಳ ಅಡಿಯಲ್ಲಿ 350 ಸಿಸಿ ಮೀರಿದ ದ್ವಿಚಕ್ರ ವಾಹನವನ್ನು ಐದು ವರ್ಷಗಳವರೆಗೆ 15,117 ರೂ.ಗೆ ವಿಮೆ ಮಾಡಬಹುದಾಗಿದೆ.

ಹೊಸ ಖಾಸಗಿ ಎಲೆಕ್ಟ್ರಿಕ್ ವಾಹನ (ಇವಿ) 30 ಕಿಲೋವ್ಯಾಟ್ ಮೀರದಿದ್ದರೆ ಮೂರು ವರ್ಷಗಳವರೆಗೆ ರೂ. 5,543ಕ್ಕೆ ವಿಮೆ ಮಾಡಬಹುದು. ಎಲೆಕ್ಟ್ರಿಕ್ ವಾಹನಗಳು 30 KWಗಿಂತ ಹೆಚ್ಚು, ಆದರೆ 65 KWಗಿಂತ ಕಡಿಮೆಯಿದ್ದರೆ ಮೂರು ವರ್ಷಗಳ ಪ್ರೀಮಿಯಂ ರೂ. 9,044 ಆಗಿರುತ್ತದೆ. 65 KWಗಿಂತ ಹೆಚ್ಚಿನ ದೊಡ್ಡ ಎಲೆಕ್ಟ್ರಿಕ್ ವಾಹನಗಳನ್ನು ಮೂರು ವರ್ಷಗಳವರೆಗೆ ರೂ. 20,907ಕ್ಕೆ ವಿಮೆ ಮಾಡಲಾಗುವುದು. ಈ ಪರಿಷ್ಕೃತ ದರಗಳು ಜೂನ್ 1, 2022ರಿಂದ ಅನ್ವಯವಾಗುತ್ತವೆ. ಈ ದರಗಳನ್ನು 2019-20 ಹಣಕಾಸು ವರ್ಷಕ್ಕೆ ಕೊನೆಯದಾಗಿ ಪರಿಷ್ಕರಿಸಲಾಗಿದೆ ಮತ್ತು ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬದಲಾಗದೆ ಇರಿಸಲಾಗಿದೆ.

ಚಿನ್ನದ ಹಾಲ್​ ಮಾರ್ಕಿಂಗ್

ಜೂನ್ 1, 2022ರಿಂದ ಎರಡನೇ ಹಂತದ ಕಡ್ಡಾಯ ಹಾಲ್‌ಮಾರ್ಕಿಂಗ್ ಜಾರಿಗೆ ಬರಲಿದ್ದು, ಅಸ್ತಿತ್ವದಲ್ಲಿರುವ 256 ಜಿಲ್ಲೆಗಳು ಮತ್ತು 32 ಹೊಸ ಜಿಲ್ಲೆಗಳಲ್ಲಿ ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್ (AHC) ವ್ಯಾಪ್ತಿಗೆ ಬರುವ ಚಿನ್ನದ ಆಭರಣಗಳು/ಒಡವೆಗಳ ಹಾಲ್‌ಮಾರ್ಕಿಂಗ್ ಅನ್ನು ಸಂಪೂರ್ಣವಾಗಿ ಕಡ್ಡಾಯಗೊಳಿಸುತ್ತದೆ. ಈ 288 ಜಿಲ್ಲೆಗಳಲ್ಲಿ 14, 18, 20, 22, 23 ಮತ್ತು 24 ಕ್ಯಾರೆಟ್ ತೂಕದ ಚಿನ್ನಾಭರಣಗಳು ಮಾತ್ರ ಮಾರಾಟ ಮಾಡಲಾಗುವುದು ಮತ್ತು ಅವುಗಳನ್ನು ಕಡ್ಡಾಯವಾಗಿ ಹಾಲ್‌ಮಾರ್ಕಿಂಗ್‌ನೊಂದಿಗೆ ಮಾರಾಟ ಮಾಡಬೇಕು.

ಆಧಾರ್ ಸಕ್ರಿಯಗೊಳಿಸಿದ ಪಾವತಿಗಳಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶುಲ್ಕ

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಶುಲ್ಕಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದೆ (AePS). ಈ ಶುಲ್ಕಗಳನ್ನು ಜೂನ್ 15, 2022ರಂದು ಜಾರಿಗೆ ತರಲಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಅಂಚೆಯ ಅಂಗಸಂಸ್ಥೆಯಾಗಿದ್ದು, ಇದನ್ನು ಅಂಚೆ ಇಲಾಖೆಯಿಂದ ನಿಯಂತ್ರಿಸಲಾಗುತ್ತದೆ.

AEPS ನಗದು ಹಿಂಪಡೆಯುವಿಕೆ, AEPS ನಗದು ಠೇವಣಿ ಮತ್ತು AEPS ಮಿನಿ ಸ್ಟೇಟ್​ಮೆಂಟ್ ಸೇರಿದಂತೆ ಪ್ರತಿ ತಿಂಗಳು ಮೊದಲ ಮೂರು AEPS ವಹಿವಾಟುಗಳು ಉಚಿತವಾಗಿರುತ್ತದೆ. ಉಚಿತ ವಹಿವಾಟುಗಳನ್ನು ಅನುಸರಿಸಿ, ಪ್ರತಿ ನಗದು ಹಿಂಪಡೆಯುವಿಕೆ ಅಥವಾ ನಗದು ಠೇವಣಿಗೆ ರೂ. 20 ಮತ್ತು ಜಿಎಸ್‌ಟಿ ವೆಚ್ಚವಾಗುತ್ತದೆ, ಆದರೆ ಮಿನಿ ಸ್ಟೇಟ್‌ಮೆಂಟ್ ವಹಿವಾಟಿಗೆ ರೂ. 5 ಮತ್ತು ಜಿಎಸ್‌ಟಿ ವೆಚ್ಚವಾಗುತ್ತದೆ.

ಆಕ್ಸಿಸ್ ಬ್ಯಾಂಕ್‌ನ ಪರಿಷ್ಕೃತ ಉಳಿತಾಯ ಖಾತೆ ಶುಲ್ಕಗಳು

ಅರೆ-ನಗರ/ಗ್ರಾಮೀಣ ಪ್ರದೇಶಗಳಲ್ಲಿ ಸುಲಭ ಉಳಿತಾಯ ಮತ್ತು ವೇತನ ಕಾರ್ಯಕ್ರಮಗಳಿಗೆ ಸರಾಸರಿ ಮಾಸಿಕ ಬಾಕಿ ಅಗತ್ಯವನ್ನು ರೂ.15,000 ದಿಂದ ರೂ. 25,000 ಅಥವಾ ರೂ. 1 ಲಕ್ಷ ಟರ್ಮ್ ಠೇವಣಿಗೆ ಹೆಚ್ಚಿಸಲಾಗಿದೆ. ಲಿಬರ್ಟಿ ಉಳಿತಾಯ ಖಾತೆಗೆ ಅಗತ್ಯವನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದೆ ಅಥವಾ 25,000 ರೂ. ಈ ಮೊತ್ತವು ಜೂನ್ 1, 2022 ರಿಂದ ಜಾರಿಯಲ್ಲಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Electric Car Loan: ಎಸ್​ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ

Published On - 3:16 pm, Fri, 27 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ