AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Relief: ಟಿಡಿಎಸ್, ಟಿಸಿಎಸ್​ ನಿಯಮದಲ್ಲಿ ಉದ್ಯಮಗಳಿಗೆ ನಿರಾಳ ನೀಡಿದ ಸಿಬಿಡಿಟಿ

ಉದ್ಯಮಗಳಿಗೆ ನಿರಾಳ ನೀಡುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಟಿಡಿಎಸ್ ಹಾಗೂ ಟಿಸಿಎಸ್​ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Tax Relief: ಟಿಡಿಎಸ್, ಟಿಸಿಎಸ್​ ನಿಯಮದಲ್ಲಿ ಉದ್ಯಮಗಳಿಗೆ ನಿರಾಳ ನೀಡಿದ ಸಿಬಿಡಿಟಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 26, 2021 | 8:42 AM

Share

ಉದ್ಯಮಗಳಿಗೆ ನಿರಾಳ ಆಗುವಂಥ ಸುದ್ದಿಯೊಂದು ಇಲ್ಲಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮೂಲದಲ್ಲಿ ತೆರಿಗೆ (TCS, TDS) ಕಡ್ಡಾಯ ಸಂಗ್ರಹ ಅಥವಾ ಕಡಿತಕ್ಕೆ ಸಂಬಂಧಿಸಿದ ನಿಬಂಧನೆಗಳ ಮೇಲೆ ವ್ಯವಹಾರಗಳಿಗೆ ನಿರಾಳವನ್ನು ನೀಡಿದೆ. ಈ ವಿಚಾರವು ಗುರುವಾರದಂದು ಬಂದಿರುವ ಅಧಿಕೃತ ಆದೇಶದಿಂದ ತಿಳಿದಿದೆ. ಆ ಆದೇಶದ ಪ್ರಕಾರ, ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ನಡೆಸುವ ಇ-ಹರಾಜು ಸೇವೆಗಳು ಇ-ಕಾಮರ್ಸ್ ಆಪರೇಟರ್‌ಗಳಿಗೆ ಅನ್ವಯವಾಗುವ ಟಿಡಿಎಸ್ ನಿಬಂಧನೆಗೆ ಒಳಪಡುವುದಿಲ್ಲ. ಕೇವಲ ಬೆಲೆಯನ್ನು ತಿಳಿದುಕೊಳ್ಳುವುದಕ್ಕೆ ಮಾತ್ರ ಹರಾಜು ಇರುತ್ತದೆ ಮತ್ತು ವಾಸ್ತವ ಮಾರಾಟವು ಸ್ವತಂತ್ರವಾಗಿ ನಡೆಯುತ್ತದೆ. 2020ರ ಅಕ್ಟೋಬರ್​ನಿಂದ ಜಾರಿಗೆ ಬಂಂದಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194-O ಅಡಿಯಲ್ಲಿ ಅನ್ವಯವಾಗುವ ಶೇ 1ರ TDS ಅವಶ್ಯಕತೆಯಿಂದ ಈ ಪರಿಹಾರವು ಆರು ರೈಡರ್‌ಗಳೊಂದಿಗೆ ಬರುತ್ತದೆ.

ಮಾರಾಟವನ್ನು ಸುಲಭಗೊಳಿಸಲು ಇ-ಕಾಮರ್ಸ್ ಆಪರೇಟರ್ ಯಾವುದೇ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ TDS ನಿಬಂಧನೆಯು ಆಗ ಅನ್ವಯ ಆಗುತ್ತದೆ. ಪ್ಲಾಟ್‌ಫಾರ್ಮ್ ಮೂಲಕ ಕಂಡುಹಿಡಿಯಲಾದ ಬೆಲೆಯು ವಹಿವಾಟು ನಡೆಯುವ ಬೆಲೆ ಆಗಿರಬಾರದು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಕ್ಲೈಂಟ್‌ನ ಬೆಲೆಯನ್ನು ಸ್ವೀಕರಿಸಲು ಅಥವಾ ನೇರವಾಗಿ ಕೌಂಟರ್-ಪಾರ್ಟಿಯೊಂದಿಗೆ ಮಾತುಕತೆ ನಡೆಸುವುದು ವಿವೇಚನೆಗೆ ಬಿಟ್ಟದ್ದು ಎಂದು ಹೇಳುತ್ತಾರೆ. ಈ ಸಡಿಲಿಕೆಯಿಂದಾಗಿ ಟಿಡಿಎಸ್ ಕಡಿತಗೊಳಿಸಲು ಇ-ಕಾಮರ್ಸ್ ಆಪರೇಟರ್‌ಗಳು ಎದುರಿಸುತ್ತಿರುವ ಪ್ರಾಯೋಗಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ವ್ಯಾಪಾರ ಮಾಡಲು ಸುಲಭವಾಗುತ್ತದೆ. ಅಲ್ಲದೆ, ಇದು ಕಡಿಮೆ ಭಾರದ ಮೂಲಕ ಪಾರದರ್ಶಕ ಎಲೆಕ್ಟ್ರಾನಿಕ್ ವಹಿವಾಟುಗಳನ್ನು ಉತ್ತೇಜಿಸುತ್ತದೆ.

ಇದೇ ಕ್ರಮದಲ್ಲಿ, ಸಿಬಿಡಿಟಿ ಸಹ GST ಹೊರತುಪಡಿಸಿ ತೆರಿಗೆ ಘಟಕವನ್ನು ತಿಳಿದಿರುವ ಮಾರಾಟಗಾರರಿಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ TDS ನಿಬಂಧನೆಯಲ್ಲಿ ಹೆಚ್ಚಿನ ಆರಾಮವನ್ನು ನೀಡಿದೆ. ಅಂತಹ ಸಂದರ್ಭಗಳಲ್ಲಿ TDS ನಿಬಂಧನೆಯು ತೆರಿಗೆ ಘಟಕವನ್ನು ಹೊರತುಪಡಿಸಿ ಮೊತ್ತಕ್ಕೆ ಅನ್ವಯಿಸುತ್ತದೆ. ವಹಿವಾಟು ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿರುವಲ್ಲಿ ಈ ಆರಾಮವು ಈಗಾಗಲೇ ಲಭ್ಯವಿದೆ. TDS ಮತ್ತು TCS ನಿಬಂಧನೆಗಳು ನಿರ್ದಿಷ್ಟಪಡಿಸಿದ ಹಣಕಾಸು ಮಿತಿಗಿಂತ ಹೆಚ್ಚಿನ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತವೆ. ಆದ್ದರಿಂದ ಈ ನಿಬಂಧನೆಯಿಂದ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಈ ಸ್ಪಷ್ಟೀಕರಣವು ಸಾರ್ವಜನಿಕ ವಲಯದ ಕಂಪೆನಿಗಳನ್ನು ಹೊರತುಪಡಿಸಿ ಇತರ ಸರ್ಕಾರಿ ಘಟಕಗಳನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194Q ಅಡಿಯಲ್ಲಿ TDS ನಿಬಂಧನೆಯ ಅವಶ್ಯಕತೆಯಿಂದ ನಿರ್ದಿಷ್ಟವಾಗಿ ಹೊರಗಿರಿಸಿದೆ. ಏಕೆಂದರೆ ಇವುಗಳು ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿರುವ ಘಟಕಗಳಲ್ಲ. TDS ಮತ್ತು TCS ಎರಡನ್ನೂ ತೆರಿಗೆ ಪ್ರಾಧಿಕಾರವು ಆರ್ಥಿಕ ಚಟುವಟಿಕೆಯ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಾಧನವಾಗಿ ಬಳಸುತ್ತದೆ. ಮತ್ತು ವಹಿವಾಟುಗಳು ಹಾಗೂ ಆದಾಯಗಳು ಮೌಲ್ಯಮಾಪನ ಮತ್ತು ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇವೆ. ಸರ್ಕಾರವು ನಗದು ಪಾವತಿಗಳನ್ನು ಉತ್ತೇಜಿಸುತ್ತಿಲ್ಲ ಮತ್ತು ತೆರಿಗೆ ಮೂಲವನ್ನು ವಿಸ್ತರಿಸುವ ಪ್ರಯತ್ನಗಳ ಭಾಗವಾಗಿ ಎಲೆಕ್ಟ್ರಾನಿಕ್ ವಹಿವಾಟುಗಳನ್ನು ಪ್ರೋತ್ಸಾಹಿಸುತ್ತಿದೆ.

ಇದನ್ನೂ ಓದಿ: IT Refund: ಆದಾಯ ತೆರಿಗೆ ಪಾವತಿದಾರರಿಗೆ ನ. 22ರ ತನಕ 1.24 ಲಕ್ಷ ಕೋಟಿ ರೀಫಂಡ್; ಮರುಪಾವತಿ ಸ್ಥಿತಿ ಪರಿಶೀಲನೆ ಹೇಗೆ?

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು